<p>ಹುಬ್ಬಳ್ಳಿ: `ಕಲಾವಿದರ ಮಕ್ಕಳಿಗೆ ಶಿಕ್ಷಣದಲ್ಲಿ ಮೀಸಲಾತಿ ಸಿಗಬೇಕೆನ್ನುವ ಕನಸು ನನಸು ಮಾಡುವ ಸುಯೋಗ ಸಿಕ್ಕಿದೆ~ ಎಂದು ಕರ್ನಾಟಕ ನಾಟಕ ಅಕಾಡೆಮಿಯ ನೂತನ ಅಧ್ಯಕ್ಷೆ ಮಾಲತಿ ಸುಧೀರ ಸಂತಸ ವ್ಯಕ್ತಪಡಿಸಿದರು.<br /> <br /> `ಕಲಾವಿದರೆಂದೂ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವುದಿಲ್ಲ. ಒಳ್ಳೆಯ ರೀತಿಯಲ್ಲಿ ಬದುಕುವುದಕ್ಕೂ ಅವರಿಗೆ ಅವಕಾಶ ಸಿಗುವುದು ಅಪರೂಪ. ಎಲ್ಲರೂ ಸಂಶಯದ ದೃಷ್ಟಿಯಿಂದಲೇ ನೋಡುತ್ತಾರೆ. ಹೀಗಾಗಿ ಕಲಾವಿದೆಯರು ಎಂದಿಗೂ ನೊಂದ ಜೀವಿಗಳೇ. ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಮೀಸಲಾತಿ ಸಿಕ್ಕರೆ ಅನುಕೂಲವಾಗುತ್ತದೆ. ಇದಕ್ಕಾಗಿ ತೀವ್ರ ಪ್ರಯತ್ನಿಸುವೆ~ ಎಂದು ಅವರು ಭರವಸೆ ನೀಡಿದರು.<br /> <br /> `ವಯಸ್ಸಾದ ಮೇಲೆ ಕಲಾವಿದೆಯರಿಗೆ ಮಾಸಾಶನ ಸಿಗುತ್ತದೆ. ಆದರೆ ವಯಸ್ಸಾಗುವವರೆಗೂ ಕಲಾವಿದೆಯರು ಬದುಕಿರುವುದಿಲ್ಲ. ಏಕೆಂದರೆ 30-35 ವಯಸ್ಸಿನವರೆಗೆ ನಾಯಕಿ ಪಾತ್ರ ಮಾಡುತ್ತಾರೆ. ಆಮೇಲೆ ಪೋಷಕಿ ಪಾತ್ರ ಮಾಡುತ್ತ ಕಾಲ ತಳ್ಳುತ್ತಾರೆ. ಆದರೆ ಆರ್ಥಿಕವಾಗಿ ಗಟ್ಟಿಯಾಗಿರುವುದಿಲ್ಲ. <br /> <br /> ಇದಕ್ಕಾಗಿ ಮಾಸಾಶನ ನೀಡುವ ವಯೋಮಾನವನ್ನು ಕಡಿಮೆಗೊಳಿಸುವ ಯೋಜನೆಯಿದೆ. ಜೊತೆಗೆ ಹಿರಿಯ ಕಲಾವಿದರನ್ನು ಸಂಘಟಿಸುವ ಯೋಜನೆಯೂ ಇದೆ. ಇದರಿಂದ ಹೊಸ ತಲೆಮಾರಿನ ಕಲಾವಿದರಿಗೆ ತರಬೇತಿ ಕೊಡಿಸಲು ಸಾಧ್ಯವಾಗುತ್ತದೆ~ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಬ್ಬಳ್ಳಿ: `ಕಲಾವಿದರ ಮಕ್ಕಳಿಗೆ ಶಿಕ್ಷಣದಲ್ಲಿ ಮೀಸಲಾತಿ ಸಿಗಬೇಕೆನ್ನುವ ಕನಸು ನನಸು ಮಾಡುವ ಸುಯೋಗ ಸಿಕ್ಕಿದೆ~ ಎಂದು ಕರ್ನಾಟಕ ನಾಟಕ ಅಕಾಡೆಮಿಯ ನೂತನ ಅಧ್ಯಕ್ಷೆ ಮಾಲತಿ ಸುಧೀರ ಸಂತಸ ವ್ಯಕ್ತಪಡಿಸಿದರು.<br /> <br /> `ಕಲಾವಿದರೆಂದೂ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವುದಿಲ್ಲ. ಒಳ್ಳೆಯ ರೀತಿಯಲ್ಲಿ ಬದುಕುವುದಕ್ಕೂ ಅವರಿಗೆ ಅವಕಾಶ ಸಿಗುವುದು ಅಪರೂಪ. ಎಲ್ಲರೂ ಸಂಶಯದ ದೃಷ್ಟಿಯಿಂದಲೇ ನೋಡುತ್ತಾರೆ. ಹೀಗಾಗಿ ಕಲಾವಿದೆಯರು ಎಂದಿಗೂ ನೊಂದ ಜೀವಿಗಳೇ. ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಮೀಸಲಾತಿ ಸಿಕ್ಕರೆ ಅನುಕೂಲವಾಗುತ್ತದೆ. ಇದಕ್ಕಾಗಿ ತೀವ್ರ ಪ್ರಯತ್ನಿಸುವೆ~ ಎಂದು ಅವರು ಭರವಸೆ ನೀಡಿದರು.<br /> <br /> `ವಯಸ್ಸಾದ ಮೇಲೆ ಕಲಾವಿದೆಯರಿಗೆ ಮಾಸಾಶನ ಸಿಗುತ್ತದೆ. ಆದರೆ ವಯಸ್ಸಾಗುವವರೆಗೂ ಕಲಾವಿದೆಯರು ಬದುಕಿರುವುದಿಲ್ಲ. ಏಕೆಂದರೆ 30-35 ವಯಸ್ಸಿನವರೆಗೆ ನಾಯಕಿ ಪಾತ್ರ ಮಾಡುತ್ತಾರೆ. ಆಮೇಲೆ ಪೋಷಕಿ ಪಾತ್ರ ಮಾಡುತ್ತ ಕಾಲ ತಳ್ಳುತ್ತಾರೆ. ಆದರೆ ಆರ್ಥಿಕವಾಗಿ ಗಟ್ಟಿಯಾಗಿರುವುದಿಲ್ಲ. <br /> <br /> ಇದಕ್ಕಾಗಿ ಮಾಸಾಶನ ನೀಡುವ ವಯೋಮಾನವನ್ನು ಕಡಿಮೆಗೊಳಿಸುವ ಯೋಜನೆಯಿದೆ. ಜೊತೆಗೆ ಹಿರಿಯ ಕಲಾವಿದರನ್ನು ಸಂಘಟಿಸುವ ಯೋಜನೆಯೂ ಇದೆ. ಇದರಿಂದ ಹೊಸ ತಲೆಮಾರಿನ ಕಲಾವಿದರಿಗೆ ತರಬೇತಿ ಕೊಡಿಸಲು ಸಾಧ್ಯವಾಗುತ್ತದೆ~ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>