<p>ನವದೆಹಲಿ (ಐಎಎನ್ಎಸ್): 2014ರ ಲೋಕಸಭಾ ಚುನಾವಣೆಗಾಗಿ ಬುಧವಾರ ಬಿಡುಗಡೆ ಮಾಡಲಾದ ತನ್ನ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಆರೋಗ್ಯದ ಹಕ್ಕು ಮತ್ತು ವಸತಿ ಸವಲತ್ತನ್ನು ಪ್ರಮುಖ ಭರವಸೆಯಾಗಿ ನೀಡಿದೆ.<br /> <br /> ಸಮಾರಂಭವೊಂದರಲ್ಲಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ರಾಷ್ಟ್ರದ ವಿವಿಧ ಭಾಗಗಳ ಜನರ ಜೊತೆಗೆ ಸಮಾಲೋಚನೆಗಳನ್ನು ನಡೆಸಿದ ಬಳಿಕ ಪ್ರಣಾಳಿಕೆಯನ್ನು ಸಿದ್ಧ ಪಡಿಸಲಾಗಿದೆ ಎಂದು ಹೇಳಿದರು.<br /> <br /> ರಾಹುಲ್ ಗಾಂಧಿ ಅವರು ಭಾರತದ ವಿವಿಧ ಭಾಗಗಳ ಜನರ ಜೊತೆಗೆ ಸಮಾಲೋಚನೆ ನಡೆಸಿ ಅವರ ಸಲಹೆಗಳು ಮತ್ತು ಆಶಯಗಳನ್ನು ಒಟ್ಟು ಸೇರಿಸಿದ್ದಾರೆ. ಎಲ್ಲ ಸಲಹೆಗಳನ್ನೂ ಈ ಪ್ರಣಾಳಿಕೆಯಲ್ಲಿ ಸೇರಿಸಲು ಸಾಧ್ಯವಿಲ್ಲದ ಕಾರಣ ಉಳಿದ ಸಲಹೆಗಳನ್ನು ಮುಂದಿನ ಕೆಲವು ದಿನಗಳಲ್ಲಿ ನಾವು ಬಿಡುಗಡೆ ಮಾಡಲಿದ್ದೇವೆ ಎಂದು ಪಕ್ಷದ ಮುಖ್ಯಸ್ಥೆ ನುಡಿದರು.<br /> <br /> ರೈತರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಅಗತ್ಯಗಳನ್ನು ಪೂರೈಸುವ ಯತ್ನವನ್ನು ಪ್ರಣಾಳಿಕೆ ಮಾಡಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದರು.<br /> <br /> 'ಇದು ಪ್ರಗತಿ ಸಾಧನೆಯ ಮುನ್ನೋಟದ ದಾಖಲೆ. ಇದು ರಾಷ್ಟ್ರದ ಜನರ ಅಗತ್ಯಗಳ ಬಗೆಗಿನ ಸ್ಪಂದನೆ' ಎಂದು ಅವರು ಬಣ್ಣಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ (ಐಎಎನ್ಎಸ್): 2014ರ ಲೋಕಸಭಾ ಚುನಾವಣೆಗಾಗಿ ಬುಧವಾರ ಬಿಡುಗಡೆ ಮಾಡಲಾದ ತನ್ನ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಆರೋಗ್ಯದ ಹಕ್ಕು ಮತ್ತು ವಸತಿ ಸವಲತ್ತನ್ನು ಪ್ರಮುಖ ಭರವಸೆಯಾಗಿ ನೀಡಿದೆ.<br /> <br /> ಸಮಾರಂಭವೊಂದರಲ್ಲಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ರಾಷ್ಟ್ರದ ವಿವಿಧ ಭಾಗಗಳ ಜನರ ಜೊತೆಗೆ ಸಮಾಲೋಚನೆಗಳನ್ನು ನಡೆಸಿದ ಬಳಿಕ ಪ್ರಣಾಳಿಕೆಯನ್ನು ಸಿದ್ಧ ಪಡಿಸಲಾಗಿದೆ ಎಂದು ಹೇಳಿದರು.<br /> <br /> ರಾಹುಲ್ ಗಾಂಧಿ ಅವರು ಭಾರತದ ವಿವಿಧ ಭಾಗಗಳ ಜನರ ಜೊತೆಗೆ ಸಮಾಲೋಚನೆ ನಡೆಸಿ ಅವರ ಸಲಹೆಗಳು ಮತ್ತು ಆಶಯಗಳನ್ನು ಒಟ್ಟು ಸೇರಿಸಿದ್ದಾರೆ. ಎಲ್ಲ ಸಲಹೆಗಳನ್ನೂ ಈ ಪ್ರಣಾಳಿಕೆಯಲ್ಲಿ ಸೇರಿಸಲು ಸಾಧ್ಯವಿಲ್ಲದ ಕಾರಣ ಉಳಿದ ಸಲಹೆಗಳನ್ನು ಮುಂದಿನ ಕೆಲವು ದಿನಗಳಲ್ಲಿ ನಾವು ಬಿಡುಗಡೆ ಮಾಡಲಿದ್ದೇವೆ ಎಂದು ಪಕ್ಷದ ಮುಖ್ಯಸ್ಥೆ ನುಡಿದರು.<br /> <br /> ರೈತರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಅಗತ್ಯಗಳನ್ನು ಪೂರೈಸುವ ಯತ್ನವನ್ನು ಪ್ರಣಾಳಿಕೆ ಮಾಡಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದರು.<br /> <br /> 'ಇದು ಪ್ರಗತಿ ಸಾಧನೆಯ ಮುನ್ನೋಟದ ದಾಖಲೆ. ಇದು ರಾಷ್ಟ್ರದ ಜನರ ಅಗತ್ಯಗಳ ಬಗೆಗಿನ ಸ್ಪಂದನೆ' ಎಂದು ಅವರು ಬಣ್ಣಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>