<p><strong>ನವದೆಹಲಿ (ಪಿಟಿಐ): </strong>ಶುಕ್ರವಾರಕ್ಕೆ ನಿಗದಿಯಾಗಿದ್ದ ವಿದೇಶಾಂಗ ಕಾರ್ಯದರ್ಶಿಗಳ ಮಾತುಕತೆಯನ್ನು ಭಾರತ ಮತ್ತು ಪಾಕಿಸ್ತಾನ ಮುಂದೂಡಿವೆ. ಅತಿ ಶೀಘ್ರದಲ್ಲಿಯೇ ಮಾತುಕತೆ ನಡೆಯಲಿದೆ ಎಂದು ಎರಡೂ ದೇಶಗಳು ಹೇಳಿವೆ.<br /> <br /> ಪಠಾಣ್ಕೋಟ್ ದಾಳಿಯ ಸಂಚು ನಡೆಸಿರುವ ಜೈಷ್–ಎ–ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ವಿರುದ್ಧ ಪಾಕಿಸ್ತಾನ ಕೈಗೊಂಡಿರುವ ಕ್ರಮಗಳನ್ನು ಭಾರತ ಸ್ವಾಗತಿಸಿದೆ. ವಾಯುನೆಲೆ ಮೇಲಿನ ದಾಳಿ ತನಿಖೆಗಾಗಿ ಪಾಕಿಸ್ತಾನದ ವಿಶೇಷ ತನಿಖಾ ತಂಡವನ್ನು ಸ್ವಾಗತಿಸಲಾಗುವುದು ಎಂದು ಭಾರತ ಹೇಳಿದೆ.<br /> <br /> ಹಲವು ಜೈಷೆ ಉಗ್ರರನ್ನು ವಶಕ್ಕೆ ಪಡೆದಿರುವ ಪಾಕ್ನ ಕ್ರಮ ‘ಮಹತ್ವಪೂರ್ಣ ಮತ್ತು ಮೊದಲ ಮಹತ್ವದ ಹೆಜ್ಜೆ’ ಎಂದು ಭಾರತ ಬಣ್ಣಿಸಿದೆ. ಆದರೆ ಮಸೂದ್ ಅಜರ್ನನ್ನು ವಶಕ್ಕೆ ಪಡೆದಿರುವುದನ್ನು ಪಾಕ್ ಇನ್ನೂ ದೃಢಪಡಿಸಿಲ್ಲ.<br /> <br /> ದಾಳಿಯಲ್ಲಿ ಪಾಕ್ ಉಗ್ರರು ಭಾಗಿಯಾಗಿರುವ ಬಗೆಗಿನ ತನಿಖೆ ‘ಗಮನಾರ್ಹ ಪ್ರಗತಿ’ ಸಾಧಿಸಿದೆ ಎಂಬುದನ್ನು ಬುಧವಾರ ಪಾಕ್ ಬಿಡುಗಡೆ ಮಾಡಿರುವ ಹೇಳಿಕೆ ಸ್ಪಷ್ಟಪಡಿಸಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ಶುಕ್ರವಾರಕ್ಕೆ ನಿಗದಿಯಾಗಿದ್ದ ವಿದೇಶಾಂಗ ಕಾರ್ಯದರ್ಶಿಗಳ ಮಾತುಕತೆಯನ್ನು ಭಾರತ ಮತ್ತು ಪಾಕಿಸ್ತಾನ ಮುಂದೂಡಿವೆ. ಅತಿ ಶೀಘ್ರದಲ್ಲಿಯೇ ಮಾತುಕತೆ ನಡೆಯಲಿದೆ ಎಂದು ಎರಡೂ ದೇಶಗಳು ಹೇಳಿವೆ.<br /> <br /> ಪಠಾಣ್ಕೋಟ್ ದಾಳಿಯ ಸಂಚು ನಡೆಸಿರುವ ಜೈಷ್–ಎ–ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ವಿರುದ್ಧ ಪಾಕಿಸ್ತಾನ ಕೈಗೊಂಡಿರುವ ಕ್ರಮಗಳನ್ನು ಭಾರತ ಸ್ವಾಗತಿಸಿದೆ. ವಾಯುನೆಲೆ ಮೇಲಿನ ದಾಳಿ ತನಿಖೆಗಾಗಿ ಪಾಕಿಸ್ತಾನದ ವಿಶೇಷ ತನಿಖಾ ತಂಡವನ್ನು ಸ್ವಾಗತಿಸಲಾಗುವುದು ಎಂದು ಭಾರತ ಹೇಳಿದೆ.<br /> <br /> ಹಲವು ಜೈಷೆ ಉಗ್ರರನ್ನು ವಶಕ್ಕೆ ಪಡೆದಿರುವ ಪಾಕ್ನ ಕ್ರಮ ‘ಮಹತ್ವಪೂರ್ಣ ಮತ್ತು ಮೊದಲ ಮಹತ್ವದ ಹೆಜ್ಜೆ’ ಎಂದು ಭಾರತ ಬಣ್ಣಿಸಿದೆ. ಆದರೆ ಮಸೂದ್ ಅಜರ್ನನ್ನು ವಶಕ್ಕೆ ಪಡೆದಿರುವುದನ್ನು ಪಾಕ್ ಇನ್ನೂ ದೃಢಪಡಿಸಿಲ್ಲ.<br /> <br /> ದಾಳಿಯಲ್ಲಿ ಪಾಕ್ ಉಗ್ರರು ಭಾಗಿಯಾಗಿರುವ ಬಗೆಗಿನ ತನಿಖೆ ‘ಗಮನಾರ್ಹ ಪ್ರಗತಿ’ ಸಾಧಿಸಿದೆ ಎಂಬುದನ್ನು ಬುಧವಾರ ಪಾಕ್ ಬಿಡುಗಡೆ ಮಾಡಿರುವ ಹೇಳಿಕೆ ಸ್ಪಷ್ಟಪಡಿಸಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>