<p><strong>ಉದ್ಯಾನ ನಗರಿಯಲ್ಲಿ ಕರಕುಶಲ ಮೇಳಗಳಿಗಳೇನು ಕೊರತೆ ಇಲ್ಲ. ಆದರೆ ಅಂಜತಾ ಹೋಟೆಲ್ ಸಮೀಪದ ಆಶ್ಲೆಯನ್ ರಸ್ತೆಯಲ್ಲಿ ಹಂಡ್ರೆಡ್ ಹ್ಯಾಂಡ್ಸ್ ನಡೆಸುತ್ತಿರುವ `ಕರಕುಶಲ ಮೇಳ~ ತುಸು ವಿಭಿನ್ನ. ಇಲ್ಲಿ ಮಾರಾಟ ಅಷ್ಟೇ ಅಲ್ಲದೇ, ಆಸಕ್ತರಿಗೆ ತರಬೇತಿಯೂ ಇದೆ.</strong><br /> <br /> ಒಂದು ಪುಸ್ತಕ. ಅದನ್ನು ಬಿಡಿಸಿದರೆ ಪ್ರತಿ ಹಾಳೆಯಲ್ಲೂ ಒಂದೊಂದು ಚಿತ್ರ. ಮಕ್ಕಳಿಗೆ ಕರಕುಶಲ ಕಲೆಯನ್ನು ಪರಿಚಯಿಸುವ ಆ ಪುಸ್ತಕದ ಕತೃ ಉದಯಪುರದ ಯುವತಿ ಅದಿತಿ. ಪುಸ್ತಕಕ್ಕೆ ವೈವಿಧ್ಯಮಯ ಬೈಂಡ್ ಮಾಡುವುದರಲ್ಲಿ ಈಕೆ ಪರಿಣಿತೆ. <br /> <br /> ಪುಸ್ತಕದಲ್ಲೇ ವೈವಿಧ್ಯಮಯ ಕಲಾಕೃತಿಗಳನ್ನು ಸೃಷ್ಟಿಸುವ ಚತುರೆ. ಮುಂಬೈನ ಐಐಟಿ ಯಿಂದ `ದೃಶ್ಯ ಸಂವಹನ~ದಲ್ಲಿ ಪದವಿ ಪಡೆದು ಮಕ್ಕಳಿಗೆ ನೆರವಾಗುವ ಶೈಕ್ಷಣಿಕ ಪರಿಕರಗಳನ್ನು ತಯಾರಿಸುತ್ತಾರೆ. ಅವರು ಸಿದ್ಧಪಡಿಸುವ ವಸ್ತುಗಳು ಒಂದಕ್ಕಿಂತ ಒಂದು ವಿಭಿನ್ನ...!<br /> <br /> ಬೆಂಗಳೂರಿನ ಹಂಡ್ರೆಡ್ ಹ್ಯಾಂಡ್ಸ್ ಸ್ವಯಂ ಸೇವಾ ಸಂಸ್ಥೆ ಆಯೋಜಿಸಿರುವ `ಕರಕುಶಲ~ ಮೇಳದಲ್ಲಿ, ಅದಿತಿ ಮಾತ್ರವಲ್ಲದೆ ಮಧ್ಯಪ್ರದೇಶದ ಆದಿವಾಸಿ ಕಲಾವಿದ ವೆಂಕಟ್ ರಾಮನ್ ಸಿಂಗ್, ಬೆಂಗಳೂರಿನ ನೈಲ್ಸ್ ಮತ್ತು ಸ್ಟ್ರಿಂಗ್ ಆರ್ಟಿಸ್ಟ್ ಪ್ರಿಯಾಂಕ ಸಿಕ್ಕ, ಶಿವಮೊಗ್ಗ ಜಿಲ್ಲೆಯ ಬಂದಗದ್ದೆ ರಾಧಾಕೃಷ್ಣ, ತುಮಕೂರಿನ ಕಾಂತರಾಜು, ಕೇರಳದ ಕುಟ್ಟಿ, ನಾಯರ್... ಹೀಗೆ ಹತ್ತಾರು ಕಲಾವಿದರು ತಮ್ಮ ವಸ್ತುಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ. <br /> <br /> ಕರಕುಶಲ ವಸ್ತುಗಳಿಗೆ ಮಾರುಕಟ್ಟೆ ಕಲ್ಪಿಸುವ ಹಾಗೂ ಗ್ರಾಹಕರು ಇಷ್ಟಪಡುವ ವಸ್ತುಗಳನ್ನು ಪೂರೈಸುವ ಸಲುವಾಗಿ ಈ ಮೇಳವನ್ನು ಆಯೋಜಿಸಲಾಗಿದೆ.<br /> <br /> <strong>ಒಂದು ವಿಭಿನ್ನ ಪ್ರಯತ್ನ :</strong>`ಇದು ಒಂದು ವಿಭಿನ್ನ ಪ್ರಯತ್ನ. ಕುಶಲಕರ್ಮಿಗಳು ಮತ್ತು ಗ್ರಾಹಕರ ನಡುವೆ ನೇರ ಸಂವಾದ ಏರ್ಪಡಿಸುವುದಕ್ಕಾಗಿ ಈ ಮೇಳ ಆಯೋಜಿಸಿದ್ದೇವೆ~ ಎನ್ನುತ್ತಾರೆ ಹಂಡ್ರೆಡ್ ಹ್ಯಾಂಡ್ ಸಂಸ್ಥೆಯ ಸಂಸ್ಥಾಪಕ ಟ್ರಸ್ಟ್ರೀ ಮಾಲಾ ಮಾಧವನ್.<br /> </p>.<p>ಮೇಳಕ್ಕೆ ಕೇವಲ ವಸ್ತುಗಳನ್ನು ಮಾರುವುದಕ್ಕಷ್ಟೇ ಸೀಮಿತವಾಗಿಲ್ಲ. ನಗರದ ಆಸಕ್ತ ನಾಗರಿಕರಿಗೆ ಕರಕುಶಲ ಕಲೆಯ ತರಬೇತಿ ನೀಡುವುದು, ಕರಕುಶಲ ಕರ್ಮಿಗಳಿಗೆ ಉದ್ಯೋಗ ಕಲ್ಪಿಸುವುದು, ಅವರ ವಸ್ತುಗಳಿಗೆ ಮಾರುಕಟ್ಟೆ ಕಲ್ಪಿಸುವ ಉದ್ದೇಶವಿದೆ. <br /> <br /> `ಮೂರು ದಿನಗಳಿಂದ ನಡೆಯುತ್ತಿರುವ ಈ ಮೇಳದಲ್ಲಿ ಆ ಉದ್ದೇಶ ಈಡೇರಿದೆ. ಬಹಳಷ್ಟು ಬೆಂಗಳೂರು ನಾಗರಿಕರಿಗೆ ನಮ್ಮ ಹಸೆ ಚಿತ್ತಾರಗಳು ಇಷ್ಟವಾಗಿವೆ~ ಎನ್ನುವ ಕಲಾವಿದ ಬಂದಗದ್ದೆ ರಾಧಾಕೃಷ್ಣ ಅವರು, ಬೇವು, ಮಲ್ಲಿಗೆ, ಮಣ್ಣು ಹಾಗೂ ಇನ್ನಿತರ ವಸ್ತುಗಳಿಂದ `ಸ್ವಾಭಾವಿಕ ಬಣ್ಣಗಳನ್ನು~ ತಯಾರಿಸಿ ಚಿತ್ರಗಳನ್ನು ಬಿಡಿಸಿದ್ದಾರೆ.<br /> <br /> ತುಮಕೂರಿನ ಕಾಂತರಾಜು ಅವರು ಮನೆಯ ಮೂಲೆಯಲ್ಲಿರುವ ಕಬ್ಬಿಣದ ಪೆಟ್ಟಿಗೆಗಳಿಗ ಹಸೆ ಚಿತ್ತಾರಗಳನ್ನು ಬಿಡಿಸುವ ಮೂಲಕ ಗ್ರಾಮೀಣ ಕಲೆಗೆ ಜೀವ ತುಂಬಿದ್ದಾರೆ.<br /> <br /> ಮೇಳದಲ್ಲಿ ವೈವಿಧ್ಯಮಯ ಹ್ಯಾಂಡ್ಮೇಡ್ ಪೇಪರ್ಗಳನ್ನು ಕೇರಳದ ಕಲಾವಿದರು ಪ್ರದರ್ಶಿಸಿದ್ದಾರೆ. ಬೋನ್ಸಾಯ್ ಗಿಡಗಳಿವೆ. ಓಡಿಶಾ, ಮಧ್ಯಪ್ರದೇಶ, ಗುಡ್ಡಗಾಡು ರಾಜ್ಯಗಳ ಬುಡಕಟ್ಟು ಜನಾಂಗದವರ ಕಲೆಯನ್ನು ಪ್ರದರ್ಶಿಸುವ ಪೇಂಟಿಂಗ್ಗಳಿವೆ. <br /> <br /> ಬೆಂಗಳೂರಿನ ಪ್ರಿಯಾಂಕ ಸಿಕ್ಕಾ ಅವರು `ಮೊಳೆ- ದಾರ~ದ ಚಿತ್ರಕಲೆಯನ್ನು ಈ ಮೇಳದಲ್ಲಿ ಸ್ಪರ್ಧೆ ರೀತಿಯಲ್ಲಿ ಬಳಸಿದ್ದಾರೆ. ಆಸಕ್ತರು, ಈ ಮೊಳೆ-ದಾರದ ಆಟದಲ್ಲಿ ಪಾಲ್ಗೊಂಡು ಚಿತ್ರಗಳನ್ನು ರಚಿಸಬಹುದು.<br /> <br /> ಹಂಡ್ರೆಡ್ ಹ್ಯಾಂಡ್ಸ್ ಸಂಸ್ಥೆಯಲ್ಲಿ 50ಕ್ಕೂ ಹೆಚ್ಚು ಕುಶಲಕರ್ಮಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. ತರಬೇತಿ ನೀಡುತ್ತಾರೆ. ದೇಶದ ವಿವಿಧ ಕಡೆಯಿರುವ ಕಲಾವಿದರಿಗೆ ಪ್ರಸ್ತುತ ಮೇಳ ನಡೆಯುತ್ತಿರುವ ಅಂಗಳವೇ `ಉದ್ಯಾನ ನಗರಿಯ ಕಾಯಂ~ ವಿಳಾಸವಾಗಿದೆ. <br /> </p>.<p>`ಕಲಾವಿದ ಸಮುದಾಯಕ್ಕೆ ಉತ್ತಮ ವೇದಿಕೆ ಕಲ್ಪಿಸಿಕೊಡಬೇಕೆಂಬ ನಮ್ಮ ಸಂಸ್ಥೆಯ ಉದ್ದೇಶ ಈಡೇರಿದೆ. ಅದಕ್ಕೆ ಸಾಕ್ಷಿ ಈ ಮೇಳಕ್ಕೆ ಸಿಕ್ಕಿರುವ ಪ್ರತಿಕ್ರಿಯೆ~ ಎನ್ನುತ್ತಾರೆ ಮಾಲಾ ಮಾಧವನ್.<br /> <br /> <strong>ಸ್ಥಳ: ಎಂ.ಜಿ ರಸ್ತೆಯ ಹಿಂಬದಿಯಲ್ಲಿರುವ ಅಜಂತಾ ಹೋಟೆಲ್ ಪಕ್ಕದ ಆಶ್ಲೆಯನ್ ರಸ್ತೆ. ಮೇಳ ಭಾನುವಾರ ಮುಕ್ತಾಯ. <br /> <br /> ಮಾಹಿತಿಗೆ: 98450 08482.</strong><br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉದ್ಯಾನ ನಗರಿಯಲ್ಲಿ ಕರಕುಶಲ ಮೇಳಗಳಿಗಳೇನು ಕೊರತೆ ಇಲ್ಲ. ಆದರೆ ಅಂಜತಾ ಹೋಟೆಲ್ ಸಮೀಪದ ಆಶ್ಲೆಯನ್ ರಸ್ತೆಯಲ್ಲಿ ಹಂಡ್ರೆಡ್ ಹ್ಯಾಂಡ್ಸ್ ನಡೆಸುತ್ತಿರುವ `ಕರಕುಶಲ ಮೇಳ~ ತುಸು ವಿಭಿನ್ನ. ಇಲ್ಲಿ ಮಾರಾಟ ಅಷ್ಟೇ ಅಲ್ಲದೇ, ಆಸಕ್ತರಿಗೆ ತರಬೇತಿಯೂ ಇದೆ.</strong><br /> <br /> ಒಂದು ಪುಸ್ತಕ. ಅದನ್ನು ಬಿಡಿಸಿದರೆ ಪ್ರತಿ ಹಾಳೆಯಲ್ಲೂ ಒಂದೊಂದು ಚಿತ್ರ. ಮಕ್ಕಳಿಗೆ ಕರಕುಶಲ ಕಲೆಯನ್ನು ಪರಿಚಯಿಸುವ ಆ ಪುಸ್ತಕದ ಕತೃ ಉದಯಪುರದ ಯುವತಿ ಅದಿತಿ. ಪುಸ್ತಕಕ್ಕೆ ವೈವಿಧ್ಯಮಯ ಬೈಂಡ್ ಮಾಡುವುದರಲ್ಲಿ ಈಕೆ ಪರಿಣಿತೆ. <br /> <br /> ಪುಸ್ತಕದಲ್ಲೇ ವೈವಿಧ್ಯಮಯ ಕಲಾಕೃತಿಗಳನ್ನು ಸೃಷ್ಟಿಸುವ ಚತುರೆ. ಮುಂಬೈನ ಐಐಟಿ ಯಿಂದ `ದೃಶ್ಯ ಸಂವಹನ~ದಲ್ಲಿ ಪದವಿ ಪಡೆದು ಮಕ್ಕಳಿಗೆ ನೆರವಾಗುವ ಶೈಕ್ಷಣಿಕ ಪರಿಕರಗಳನ್ನು ತಯಾರಿಸುತ್ತಾರೆ. ಅವರು ಸಿದ್ಧಪಡಿಸುವ ವಸ್ತುಗಳು ಒಂದಕ್ಕಿಂತ ಒಂದು ವಿಭಿನ್ನ...!<br /> <br /> ಬೆಂಗಳೂರಿನ ಹಂಡ್ರೆಡ್ ಹ್ಯಾಂಡ್ಸ್ ಸ್ವಯಂ ಸೇವಾ ಸಂಸ್ಥೆ ಆಯೋಜಿಸಿರುವ `ಕರಕುಶಲ~ ಮೇಳದಲ್ಲಿ, ಅದಿತಿ ಮಾತ್ರವಲ್ಲದೆ ಮಧ್ಯಪ್ರದೇಶದ ಆದಿವಾಸಿ ಕಲಾವಿದ ವೆಂಕಟ್ ರಾಮನ್ ಸಿಂಗ್, ಬೆಂಗಳೂರಿನ ನೈಲ್ಸ್ ಮತ್ತು ಸ್ಟ್ರಿಂಗ್ ಆರ್ಟಿಸ್ಟ್ ಪ್ರಿಯಾಂಕ ಸಿಕ್ಕ, ಶಿವಮೊಗ್ಗ ಜಿಲ್ಲೆಯ ಬಂದಗದ್ದೆ ರಾಧಾಕೃಷ್ಣ, ತುಮಕೂರಿನ ಕಾಂತರಾಜು, ಕೇರಳದ ಕುಟ್ಟಿ, ನಾಯರ್... ಹೀಗೆ ಹತ್ತಾರು ಕಲಾವಿದರು ತಮ್ಮ ವಸ್ತುಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ. <br /> <br /> ಕರಕುಶಲ ವಸ್ತುಗಳಿಗೆ ಮಾರುಕಟ್ಟೆ ಕಲ್ಪಿಸುವ ಹಾಗೂ ಗ್ರಾಹಕರು ಇಷ್ಟಪಡುವ ವಸ್ತುಗಳನ್ನು ಪೂರೈಸುವ ಸಲುವಾಗಿ ಈ ಮೇಳವನ್ನು ಆಯೋಜಿಸಲಾಗಿದೆ.<br /> <br /> <strong>ಒಂದು ವಿಭಿನ್ನ ಪ್ರಯತ್ನ :</strong>`ಇದು ಒಂದು ವಿಭಿನ್ನ ಪ್ರಯತ್ನ. ಕುಶಲಕರ್ಮಿಗಳು ಮತ್ತು ಗ್ರಾಹಕರ ನಡುವೆ ನೇರ ಸಂವಾದ ಏರ್ಪಡಿಸುವುದಕ್ಕಾಗಿ ಈ ಮೇಳ ಆಯೋಜಿಸಿದ್ದೇವೆ~ ಎನ್ನುತ್ತಾರೆ ಹಂಡ್ರೆಡ್ ಹ್ಯಾಂಡ್ ಸಂಸ್ಥೆಯ ಸಂಸ್ಥಾಪಕ ಟ್ರಸ್ಟ್ರೀ ಮಾಲಾ ಮಾಧವನ್.<br /> </p>.<p>ಮೇಳಕ್ಕೆ ಕೇವಲ ವಸ್ತುಗಳನ್ನು ಮಾರುವುದಕ್ಕಷ್ಟೇ ಸೀಮಿತವಾಗಿಲ್ಲ. ನಗರದ ಆಸಕ್ತ ನಾಗರಿಕರಿಗೆ ಕರಕುಶಲ ಕಲೆಯ ತರಬೇತಿ ನೀಡುವುದು, ಕರಕುಶಲ ಕರ್ಮಿಗಳಿಗೆ ಉದ್ಯೋಗ ಕಲ್ಪಿಸುವುದು, ಅವರ ವಸ್ತುಗಳಿಗೆ ಮಾರುಕಟ್ಟೆ ಕಲ್ಪಿಸುವ ಉದ್ದೇಶವಿದೆ. <br /> <br /> `ಮೂರು ದಿನಗಳಿಂದ ನಡೆಯುತ್ತಿರುವ ಈ ಮೇಳದಲ್ಲಿ ಆ ಉದ್ದೇಶ ಈಡೇರಿದೆ. ಬಹಳಷ್ಟು ಬೆಂಗಳೂರು ನಾಗರಿಕರಿಗೆ ನಮ್ಮ ಹಸೆ ಚಿತ್ತಾರಗಳು ಇಷ್ಟವಾಗಿವೆ~ ಎನ್ನುವ ಕಲಾವಿದ ಬಂದಗದ್ದೆ ರಾಧಾಕೃಷ್ಣ ಅವರು, ಬೇವು, ಮಲ್ಲಿಗೆ, ಮಣ್ಣು ಹಾಗೂ ಇನ್ನಿತರ ವಸ್ತುಗಳಿಂದ `ಸ್ವಾಭಾವಿಕ ಬಣ್ಣಗಳನ್ನು~ ತಯಾರಿಸಿ ಚಿತ್ರಗಳನ್ನು ಬಿಡಿಸಿದ್ದಾರೆ.<br /> <br /> ತುಮಕೂರಿನ ಕಾಂತರಾಜು ಅವರು ಮನೆಯ ಮೂಲೆಯಲ್ಲಿರುವ ಕಬ್ಬಿಣದ ಪೆಟ್ಟಿಗೆಗಳಿಗ ಹಸೆ ಚಿತ್ತಾರಗಳನ್ನು ಬಿಡಿಸುವ ಮೂಲಕ ಗ್ರಾಮೀಣ ಕಲೆಗೆ ಜೀವ ತುಂಬಿದ್ದಾರೆ.<br /> <br /> ಮೇಳದಲ್ಲಿ ವೈವಿಧ್ಯಮಯ ಹ್ಯಾಂಡ್ಮೇಡ್ ಪೇಪರ್ಗಳನ್ನು ಕೇರಳದ ಕಲಾವಿದರು ಪ್ರದರ್ಶಿಸಿದ್ದಾರೆ. ಬೋನ್ಸಾಯ್ ಗಿಡಗಳಿವೆ. ಓಡಿಶಾ, ಮಧ್ಯಪ್ರದೇಶ, ಗುಡ್ಡಗಾಡು ರಾಜ್ಯಗಳ ಬುಡಕಟ್ಟು ಜನಾಂಗದವರ ಕಲೆಯನ್ನು ಪ್ರದರ್ಶಿಸುವ ಪೇಂಟಿಂಗ್ಗಳಿವೆ. <br /> <br /> ಬೆಂಗಳೂರಿನ ಪ್ರಿಯಾಂಕ ಸಿಕ್ಕಾ ಅವರು `ಮೊಳೆ- ದಾರ~ದ ಚಿತ್ರಕಲೆಯನ್ನು ಈ ಮೇಳದಲ್ಲಿ ಸ್ಪರ್ಧೆ ರೀತಿಯಲ್ಲಿ ಬಳಸಿದ್ದಾರೆ. ಆಸಕ್ತರು, ಈ ಮೊಳೆ-ದಾರದ ಆಟದಲ್ಲಿ ಪಾಲ್ಗೊಂಡು ಚಿತ್ರಗಳನ್ನು ರಚಿಸಬಹುದು.<br /> <br /> ಹಂಡ್ರೆಡ್ ಹ್ಯಾಂಡ್ಸ್ ಸಂಸ್ಥೆಯಲ್ಲಿ 50ಕ್ಕೂ ಹೆಚ್ಚು ಕುಶಲಕರ್ಮಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. ತರಬೇತಿ ನೀಡುತ್ತಾರೆ. ದೇಶದ ವಿವಿಧ ಕಡೆಯಿರುವ ಕಲಾವಿದರಿಗೆ ಪ್ರಸ್ತುತ ಮೇಳ ನಡೆಯುತ್ತಿರುವ ಅಂಗಳವೇ `ಉದ್ಯಾನ ನಗರಿಯ ಕಾಯಂ~ ವಿಳಾಸವಾಗಿದೆ. <br /> </p>.<p>`ಕಲಾವಿದ ಸಮುದಾಯಕ್ಕೆ ಉತ್ತಮ ವೇದಿಕೆ ಕಲ್ಪಿಸಿಕೊಡಬೇಕೆಂಬ ನಮ್ಮ ಸಂಸ್ಥೆಯ ಉದ್ದೇಶ ಈಡೇರಿದೆ. ಅದಕ್ಕೆ ಸಾಕ್ಷಿ ಈ ಮೇಳಕ್ಕೆ ಸಿಕ್ಕಿರುವ ಪ್ರತಿಕ್ರಿಯೆ~ ಎನ್ನುತ್ತಾರೆ ಮಾಲಾ ಮಾಧವನ್.<br /> <br /> <strong>ಸ್ಥಳ: ಎಂ.ಜಿ ರಸ್ತೆಯ ಹಿಂಬದಿಯಲ್ಲಿರುವ ಅಜಂತಾ ಹೋಟೆಲ್ ಪಕ್ಕದ ಆಶ್ಲೆಯನ್ ರಸ್ತೆ. ಮೇಳ ಭಾನುವಾರ ಮುಕ್ತಾಯ. <br /> <br /> ಮಾಹಿತಿಗೆ: 98450 08482.</strong><br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>