<p><strong>ನಾಗಮಂಗಲ: </strong>ತಾಲ್ಲೂಕಿನ ಬೆಳ್ಳೂರು ಹೋಬಳಿಯ ಹಲವು ಗ್ರಾಮಗಳಲ್ಲಿ ಕರಡಿ ಹಾವಳಿ ಹೆಚ್ಚಾಗಿದ್ದು, ಗ್ರಾಮ ಸ್ಥರು ಆತಂಕದಲ್ಲಿ ದಿನ ದೂಡುವ ಸ್ಥಿತಿ ನಿರ್ಮಾಣವಾಗಿದೆ.<br /> <br /> ಐದು ದಿನಗಳಿಂದ ಬೆಳ್ಳೂರು ಹೋಬಳಿಯ ದಾಸನಕೆರೆ ಅಚ್ಚುಕಟ್ಟು ಪ್ರದೇಶ, ಕಂಚನಹಳ್ಳಿ, ನಾಯಕನ ಕೊಪ್ಪಲು, ನಾಗಲಾಪುರ ಮುಂತಾದ ಕಡೆಗಳಲ್ಲಿ ಕರಡಿಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ಅಲ್ಲಿನ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.<br /> <br /> ಕಂಚನಹಳ್ಳಿಯ ತಮ್ಮಣ್ಣಗೌಡ (55) ಎಂಬುವವರು ಕರಡಿ ದಾಳಿಗೆ ತುತ್ತಾಗಿದ್ದಾರೆ. ಸೆ.8 ರಂದು ಸಂಜೆ ಚುಂಚನಗಿರಿಯಿಂದ ಮಾಯಸಂದ್ರ ಹೋಗುವ ರಸ್ತೆ ಮದ್ಯೆ ಪೊದೆಯಲ್ಲಿ 3 ರಿಂದ 4 ಕರಡಿಗಳು ಗುಂಪಾಗಿ ಕುಳಿತಿರುವುದನ್ನು ಅಲ್ಲಿನ ಗ್ರಾಮಸ್ಥರು ಕಂಡಿರುವ ಬಗ್ಗೆ ಗ್ರಾಮದ ಮಂಜಪ್ಪ ತಿಳಿಸಿದ್ದಾರೆ.<br /> <br /> ಗ್ರಾಮಸ್ಥರಿಂದ ಖಂಡನೆ: ವಿಷಯ ತಿಳಿಸಿದರೂ ಸೂಕ್ತ ಕ್ರಮ ಜರುಗಿಸದೇ ಉದಾಸೀನ ತೋರಿದ್ದಾರೆ. ಅರಣ್ಯ ಇಲಾಖೆಗೆ ದೂರು ನೀಡಿದರೂ ವನ್ಯಜೀವಿ ಸಂರಕ್ಷಣಾ ಇಲಾಖೆಗೆ ದೂರು ನೀಡಿ ಎಂದು ತಮ್ಮ ಕರ್ತವ್ಯದಿಂದ ನುಣುಚಿಕೊಳ್ಳಲು ಪ್ರಯತ್ನಿಸಿದರು ಎಂದು ಖಂಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಗಮಂಗಲ: </strong>ತಾಲ್ಲೂಕಿನ ಬೆಳ್ಳೂರು ಹೋಬಳಿಯ ಹಲವು ಗ್ರಾಮಗಳಲ್ಲಿ ಕರಡಿ ಹಾವಳಿ ಹೆಚ್ಚಾಗಿದ್ದು, ಗ್ರಾಮ ಸ್ಥರು ಆತಂಕದಲ್ಲಿ ದಿನ ದೂಡುವ ಸ್ಥಿತಿ ನಿರ್ಮಾಣವಾಗಿದೆ.<br /> <br /> ಐದು ದಿನಗಳಿಂದ ಬೆಳ್ಳೂರು ಹೋಬಳಿಯ ದಾಸನಕೆರೆ ಅಚ್ಚುಕಟ್ಟು ಪ್ರದೇಶ, ಕಂಚನಹಳ್ಳಿ, ನಾಯಕನ ಕೊಪ್ಪಲು, ನಾಗಲಾಪುರ ಮುಂತಾದ ಕಡೆಗಳಲ್ಲಿ ಕರಡಿಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ಅಲ್ಲಿನ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.<br /> <br /> ಕಂಚನಹಳ್ಳಿಯ ತಮ್ಮಣ್ಣಗೌಡ (55) ಎಂಬುವವರು ಕರಡಿ ದಾಳಿಗೆ ತುತ್ತಾಗಿದ್ದಾರೆ. ಸೆ.8 ರಂದು ಸಂಜೆ ಚುಂಚನಗಿರಿಯಿಂದ ಮಾಯಸಂದ್ರ ಹೋಗುವ ರಸ್ತೆ ಮದ್ಯೆ ಪೊದೆಯಲ್ಲಿ 3 ರಿಂದ 4 ಕರಡಿಗಳು ಗುಂಪಾಗಿ ಕುಳಿತಿರುವುದನ್ನು ಅಲ್ಲಿನ ಗ್ರಾಮಸ್ಥರು ಕಂಡಿರುವ ಬಗ್ಗೆ ಗ್ರಾಮದ ಮಂಜಪ್ಪ ತಿಳಿಸಿದ್ದಾರೆ.<br /> <br /> ಗ್ರಾಮಸ್ಥರಿಂದ ಖಂಡನೆ: ವಿಷಯ ತಿಳಿಸಿದರೂ ಸೂಕ್ತ ಕ್ರಮ ಜರುಗಿಸದೇ ಉದಾಸೀನ ತೋರಿದ್ದಾರೆ. ಅರಣ್ಯ ಇಲಾಖೆಗೆ ದೂರು ನೀಡಿದರೂ ವನ್ಯಜೀವಿ ಸಂರಕ್ಷಣಾ ಇಲಾಖೆಗೆ ದೂರು ನೀಡಿ ಎಂದು ತಮ್ಮ ಕರ್ತವ್ಯದಿಂದ ನುಣುಚಿಕೊಳ್ಳಲು ಪ್ರಯತ್ನಿಸಿದರು ಎಂದು ಖಂಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>