<p><strong>ಬೆಂಗಳೂರು: </strong>ಶಿಸ್ತಿನ ಪಕ್ಷ ಎಂದೇ ಹೆಸರಾಗಿದ್ದ ಬಿಜೆಪಿ ಈಗ `ಕಳಂಕಿತ~ ಶಾಸಕರ ವಿರುದ್ಧ ಷೋಕಾಸ್ ನೋಟಿಸ್ ನೀಡಲಾಗದಷ್ಟು ಅಸಹಾಯಕ ಸ್ಥಿತಿಯಲ್ಲಿದೆ. ಪಕ್ಷದ ನಾಲ್ವರು ಶಾಸಕರು ಬಂಧನದಲ್ಲಿದ್ದರೆ, ಇಬ್ಬರು ಜಾಮೀನಿನ ಮೇಲೆ ಇದ್ದಾರೆ. ಈ ಆರು ಜನರ ವಿರುದ್ಧ ಯಾವುದೇ ಕ್ರಮ ಜರುಗಿಸದ ಪಕ್ಷ, `ಅವರು ಇನ್ನೂ ಆರೋಪಿಗಳು~ ಎಂಬ ಕಾರಣ ನೀಡುತ್ತಿದೆ.<br /> <br /> ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಮತ್ತು ಜಿ.ಜನಾರ್ದನ ರೆಡ್ಡಿ ಜೈಲಿನಲ್ಲಿದ್ದಾರೆ. ಮಾಜಿ ಸಚಿವ ಎಚ್.ಹಾಲಪ್ಪ ಮತ್ತು ಶಾಸಕ ವೈ.ಸಂಪಂಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.<br /> <br /> ಈ ಆರು ಜನರಿಗೂ ಅವರ ವಿರುದ್ಧದ ಆರೋಪಗಳ ಬಗ್ಗೆ ಸಣ್ಣ ಪ್ರಶ್ನೆಯನ್ನೂ ಬಿಜೆಪಿ ವರಿಷ್ಠರು ಕೇಳಿಲ್ಲ. ಷೋಕಾಸ್ ನೋಟಿಸ್ ಕೂಡ ಜಾರಿ ಮಾಡಿಲ್ಲ. `ಈ ಎಲ್ಲರ ವಿರುದ್ಧವೂ ಕೇವಲ ಆರೋಪಗಳಿದ್ದು, ಅವು ಸಾಬೀತಾದಲ್ಲಿ ಮಾತ್ರವೇ ಕ್ರಮ ಜರುಗಿಸುತ್ತೇವೆ~ ಎನ್ನುತ್ತಾರೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ.<br /> <br /> ಈ ಕುರಿತು `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, `ಯಡಿಯೂರಪ್ಪ ಮತ್ತು ಇತರೆ ಶಾಸಕರು ಕೇವಲ ಆರೋಪಗಳನ್ನು ಎದುರಿಸುತ್ತಿದ್ದಾರೆ. ವಿಚಾರಣೆ ಪೂರ್ಣಗೊಳ್ಳಲಿ. ಅವರು ತಪ್ಪಿತಸ್ಥರೆಂದು ಸಾಬೀತಾಗುವವರೆಗೂ ಕ್ರಮ ಕೈಗೊಳ್ಳುವ ಪ್ರಶ್ನೆಯೇ ಇಲ್ಲ. <br /> <br /> ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅಥವಾ ಗೋವಾ ಮುಖ್ಯಮಂತ್ರಿ ದಿಗಂಬರ ಕಾಮತ್ ವಿರುದ್ಧ ಕಾಂಗ್ರೆಸ್ ಕ್ರಮ ಜರುಗಿಸಿದೆಯೇ~ ಎಂದು ಪ್ರಶ್ನಿಸಿದರು.ಯಡಿಯೂರಪ್ಪ ಮತ್ತು ರೆಡ್ಡಿ ಬಂಧನದಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿಲ್ಲವೇ ಎಂಬ ಪ್ರಶ್ನೆಗೆ, `ಅವರಿಗೆ ಕಾನೂನು ಹೋರಾಟ ಎದುರಿಸುವ ವಿಶ್ವಾಸವಿದೆ. <br /> <br /> ಆದರೆ, ಇದೇ ವೇಳೆ ನಾನು ಅವರನ್ನು ಸಮರ್ಥಿಸಿಕೊಳ್ಳುವುದಿಲ್ಲ. ಅಕ್ರಮ ಗಣಿಗಾರಿಕೆ ಮತ್ತು ರೆಡ್ಡಿ ಸಹೋದರರಿಂದ ಪಕ್ಷ ಸಾಕಷ್ಟು ಸಮಸ್ಯೆ ಎದುರಿಸಿದೆ~ ಎಂದರು.<br /> <br /> ಯಡಿಯೂರಪ್ಪ ಅವರನ್ನು ಟೀಕಿಸಲು ಪಕ್ಷ ಹೆದರುತ್ತಿದೆಯೇ? ಎಂದಾಗ, `ಯಡಿಯೂರಪ್ಪ ಲಿಂಗಾಯತರು ಇರಬಹುದು. ಆದರೆ, ಅವರೊಬ್ಬರೇ ಆ ಸಮುದಾಯದ ನಾಯಕರಲ್ಲ. ಲಿಂಗಾಯತರು ಮಾತ್ರ ಬಿಜೆಪಿಗೆ ಮತ ಹಾಕುವವರಲ್ಲ. ಎಲ್ಲ ಜಾತಿಯವರೂ ಮತ ನೀಡುತ್ತಾರೆ~ ಎಂದು ಉತ್ತರಿಸಿದರು.<br /> <br /> ಮುಂದಿನ ಚುನಾವಣೆ ಒಳಗಾಗಿ ಯಡಿಯೂರಪ್ಪ ಆರೋಪ ಮುಕ್ತರಾಗುತ್ತಾರೆ ಎಂಬ ಭರವಸೆ ಇದೆಯೇ ಎಂದು ಪ್ರಶ್ನಿಸಿದಾಗ, `ಶೇಕಡ 99ರಷ್ಟು ವಿಶ್ವಾಸವಿದೆ. ಅವರು ಮುಂದಿನ ಚುನಾವಣೆ ಪ್ರಚಾರದಲ್ಲಿ ನಮ್ಮೊಂದಿಗೆ ಭಾಗವಹಿಸುತ್ತಾರೆ ಎಂಬ ವಿಶ್ವಾಸವಿದೆ. ಆದರೆ, ಚುನಾವಣೆ ಪ್ರಚಾರ ವೈಯಕ್ತಿಕ ನೆಲೆಗಟ್ಟಿನಲ್ಲಿ ನಡೆಯುವುದಿಲ್ಲ. ಸಾಮೂಹಿಕ ನಾಯಕತ್ವದಲ್ಲಿ ನಡೆಯುತ್ತದೆ~ ಎಂದು ಪ್ರತಿಕ್ರಿಯಿಸಿದರು.<br /> <br /> <strong>ಯಾತ್ರೆಯಲ್ಲಿ ಬದಲಾವಣೆ ಇಲ್ಲ:</strong>ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರು ಭ್ರಷ್ಟಾಚಾರದ ವಿರುದ್ಧ ಆರಂಭಿಸಿರುವ ರಥಯಾತ್ರೆಯ ಮಾರ್ಗದಲ್ಲಿ ಯಾವುದೇ ಬದಲಾವಣೆಯೂ ಇಲ್ಲ ಎಂದು ಬಿಜೆಪಿ ಮೂಲಗಳು ಹೇಳಿವೆ. ಯಡಿಯೂರಪ್ಪ ಅವರ ಬಂಧನದ ಕಾರಣದಿಂದ ಯಾತ್ರೆಯ ಮಾರ್ಗದಲ್ಲಿ ಬದಲಾವಣೆ ಆಗಲಿದೆ ಎಂಬುದನ್ನು ಬಿಜೆಪಿ ಮೂಲಗಳು ಅಲ್ಲಗಳೆದಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಶಿಸ್ತಿನ ಪಕ್ಷ ಎಂದೇ ಹೆಸರಾಗಿದ್ದ ಬಿಜೆಪಿ ಈಗ `ಕಳಂಕಿತ~ ಶಾಸಕರ ವಿರುದ್ಧ ಷೋಕಾಸ್ ನೋಟಿಸ್ ನೀಡಲಾಗದಷ್ಟು ಅಸಹಾಯಕ ಸ್ಥಿತಿಯಲ್ಲಿದೆ. ಪಕ್ಷದ ನಾಲ್ವರು ಶಾಸಕರು ಬಂಧನದಲ್ಲಿದ್ದರೆ, ಇಬ್ಬರು ಜಾಮೀನಿನ ಮೇಲೆ ಇದ್ದಾರೆ. ಈ ಆರು ಜನರ ವಿರುದ್ಧ ಯಾವುದೇ ಕ್ರಮ ಜರುಗಿಸದ ಪಕ್ಷ, `ಅವರು ಇನ್ನೂ ಆರೋಪಿಗಳು~ ಎಂಬ ಕಾರಣ ನೀಡುತ್ತಿದೆ.<br /> <br /> ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಮತ್ತು ಜಿ.ಜನಾರ್ದನ ರೆಡ್ಡಿ ಜೈಲಿನಲ್ಲಿದ್ದಾರೆ. ಮಾಜಿ ಸಚಿವ ಎಚ್.ಹಾಲಪ್ಪ ಮತ್ತು ಶಾಸಕ ವೈ.ಸಂಪಂಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.<br /> <br /> ಈ ಆರು ಜನರಿಗೂ ಅವರ ವಿರುದ್ಧದ ಆರೋಪಗಳ ಬಗ್ಗೆ ಸಣ್ಣ ಪ್ರಶ್ನೆಯನ್ನೂ ಬಿಜೆಪಿ ವರಿಷ್ಠರು ಕೇಳಿಲ್ಲ. ಷೋಕಾಸ್ ನೋಟಿಸ್ ಕೂಡ ಜಾರಿ ಮಾಡಿಲ್ಲ. `ಈ ಎಲ್ಲರ ವಿರುದ್ಧವೂ ಕೇವಲ ಆರೋಪಗಳಿದ್ದು, ಅವು ಸಾಬೀತಾದಲ್ಲಿ ಮಾತ್ರವೇ ಕ್ರಮ ಜರುಗಿಸುತ್ತೇವೆ~ ಎನ್ನುತ್ತಾರೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ.<br /> <br /> ಈ ಕುರಿತು `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, `ಯಡಿಯೂರಪ್ಪ ಮತ್ತು ಇತರೆ ಶಾಸಕರು ಕೇವಲ ಆರೋಪಗಳನ್ನು ಎದುರಿಸುತ್ತಿದ್ದಾರೆ. ವಿಚಾರಣೆ ಪೂರ್ಣಗೊಳ್ಳಲಿ. ಅವರು ತಪ್ಪಿತಸ್ಥರೆಂದು ಸಾಬೀತಾಗುವವರೆಗೂ ಕ್ರಮ ಕೈಗೊಳ್ಳುವ ಪ್ರಶ್ನೆಯೇ ಇಲ್ಲ. <br /> <br /> ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅಥವಾ ಗೋವಾ ಮುಖ್ಯಮಂತ್ರಿ ದಿಗಂಬರ ಕಾಮತ್ ವಿರುದ್ಧ ಕಾಂಗ್ರೆಸ್ ಕ್ರಮ ಜರುಗಿಸಿದೆಯೇ~ ಎಂದು ಪ್ರಶ್ನಿಸಿದರು.ಯಡಿಯೂರಪ್ಪ ಮತ್ತು ರೆಡ್ಡಿ ಬಂಧನದಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿಲ್ಲವೇ ಎಂಬ ಪ್ರಶ್ನೆಗೆ, `ಅವರಿಗೆ ಕಾನೂನು ಹೋರಾಟ ಎದುರಿಸುವ ವಿಶ್ವಾಸವಿದೆ. <br /> <br /> ಆದರೆ, ಇದೇ ವೇಳೆ ನಾನು ಅವರನ್ನು ಸಮರ್ಥಿಸಿಕೊಳ್ಳುವುದಿಲ್ಲ. ಅಕ್ರಮ ಗಣಿಗಾರಿಕೆ ಮತ್ತು ರೆಡ್ಡಿ ಸಹೋದರರಿಂದ ಪಕ್ಷ ಸಾಕಷ್ಟು ಸಮಸ್ಯೆ ಎದುರಿಸಿದೆ~ ಎಂದರು.<br /> <br /> ಯಡಿಯೂರಪ್ಪ ಅವರನ್ನು ಟೀಕಿಸಲು ಪಕ್ಷ ಹೆದರುತ್ತಿದೆಯೇ? ಎಂದಾಗ, `ಯಡಿಯೂರಪ್ಪ ಲಿಂಗಾಯತರು ಇರಬಹುದು. ಆದರೆ, ಅವರೊಬ್ಬರೇ ಆ ಸಮುದಾಯದ ನಾಯಕರಲ್ಲ. ಲಿಂಗಾಯತರು ಮಾತ್ರ ಬಿಜೆಪಿಗೆ ಮತ ಹಾಕುವವರಲ್ಲ. ಎಲ್ಲ ಜಾತಿಯವರೂ ಮತ ನೀಡುತ್ತಾರೆ~ ಎಂದು ಉತ್ತರಿಸಿದರು.<br /> <br /> ಮುಂದಿನ ಚುನಾವಣೆ ಒಳಗಾಗಿ ಯಡಿಯೂರಪ್ಪ ಆರೋಪ ಮುಕ್ತರಾಗುತ್ತಾರೆ ಎಂಬ ಭರವಸೆ ಇದೆಯೇ ಎಂದು ಪ್ರಶ್ನಿಸಿದಾಗ, `ಶೇಕಡ 99ರಷ್ಟು ವಿಶ್ವಾಸವಿದೆ. ಅವರು ಮುಂದಿನ ಚುನಾವಣೆ ಪ್ರಚಾರದಲ್ಲಿ ನಮ್ಮೊಂದಿಗೆ ಭಾಗವಹಿಸುತ್ತಾರೆ ಎಂಬ ವಿಶ್ವಾಸವಿದೆ. ಆದರೆ, ಚುನಾವಣೆ ಪ್ರಚಾರ ವೈಯಕ್ತಿಕ ನೆಲೆಗಟ್ಟಿನಲ್ಲಿ ನಡೆಯುವುದಿಲ್ಲ. ಸಾಮೂಹಿಕ ನಾಯಕತ್ವದಲ್ಲಿ ನಡೆಯುತ್ತದೆ~ ಎಂದು ಪ್ರತಿಕ್ರಿಯಿಸಿದರು.<br /> <br /> <strong>ಯಾತ್ರೆಯಲ್ಲಿ ಬದಲಾವಣೆ ಇಲ್ಲ:</strong>ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರು ಭ್ರಷ್ಟಾಚಾರದ ವಿರುದ್ಧ ಆರಂಭಿಸಿರುವ ರಥಯಾತ್ರೆಯ ಮಾರ್ಗದಲ್ಲಿ ಯಾವುದೇ ಬದಲಾವಣೆಯೂ ಇಲ್ಲ ಎಂದು ಬಿಜೆಪಿ ಮೂಲಗಳು ಹೇಳಿವೆ. ಯಡಿಯೂರಪ್ಪ ಅವರ ಬಂಧನದ ಕಾರಣದಿಂದ ಯಾತ್ರೆಯ ಮಾರ್ಗದಲ್ಲಿ ಬದಲಾವಣೆ ಆಗಲಿದೆ ಎಂಬುದನ್ನು ಬಿಜೆಪಿ ಮೂಲಗಳು ಅಲ್ಲಗಳೆದಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>