<p><strong>ಬೆಂಗಳೂರು: </strong>`ನಮ್ಮ ಕನ್ನಡ ಭಾಷೆಗೆ ಬಹು ಪ್ರಾಚೀನವಾದ ಸಾಹಿತ್ಯ ಪರಂಪರೆ ಇದೆ. ಸಮೃದ್ಧವಾದ ಸಾಹಿತ್ಯ ಪರಂಪರೆಯನ್ನು ಐತಿಹಾಸಿಕವಾಗಿ ಸಂಶೋಧಿಸುವುದು, ಸಂಪಾದಿಸುವುದು ಮತ್ತು ವಿಮರ್ಶೆ ಮಾಡುವ ಕಾರ್ಯ ಅಗತ್ಯವಾಗಿ ಆಗಬೇಕಿದೆ~ ಎಂದು ಚಿಂತಕ ಮಧು ಬಿಲ್ಲನಕೋಟೆ ಹೇಳಿದರು.<br /> <br /> ಕನ್ನಡ ಯುವಜನ ಸಂಘವು ಇತ್ತೀಚೆಗೆ ನಗರದಲ್ಲಿ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ `ಕನ್ನಡದ ಪ್ರಾಚೀನತೆ-ಒಂದು ಇಣುಕು ನೋಟ~ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.<br /> <br /> `ಕನ್ನಡ ಭಾಷೆ ಪ್ರಾಚೀನವಾಗಿದೆ, ಕನ್ನಡದ ಪ್ರಾಚೀನತೆ ಸಂಸ್ಕೃತ, ಪ್ರಾಕೃತ ಭಾಷೆಗಳಿಗೆ ಎರಡನೆಯದು. ಕವಿರಾಜಮಾರ್ಗದ ಕೃತಿಕಾರ ತನಗಿಂತ ಹಿಂದಿನ ಕನ್ನಡ ಕವಿಗಳ ಪದ್ಯಗಳನ್ನು ತನ್ನ ಕೃತಿಯಲ್ಲಿ ಉಲ್ಲೇಖಿಸಿದ್ದಾನೆ. ಅವುಗಳು ರಾಮಾಯಣ ಮತ್ತು ಮಹಾಭಾರತದ ಪದ್ಯಗಳಾಗಿವೆ. ಈ ಆಧಾರದಿಂದ ಕವಿರಾಜಮಾರ್ಗದ ಮೊದಲೇ ರಾಮಾಯಣ ಮತ್ತು ಮಹಾಭಾರತ ಕೃತಿಗಳು ಕನ್ನಡದಲ್ಲಿ ರಚನೆಯಾಗಿದ್ದವು ಎಂಬುದಕ್ಕೆ ಸಾಕ್ಷಿ ದೊರೆಯುತ್ತದೆ~ ಎಂದು ವಿವರಿಸಿದರು.<br /> <br /> `ಶಾತವಾಹನರ ಕಾಲದಲ್ಲಿ ಪ್ರಾಕೃತ ಕವನ ಸಂಕಲನವಾದ ಗಾಥಾಸಪ್ತ ಸತಿಯಲ್ಲಿ ಪ್ರಯೋಗವಾಗಿರುವ ಪದಗಳು ಮತ್ತು ಕ್ರಿ.ಶ. 450 ರ ಹಲ್ಮಿಡಿ ಶಾಸನವು ಕನ್ನಡದ ಪ್ರಾಚೀನತೆಗೆ ಕನ್ನಡಿ ಹಿಡಿಯುತ್ತವೆ~ ಎಂದರು.<br /> ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಜಗದೀಶ ರೆಡ್ಡಿ, ಕಾರ್ಯದರ್ಶಿ ಬಿ.ಭದ್ರೇಗೌಡ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>`ನಮ್ಮ ಕನ್ನಡ ಭಾಷೆಗೆ ಬಹು ಪ್ರಾಚೀನವಾದ ಸಾಹಿತ್ಯ ಪರಂಪರೆ ಇದೆ. ಸಮೃದ್ಧವಾದ ಸಾಹಿತ್ಯ ಪರಂಪರೆಯನ್ನು ಐತಿಹಾಸಿಕವಾಗಿ ಸಂಶೋಧಿಸುವುದು, ಸಂಪಾದಿಸುವುದು ಮತ್ತು ವಿಮರ್ಶೆ ಮಾಡುವ ಕಾರ್ಯ ಅಗತ್ಯವಾಗಿ ಆಗಬೇಕಿದೆ~ ಎಂದು ಚಿಂತಕ ಮಧು ಬಿಲ್ಲನಕೋಟೆ ಹೇಳಿದರು.<br /> <br /> ಕನ್ನಡ ಯುವಜನ ಸಂಘವು ಇತ್ತೀಚೆಗೆ ನಗರದಲ್ಲಿ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ `ಕನ್ನಡದ ಪ್ರಾಚೀನತೆ-ಒಂದು ಇಣುಕು ನೋಟ~ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.<br /> <br /> `ಕನ್ನಡ ಭಾಷೆ ಪ್ರಾಚೀನವಾಗಿದೆ, ಕನ್ನಡದ ಪ್ರಾಚೀನತೆ ಸಂಸ್ಕೃತ, ಪ್ರಾಕೃತ ಭಾಷೆಗಳಿಗೆ ಎರಡನೆಯದು. ಕವಿರಾಜಮಾರ್ಗದ ಕೃತಿಕಾರ ತನಗಿಂತ ಹಿಂದಿನ ಕನ್ನಡ ಕವಿಗಳ ಪದ್ಯಗಳನ್ನು ತನ್ನ ಕೃತಿಯಲ್ಲಿ ಉಲ್ಲೇಖಿಸಿದ್ದಾನೆ. ಅವುಗಳು ರಾಮಾಯಣ ಮತ್ತು ಮಹಾಭಾರತದ ಪದ್ಯಗಳಾಗಿವೆ. ಈ ಆಧಾರದಿಂದ ಕವಿರಾಜಮಾರ್ಗದ ಮೊದಲೇ ರಾಮಾಯಣ ಮತ್ತು ಮಹಾಭಾರತ ಕೃತಿಗಳು ಕನ್ನಡದಲ್ಲಿ ರಚನೆಯಾಗಿದ್ದವು ಎಂಬುದಕ್ಕೆ ಸಾಕ್ಷಿ ದೊರೆಯುತ್ತದೆ~ ಎಂದು ವಿವರಿಸಿದರು.<br /> <br /> `ಶಾತವಾಹನರ ಕಾಲದಲ್ಲಿ ಪ್ರಾಕೃತ ಕವನ ಸಂಕಲನವಾದ ಗಾಥಾಸಪ್ತ ಸತಿಯಲ್ಲಿ ಪ್ರಯೋಗವಾಗಿರುವ ಪದಗಳು ಮತ್ತು ಕ್ರಿ.ಶ. 450 ರ ಹಲ್ಮಿಡಿ ಶಾಸನವು ಕನ್ನಡದ ಪ್ರಾಚೀನತೆಗೆ ಕನ್ನಡಿ ಹಿಡಿಯುತ್ತವೆ~ ಎಂದರು.<br /> ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಜಗದೀಶ ರೆಡ್ಡಿ, ಕಾರ್ಯದರ್ಶಿ ಬಿ.ಭದ್ರೇಗೌಡ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>