<p><strong>ಬೆಂಗಳೂರು: </strong>ತೋಟಗಾರಿಕೆ ಇಲಾಖೆಯು ಕಬ್ಬನ್ ಉದ್ಯಾನದಲ್ಲಿ ಬಿದಿರಿನ ಬೊಂಬು ಕಡಿಯುತ್ತಿರುವುದಕ್ಕೆ ಕಬ್ಬನ್ ಉದ್ಯಾನ ನಡಿಗೆದಾರರ ಸಂಘವು ವಿರೋಧ ವ್ಯಕ್ತಪಡಿಸಿದೆ.<br /> <br /> ಈ ಕುರಿತು ಮಾತನಾಡಿದ ಕಬ್ಬನ್ ಉದ್ಯಾನ ನಡಿಗೆದಾರರ ಸಂಘದ ಅಧ್ಯಕ್ಷ ಎಸ್.ಉಮೇಶ್, ‘ಕಬ್ಬನ್ ಉದ್ಯಾನದಲ್ಲಿ ಬಿದಿರು ಬೊಂಬು ಕಡಿಯುವ ಬಗ್ಗೆ ಉದ್ಯಾನದ ಅಧಿಕಾರಿಗಳು ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ. ಕಡಿದಿರುವ ಬಿದಿರು ಬೊಂಬು ಏನು ಮಾಡುತ್ತಾರೆ ಎಂಬ ವಿಷಯವನ್ನೂ ಗೌಪ್ಯ ವಾಗಿಡಲಾಗಿದೆ’ ಎಂದು ದೂರಿದರು.<br /> <br /> ಈ ಬಗ್ಗೆ ಪ್ರತಿಕ್ರಿಯಿಸಿದ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಹಾಂತೇಶ ಮುರಗೋಡ, ‘ಪ್ರತಿ ವರ್ಷದ ಬೇಸಿಗೆ ವೇಳೆಯಲ್ಲಿ ಬಿದಿರಿನ ಒಣ ಬೊಂಬುಗಳನ್ನು ಕಡಿಯಲಾಗುತ್ತದೆ. ಈ ವರ್ಷವೂ ಟೆಂಡರ್ ಕರೆಯಲಾಗಿದೆ. ಇದಕ್ಕೆ ತೋಟಗಾರಿಕೆ ಇಲಾಖೆಯ ನಿರ್ದೇಶಕರಿಂದಲೂ ಅನುಮೋದನೆ ಪಡೆದಿದೆ’ ಎಂದರು.<br /> <br /> ‘ಬಿದಿರು ಬೊಂಬು ಕಡಿಯುವಾಗ ಲಾಲ್ಬಾಗ್ನ ಸಿಬ್ಬಂದಿ ಸ್ಥಳದಲ್ಲಿ ಇರುತ್ತಾರೆ. ಇಲಾಖೆಯ ಪ್ರತಿಯೊಂದು ವಿಷಯವನ್ನೂ ನಡಿಗೆದಾರರ ಸಂಘಕ್ಕೆ ತಿಳಿಸಬೇಕಾದ ಅಗತ್ಯವಿಲ್ಲ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ತೋಟಗಾರಿಕೆ ಇಲಾಖೆಯು ಕಬ್ಬನ್ ಉದ್ಯಾನದಲ್ಲಿ ಬಿದಿರಿನ ಬೊಂಬು ಕಡಿಯುತ್ತಿರುವುದಕ್ಕೆ ಕಬ್ಬನ್ ಉದ್ಯಾನ ನಡಿಗೆದಾರರ ಸಂಘವು ವಿರೋಧ ವ್ಯಕ್ತಪಡಿಸಿದೆ.<br /> <br /> ಈ ಕುರಿತು ಮಾತನಾಡಿದ ಕಬ್ಬನ್ ಉದ್ಯಾನ ನಡಿಗೆದಾರರ ಸಂಘದ ಅಧ್ಯಕ್ಷ ಎಸ್.ಉಮೇಶ್, ‘ಕಬ್ಬನ್ ಉದ್ಯಾನದಲ್ಲಿ ಬಿದಿರು ಬೊಂಬು ಕಡಿಯುವ ಬಗ್ಗೆ ಉದ್ಯಾನದ ಅಧಿಕಾರಿಗಳು ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ. ಕಡಿದಿರುವ ಬಿದಿರು ಬೊಂಬು ಏನು ಮಾಡುತ್ತಾರೆ ಎಂಬ ವಿಷಯವನ್ನೂ ಗೌಪ್ಯ ವಾಗಿಡಲಾಗಿದೆ’ ಎಂದು ದೂರಿದರು.<br /> <br /> ಈ ಬಗ್ಗೆ ಪ್ರತಿಕ್ರಿಯಿಸಿದ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಹಾಂತೇಶ ಮುರಗೋಡ, ‘ಪ್ರತಿ ವರ್ಷದ ಬೇಸಿಗೆ ವೇಳೆಯಲ್ಲಿ ಬಿದಿರಿನ ಒಣ ಬೊಂಬುಗಳನ್ನು ಕಡಿಯಲಾಗುತ್ತದೆ. ಈ ವರ್ಷವೂ ಟೆಂಡರ್ ಕರೆಯಲಾಗಿದೆ. ಇದಕ್ಕೆ ತೋಟಗಾರಿಕೆ ಇಲಾಖೆಯ ನಿರ್ದೇಶಕರಿಂದಲೂ ಅನುಮೋದನೆ ಪಡೆದಿದೆ’ ಎಂದರು.<br /> <br /> ‘ಬಿದಿರು ಬೊಂಬು ಕಡಿಯುವಾಗ ಲಾಲ್ಬಾಗ್ನ ಸಿಬ್ಬಂದಿ ಸ್ಥಳದಲ್ಲಿ ಇರುತ್ತಾರೆ. ಇಲಾಖೆಯ ಪ್ರತಿಯೊಂದು ವಿಷಯವನ್ನೂ ನಡಿಗೆದಾರರ ಸಂಘಕ್ಕೆ ತಿಳಿಸಬೇಕಾದ ಅಗತ್ಯವಿಲ್ಲ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>