<p>ಹಾಸನ: `ಕಾನೂನಿನ ತಿಳಿವಳಿಕೆ ಇದ್ದರೆ ಸಮಸ್ಯೆಗಳನ್ನು ಎದುರಿಸುವ ಧೈರ್ಯ ಬರುತ್ತದೆ. ಜತೆಗೆ ನಮ್ಮಿಂದ ಆಗುವ ಅನೇಕ ತಪ್ಪುಗಳನ್ನು ತಡೆಯಲು ಸಾಧ್ಯವಾಗುತ್ತದೆ~ ಎಂದು ಅಧಿಕ ಜಿಲ್ಲಾ ಮತ್ತು ಸೇಷನ್ ನ್ಯಾಯಧಿಶೆ ಹೆಚ್.ಜಿ. ವಿಜಯಕುಮಾರಿ ನುಡಿದರು.<br /> <br /> ಮಕ್ಕಳ ದಿನಾಚರಣೆ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘದ ಹಾಸನ ಜಿಲ್ಲಾ ಘಟಕ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.<br /> <br /> `ಸಮಾಜದಲ್ಲಿ ಶಾಂತಿಯುತವಾಗಿ ಜೀವಿಸಲು ಪ್ರತಿಯೊಬ್ಬನಿಗೂ ಕಾನೂನಿನ ತಿಳಿವಳಿಕೆ ಇರುವುದು ಮುಖ್ಯ. ವಿದ್ಯಾರ್ಥಿಗಳು ಕಾನೂನಿನ ತಿಳಿವಳಿಕೆ ಪಡೆಯುವುದರ ಜತೆಗೆ ನೆರೆಕರೆಯವರಿಗೂ ಆ ಬಗ್ಗೆ ಮಾಹಿತಿ ನೀಡಬೇಕು~ ಎಂದರು.<br /> <br /> ಮಕ್ಕಳ ಹಕ್ಕುಗಳ ಬಗ್ಗೆ ಉಪನ್ಯಾಸ ನೀಡಿದ ಅಧಿಕ ಹಿರಿಯ ಸಿವಿಲ್ ನ್ಯಾಯಾಧೀಶ ಬಿ. ಜಯಂತ ಕುಮಾರ್, `ಶೇಕಡಾ ನೂರು ಫಲಿತಾಂಶದ ಗುರಿ ಇಟ್ಟುಕೊಂಡು ಮುನ್ನಡೆದರೆ ಮಾತ್ರ ಜಿವನದಲ್ಲಿ ಯಶಸ್ವಿಯಾಗಲು ಸಾಧ್ಯ. ಅದಕ್ಕಿಂತ ಕಡಿಮೆ ಗುರಿ ಇಟ್ಟರೆ ಯಶಸ್ಸು ಸಿಗುವುದಿಲ್ಲ. ಶಾಲೆಗಳಲ್ಲಿ ಪುಸ್ತಕದ ಜ್ಞಾನ ಕಲಿಸಲಾಗುತ್ತದೆ. <br /> <br /> ವಿದ್ಯಾರ್ಥಿಗಳು ಅನುಭವದ ಜ್ಞಾನ ಪಡೆಯಬೇಕು. ಶೈಕ್ಷಣಿಕವಾಗಿ ಎಷ್ಟೇ ಪದವಿ, ಪುರಸ್ಕಾರ ಪಡೆದರೂ ಸಾಮಾನ್ಯ ಜ್ಞಾನ ಇಲ್ಲದಿದ್ದರೆ ಪಡೆದ ಜ್ಞಾನವೂ ಉಪಯೋಗಕ್ಕೆ ಬರುವು ದಿಲ್ಲ~ ಎಂದು ಹಲವು ಉದಾಹರಣೆಗಳ ಮೂಲಕ ವಿವರಿಸಿದರು.<br /> <br /> ಬದುಕುವ ಹಕ್ಕು, ಅಭಿವೃದ್ಧಿಪಡೆಯುವ ಹಕ್ಕು, ಶೋಷಣೆಯಿಂದ ರಕ್ಷಿಸಿ ಕೊಳ್ಳುವ ಹಕ್ಕು ಹಾಗೂ ಶಿಕ್ಷಣದ ಹಕ್ಕು ಇವು ಮಕ್ಕಳಿಗೆ ಸಂವಿಧಾನಬದ್ಧವಾಗಿ ನೀಡಿರುವ ವಿಶೇಷ ಹಕ್ಕುಗಳು. ಇವುಗಳ ಬಗ್ಗೆ ತಿಳಿವಳಿಕೆ ಪಡೆದುಕೊಂಡು ಉತ್ತಮ ನಾಗರಿಕರಾಗಿ ಹೊರಹೊಮ್ಮಬೇಕು ಎಂದು ಜಯಂತ ಕುಮಾರ್ ಸಲಹೆ ನೀಡಿದರು.<br /> <br /> ಕಾನೂನು ಅರಿವಿನ ಬಗ್ಗೆ ಮಕ್ಕಳಿಗೆ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.<br /> <br /> ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಲ್.ಎನ್. ನರಸಿಂಹ ಮೂರ್ತಿ, ಕಾರ್ಯದರ್ಶಿ ಬಿ.ಟಿ. ರವಿಶಂಕರ್, ಪ್ರಧಾನ ಹಿರಿಯ ಸಿವಿಲ್ ಜಡ್ಜ್. ಸರಸ್ವತಿ ವಿ.ಕೊಸಂದರ್, ಕ್ಷೇತ್ರ ಶಿಕ್ಷಣಧಿಕಾರಿ ಡಿಟಿ. ಪುಟ್ಟರಾಜು ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಾಸನ: `ಕಾನೂನಿನ ತಿಳಿವಳಿಕೆ ಇದ್ದರೆ ಸಮಸ್ಯೆಗಳನ್ನು ಎದುರಿಸುವ ಧೈರ್ಯ ಬರುತ್ತದೆ. ಜತೆಗೆ ನಮ್ಮಿಂದ ಆಗುವ ಅನೇಕ ತಪ್ಪುಗಳನ್ನು ತಡೆಯಲು ಸಾಧ್ಯವಾಗುತ್ತದೆ~ ಎಂದು ಅಧಿಕ ಜಿಲ್ಲಾ ಮತ್ತು ಸೇಷನ್ ನ್ಯಾಯಧಿಶೆ ಹೆಚ್.ಜಿ. ವಿಜಯಕುಮಾರಿ ನುಡಿದರು.<br /> <br /> ಮಕ್ಕಳ ದಿನಾಚರಣೆ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘದ ಹಾಸನ ಜಿಲ್ಲಾ ಘಟಕ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.<br /> <br /> `ಸಮಾಜದಲ್ಲಿ ಶಾಂತಿಯುತವಾಗಿ ಜೀವಿಸಲು ಪ್ರತಿಯೊಬ್ಬನಿಗೂ ಕಾನೂನಿನ ತಿಳಿವಳಿಕೆ ಇರುವುದು ಮುಖ್ಯ. ವಿದ್ಯಾರ್ಥಿಗಳು ಕಾನೂನಿನ ತಿಳಿವಳಿಕೆ ಪಡೆಯುವುದರ ಜತೆಗೆ ನೆರೆಕರೆಯವರಿಗೂ ಆ ಬಗ್ಗೆ ಮಾಹಿತಿ ನೀಡಬೇಕು~ ಎಂದರು.<br /> <br /> ಮಕ್ಕಳ ಹಕ್ಕುಗಳ ಬಗ್ಗೆ ಉಪನ್ಯಾಸ ನೀಡಿದ ಅಧಿಕ ಹಿರಿಯ ಸಿವಿಲ್ ನ್ಯಾಯಾಧೀಶ ಬಿ. ಜಯಂತ ಕುಮಾರ್, `ಶೇಕಡಾ ನೂರು ಫಲಿತಾಂಶದ ಗುರಿ ಇಟ್ಟುಕೊಂಡು ಮುನ್ನಡೆದರೆ ಮಾತ್ರ ಜಿವನದಲ್ಲಿ ಯಶಸ್ವಿಯಾಗಲು ಸಾಧ್ಯ. ಅದಕ್ಕಿಂತ ಕಡಿಮೆ ಗುರಿ ಇಟ್ಟರೆ ಯಶಸ್ಸು ಸಿಗುವುದಿಲ್ಲ. ಶಾಲೆಗಳಲ್ಲಿ ಪುಸ್ತಕದ ಜ್ಞಾನ ಕಲಿಸಲಾಗುತ್ತದೆ. <br /> <br /> ವಿದ್ಯಾರ್ಥಿಗಳು ಅನುಭವದ ಜ್ಞಾನ ಪಡೆಯಬೇಕು. ಶೈಕ್ಷಣಿಕವಾಗಿ ಎಷ್ಟೇ ಪದವಿ, ಪುರಸ್ಕಾರ ಪಡೆದರೂ ಸಾಮಾನ್ಯ ಜ್ಞಾನ ಇಲ್ಲದಿದ್ದರೆ ಪಡೆದ ಜ್ಞಾನವೂ ಉಪಯೋಗಕ್ಕೆ ಬರುವು ದಿಲ್ಲ~ ಎಂದು ಹಲವು ಉದಾಹರಣೆಗಳ ಮೂಲಕ ವಿವರಿಸಿದರು.<br /> <br /> ಬದುಕುವ ಹಕ್ಕು, ಅಭಿವೃದ್ಧಿಪಡೆಯುವ ಹಕ್ಕು, ಶೋಷಣೆಯಿಂದ ರಕ್ಷಿಸಿ ಕೊಳ್ಳುವ ಹಕ್ಕು ಹಾಗೂ ಶಿಕ್ಷಣದ ಹಕ್ಕು ಇವು ಮಕ್ಕಳಿಗೆ ಸಂವಿಧಾನಬದ್ಧವಾಗಿ ನೀಡಿರುವ ವಿಶೇಷ ಹಕ್ಕುಗಳು. ಇವುಗಳ ಬಗ್ಗೆ ತಿಳಿವಳಿಕೆ ಪಡೆದುಕೊಂಡು ಉತ್ತಮ ನಾಗರಿಕರಾಗಿ ಹೊರಹೊಮ್ಮಬೇಕು ಎಂದು ಜಯಂತ ಕುಮಾರ್ ಸಲಹೆ ನೀಡಿದರು.<br /> <br /> ಕಾನೂನು ಅರಿವಿನ ಬಗ್ಗೆ ಮಕ್ಕಳಿಗೆ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.<br /> <br /> ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಲ್.ಎನ್. ನರಸಿಂಹ ಮೂರ್ತಿ, ಕಾರ್ಯದರ್ಶಿ ಬಿ.ಟಿ. ರವಿಶಂಕರ್, ಪ್ರಧಾನ ಹಿರಿಯ ಸಿವಿಲ್ ಜಡ್ಜ್. ಸರಸ್ವತಿ ವಿ.ಕೊಸಂದರ್, ಕ್ಷೇತ್ರ ಶಿಕ್ಷಣಧಿಕಾರಿ ಡಿಟಿ. ಪುಟ್ಟರಾಜು ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>