<p>ಶ್ರೀನಗರ: ಸತತ ಎರಡನೇ ದಿನವಾದ ಬುಧವಾರವೂ ಉಗ್ರರು ಕಾಶ್ಮೀರದಲ್ಲಿ ಗ್ರೆನೆಡ್ ದಾಳಿ ನಡೆಸಿದ್ದು, ಐವರು ನಾಗರಿಕರು ಗಾಯಗೊಂಡಿದ್ದಾರೆ.<br /> <br /> ಅನಂತ್ನಾಗ್ ಜಿಲ್ಲೆಯ ಬಿಜ್ಬೆಹಾರದಲ್ಲಿ ಈ ದಾಳಿ ನಡೆದಿದ್ದು, ಎರಡು ದಿನಗಳಲ್ಲಿ ಉಗ್ರರು ನಡೆಸಿರುವ ಐದನೇ ದಾಳಿ ಇದಾಗಿದೆ.<br /> <br /> ಈ ನಡುವೆ ಪಾಕ್ ಮೂಲದ ಎಲ್ಇಟಿ ಉಗ್ರ ಸಂಘಟನೆಗೆ ಸೇರಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.<br /> ರಾಜ್ಯ ಸರ್ಕಾರ, `ಗಲಭೆ ಪೀಡಿತ ಪ್ರದೇಶ ಕಾಯ್ದೆ~ ತೆಗೆದು ಹಾಕಲು ಚಿಂತಿಸುತ್ತಿರುವ ಸಂದರ್ಭದಲ್ಲಿಯೇ ಈ ದಾಳಿಗಳು ನಡೆದಿವೆ. ಹಾಗಾಗಿ ಬುಧವಾರ ಸಚಿವ ಸಂಪುಟದ ಮಹತ್ವದ ಸಭೆ ನಡೆಯಲಿದೆ. <br /> <br /> ಶ್ರೀನಗರದಿಂದ ಸುಮಾರು 45 ಕಿ.ಮೀ. ದೂರದಲ್ಲಿರುವ ಬಿಜ್ಬೆಹಾರ ನಗರದ ಗೊರಿವಾನ್ ಮಾರುಕಟ್ಟೆ ಪ್ರದೇಶದಲ್ಲಿ ಮಧ್ಯಾಹ್ನ 1.40ರ ಸುಮಾರಿಗೆ ಅಪರಿಚಿತ ಉಗ್ರರು ಗ್ರೆನೆಡ್ ದಾಳಿ ನಡೆಸಿದ್ದಾರೆ. ಇದುವರೆಗೂ ದಾಳಿಯ ಹೊಣೆ ಯಾವುದೇ ಉಗ್ರ ಸಂಘಟನೆಯೂ ಹೊತ್ತುಕೊಂಡಿಲ್ಲ.<br /> <br /> ಈ ಮಾರ್ಗದಲ್ಲಿ ಹಾದು ಹೋಗು ತ್ತಿದ್ದ ಪೊಲೀಸ್ ವಾಹನವನ್ನು ಗುರಿಯಾ ಗಿರಿಸಿಕೊಂಡು ಉಗ್ರರು ಗ್ರೆನೆಡ್ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.<br /> <br /> ಮಂಗಳವಾರ ಕಣಿವೆ ರಾಜ್ಯದ ನಾಲ್ಕು ಕಡೆಗಳಲ್ಲಿ ಉಗ್ರರು ಗ್ರೆನೆಡ್ ದಾಳಿ ನಡೆಸಿದ್ದರು. ಈ ದಾಳಿಯನ್ನು ತಾನು ನಡೆಸಿರುವುದಾಗಿ ನಿಷೇಧಿತ ಜಮೈತುಲ್ ಮುಜಾಹಿದ್ದೀನ್ (ಜೆಇಎಂ) ಹೊತ್ತು ಕೊಂಡಿತ್ತು. ಕಾಶ್ಮೀರದಿಂದ ಉಗ್ರರನ್ನು ಹೊರ ಹಾಕಲು ಸಾಧ್ಯವಿಲ್ಲ ಎನ್ನುವ ಸಂದೇಶವನ್ನು ರಾಜ್ಯ ಸರ್ಕಾರಕ್ಕೆ ನೀಡು ವುದು ದಾಳಿಯ ಉದ್ದೇಶವಾಗಿತ್ತು ಎನ್ನಲಾಗಿದೆ.<br /> <br /> ಸೇನೆಯೇ ಇಂತಹ ಕೃತ್ಯವನ್ನು ನಡೆಸಿದೆ ಎಂದು ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ವಕ್ತಾರ ಹಾಗೂ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಚಿಕ್ಕಪ್ಪ ಡಾ.ಮುಸ್ತಫಾ ಕಮಾಲ್ ಆರೋಪಿಸಿದ್ದರು. ಆದರೆ ಸೇನೆ ಈ ಆರೋಪವನ್ನು ತಳ್ಳಿಹಾಕಿತ್ತು. ಕಮಾಲ್ ಅವರ ಹೇಳಿಕೆ ತಿರುಚ ಲಾಗಿದೆ ಎಂದು ಬುಧವಾರ ಮುಖ್ಯ ಮಂತ್ರಿ ಒಮರ್ ಅಬ್ದುಲ್ಲಾ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶ್ರೀನಗರ: ಸತತ ಎರಡನೇ ದಿನವಾದ ಬುಧವಾರವೂ ಉಗ್ರರು ಕಾಶ್ಮೀರದಲ್ಲಿ ಗ್ರೆನೆಡ್ ದಾಳಿ ನಡೆಸಿದ್ದು, ಐವರು ನಾಗರಿಕರು ಗಾಯಗೊಂಡಿದ್ದಾರೆ.<br /> <br /> ಅನಂತ್ನಾಗ್ ಜಿಲ್ಲೆಯ ಬಿಜ್ಬೆಹಾರದಲ್ಲಿ ಈ ದಾಳಿ ನಡೆದಿದ್ದು, ಎರಡು ದಿನಗಳಲ್ಲಿ ಉಗ್ರರು ನಡೆಸಿರುವ ಐದನೇ ದಾಳಿ ಇದಾಗಿದೆ.<br /> <br /> ಈ ನಡುವೆ ಪಾಕ್ ಮೂಲದ ಎಲ್ಇಟಿ ಉಗ್ರ ಸಂಘಟನೆಗೆ ಸೇರಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.<br /> ರಾಜ್ಯ ಸರ್ಕಾರ, `ಗಲಭೆ ಪೀಡಿತ ಪ್ರದೇಶ ಕಾಯ್ದೆ~ ತೆಗೆದು ಹಾಕಲು ಚಿಂತಿಸುತ್ತಿರುವ ಸಂದರ್ಭದಲ್ಲಿಯೇ ಈ ದಾಳಿಗಳು ನಡೆದಿವೆ. ಹಾಗಾಗಿ ಬುಧವಾರ ಸಚಿವ ಸಂಪುಟದ ಮಹತ್ವದ ಸಭೆ ನಡೆಯಲಿದೆ. <br /> <br /> ಶ್ರೀನಗರದಿಂದ ಸುಮಾರು 45 ಕಿ.ಮೀ. ದೂರದಲ್ಲಿರುವ ಬಿಜ್ಬೆಹಾರ ನಗರದ ಗೊರಿವಾನ್ ಮಾರುಕಟ್ಟೆ ಪ್ರದೇಶದಲ್ಲಿ ಮಧ್ಯಾಹ್ನ 1.40ರ ಸುಮಾರಿಗೆ ಅಪರಿಚಿತ ಉಗ್ರರು ಗ್ರೆನೆಡ್ ದಾಳಿ ನಡೆಸಿದ್ದಾರೆ. ಇದುವರೆಗೂ ದಾಳಿಯ ಹೊಣೆ ಯಾವುದೇ ಉಗ್ರ ಸಂಘಟನೆಯೂ ಹೊತ್ತುಕೊಂಡಿಲ್ಲ.<br /> <br /> ಈ ಮಾರ್ಗದಲ್ಲಿ ಹಾದು ಹೋಗು ತ್ತಿದ್ದ ಪೊಲೀಸ್ ವಾಹನವನ್ನು ಗುರಿಯಾ ಗಿರಿಸಿಕೊಂಡು ಉಗ್ರರು ಗ್ರೆನೆಡ್ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.<br /> <br /> ಮಂಗಳವಾರ ಕಣಿವೆ ರಾಜ್ಯದ ನಾಲ್ಕು ಕಡೆಗಳಲ್ಲಿ ಉಗ್ರರು ಗ್ರೆನೆಡ್ ದಾಳಿ ನಡೆಸಿದ್ದರು. ಈ ದಾಳಿಯನ್ನು ತಾನು ನಡೆಸಿರುವುದಾಗಿ ನಿಷೇಧಿತ ಜಮೈತುಲ್ ಮುಜಾಹಿದ್ದೀನ್ (ಜೆಇಎಂ) ಹೊತ್ತು ಕೊಂಡಿತ್ತು. ಕಾಶ್ಮೀರದಿಂದ ಉಗ್ರರನ್ನು ಹೊರ ಹಾಕಲು ಸಾಧ್ಯವಿಲ್ಲ ಎನ್ನುವ ಸಂದೇಶವನ್ನು ರಾಜ್ಯ ಸರ್ಕಾರಕ್ಕೆ ನೀಡು ವುದು ದಾಳಿಯ ಉದ್ದೇಶವಾಗಿತ್ತು ಎನ್ನಲಾಗಿದೆ.<br /> <br /> ಸೇನೆಯೇ ಇಂತಹ ಕೃತ್ಯವನ್ನು ನಡೆಸಿದೆ ಎಂದು ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ವಕ್ತಾರ ಹಾಗೂ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಚಿಕ್ಕಪ್ಪ ಡಾ.ಮುಸ್ತಫಾ ಕಮಾಲ್ ಆರೋಪಿಸಿದ್ದರು. ಆದರೆ ಸೇನೆ ಈ ಆರೋಪವನ್ನು ತಳ್ಳಿಹಾಕಿತ್ತು. ಕಮಾಲ್ ಅವರ ಹೇಳಿಕೆ ತಿರುಚ ಲಾಗಿದೆ ಎಂದು ಬುಧವಾರ ಮುಖ್ಯ ಮಂತ್ರಿ ಒಮರ್ ಅಬ್ದುಲ್ಲಾ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>