<p>ನಗರದ ಯಾಂತ್ರಿಕ ಜೀವನದಿಂದ ಸ್ವಲ್ಪ ರಿಲೀಫ್ ಮಾಡಿಕೊಂಡು ಅಭೂತಪೂರ್ವ ವಿಸ್ಮಯ ಪರಿಸರಕ್ಕೆ ಭೇಟಿ ನೀಡಲು ನಗರಿಗರ ಮನವು ಸದಾ ಹಂಬಲಿಸುತ್ತಿರುತ್ತದೆ. ಸಾಲು - ಸಾಲು ಭವ್ಯ ಬೆಟ್ಟಗಳು ಮಧ್ಯದಲ್ಲಿ ಗ್ರಾಮೀಣ ಸೊಗಡು, ಪಕ್ಕಾ ಹಳ್ಳಿ ಲೈಫು, ಫಸಲು ತುಂಬಿಕೊಂಡು ಸೌಂದರ್ಯವತಿಯಾಗಿರುವ ಭೂತಾಯಿ. ಈ ಅದ್ಭುತ ಪ್ರಪಂಚ ಮನಸ್ಸಿಗೆ ರೋಮಾಂಚನ ನೀಡುವುದರಲ್ಲಿ ಸಂಶಯವಿಲ್ಲ.<br /> <br /> ಚಿಕ್ಕಬಳ್ಳಾಪುರ ಜಿಲ್ಲೆಯ ‘ರಂಗಸ್ಥಳ’ ಕಿರು ಪ್ರವಾಸಕ್ಕೆ ಒಂದು ನೆಚ್ಚಿನ ತಾಣ. ನಗರದ ಕೇಂದ್ರ ಸ್ಥಳದಿಂದ 64 ಕಿ.ಮೀ. ದೂರದಲ್ಲಿರುವ ರಂಗಸ್ಥಳ ತಲುಪಲು ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ಕ್ರಮಿಸಿ ಅಲ್ಲಿಂದ ಗೌರಿಬಿದನೂರು ಮಾರ್ಗದ ರಸ್ತೆಯಲ್ಲಿ 6 ಕಿ.ಮೀ ದೂರದ ತಿಪ್ಪನಹಳ್ಳಿಗೆ ಸಾಗಬೇಕು. <br /> <br /> ಈ ದೇವಾಲಯ ಯುಗ – ಯುಗಗಳ ಇತಿಹಾಸ ಹೊಂದಿದೆ, ಇಲ್ಲಿನ ಒಂದೊಂದು ಕಲ್ಲು ಒಂದೊಂದು ಕಥೆಗಳನ್ನ ವಿವರಿಸುತ್ತದೆ. ಈ ದೇವಾಲಯ ತನ್ನಲ್ಲಿ ಶಿಲ್ಪಕಲಾ ಗತವೈಭವವನ್ನೇ ಹೊಂದಿದೆ. ರಂಗಸ್ಥಳದ ಪ್ರಮುಖ ಆಕರ್ಷಣೆ ಇಲ್ಲಿನ ವಾಸ್ತುಶಿಲ್ಪ ಹಾಗೂ ವಿವಿಧ ರಾಜಮನೆತನಗಳ ಕೊಡುಗೆಗಳು. ಭಕ್ತರಿಗೆ ವೈಕುಂಠ, ಕಲಾಸಕ್ತರಿಗೆ ನೆಚ್ಚಿನ ತಾಣ, ಇತಿಹಾಸ ಪ್ರಿಯರಿಗೆ ಅಧ್ಯಯನ ಕೇಂದ್ರ, ಪ್ರವಾಸಿಗರಿಗೆ ಕುತೂಹಲಕಾರಿ ಕ್ಷೇತ್ರ ಇದು.<br /> <br /> ದೇವಾಲಯದ ಸುತ್ತಲ್ಲಿರುವ ಬೆಟ್ಟಗಳು, ಕಲ್ಯಾಣಿ, ಹಸಿರು ಪರಿಸರ, ಹಳ್ಳಿ ಜನರ ಭಾವುಕ ಮಾತು, ಕುತೂಹಲ ನೋಟ, ಎಲ್ಲವೂ ನಗರದಿಂದ ವಲಸೆ ಬಂದು ಇಲ್ಲಿಯೇ ನೆಲೆಸೋಣ ಎನ್ನುವಷ್ಟು ಇಷ್ಟವಾಗುತ್ತದೆ.<br /> <br /> <strong>ಪುರಾಣ ಹಿನ್ನೆಲೆ</strong><br /> ರಾಮನ ಪಟ್ಟಾಭಿಷೇಕದ ಸಂದರ್ಭದಲ್ಲಿ, ವಿಭೀಷಣನಿಗೆ ಶ್ರೀ ರಾಮ ಶಕ್ತಿ ಹಾಗೂ ಸಾಮರ್ಥ್ಯಗಳ ಬಲವರ್ದನೆಗಾಗಿ ರಂಗನಾಥಸ್ವಾಮಿಯನ್ನು ಪೂಜಿಸೆಂದು ಒಂದು ಬಿದಿರಿನ ಬುಟ್ಟಿಯಲ್ಲಿ ರಂಗನಾಥನ ವಿಗ್ರಹವಿಟ್ಟು ಉಡುಗೊರೆ ನೀಡುತ್ತಾನೆ. ಅದರ ಜ್ಞಾಪಕಾರ್ಥವಾಗಿ ಸಪ್ತ ಋಷಿಗಳು ರಂಗಸ್ಥಳದಲ್ಲಿ ರಂಗನಾಥಸ್ವಾಮಿ ದೇಗುಲ ನಿರ್ಮಾಣ ಮಾಡಿದ್ದಾರೆ ಎಂಬ ನಂಬಿಕೆಯಿದೆ.<br /> <br /> ಇತಿಹಾಸ: ಹೊಯ್ಸಳರಾದ ಡಂಕಣಾಚಾರಿ ಹಾಗೂ ಟಂಕಣಾಚಾರಿಯರು ರಂಗನಾಥನ ಸೇವೆಯ ಸಲುವಾಗಿ ದೇವಾಲಯದ ಅಭಿವೃದ್ಧಿ ಕಾಂರ್ಯiಮಾಡಿದ್ದಾರೆಂದು, ಇದರ ಸಲುವಾಗಿ ಅನೇಕ ಸ್ತಂಭಗಳನ್ನು ಸಹ ನಿರ್ಮಿಸಿದ್ದಾರೆ ಎಂಬುದು ಉಲ್ಲೇಖ. ಆ ಸ್ತಂಭಗಳಲ್ಲಿ ಹೊಯ್ಸಳರ ಲಾಂಛನವನ್ನು ಸಹ ಕಾಣಬಹುದು. ಹಾಗೂ ನಂತರದ ದಿನಗಳಲ್ಲಿ ಚೋಳರು ಹಾಗೂ ವಿಜಯನಗರ ಸಾಮ್ರಾಜ್ಯದ ರಾಜರು ತಮ್ಮದೆ ಆದ ಕೊಡುಗೆಯನ್ನು ದೇವಾಲಯಕ್ಕೆ ನೀಡಿದ್ದಾರೆ.<br /> <br /> ವಾಸ್ತುಶಿಲ್ಪ: ದೇವಾಲಯದ ವಾಸ್ತುಶಿಲ್ಪವು ಹೊಯ್ಸಳ, ಚೋಳ, ವಿಜಯನಗರ ಮಿಶ್ರಿತ ರೂಪವಾಗಿದ್ದು, ವಿನ್ಯಾಸ ಹಾಗೂ ಶೈಲಿಯಲ್ಲಿ ವೈವಿಧ್ಯ ಹೊಂದಿದೆ. ಈ ದೇಗುಲ ಬಹುತೇಕ ಸ್ತಂಭಗಳಿಂದ ಕೂಡಿದ್ದು, ಪ್ರತಿಯೊಂದು ಕಂಬಗಳಲ್ಲಿ ದೇವರ ವಿಗ್ರಹಗಳು, ನಾಟ್ಯರಾಣಿಯರು, ಕುದುರೆಗಳು, ಆನೆಗಳು, ದ್ವಾರಪಾಲಕರು, ಗರುಡ, ಹನುಮಂತನ ಅವಾತರಗಳು, ವಿಷ್ಣುವಿನ ದಶಾವತರ ಮುಂತಾದ ಕೆಲವು ಪೌರಣಿಕ ಸನ್ನಿವೇಶಗಳ ಕೆತ್ತನೆಗಳಿವೆ.<br /> <br /> ಕೋಟಿನಾಗ ಕಿಂಡಿ: ಗರ್ಭಗುಡಿಗೆ ಹೊಂದಿಕೊಂಡಿರುವ ಕಿಂಡಿಯು ವಿಶೇಷವಾದ ಸ್ಥಾನ ಪಡಿದುಕೊಂಡಿದೆ. ಸಂಕ್ರಾಂತಿ ಸೂರ್ಯೋದಯದಂದು ಸೂರ್ಯನ ಕಿರಣಗಳು ರಂಗನಾಥನ ಪಾದಗಳ ಮೇಲೆ ಬೀಳುತ್ತವೆ. ಇದು ಸೂರ್ಯನಾರಾಯಣರ ರೂಪವೆಂಬ ನಂಬಿಕೆ ದೇಗುಲದಲ್ಲಿದೆ. <br /> <br /> ಗರ್ಭಗುಡಿ: ಗರ್ಭಗುಡಿ ವಿನ್ಯಾಸವು ಬಿದಿರು ಬುಟ್ಟಿಯ ಆಕಾರದಂತಿದ್ದು, ದೇವರ ವಿಗ್ರಹದ ಸುತ್ತ ಬ್ರಹ್ಮ, ಮಹೇಶ್ವರ, ಅಷ್ಟ ದಿಕ್ಪಾಲಕರು, ಶಂಖ-ಚಕ್ರ, ಸಪ್ತ ಋಷಿಗಳನ್ನು ಸಹ ಪ್ರತಿಷ್ಠಾಪನೆ ಮಾಡಲಾಗಿದೆ. ದೇವರು ವೈಕುಂಠದಲ್ಲಿ ಮಲಗಿರುವಾಗ ಸುತ್ತಲು ಎಲ್ಲರೂ ಪ್ರಾರ್ಥನೆ ಮಾಡುವ ರೀತಿ ಭಾಸವಾಗುವಂತೆ ಕೆತ್ತಲಾಗಿದೆ. ಕೆಳಭಾಗದಲ್ಲಿ ಗರುಡ ಅವನ ಮೇಲೆ ಆದಿಶೇಷನಿದ್ದು ಮಹಾವಿಷ್ಣು ಮಲಗಿರುವ ಹಾಗೂ ದೇವರ ಪಾದದ ಬಳಿ ಭೂದೇವಿ ಹಾಗೂ ದೇವಿಯರ ವಿಗ್ರಹವಿದೆ. ಈ ದೇವರ ವಿಗ್ರಹವು ತ್ರೇತಾಯುಗದ್ದಾಗಿದ್ದು, ಸುಮಾರು 9 ಸಾವಿರ ವರ್ಷಗಳಷ್ಟು ಹಳೆಯದೆಂಬ ಮಾಹಿತಿಯಿದೆ.<br /> <br /> ದೇವಾಲಯದ ಹೊರಭಾಗವು 1,000 ವರ್ಷದಷ್ಟು ಹಳೆಯದಾಗಿದೆ. ಗರ್ಭಗುಡಿಯ ಬಲಭಾಗದಲ್ಲಿ ಶಂಕರಾಚಾರ್ಯ, ರಾಮಾನುಜಾಚಾರ್ಯ, ಮಧ್ವಾಚಾರ್ಯರ ವಿಗ್ರಹವಿದ್ದು, ಎಡಭಾಗದಲ್ಲಿ ದೇಗುಲದ ದಶ ಸೇವಕರ ವಿಗ್ರಹಗಳಿವೆ.<br /> ರಂಗಸ್ಥಳದ ಮತ್ತೊಂದು ವಿಶೇಷವೆಂದರೆ, “ಆದಿರಂಗ( ಶ್ರೀರಂಗಪಟ್ಟಣ), ಮಧ್ಯರಂಗ(ಪುಲಿವೆಂದುಲ), ಅಂತ್ಯರಂಗ (ಶ್ರೀ ರಂಗಂ) ಹಾಗೂ ರಂಗಸ್ಥಳದಲ್ಲಿರುವ ದೇವಾಲಯಗಳು ಒಂದೇ ಮುಹೂರ್ತದಲ್ಲಿ ಸ್ಥಾಪಸಲಾಗಿದೆ.<br /> <br /> ಈ ನಾಲ್ಕು ದೇವಾಲಯಗಳ ದರ್ಶನ ಮಾಡುವುದರಿಂದ ಅಧಿಕ ಪುಣ್ಯ ಪಡೆಯಬಹುದೆಂಬ ನಂಬಿಕೆ ಭಕ್ತರಲ್ಲಿಿದೆ. ಈ ದೇಗುಲ ನಿರ್ಮಾಣ ಮಾಡಿದ್ದ ಋಷಿಗಳು ಸ್ಕಂದಗಿರಿಯಲ್ಲಿ ತಪಸ್ಸು ಮಾಡಿದ್ದರೆಂಬ ಕುರುಹುಗಳಿವೆ ಎಂದು ನಂಬಲಾಗಿದೆ.ನಗರದ ಸಮೀಪವೇ ಇರುವ ಈ ಸ್ಥಳಕ್ಕೆ ಒಂದು ದಿನ ಕುಟುಂಬ ಸಮೇತರಾಗಿ, ಸ್ನೇಹಿತರೊಟ್ಟಿಗೆ ತೆರಳಿ ಸುತ್ತಾಡಿ ಬರಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಗರದ ಯಾಂತ್ರಿಕ ಜೀವನದಿಂದ ಸ್ವಲ್ಪ ರಿಲೀಫ್ ಮಾಡಿಕೊಂಡು ಅಭೂತಪೂರ್ವ ವಿಸ್ಮಯ ಪರಿಸರಕ್ಕೆ ಭೇಟಿ ನೀಡಲು ನಗರಿಗರ ಮನವು ಸದಾ ಹಂಬಲಿಸುತ್ತಿರುತ್ತದೆ. ಸಾಲು - ಸಾಲು ಭವ್ಯ ಬೆಟ್ಟಗಳು ಮಧ್ಯದಲ್ಲಿ ಗ್ರಾಮೀಣ ಸೊಗಡು, ಪಕ್ಕಾ ಹಳ್ಳಿ ಲೈಫು, ಫಸಲು ತುಂಬಿಕೊಂಡು ಸೌಂದರ್ಯವತಿಯಾಗಿರುವ ಭೂತಾಯಿ. ಈ ಅದ್ಭುತ ಪ್ರಪಂಚ ಮನಸ್ಸಿಗೆ ರೋಮಾಂಚನ ನೀಡುವುದರಲ್ಲಿ ಸಂಶಯವಿಲ್ಲ.<br /> <br /> ಚಿಕ್ಕಬಳ್ಳಾಪುರ ಜಿಲ್ಲೆಯ ‘ರಂಗಸ್ಥಳ’ ಕಿರು ಪ್ರವಾಸಕ್ಕೆ ಒಂದು ನೆಚ್ಚಿನ ತಾಣ. ನಗರದ ಕೇಂದ್ರ ಸ್ಥಳದಿಂದ 64 ಕಿ.ಮೀ. ದೂರದಲ್ಲಿರುವ ರಂಗಸ್ಥಳ ತಲುಪಲು ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ಕ್ರಮಿಸಿ ಅಲ್ಲಿಂದ ಗೌರಿಬಿದನೂರು ಮಾರ್ಗದ ರಸ್ತೆಯಲ್ಲಿ 6 ಕಿ.ಮೀ ದೂರದ ತಿಪ್ಪನಹಳ್ಳಿಗೆ ಸಾಗಬೇಕು. <br /> <br /> ಈ ದೇವಾಲಯ ಯುಗ – ಯುಗಗಳ ಇತಿಹಾಸ ಹೊಂದಿದೆ, ಇಲ್ಲಿನ ಒಂದೊಂದು ಕಲ್ಲು ಒಂದೊಂದು ಕಥೆಗಳನ್ನ ವಿವರಿಸುತ್ತದೆ. ಈ ದೇವಾಲಯ ತನ್ನಲ್ಲಿ ಶಿಲ್ಪಕಲಾ ಗತವೈಭವವನ್ನೇ ಹೊಂದಿದೆ. ರಂಗಸ್ಥಳದ ಪ್ರಮುಖ ಆಕರ್ಷಣೆ ಇಲ್ಲಿನ ವಾಸ್ತುಶಿಲ್ಪ ಹಾಗೂ ವಿವಿಧ ರಾಜಮನೆತನಗಳ ಕೊಡುಗೆಗಳು. ಭಕ್ತರಿಗೆ ವೈಕುಂಠ, ಕಲಾಸಕ್ತರಿಗೆ ನೆಚ್ಚಿನ ತಾಣ, ಇತಿಹಾಸ ಪ್ರಿಯರಿಗೆ ಅಧ್ಯಯನ ಕೇಂದ್ರ, ಪ್ರವಾಸಿಗರಿಗೆ ಕುತೂಹಲಕಾರಿ ಕ್ಷೇತ್ರ ಇದು.<br /> <br /> ದೇವಾಲಯದ ಸುತ್ತಲ್ಲಿರುವ ಬೆಟ್ಟಗಳು, ಕಲ್ಯಾಣಿ, ಹಸಿರು ಪರಿಸರ, ಹಳ್ಳಿ ಜನರ ಭಾವುಕ ಮಾತು, ಕುತೂಹಲ ನೋಟ, ಎಲ್ಲವೂ ನಗರದಿಂದ ವಲಸೆ ಬಂದು ಇಲ್ಲಿಯೇ ನೆಲೆಸೋಣ ಎನ್ನುವಷ್ಟು ಇಷ್ಟವಾಗುತ್ತದೆ.<br /> <br /> <strong>ಪುರಾಣ ಹಿನ್ನೆಲೆ</strong><br /> ರಾಮನ ಪಟ್ಟಾಭಿಷೇಕದ ಸಂದರ್ಭದಲ್ಲಿ, ವಿಭೀಷಣನಿಗೆ ಶ್ರೀ ರಾಮ ಶಕ್ತಿ ಹಾಗೂ ಸಾಮರ್ಥ್ಯಗಳ ಬಲವರ್ದನೆಗಾಗಿ ರಂಗನಾಥಸ್ವಾಮಿಯನ್ನು ಪೂಜಿಸೆಂದು ಒಂದು ಬಿದಿರಿನ ಬುಟ್ಟಿಯಲ್ಲಿ ರಂಗನಾಥನ ವಿಗ್ರಹವಿಟ್ಟು ಉಡುಗೊರೆ ನೀಡುತ್ತಾನೆ. ಅದರ ಜ್ಞಾಪಕಾರ್ಥವಾಗಿ ಸಪ್ತ ಋಷಿಗಳು ರಂಗಸ್ಥಳದಲ್ಲಿ ರಂಗನಾಥಸ್ವಾಮಿ ದೇಗುಲ ನಿರ್ಮಾಣ ಮಾಡಿದ್ದಾರೆ ಎಂಬ ನಂಬಿಕೆಯಿದೆ.<br /> <br /> ಇತಿಹಾಸ: ಹೊಯ್ಸಳರಾದ ಡಂಕಣಾಚಾರಿ ಹಾಗೂ ಟಂಕಣಾಚಾರಿಯರು ರಂಗನಾಥನ ಸೇವೆಯ ಸಲುವಾಗಿ ದೇವಾಲಯದ ಅಭಿವೃದ್ಧಿ ಕಾಂರ್ಯiಮಾಡಿದ್ದಾರೆಂದು, ಇದರ ಸಲುವಾಗಿ ಅನೇಕ ಸ್ತಂಭಗಳನ್ನು ಸಹ ನಿರ್ಮಿಸಿದ್ದಾರೆ ಎಂಬುದು ಉಲ್ಲೇಖ. ಆ ಸ್ತಂಭಗಳಲ್ಲಿ ಹೊಯ್ಸಳರ ಲಾಂಛನವನ್ನು ಸಹ ಕಾಣಬಹುದು. ಹಾಗೂ ನಂತರದ ದಿನಗಳಲ್ಲಿ ಚೋಳರು ಹಾಗೂ ವಿಜಯನಗರ ಸಾಮ್ರಾಜ್ಯದ ರಾಜರು ತಮ್ಮದೆ ಆದ ಕೊಡುಗೆಯನ್ನು ದೇವಾಲಯಕ್ಕೆ ನೀಡಿದ್ದಾರೆ.<br /> <br /> ವಾಸ್ತುಶಿಲ್ಪ: ದೇವಾಲಯದ ವಾಸ್ತುಶಿಲ್ಪವು ಹೊಯ್ಸಳ, ಚೋಳ, ವಿಜಯನಗರ ಮಿಶ್ರಿತ ರೂಪವಾಗಿದ್ದು, ವಿನ್ಯಾಸ ಹಾಗೂ ಶೈಲಿಯಲ್ಲಿ ವೈವಿಧ್ಯ ಹೊಂದಿದೆ. ಈ ದೇಗುಲ ಬಹುತೇಕ ಸ್ತಂಭಗಳಿಂದ ಕೂಡಿದ್ದು, ಪ್ರತಿಯೊಂದು ಕಂಬಗಳಲ್ಲಿ ದೇವರ ವಿಗ್ರಹಗಳು, ನಾಟ್ಯರಾಣಿಯರು, ಕುದುರೆಗಳು, ಆನೆಗಳು, ದ್ವಾರಪಾಲಕರು, ಗರುಡ, ಹನುಮಂತನ ಅವಾತರಗಳು, ವಿಷ್ಣುವಿನ ದಶಾವತರ ಮುಂತಾದ ಕೆಲವು ಪೌರಣಿಕ ಸನ್ನಿವೇಶಗಳ ಕೆತ್ತನೆಗಳಿವೆ.<br /> <br /> ಕೋಟಿನಾಗ ಕಿಂಡಿ: ಗರ್ಭಗುಡಿಗೆ ಹೊಂದಿಕೊಂಡಿರುವ ಕಿಂಡಿಯು ವಿಶೇಷವಾದ ಸ್ಥಾನ ಪಡಿದುಕೊಂಡಿದೆ. ಸಂಕ್ರಾಂತಿ ಸೂರ್ಯೋದಯದಂದು ಸೂರ್ಯನ ಕಿರಣಗಳು ರಂಗನಾಥನ ಪಾದಗಳ ಮೇಲೆ ಬೀಳುತ್ತವೆ. ಇದು ಸೂರ್ಯನಾರಾಯಣರ ರೂಪವೆಂಬ ನಂಬಿಕೆ ದೇಗುಲದಲ್ಲಿದೆ. <br /> <br /> ಗರ್ಭಗುಡಿ: ಗರ್ಭಗುಡಿ ವಿನ್ಯಾಸವು ಬಿದಿರು ಬುಟ್ಟಿಯ ಆಕಾರದಂತಿದ್ದು, ದೇವರ ವಿಗ್ರಹದ ಸುತ್ತ ಬ್ರಹ್ಮ, ಮಹೇಶ್ವರ, ಅಷ್ಟ ದಿಕ್ಪಾಲಕರು, ಶಂಖ-ಚಕ್ರ, ಸಪ್ತ ಋಷಿಗಳನ್ನು ಸಹ ಪ್ರತಿಷ್ಠಾಪನೆ ಮಾಡಲಾಗಿದೆ. ದೇವರು ವೈಕುಂಠದಲ್ಲಿ ಮಲಗಿರುವಾಗ ಸುತ್ತಲು ಎಲ್ಲರೂ ಪ್ರಾರ್ಥನೆ ಮಾಡುವ ರೀತಿ ಭಾಸವಾಗುವಂತೆ ಕೆತ್ತಲಾಗಿದೆ. ಕೆಳಭಾಗದಲ್ಲಿ ಗರುಡ ಅವನ ಮೇಲೆ ಆದಿಶೇಷನಿದ್ದು ಮಹಾವಿಷ್ಣು ಮಲಗಿರುವ ಹಾಗೂ ದೇವರ ಪಾದದ ಬಳಿ ಭೂದೇವಿ ಹಾಗೂ ದೇವಿಯರ ವಿಗ್ರಹವಿದೆ. ಈ ದೇವರ ವಿಗ್ರಹವು ತ್ರೇತಾಯುಗದ್ದಾಗಿದ್ದು, ಸುಮಾರು 9 ಸಾವಿರ ವರ್ಷಗಳಷ್ಟು ಹಳೆಯದೆಂಬ ಮಾಹಿತಿಯಿದೆ.<br /> <br /> ದೇವಾಲಯದ ಹೊರಭಾಗವು 1,000 ವರ್ಷದಷ್ಟು ಹಳೆಯದಾಗಿದೆ. ಗರ್ಭಗುಡಿಯ ಬಲಭಾಗದಲ್ಲಿ ಶಂಕರಾಚಾರ್ಯ, ರಾಮಾನುಜಾಚಾರ್ಯ, ಮಧ್ವಾಚಾರ್ಯರ ವಿಗ್ರಹವಿದ್ದು, ಎಡಭಾಗದಲ್ಲಿ ದೇಗುಲದ ದಶ ಸೇವಕರ ವಿಗ್ರಹಗಳಿವೆ.<br /> ರಂಗಸ್ಥಳದ ಮತ್ತೊಂದು ವಿಶೇಷವೆಂದರೆ, “ಆದಿರಂಗ( ಶ್ರೀರಂಗಪಟ್ಟಣ), ಮಧ್ಯರಂಗ(ಪುಲಿವೆಂದುಲ), ಅಂತ್ಯರಂಗ (ಶ್ರೀ ರಂಗಂ) ಹಾಗೂ ರಂಗಸ್ಥಳದಲ್ಲಿರುವ ದೇವಾಲಯಗಳು ಒಂದೇ ಮುಹೂರ್ತದಲ್ಲಿ ಸ್ಥಾಪಸಲಾಗಿದೆ.<br /> <br /> ಈ ನಾಲ್ಕು ದೇವಾಲಯಗಳ ದರ್ಶನ ಮಾಡುವುದರಿಂದ ಅಧಿಕ ಪುಣ್ಯ ಪಡೆಯಬಹುದೆಂಬ ನಂಬಿಕೆ ಭಕ್ತರಲ್ಲಿಿದೆ. ಈ ದೇಗುಲ ನಿರ್ಮಾಣ ಮಾಡಿದ್ದ ಋಷಿಗಳು ಸ್ಕಂದಗಿರಿಯಲ್ಲಿ ತಪಸ್ಸು ಮಾಡಿದ್ದರೆಂಬ ಕುರುಹುಗಳಿವೆ ಎಂದು ನಂಬಲಾಗಿದೆ.ನಗರದ ಸಮೀಪವೇ ಇರುವ ಈ ಸ್ಥಳಕ್ಕೆ ಒಂದು ದಿನ ಕುಟುಂಬ ಸಮೇತರಾಗಿ, ಸ್ನೇಹಿತರೊಟ್ಟಿಗೆ ತೆರಳಿ ಸುತ್ತಾಡಿ ಬರಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>