<p>ಶಿವಮೊಗ್ಗ: ವಿರೂಪವಿರುವ ಒಂದು ಕಲ್ಲನ್ನು ಒಂದು ಸುಂದರ ಮೂರ್ತಿಯನ್ನಾಗಿಸುವ ಶಕ್ತಿ ಶಿಲ್ಪಿಯಲ್ಲಿರುತ್ತದೆ ಎಂದು ವಾಗ್ಮಿ ಹಿರೇಮಗಳೂರು ಕಣ್ಣನ್ ಹೇಳಿದರು.<br /> <br /> ನಗರದ ಕೋಟೆ ಬಯಲು ರಂಗಮಂದಿರದಲ್ಲಿ ಭಾನುವಾರ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಅವಧೂತ ಪ್ರಕಾಶನ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ‘ಪಂಚಶಿಲ್ಪ ಕಲಾಪ್ರವೀಣ’ ಗ್ರಂಥ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.<br /> <br /> ವಿರೂಪವಾಗಿ ರಸ್ತೆಯಲ್ಲಿ ಬಿದ್ದ ಒಂದು ಕಲ್ಲನ್ನು ತೆಗೆದುಕೊಂಡು ಅದಕ್ಕೆ ಒಂದು ರೂಪ ನೀಡುವ ಸಾಮರ್ಥ್ಯ ಶಿಲ್ಪಿಯಲ್ಲಿರುತ್ತದೆ. ಒಂದು ಅಮೂರ್ತವಾದ ವಸ್ತುವಿಗೂ ಮೂರ್ತ ಸ್ವರೂಪ ನೀಡುವ ಶಿಲ್ಪಿಗೆ ದೇವರ ದರ್ಶನ ಮಾಡಿಸುವ ಕಲೆಗಾರಿಕೆ ಇರುತ್ತದೆ ಎಂದು ಅಭಿಪ್ರಾಯಪಟ್ಟರು.<br /> <br /> ನಾವು ಇಂದು ಪರಂಪರೆಗೆ ಬದ್ಧರಾಗಿದ್ದು, ಕ್ಯಾಸೆಟ್ಗಳ ಮೂಲಕ ಜಪಮಾಡುವ ಕಲೆಗಾರಿಕೆ ಬೆಳೆಸಿಕೊಂಡಿದ್ದೇವೆ. ಶಿಲ್ಪಿ ರಚಿಸುವ ಕಲಾಕೃತಿಗೆ ಅನುಗುಣವಾಗಿ ಜೀವನ ನಡೆಸುತ್ತಿದ್ದೇವೆ ಎಂದು ಮಾತಿನ ಚಟಾಕಿಯನ್ನಾರಿಸಿದರು.<br /> <br /> ಒಬ್ಬ ಶಿಲ್ಪಿಯನ್ನು ಸನ್ಮಾನಿಸಿದರೆ, ಇಡೀ ದೇಶದ ಸಂಸ್ಕೃತಿಯನ್ನು ಸನ್ಮಾನಿಸಿದಂತೆ. ಶಿಲ್ಪಿಗಳು ಸಮಾಜದಲ್ಲಿ ಸಿಗುವುದು ಕಡಿಮೆ. ಸಮಾಜಮುಖಿಯಾಗಿ ಕಾರ್ಯನಿರ್ವಹಿಸುವ ಶಿಲ್ಪಿಗಳನ್ನು ಗೌರವಿಸುವುದು ಸಮಾಜದ ಕರ್ತವ್ಯ ಎಂದು ತಿಳಿಸಿದರು.<br /> <br /> ಇಂದಿನ ಸಂಸಾರಗಳಲ್ಲಿ ಸಂಸ್ಕಾರವೇ ಇಲ್ಲವಾಗಿ, ಆಚಾರ, ವಿಚಾರಗಳು ಕೂಡ ಮರೆಯಾಗುತ್ತಿವೆ. ನಿರ್ಧಿಷ್ಟ ಆದರ್ಶಗಳನ್ನು ಕುಟುಂಬಗಳು ಮೈಗೂಡಿಸಿಕೊಳ್ಳಬೇಕಾದ ಅವಶ್ಯಕತೆ ಹೆಚ್ಚಿದೆ. ಸುಖ ಸಂಸಾರಕ್ಕೆ<br /> ಸಂಸ್ಕಾರ ಇರಲೇಬೇಕು. ಅದು ಇದ್ದಾಗ ಮಾತ್ರ ಆದರ್ಶ ಸಂಸಾರ ಎಂದರು.<br /> <br /> ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ಬಿ.ಪ್ರಸನ್ನಕುಮಾರ, ಇಂದಿನ ಜೀವನವೆಂಬುದು ಗಣಕಯಂತ್ರದ ಸುಳಿಗೆ ಸಿಲುಕಿ, ನಾಗಾಲೋಟದಲ್ಲಿ ಸಾಗುತ್ತಿದೆ. ಗಣಕಯಂತ್ರದ ಪ್ರಭಾವದಿಂದ ಜಗತ್ತಿನಲ್ಲಿ ಅನೇಕ ವಿಸ್ಮಯಗಳು ನಡೆಯುತ್ತಿವೆ. ಆದರೆ, ಇಂದು ನಾವೆಲ್ಲಾ ಅದಕ್ಕೆ ದಾಸರಾಗಿ ಅನೇಕ ಜವಾಬ್ದಾರಿಗಳನ್ನು ಮರೆತು ಜೀವನ ಸಾಗಿಸುತ್ತಿರುವುದು ವಿಪರ್ಯಾಸ ಎಂದರು.<br /> <br /> ಶಿಲ್ಪಿ ಕಾಶೀನಾಥ್ ಹಾಗೂ ಲೇಖಕ ದತ್ತಾತ್ರಿ ದಂಪತಿಯನ್ನು ಸನ್ಮಾನಿಸ ಲಾಯಿತು. ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್.ಅಚ್ಯುತರಾವ್ ಅಧ್ಯಕ್ಷತೆ ವಹಿಸಿದ್ದರು.<br /> <br /> ಬೆಂಗಳೂರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮ.ಸ.ನಂಜುಂಡಸ್ವಾಮಿ, ವಾಗ್ಮಿ ನಚಿಕೇತ, ಲೇಖಕ ಪ್ರಕಾಶನದ ಎಸ್.ದತ್ತಾತ್ರಿ, ಜಿ.ಎಸ್.ನಟೇಶ್ ಮತ್ತಿತರರು ಉಪಸ್ಥಿತರಿದ್ದರು. ಬಿ.ಕೆ.ವೆಂಕಟೇಶಮೂರ್ತಿ ಸ್ವಾಗತಿಸಿದರು. ಅನಂತಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿವಮೊಗ್ಗ: ವಿರೂಪವಿರುವ ಒಂದು ಕಲ್ಲನ್ನು ಒಂದು ಸುಂದರ ಮೂರ್ತಿಯನ್ನಾಗಿಸುವ ಶಕ್ತಿ ಶಿಲ್ಪಿಯಲ್ಲಿರುತ್ತದೆ ಎಂದು ವಾಗ್ಮಿ ಹಿರೇಮಗಳೂರು ಕಣ್ಣನ್ ಹೇಳಿದರು.<br /> <br /> ನಗರದ ಕೋಟೆ ಬಯಲು ರಂಗಮಂದಿರದಲ್ಲಿ ಭಾನುವಾರ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಅವಧೂತ ಪ್ರಕಾಶನ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ‘ಪಂಚಶಿಲ್ಪ ಕಲಾಪ್ರವೀಣ’ ಗ್ರಂಥ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.<br /> <br /> ವಿರೂಪವಾಗಿ ರಸ್ತೆಯಲ್ಲಿ ಬಿದ್ದ ಒಂದು ಕಲ್ಲನ್ನು ತೆಗೆದುಕೊಂಡು ಅದಕ್ಕೆ ಒಂದು ರೂಪ ನೀಡುವ ಸಾಮರ್ಥ್ಯ ಶಿಲ್ಪಿಯಲ್ಲಿರುತ್ತದೆ. ಒಂದು ಅಮೂರ್ತವಾದ ವಸ್ತುವಿಗೂ ಮೂರ್ತ ಸ್ವರೂಪ ನೀಡುವ ಶಿಲ್ಪಿಗೆ ದೇವರ ದರ್ಶನ ಮಾಡಿಸುವ ಕಲೆಗಾರಿಕೆ ಇರುತ್ತದೆ ಎಂದು ಅಭಿಪ್ರಾಯಪಟ್ಟರು.<br /> <br /> ನಾವು ಇಂದು ಪರಂಪರೆಗೆ ಬದ್ಧರಾಗಿದ್ದು, ಕ್ಯಾಸೆಟ್ಗಳ ಮೂಲಕ ಜಪಮಾಡುವ ಕಲೆಗಾರಿಕೆ ಬೆಳೆಸಿಕೊಂಡಿದ್ದೇವೆ. ಶಿಲ್ಪಿ ರಚಿಸುವ ಕಲಾಕೃತಿಗೆ ಅನುಗುಣವಾಗಿ ಜೀವನ ನಡೆಸುತ್ತಿದ್ದೇವೆ ಎಂದು ಮಾತಿನ ಚಟಾಕಿಯನ್ನಾರಿಸಿದರು.<br /> <br /> ಒಬ್ಬ ಶಿಲ್ಪಿಯನ್ನು ಸನ್ಮಾನಿಸಿದರೆ, ಇಡೀ ದೇಶದ ಸಂಸ್ಕೃತಿಯನ್ನು ಸನ್ಮಾನಿಸಿದಂತೆ. ಶಿಲ್ಪಿಗಳು ಸಮಾಜದಲ್ಲಿ ಸಿಗುವುದು ಕಡಿಮೆ. ಸಮಾಜಮುಖಿಯಾಗಿ ಕಾರ್ಯನಿರ್ವಹಿಸುವ ಶಿಲ್ಪಿಗಳನ್ನು ಗೌರವಿಸುವುದು ಸಮಾಜದ ಕರ್ತವ್ಯ ಎಂದು ತಿಳಿಸಿದರು.<br /> <br /> ಇಂದಿನ ಸಂಸಾರಗಳಲ್ಲಿ ಸಂಸ್ಕಾರವೇ ಇಲ್ಲವಾಗಿ, ಆಚಾರ, ವಿಚಾರಗಳು ಕೂಡ ಮರೆಯಾಗುತ್ತಿವೆ. ನಿರ್ಧಿಷ್ಟ ಆದರ್ಶಗಳನ್ನು ಕುಟುಂಬಗಳು ಮೈಗೂಡಿಸಿಕೊಳ್ಳಬೇಕಾದ ಅವಶ್ಯಕತೆ ಹೆಚ್ಚಿದೆ. ಸುಖ ಸಂಸಾರಕ್ಕೆ<br /> ಸಂಸ್ಕಾರ ಇರಲೇಬೇಕು. ಅದು ಇದ್ದಾಗ ಮಾತ್ರ ಆದರ್ಶ ಸಂಸಾರ ಎಂದರು.<br /> <br /> ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ಬಿ.ಪ್ರಸನ್ನಕುಮಾರ, ಇಂದಿನ ಜೀವನವೆಂಬುದು ಗಣಕಯಂತ್ರದ ಸುಳಿಗೆ ಸಿಲುಕಿ, ನಾಗಾಲೋಟದಲ್ಲಿ ಸಾಗುತ್ತಿದೆ. ಗಣಕಯಂತ್ರದ ಪ್ರಭಾವದಿಂದ ಜಗತ್ತಿನಲ್ಲಿ ಅನೇಕ ವಿಸ್ಮಯಗಳು ನಡೆಯುತ್ತಿವೆ. ಆದರೆ, ಇಂದು ನಾವೆಲ್ಲಾ ಅದಕ್ಕೆ ದಾಸರಾಗಿ ಅನೇಕ ಜವಾಬ್ದಾರಿಗಳನ್ನು ಮರೆತು ಜೀವನ ಸಾಗಿಸುತ್ತಿರುವುದು ವಿಪರ್ಯಾಸ ಎಂದರು.<br /> <br /> ಶಿಲ್ಪಿ ಕಾಶೀನಾಥ್ ಹಾಗೂ ಲೇಖಕ ದತ್ತಾತ್ರಿ ದಂಪತಿಯನ್ನು ಸನ್ಮಾನಿಸ ಲಾಯಿತು. ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್.ಅಚ್ಯುತರಾವ್ ಅಧ್ಯಕ್ಷತೆ ವಹಿಸಿದ್ದರು.<br /> <br /> ಬೆಂಗಳೂರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮ.ಸ.ನಂಜುಂಡಸ್ವಾಮಿ, ವಾಗ್ಮಿ ನಚಿಕೇತ, ಲೇಖಕ ಪ್ರಕಾಶನದ ಎಸ್.ದತ್ತಾತ್ರಿ, ಜಿ.ಎಸ್.ನಟೇಶ್ ಮತ್ತಿತರರು ಉಪಸ್ಥಿತರಿದ್ದರು. ಬಿ.ಕೆ.ವೆಂಕಟೇಶಮೂರ್ತಿ ಸ್ವಾಗತಿಸಿದರು. ಅನಂತಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>