<p><strong>ಕಾರ್ಕಳ: </strong>ಇಲ್ಲಿನ ಬಸ್ ನಿಲ್ದಾಣ ಸ್ಥಳಾಂತರಿಸಿದ್ದು ತೀರಾ ಅವೈಜ್ಞಾನಿಕವಾಗಿದ್ದು ಇದಕ್ಕೆ ಸೂಕ್ತ ಪರಿಹಾರ ಕೈಗೊಳ್ಳಬೇಕು ಎಂದು ವಿವಿಧ ಸಂಘಟನೆಗಳ ಪ್ರತಿನಿಧಿಗಳು ತಹಶೀಲ್ದಾರರ ಮೂಲಕ ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.<br /> <br /> `ಬಸ್ನಿಲ್ದಾಣ ಸ್ಥಳಾಂತರದಿಂದ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತುಂಬಾ ಅನಾನುಕೂಲವಾಗಿದೆ. ಈವರೆಗಿದ್ದ ಬಸ್ನಿಲ್ದಾಣ ಪಟ್ಟಣದ ಮಧ್ಯ ಭಾಗದಲ್ಲಿದ್ದು ಬಸ್ ನಿಲ್ದಾಣದಿಂದ ಪಟ್ಟಣದ ಎಲ್ಲ ಕಡೆ ತೆರಳಲು ಅನುಕೂಲವಾಗಿತ್ತು.<br /> <br /> ಈ ಬಸ್ನಿಲ್ದಾಣವನ್ನು ವಿಸ್ತರಿಸುವ ಸಲುವಾಗಿಯೇ ಗ್ರಾಮ ಚಾವಡಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯನ್ನು ತೆರವು ಗೊಳಿಸಲಾಗಿತ್ತು. ಜೊತೆಗೆ ಅಂಚೆ ಇಲಾಖೆಯು ಪುರಸಭೆಗೆ ಭೂಮಿಯನ್ನೂ ಬಿಟ್ಟುಕೊಟ್ಟಿತ್ತು. ಇಷ್ಟೆಲ್ಲ ನಡೆಸಿದ ಬಳಿಕ ಬಸ್ನಿಲ್ದಾಣವನ್ನು ಸ್ಥಳಾಂತರಿಸಿದ್ದಾದರೂ ಏಕೆ?~ ಎಂದು ಸಂಘಟನೆಗಳು ಪ್ರಶ್ನಿಸಿವೆ. <br /> <br /> `ಹಿಂದಿನ ಬಸ್ನಿಲ್ದಾಣವನ್ನೇ ಮುಂದುವರಿಸಬೇಕು. ಇದು ಅಸಾಧ್ಯ ವಾದರೆ ಸೂಕ್ತಪರಿಹಾರ ಕಂಡು ಕೊಳ್ಳಲು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು ಕರೆಸಿ ಸಮಲೋಚನೆ ನಡೆಸಿ ಸರ್ವಸಮ್ಮತ ವ್ಯವಸ್ಥೆ ಮಾಡಬೇಕು~ ಎಂದು ಸಂಘಟನೆಗಳು ವಿನಂತಿಸಿವೆ. <br /> <br /> `ಬದಲಿ ವ್ಯವಸ್ಥೆ ಜಾರಿಗೊಳಿಸುವ ಬಗ್ಗೆ 10 ದಿನಗಳ ಕಾಲಾವಕಾಶ ಕೇಳಿದ್ದ ತಾವು 23 ದಿನ ಕಳೆದರೂ ಯಾವುದೇ ಕ್ರಮಕೈಗೊಂಡಿಲ್ಲ. ಇದರಿಂದ ಜನರಿಗೆ ಜಿಲ್ಲಾಡಳಿತ ಬಗ್ಗೆ ವಿಶ್ವಾಸ ಕಳೆದು ಹೋಗಿದೆ. ತಕ್ಷಣ ಕ್ರಮಕೈಗೊಳ್ಳದಿದ್ದರೆ ಪ್ರತಿಭಟನೆ ಅನಿವಾರ್ಯ~ ಎಂದು ಸಂಘ ಸಂಸ್ಥೆಗಳು ಎಚ್ಚರಿಸಿವೆ. <br /> <br /> `ಕಾರ್ಕಳ ಉಳಿಸಿ ಆಂದೋಲನ ಸಮಿತಿ~ ಎಂದಿರುವ ಮನವಿ ಪತ್ರಕ್ಕೆ ನಾಗರಿಕ ಸೇವಾ ಸಮಿತಿ, ಪುರಸಭಾ ಮಾಜಿ ಅಧ್ಯಕ್ಷ, ಪದಾಧಿಕಾರಿಗಳು, ರೋಟರ್ಯಕ್ಟ್ ಕ್ಲಬ್ನ ಪದಾಧಿಕಾರಿಗಳು, ಭುವನೇಂದ್ರ ಕಾಲೇಜಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಬಸ್ ಏಜೆಂಟರ ಬಳಗದ ಪದಾಧಿಕಾರಿಗಳು ಸಹಿ ಹಾಕಿದ್ದಾರೆ. <br /> <br /> `ಚುನಾವಣಾ ತುರ್ತುಕಾರ್ಯದ ನಿಮಿತ್ತ ಮಾ.4ರವರೆಗೆ ಜಿಲ್ಲಾಧಿಕಾರಿಗೆ ಬಿಡುವು ಇರುವುದಿಲ್ಲ~ ಎಂದು ಮನವಿ ಸ್ವೀಕರಿಸಿದ ತಹಸೀಲ್ದಾರ್ ತಿಳಿಸಿದ್ದಾರೆ.<br /> <br /> `ಉಪ ಚುನಾವಣೆ ನಂತರ ಕಾರ್ಕಳಕ್ಕೆ ಕರೆಸಿ ಸೂಕ್ತ ತೀರ್ಮಾನ ಕೈಗೊಳ್ಳಲು ಸಾಧ್ಯ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರ್ಕಳ: </strong>ಇಲ್ಲಿನ ಬಸ್ ನಿಲ್ದಾಣ ಸ್ಥಳಾಂತರಿಸಿದ್ದು ತೀರಾ ಅವೈಜ್ಞಾನಿಕವಾಗಿದ್ದು ಇದಕ್ಕೆ ಸೂಕ್ತ ಪರಿಹಾರ ಕೈಗೊಳ್ಳಬೇಕು ಎಂದು ವಿವಿಧ ಸಂಘಟನೆಗಳ ಪ್ರತಿನಿಧಿಗಳು ತಹಶೀಲ್ದಾರರ ಮೂಲಕ ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.<br /> <br /> `ಬಸ್ನಿಲ್ದಾಣ ಸ್ಥಳಾಂತರದಿಂದ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತುಂಬಾ ಅನಾನುಕೂಲವಾಗಿದೆ. ಈವರೆಗಿದ್ದ ಬಸ್ನಿಲ್ದಾಣ ಪಟ್ಟಣದ ಮಧ್ಯ ಭಾಗದಲ್ಲಿದ್ದು ಬಸ್ ನಿಲ್ದಾಣದಿಂದ ಪಟ್ಟಣದ ಎಲ್ಲ ಕಡೆ ತೆರಳಲು ಅನುಕೂಲವಾಗಿತ್ತು.<br /> <br /> ಈ ಬಸ್ನಿಲ್ದಾಣವನ್ನು ವಿಸ್ತರಿಸುವ ಸಲುವಾಗಿಯೇ ಗ್ರಾಮ ಚಾವಡಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯನ್ನು ತೆರವು ಗೊಳಿಸಲಾಗಿತ್ತು. ಜೊತೆಗೆ ಅಂಚೆ ಇಲಾಖೆಯು ಪುರಸಭೆಗೆ ಭೂಮಿಯನ್ನೂ ಬಿಟ್ಟುಕೊಟ್ಟಿತ್ತು. ಇಷ್ಟೆಲ್ಲ ನಡೆಸಿದ ಬಳಿಕ ಬಸ್ನಿಲ್ದಾಣವನ್ನು ಸ್ಥಳಾಂತರಿಸಿದ್ದಾದರೂ ಏಕೆ?~ ಎಂದು ಸಂಘಟನೆಗಳು ಪ್ರಶ್ನಿಸಿವೆ. <br /> <br /> `ಹಿಂದಿನ ಬಸ್ನಿಲ್ದಾಣವನ್ನೇ ಮುಂದುವರಿಸಬೇಕು. ಇದು ಅಸಾಧ್ಯ ವಾದರೆ ಸೂಕ್ತಪರಿಹಾರ ಕಂಡು ಕೊಳ್ಳಲು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು ಕರೆಸಿ ಸಮಲೋಚನೆ ನಡೆಸಿ ಸರ್ವಸಮ್ಮತ ವ್ಯವಸ್ಥೆ ಮಾಡಬೇಕು~ ಎಂದು ಸಂಘಟನೆಗಳು ವಿನಂತಿಸಿವೆ. <br /> <br /> `ಬದಲಿ ವ್ಯವಸ್ಥೆ ಜಾರಿಗೊಳಿಸುವ ಬಗ್ಗೆ 10 ದಿನಗಳ ಕಾಲಾವಕಾಶ ಕೇಳಿದ್ದ ತಾವು 23 ದಿನ ಕಳೆದರೂ ಯಾವುದೇ ಕ್ರಮಕೈಗೊಂಡಿಲ್ಲ. ಇದರಿಂದ ಜನರಿಗೆ ಜಿಲ್ಲಾಡಳಿತ ಬಗ್ಗೆ ವಿಶ್ವಾಸ ಕಳೆದು ಹೋಗಿದೆ. ತಕ್ಷಣ ಕ್ರಮಕೈಗೊಳ್ಳದಿದ್ದರೆ ಪ್ರತಿಭಟನೆ ಅನಿವಾರ್ಯ~ ಎಂದು ಸಂಘ ಸಂಸ್ಥೆಗಳು ಎಚ್ಚರಿಸಿವೆ. <br /> <br /> `ಕಾರ್ಕಳ ಉಳಿಸಿ ಆಂದೋಲನ ಸಮಿತಿ~ ಎಂದಿರುವ ಮನವಿ ಪತ್ರಕ್ಕೆ ನಾಗರಿಕ ಸೇವಾ ಸಮಿತಿ, ಪುರಸಭಾ ಮಾಜಿ ಅಧ್ಯಕ್ಷ, ಪದಾಧಿಕಾರಿಗಳು, ರೋಟರ್ಯಕ್ಟ್ ಕ್ಲಬ್ನ ಪದಾಧಿಕಾರಿಗಳು, ಭುವನೇಂದ್ರ ಕಾಲೇಜಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಬಸ್ ಏಜೆಂಟರ ಬಳಗದ ಪದಾಧಿಕಾರಿಗಳು ಸಹಿ ಹಾಕಿದ್ದಾರೆ. <br /> <br /> `ಚುನಾವಣಾ ತುರ್ತುಕಾರ್ಯದ ನಿಮಿತ್ತ ಮಾ.4ರವರೆಗೆ ಜಿಲ್ಲಾಧಿಕಾರಿಗೆ ಬಿಡುವು ಇರುವುದಿಲ್ಲ~ ಎಂದು ಮನವಿ ಸ್ವೀಕರಿಸಿದ ತಹಸೀಲ್ದಾರ್ ತಿಳಿಸಿದ್ದಾರೆ.<br /> <br /> `ಉಪ ಚುನಾವಣೆ ನಂತರ ಕಾರ್ಕಳಕ್ಕೆ ಕರೆಸಿ ಸೂಕ್ತ ತೀರ್ಮಾನ ಕೈಗೊಳ್ಳಲು ಸಾಧ್ಯ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>