<p><strong>ಗೋಣಿಕೊಪ್ಪಲು:</strong> ಕಾಳ್ಗಿಚ್ಚಿನ ಭಯದಿಂದ ಹೊರಬಂದ ಅರಣ್ಯದ ಅಂಚಿನ ಜನ ಈಗ ವನ್ಯ ಜೀವಿಗಳ ದಾಳಿಯ ಭೀತಿಗೊಳಗಾಗಿದ್ದಾರೆ. <br /> <br /> ಎರಡು ದಿನಗಳ ಹಿಂದೆ ಸುಳುಗೋಡಿನ ಅಜ್ಜಿಕುಟ್ಟಿರ ಮೊಣ್ಣಪ್ಪ ಅವರ ಗದ್ದೆಯ ಬಯಲಿನಲ್ಲಿ ಮೇಯುತ್ತಿದ್ದ ಹಸುವನ್ನು ಚಿರತೆ ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿದೆ. ಇದೀಗ ಹಸು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ. <br /> <br /> ಅಗ್ನಿಗೆ ಆಹುತಿಯಾದ ಬೂದಿ ತುಂಬಿದ ಅರಣ್ಯದೊಳಗೆ ಅಡ್ಡಾಡುವ ಕಾಡಾನೆ, ಕಾಡುಕೋಣ, ಚಿರತೆ ಮುಂತಾದ ಪ್ರಾಣಿಗಳೆಲ್ಲ ಈಗ ಆಹಾರ ಹುಡುಕುತ್ತಾ ಕಾಫಿ ತೋಟದತ್ತ ಮುಖ ಮಾಡಿವೆ.<br /> <br /> 15ದಿನಗಳ ಹಿಂದೆ ನಾಲ್ಕೈದು ದಿನಗಳ ಕಾಲ ಹೊತ್ತಿ ಉರಿದ ನಾಗರಹೊಳೆ ಅರಣ್ಯ ಈಗ ಬೂದಿ ತುಂಬಿದ ಬೆಂಗಾಡಾಗಿದೆ. ವನ್ಯಜೀವಿಗಳು ನಡೆದಾಡುವಾಗ ಅವುಗಳೂ ಕಾಣದಷ್ಟು ಎತ್ತರಕ್ಕೆ ಬೂದಿ ಹಾರುತ್ತಿದೆ. ಕೆಲವು ಕಡೆ ಹಸಿರನ್ನೇ ಕಾಣದ ಸಸ್ಯಹಾರಿ ವನ್ಯ ಜೀವಿಗಳು ನಾಡಿನತ್ತ ಧಾವಿಸುತ್ತಿವೆ. <br /> <br /> ನಾಗರಹೊಳೆ ಅರಣ್ಯದ ಅಂಚಿನ ಸುಳುಗೋಡು, ರಾಜಾಪುರ, ತಿತಿಮತಿ ಮುಂತಾದ ಕಡೆ ಆನೆಗಳು ಹಗಲಿನ ವೇಳೆಯಲ್ಲಿಯೇ ರಾಜಾರೋಷವಾಗಿ ತಿರುಗಾಡುತ್ತಿವೆ. ಜಾನುವಾರುಗಳ ರೀತಿಯಲ್ಲಿ ತೋಟಕ್ಕೆ ನುಗ್ಗಿ ಕಾಫಿ ಬೀಜ ತಿನ್ನುತ್ತಿವೆ. ಮೂರು ದಿನಗಳ ಹಿಂದೆ ಸುಳುಗೋಡಿನ ಕಾಫಿ ಬೆಳೆಗಾರರೊಬ್ಬರು ಸ್ವಲ್ಪದರಲ್ಲಿಯೇ ಆನೆ ದಾಳಿಯಿಂದ ಪಾರಾಗಿದ್ದಾರೆ.<br /> <br /> ಮತ್ತೊಂದು ಕಡೆ ಚಿರತೆ ಹಗಲಿನ ವೇಳೆಯಲ್ಲಿಯೇ ಜಾನುವಾರಗಳ ಮೇಲೆ ದಾಳಿ ನಡೆಸುತ್ತಿದೆ. ಹೀಗಾಗಿ ಅರಣ್ಯದಂಚಿನ ಜನತೆ ಕಾಳ್ಗಿಚ್ಚು ಮತ್ತು ವನ್ಯ ಜೀವಿಗಳ ಕಾಟದಿಂದ ಬೇಸತ್ತು ಹೋಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೋಣಿಕೊಪ್ಪಲು:</strong> ಕಾಳ್ಗಿಚ್ಚಿನ ಭಯದಿಂದ ಹೊರಬಂದ ಅರಣ್ಯದ ಅಂಚಿನ ಜನ ಈಗ ವನ್ಯ ಜೀವಿಗಳ ದಾಳಿಯ ಭೀತಿಗೊಳಗಾಗಿದ್ದಾರೆ. <br /> <br /> ಎರಡು ದಿನಗಳ ಹಿಂದೆ ಸುಳುಗೋಡಿನ ಅಜ್ಜಿಕುಟ್ಟಿರ ಮೊಣ್ಣಪ್ಪ ಅವರ ಗದ್ದೆಯ ಬಯಲಿನಲ್ಲಿ ಮೇಯುತ್ತಿದ್ದ ಹಸುವನ್ನು ಚಿರತೆ ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿದೆ. ಇದೀಗ ಹಸು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ. <br /> <br /> ಅಗ್ನಿಗೆ ಆಹುತಿಯಾದ ಬೂದಿ ತುಂಬಿದ ಅರಣ್ಯದೊಳಗೆ ಅಡ್ಡಾಡುವ ಕಾಡಾನೆ, ಕಾಡುಕೋಣ, ಚಿರತೆ ಮುಂತಾದ ಪ್ರಾಣಿಗಳೆಲ್ಲ ಈಗ ಆಹಾರ ಹುಡುಕುತ್ತಾ ಕಾಫಿ ತೋಟದತ್ತ ಮುಖ ಮಾಡಿವೆ.<br /> <br /> 15ದಿನಗಳ ಹಿಂದೆ ನಾಲ್ಕೈದು ದಿನಗಳ ಕಾಲ ಹೊತ್ತಿ ಉರಿದ ನಾಗರಹೊಳೆ ಅರಣ್ಯ ಈಗ ಬೂದಿ ತುಂಬಿದ ಬೆಂಗಾಡಾಗಿದೆ. ವನ್ಯಜೀವಿಗಳು ನಡೆದಾಡುವಾಗ ಅವುಗಳೂ ಕಾಣದಷ್ಟು ಎತ್ತರಕ್ಕೆ ಬೂದಿ ಹಾರುತ್ತಿದೆ. ಕೆಲವು ಕಡೆ ಹಸಿರನ್ನೇ ಕಾಣದ ಸಸ್ಯಹಾರಿ ವನ್ಯ ಜೀವಿಗಳು ನಾಡಿನತ್ತ ಧಾವಿಸುತ್ತಿವೆ. <br /> <br /> ನಾಗರಹೊಳೆ ಅರಣ್ಯದ ಅಂಚಿನ ಸುಳುಗೋಡು, ರಾಜಾಪುರ, ತಿತಿಮತಿ ಮುಂತಾದ ಕಡೆ ಆನೆಗಳು ಹಗಲಿನ ವೇಳೆಯಲ್ಲಿಯೇ ರಾಜಾರೋಷವಾಗಿ ತಿರುಗಾಡುತ್ತಿವೆ. ಜಾನುವಾರುಗಳ ರೀತಿಯಲ್ಲಿ ತೋಟಕ್ಕೆ ನುಗ್ಗಿ ಕಾಫಿ ಬೀಜ ತಿನ್ನುತ್ತಿವೆ. ಮೂರು ದಿನಗಳ ಹಿಂದೆ ಸುಳುಗೋಡಿನ ಕಾಫಿ ಬೆಳೆಗಾರರೊಬ್ಬರು ಸ್ವಲ್ಪದರಲ್ಲಿಯೇ ಆನೆ ದಾಳಿಯಿಂದ ಪಾರಾಗಿದ್ದಾರೆ.<br /> <br /> ಮತ್ತೊಂದು ಕಡೆ ಚಿರತೆ ಹಗಲಿನ ವೇಳೆಯಲ್ಲಿಯೇ ಜಾನುವಾರಗಳ ಮೇಲೆ ದಾಳಿ ನಡೆಸುತ್ತಿದೆ. ಹೀಗಾಗಿ ಅರಣ್ಯದಂಚಿನ ಜನತೆ ಕಾಳ್ಗಿಚ್ಚು ಮತ್ತು ವನ್ಯ ಜೀವಿಗಳ ಕಾಟದಿಂದ ಬೇಸತ್ತು ಹೋಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>