<p><strong>ಕೃಷ್ಣರಾಜಪುರ:</strong> `ರಾಷ್ಟ್ರೀಯ ಹೆದ್ದಾರಿ 4ಕ್ಕೆ ಸಂಪರ್ಕಿಸುವ ದೇವಸಂದ್ರ ಪ್ರಮುಖ ರಸ್ತೆ ಬಳಿಯ ಮಳೆನೀರು ಕಾಲುವೆ ಕಲುಷಿತಗೊಂಡು, ನೀರು ಸರಾಗವಾಗಿ ಹರಿಯದೆ ಕೊಚ್ಚೆಗುಂಡಿಯಾಗಿದೆ. ಕಾಲುವೆಯ ಹೂಳು ತೆಗೆಸಬೇಕು' ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.<br /> <br /> `ಪ್ರಮುಖ ರಸ್ತೆಯ ಇಕ್ಕಡೆಗಳಲ್ಲಿ ಸುಮಾರು 120ಕ್ಕೂ ಅಧಿಕ ಅಂಗಡಿಗಳಿವೆ. ಮಳೆನೀರು ಕಾಲುವೆಯ ಆಸುಪಾಸಿನಲ್ಲಿ ತಳ್ಳು ಬಂಡಿ ವ್ಯಾಪಾರಿಗಳು,ಬಟ್ಟೆ ವ್ಯಾಪಾರಿಗಳು ಇದ್ದಾರೆ. ಕೊಳಚೆ ನೀರಿನಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ' ಎಂದು ಅಂಗಡಿ ಮಾಲೀಕ ಪುರುಷೋತ್ತಮ್ ದೂರಿದರು.<br /> <br /> `ಕಾಲುವೆಗೆ ಸೇರಿದ ನೀರು ಸರಾಗವಾಗಿ ಹರಿಯಲು ಕೆ.ಆರ್.ಪುರದ ಕೃಷ್ಣ ಚಿತ್ರಮಂದಿರದ ಬಳಿ ಟ್ರಾನ್ಸ್ಫಾರ್ಮರ್ ಅಡ್ಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.<br /> <br /> ಆದರೆ, ಈಗಾಗಲೇ ಬೆಸ್ಕಾಂ ಟ್ರಾನ್ಸ್ಫಾರ್ಮರ್ ಅನ್ನು ಸ್ಥಳಾಂತರಗೊಳಿಸಿದೆ. ಕಾಲುವೆ ಒಳಗೆ ನೀರು ಸರಾಗವಾಗಿ ಹರಿಯದೆ ಜೊಂಡು ಬೆಳೆದಿದೆ. ನೈರ್ಮಲ್ಯ ಹಾಳಾಗುತ್ತಿದೆ' ಎಂದು ಟೀ ವ್ಯಾಪಾರಿ ಆನಂದ ಬೇಸರ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೃಷ್ಣರಾಜಪುರ:</strong> `ರಾಷ್ಟ್ರೀಯ ಹೆದ್ದಾರಿ 4ಕ್ಕೆ ಸಂಪರ್ಕಿಸುವ ದೇವಸಂದ್ರ ಪ್ರಮುಖ ರಸ್ತೆ ಬಳಿಯ ಮಳೆನೀರು ಕಾಲುವೆ ಕಲುಷಿತಗೊಂಡು, ನೀರು ಸರಾಗವಾಗಿ ಹರಿಯದೆ ಕೊಚ್ಚೆಗುಂಡಿಯಾಗಿದೆ. ಕಾಲುವೆಯ ಹೂಳು ತೆಗೆಸಬೇಕು' ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.<br /> <br /> `ಪ್ರಮುಖ ರಸ್ತೆಯ ಇಕ್ಕಡೆಗಳಲ್ಲಿ ಸುಮಾರು 120ಕ್ಕೂ ಅಧಿಕ ಅಂಗಡಿಗಳಿವೆ. ಮಳೆನೀರು ಕಾಲುವೆಯ ಆಸುಪಾಸಿನಲ್ಲಿ ತಳ್ಳು ಬಂಡಿ ವ್ಯಾಪಾರಿಗಳು,ಬಟ್ಟೆ ವ್ಯಾಪಾರಿಗಳು ಇದ್ದಾರೆ. ಕೊಳಚೆ ನೀರಿನಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ' ಎಂದು ಅಂಗಡಿ ಮಾಲೀಕ ಪುರುಷೋತ್ತಮ್ ದೂರಿದರು.<br /> <br /> `ಕಾಲುವೆಗೆ ಸೇರಿದ ನೀರು ಸರಾಗವಾಗಿ ಹರಿಯಲು ಕೆ.ಆರ್.ಪುರದ ಕೃಷ್ಣ ಚಿತ್ರಮಂದಿರದ ಬಳಿ ಟ್ರಾನ್ಸ್ಫಾರ್ಮರ್ ಅಡ್ಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.<br /> <br /> ಆದರೆ, ಈಗಾಗಲೇ ಬೆಸ್ಕಾಂ ಟ್ರಾನ್ಸ್ಫಾರ್ಮರ್ ಅನ್ನು ಸ್ಥಳಾಂತರಗೊಳಿಸಿದೆ. ಕಾಲುವೆ ಒಳಗೆ ನೀರು ಸರಾಗವಾಗಿ ಹರಿಯದೆ ಜೊಂಡು ಬೆಳೆದಿದೆ. ನೈರ್ಮಲ್ಯ ಹಾಳಾಗುತ್ತಿದೆ' ಎಂದು ಟೀ ವ್ಯಾಪಾರಿ ಆನಂದ ಬೇಸರ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>