<p><strong>ಹಗರಿಬೊಮ್ಮನಹಳ್ಳಿ:</strong> ಕಲ್ಲು ಗಣಿಗಾರಿಕೆ (ಕ್ರಷರ್)ಯಿಂದಾಗಿ ಗ್ರಾಮದ ಜನತೆ ಭೀತಿಯಿಂದ ಜೀವನ ನಡೆಸುವಂತಾಗಿದೆ. ಕೃಷಿ ಚಟುವಟಿಕೆಗಳ ಮೇಲೆ ಮಾರಕ ಪರಿಣಾಮ ಉಂಟು ಮಾಡಿರುವ ಕ್ರಷರ್ ಅನ್ನು ಕೂಡಲೆ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ಗುರುವಾರ ತಾಲ್ಲೂಕಿನ ಕಡ್ಲಬಾಳು ಗ್ರಾಮದ ರೈತರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.<br /> <br /> ಪಟ್ಟಣದ ಈಶ್ವರ ದೇವಸ್ಥಾನದ ಆವರಣದಿಂದ ನೂರಾರು ಪ್ರತಿಭಟನಾಕಾರರು ಬಸವೇಶ್ವರ ಬಜಾರ್ ಮೂಲಕ ಪ್ರತಿಭಟನಾ ರ್ಯಾಲಿಯಲ್ಲಿ ತಹಸೀಲ್ದಾರ್ ಕಚೇರಿಗೆ ಆಗಮಿಸಿ ಮುತ್ತಿಗೆ ಹಾಕಿದರು. ಮನವಿ ಸಲ್ಲಿಸುವ ಮೊದಲು ಪ್ರತಿಭಟನಾ ಸಮಾವೇಶ ನಡೆಸಿದರು. <br /> <br /> ಈ ಸಂದರ್ಭದಲ್ಲಿ ಕೆಪಿಆರ್ಎಸ್ ಮುಖಂಡ ರಂಗಪ್ಪ ದಾಸರ್ ಮಾತನಾಡಿ, ಸಣ್ಣ ಗುಡ್ಡದ ಮೇಲಿನ ಕಲ್ಲು ಗಣಿಗಾರಿಕೆಯಿಂದ ಕೂಗಳತೆ ದೂರದಲ್ಲಿರುವ ಗ್ರಾಮದ ಜನತೆಗೆ ಸಮಸ್ಯೆಯಾಗಿ ಪರಿಣಮಿಸಿದೆ. ಗಣಿಗಾರಿಕೆಯ ಪರಿಣಾಮವಾಗಿ ಕಲ್ಲು ಗುಡ್ಡ ನಾಶದ ಹಂತದಲ್ಲಿದೆ. <br /> <br /> ಗುಡ್ಡದ ಮೇಲಿನ ಜಾತ್ರೆಯ ಸಂಭ್ರಮ ಕರಗಿದೆ. ಆ ಮೂಲಕ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ದೂರಿದರು. ಗಣಿಗಾರಿಕೆಯ ಹಿನ್ನಲೆಯಲ್ಲಿ ನಡೆಯುವ ಸ್ಫೋಟದಿಂದ ಗ್ರಾಮದ ಪ್ರತಿ ಮನೆಗಳು ನಲುಗಿ ಬಿರುಕುಬಿಟ್ಟಿವೆ. ಏಳುವ ಧೂಳು ಸುತ್ತಮುತ್ತಲಿನ ರೈತರ ಕೃಷಿ ಚಟುವಟಿಕೆಗಳನ್ನು ಅತಂತ್ರಗೊಳಿಸಿದೆ. ಕೊಳವೆ ಬಾವಿಗಳು ಬತ್ತಿಹೋಗಿವೆ ಎಂದು ಆರೋಪಿಸಿದರು.<br /> <br /> ಗಣಿಗಾರಿಕೆ ಪ್ರಾರಂಭಿಸುವಾಗ ಗ್ರಾಮದ ಜನತೆ ಸೇರಿದಂತೆ ಗ್ರಾ.ಪಂ.ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಗಣಿಗಾರಿಕೆ ನಂತರದ ಪರಿಸರ ಸ್ಥಿತ್ಯಂತರಗಳ ಕುರಿತು ಚರ್ಚೆ ನಡೆಸದೆ ಕಾನೂನು ಬಾಹಿರವಾಗಿ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ. <br /> <br /> ಈ ಹಿನ್ನಲೆಯಲ್ಲಿ ಕಡ್ಲಬಾಳು ಗ್ರಾ.ಪಂ.ಕಾರ್ಯದರ್ಶಿ ಬಸವರಾಜ್ ಅವರನ್ನು ಅಮಾನತುಗೊಳಿಸಬೇಕು ಎಂದು ಅವರು ಆಗ್ರಹಿಸಿದರು.ಗಣಿಗಾರಿಕೆ ಸ್ಥಗಿತಗೊಳಿಸುವ ನಿಟ್ಟಿನಲ್ಲಿ ಕ್ರಷರ್ ಮಾಲೀಕರಿಗೆ ನೋಟೀಸ್ ನೀಡಬೇಕು. ಕೂಡಲೆ ಗ್ರಾ.ಪಂ. ಕಾರ್ಯದರ್ಶಿಯವರನ್ನು ಸ್ಥಳಕ್ಕೆ ಕರೆತರಬೇಕು ಎಂದು ಪ್ರತಿಭಟನೆಕಾರರು ಪಟ್ಟು ಹಿಡಿದರು. <br /> <br /> ತಾ.ಪಂ.ಕಾರ್ಯ ನಿರ್ವಾಹಕ ಅಧಿಕಾರಿ ಜೆ.ಗೋಪ್ಯಾನಾಯ್ಕ ಪ್ರತಿಭಟನೆ ನಿರತ ರೈತರೊಂದಿಗೆ ಮಾತನಾಡಿ, ಕಾನೂನು ಬಾಹಿರವಾಗಿ ಗಣಿಗಾರಿಕೆಗೆ ಅನುಮತಿ ನೀಡಿರುವ ಕಾರ್ಯದರ್ಶಿ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು. <br /> <br /> ಗಣಿಗಾರಿಕೆ ಸ್ಥಗಿತಕ್ಕೆ ಕಾನೂನು ತೊಡಕುಗಳಿವೆ. ಕ್ರಷರ್ ಸ್ಥಗಿತಕ್ಕೆ ಕಂದಾಯ ಮತ್ತು ಗಣಿ ಹಾಗು ಭೂವಿಜ್ಞಾನ ಇಲಾಖೆಗೆ ಪತ್ರ ಬರೆಯಲಾಗುತ್ತದೆ ಎಂದು ಭರವಸೆ ನೀಡಿದ ಹಿನ್ನಲೆಯಲ್ಲಿ ಪ್ರತಿಭಟನೆ ಮುಕ್ತಾಯಗೊಳಿಸಲಾಯಿತು<br /> <br /> ಗ್ರಾ.ಪಂ.ಸದಸ್ಯರಾದ ತಿಂದಪ್ಪ, ದೊಡ್ಡಯ್ಯ, ರೇಣುಕಮ್ಮ, ಹುಲಿಗೆಮ್ಮ, ರೈತ ಮುಖಂಡರಾದ ಶರಣಪ್ಪ, ನಂದೆಪ್ಪನವರ ತಿಪ್ಪಣ್ಣ, ಹನಮಂತಪ್ಪ, ಇ.ಮಾಬುಬೇಗ್, ಡಿ.ಶರಣಪ್ಪ, ಉಸ್ಮಾನ್ಭಾಷಾ, ಬ್ಯಾಟಿ ಮಲ್ಲೇಶ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.<br /> <br /> ಗ್ರಾಮದ ನಾಗರಿಕರು, ರೈತರು, ಕೂಲಿಕಾರರು, ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಸ್ತ್ರೀ ಶಕ್ತಿ ಹಾಗು ಮಹಿಳಾ ಸ್ವಸಹಾಯ ಗುಂಪುಗಳು ಮತ್ತು ಆಟೋಚಾಲಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಗರಿಬೊಮ್ಮನಹಳ್ಳಿ:</strong> ಕಲ್ಲು ಗಣಿಗಾರಿಕೆ (ಕ್ರಷರ್)ಯಿಂದಾಗಿ ಗ್ರಾಮದ ಜನತೆ ಭೀತಿಯಿಂದ ಜೀವನ ನಡೆಸುವಂತಾಗಿದೆ. ಕೃಷಿ ಚಟುವಟಿಕೆಗಳ ಮೇಲೆ ಮಾರಕ ಪರಿಣಾಮ ಉಂಟು ಮಾಡಿರುವ ಕ್ರಷರ್ ಅನ್ನು ಕೂಡಲೆ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ಗುರುವಾರ ತಾಲ್ಲೂಕಿನ ಕಡ್ಲಬಾಳು ಗ್ರಾಮದ ರೈತರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.<br /> <br /> ಪಟ್ಟಣದ ಈಶ್ವರ ದೇವಸ್ಥಾನದ ಆವರಣದಿಂದ ನೂರಾರು ಪ್ರತಿಭಟನಾಕಾರರು ಬಸವೇಶ್ವರ ಬಜಾರ್ ಮೂಲಕ ಪ್ರತಿಭಟನಾ ರ್ಯಾಲಿಯಲ್ಲಿ ತಹಸೀಲ್ದಾರ್ ಕಚೇರಿಗೆ ಆಗಮಿಸಿ ಮುತ್ತಿಗೆ ಹಾಕಿದರು. ಮನವಿ ಸಲ್ಲಿಸುವ ಮೊದಲು ಪ್ರತಿಭಟನಾ ಸಮಾವೇಶ ನಡೆಸಿದರು. <br /> <br /> ಈ ಸಂದರ್ಭದಲ್ಲಿ ಕೆಪಿಆರ್ಎಸ್ ಮುಖಂಡ ರಂಗಪ್ಪ ದಾಸರ್ ಮಾತನಾಡಿ, ಸಣ್ಣ ಗುಡ್ಡದ ಮೇಲಿನ ಕಲ್ಲು ಗಣಿಗಾರಿಕೆಯಿಂದ ಕೂಗಳತೆ ದೂರದಲ್ಲಿರುವ ಗ್ರಾಮದ ಜನತೆಗೆ ಸಮಸ್ಯೆಯಾಗಿ ಪರಿಣಮಿಸಿದೆ. ಗಣಿಗಾರಿಕೆಯ ಪರಿಣಾಮವಾಗಿ ಕಲ್ಲು ಗುಡ್ಡ ನಾಶದ ಹಂತದಲ್ಲಿದೆ. <br /> <br /> ಗುಡ್ಡದ ಮೇಲಿನ ಜಾತ್ರೆಯ ಸಂಭ್ರಮ ಕರಗಿದೆ. ಆ ಮೂಲಕ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ದೂರಿದರು. ಗಣಿಗಾರಿಕೆಯ ಹಿನ್ನಲೆಯಲ್ಲಿ ನಡೆಯುವ ಸ್ಫೋಟದಿಂದ ಗ್ರಾಮದ ಪ್ರತಿ ಮನೆಗಳು ನಲುಗಿ ಬಿರುಕುಬಿಟ್ಟಿವೆ. ಏಳುವ ಧೂಳು ಸುತ್ತಮುತ್ತಲಿನ ರೈತರ ಕೃಷಿ ಚಟುವಟಿಕೆಗಳನ್ನು ಅತಂತ್ರಗೊಳಿಸಿದೆ. ಕೊಳವೆ ಬಾವಿಗಳು ಬತ್ತಿಹೋಗಿವೆ ಎಂದು ಆರೋಪಿಸಿದರು.<br /> <br /> ಗಣಿಗಾರಿಕೆ ಪ್ರಾರಂಭಿಸುವಾಗ ಗ್ರಾಮದ ಜನತೆ ಸೇರಿದಂತೆ ಗ್ರಾ.ಪಂ.ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಗಣಿಗಾರಿಕೆ ನಂತರದ ಪರಿಸರ ಸ್ಥಿತ್ಯಂತರಗಳ ಕುರಿತು ಚರ್ಚೆ ನಡೆಸದೆ ಕಾನೂನು ಬಾಹಿರವಾಗಿ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ. <br /> <br /> ಈ ಹಿನ್ನಲೆಯಲ್ಲಿ ಕಡ್ಲಬಾಳು ಗ್ರಾ.ಪಂ.ಕಾರ್ಯದರ್ಶಿ ಬಸವರಾಜ್ ಅವರನ್ನು ಅಮಾನತುಗೊಳಿಸಬೇಕು ಎಂದು ಅವರು ಆಗ್ರಹಿಸಿದರು.ಗಣಿಗಾರಿಕೆ ಸ್ಥಗಿತಗೊಳಿಸುವ ನಿಟ್ಟಿನಲ್ಲಿ ಕ್ರಷರ್ ಮಾಲೀಕರಿಗೆ ನೋಟೀಸ್ ನೀಡಬೇಕು. ಕೂಡಲೆ ಗ್ರಾ.ಪಂ. ಕಾರ್ಯದರ್ಶಿಯವರನ್ನು ಸ್ಥಳಕ್ಕೆ ಕರೆತರಬೇಕು ಎಂದು ಪ್ರತಿಭಟನೆಕಾರರು ಪಟ್ಟು ಹಿಡಿದರು. <br /> <br /> ತಾ.ಪಂ.ಕಾರ್ಯ ನಿರ್ವಾಹಕ ಅಧಿಕಾರಿ ಜೆ.ಗೋಪ್ಯಾನಾಯ್ಕ ಪ್ರತಿಭಟನೆ ನಿರತ ರೈತರೊಂದಿಗೆ ಮಾತನಾಡಿ, ಕಾನೂನು ಬಾಹಿರವಾಗಿ ಗಣಿಗಾರಿಕೆಗೆ ಅನುಮತಿ ನೀಡಿರುವ ಕಾರ್ಯದರ್ಶಿ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು. <br /> <br /> ಗಣಿಗಾರಿಕೆ ಸ್ಥಗಿತಕ್ಕೆ ಕಾನೂನು ತೊಡಕುಗಳಿವೆ. ಕ್ರಷರ್ ಸ್ಥಗಿತಕ್ಕೆ ಕಂದಾಯ ಮತ್ತು ಗಣಿ ಹಾಗು ಭೂವಿಜ್ಞಾನ ಇಲಾಖೆಗೆ ಪತ್ರ ಬರೆಯಲಾಗುತ್ತದೆ ಎಂದು ಭರವಸೆ ನೀಡಿದ ಹಿನ್ನಲೆಯಲ್ಲಿ ಪ್ರತಿಭಟನೆ ಮುಕ್ತಾಯಗೊಳಿಸಲಾಯಿತು<br /> <br /> ಗ್ರಾ.ಪಂ.ಸದಸ್ಯರಾದ ತಿಂದಪ್ಪ, ದೊಡ್ಡಯ್ಯ, ರೇಣುಕಮ್ಮ, ಹುಲಿಗೆಮ್ಮ, ರೈತ ಮುಖಂಡರಾದ ಶರಣಪ್ಪ, ನಂದೆಪ್ಪನವರ ತಿಪ್ಪಣ್ಣ, ಹನಮಂತಪ್ಪ, ಇ.ಮಾಬುಬೇಗ್, ಡಿ.ಶರಣಪ್ಪ, ಉಸ್ಮಾನ್ಭಾಷಾ, ಬ್ಯಾಟಿ ಮಲ್ಲೇಶ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.<br /> <br /> ಗ್ರಾಮದ ನಾಗರಿಕರು, ರೈತರು, ಕೂಲಿಕಾರರು, ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಸ್ತ್ರೀ ಶಕ್ತಿ ಹಾಗು ಮಹಿಳಾ ಸ್ವಸಹಾಯ ಗುಂಪುಗಳು ಮತ್ತು ಆಟೋಚಾಲಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>