<p><strong>ದೊಡ್ಡಬಳ್ಳಾಪುರ: </strong>ಪ್ರಸ್ತುತ ಪ್ರಜಾಪ್ರಭುತ್ವ ವ್ಯವಸ್ಥೆ ರಕ್ತ, ಮಾಂಸ ಇಲ್ಲದ ಅಸ್ಥಿಪಂಜರದಂತಾಗಿದೆ ಎಂದು ನಿಡುಮಾಮಿಡಿ ಮಹಾ ಸಂಸ್ಥಾನದ ಮಠದ ಪೀಠಾಧ್ಯಕ್ಷ ವೀರಭದ್ರಚನ್ನಮಲ್ಲ ಸ್ವಾಮೀಜಿ ಹೇಳಿದರು. <br /> ನಗರದ ಪುರಭವನದಲ್ಲಿ ಸ್ವಾತಂತ್ರ್ಯ ಸೇನಾನಿ ಕಾ.ಎಚ್.ಮುಗುವಾಳಪ್ಪ ಅಭಿಮಾನಿ ಬಳಗದ ವತಿಯಿಂದ ನಡೆದ ವಿಚಾರ ಸಂಕಿರಣದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು.<br /> <br /> ಪ್ರಜಾಪ್ರಭುತ್ವ ವ್ಯವಸ್ಥೆ ಕೇವಲ ಬಂಡವಾಳ ಶಾಹಿಗಳ ಪರವಾಗಿದೆ. ಉಗ್ರವಾದ, ಕೋಮುವಾದ ಪ್ರಬಲವಾಗಿ ಬೆಳೆಯುತ್ತಿರುವ ಇಂದಿನ ದಿನಗಳಲ್ಲಿ ಪ್ರಜಾಪ್ರಭುತ್ವ ಆಡಳಿತ ಮೂಲೆಗುಂಪಾಗುತ್ತಿದೆ. ಪ್ರಧಾನ ಮಂತ್ರಿಗಳು ತಾವು ಮಾತ್ರ ಪ್ರಾಮಾಣಿಕರು ಎಂದು ಹೇಳಿಕೊಂಡು ತಿರುಗಾಡಿದರೆ ಪ್ರಯೋಜನ ಇಲ್ಲ. <br /> <br /> ಸಂಪೂರ್ಣ ಭ್ರಷ್ಟಾಚಾರವನ್ನು ತಡೆಯಲು ಸಾಧ್ಯವಾಗವ ರೀತಿ ಕ್ರಮಕೈಗೊಳ್ಳಬೇಕು ಎಂದರು.<br /> ನಮ್ಮಲ್ಲಿ ಕಿಸೆಗಳ್ಳರಿಗಿಂತ ದರೋಡೆಕೋರರೇ ಹೆಚ್ಚಾಗಿದ್ದಾರೆ. ಸ್ವಜನ ಪಕ್ಷಪಾತ, ಜಾತಿವಾದದಿಂದಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ವಿಕೃತವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇವತ್ತಿಗೂ ವಂಶಪರಂಪರೆ ಆಡಳಿತವೆ ನಡೆಯುತ್ತಿದೆ. ಜಾತಿವಾದ ಇಂದಿಗೂ ಮೇರೆ ಮೀರಿ ಬೆಳೆಯುತ್ತಿದೆ. <br /> <br /> ಸ್ವಾತಂತ್ರ್ಯ ಬಂದು 60 ದಶಕಗಳು ಕಳೆದಿದ್ದರು ಬಹುಸಂಖ್ಯಾತ ಜನರ ಆಸೆಗಳು ಈಡೇರುವ ಕಾಲ ಬಂದಿಲ್ಲ. ನಮ್ಮ ಆಡಳಿತಗಾರರಿಗೆ ಜನರ ಪ್ರಾಥಮಿಕ ಅಗತ್ಯಗಳನ್ನು ಪೂರೈಸಲು ಆಸಕ್ತಿ ಇಲ್ಲದಾಗಿದೆ ಎಂದರು.<br /> ಯುವ ಜನತೆಯಲ್ಲಿ ದೇಶವನ್ನು ಬದಲಾವಣೆಯ ದಿಕ್ಕಿನಡೆಗೆ ಕೊಂಡೊಯ್ಯುವ ಶಕ್ತಿ ಇದೆ.<br /> <br /> ಎಂದು ಅವರು ಆಶಾಭಾವ ವ್ಯಕ್ತಪಡಿಸಿದರು. ಅಭಿಮಾನಿ ಬಳಗವನ್ನು ಕಟ್ಟುವುದು ಹಣಕ್ಕಾಗಿ ಎನ್ನುವ ಇವತ್ತಿನ ದಿನಗಳಲ್ಲೂ ಸ್ವಾತಂತ್ರ್ಯ ಸೇನಾನಿಯೊಬ್ಬರ ಅಭಿಮಾನಿ ಬಳಗ ಇರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. <br /> <br /> ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಮಾಜಿ ಶಾಸಕ ಸು.ರಂ.ರಾಮಯ್ಯ ಮಾತನಾಡಿ, ಇವತ್ತಿನ ಆಡಳಿತ ನೋಡಿದರೆ. ಭ್ರಷ್ಟಾಚಾರದಿಂದಾಗಿ ವಿಶ್ವ ಮಟ್ಟದಲ್ಲಿ ದೇಶದ ಹಿರಿಮೆ ಕುಸಿಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. <br /> <br /> ವಿಚಾರ ಸಂಕಿರಣದಲ್ಲಿ ಸಿಪಿಐ(ಎಂ) ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಜಿ.ಎನ್.ನಾಗರಾಜ್ , ಪ್ರಜಾಪ್ರಭುತ್ವ ಬಿಕ್ಕಟ್ಟು ಮತ್ತು ಮೌಲ್ಯಗಳು ಕುರಿತು ಮಾತನಾಡಿದರು. ಮುಖ್ಯಅತಿಥಿಗಳಾಗಿ ಕೊಂಗಾಡಿಯಪ್ಪ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಪ್ರೊ.ಚಂದ್ರಪ್ಪ, ಹಿರಿಯ ನ್ಯಾಯವಾದಿ ಪಿ.ಶಂಕರಪ್ಪ, ಸ್ವಾತಂತ್ರ್ಯ ಸೇನಾನಿ ಕಾ.ಎಚ್.ಮುಗುವಾಳಪ್ಪ ಅಭಿಮಾನಿ ಬಳಗದ ಸಂಚಾಲಕ ಎಸ್.ರುದ್ರಾರಾಧ್ಯ ಮುಂತಾದವರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೊಡ್ಡಬಳ್ಳಾಪುರ: </strong>ಪ್ರಸ್ತುತ ಪ್ರಜಾಪ್ರಭುತ್ವ ವ್ಯವಸ್ಥೆ ರಕ್ತ, ಮಾಂಸ ಇಲ್ಲದ ಅಸ್ಥಿಪಂಜರದಂತಾಗಿದೆ ಎಂದು ನಿಡುಮಾಮಿಡಿ ಮಹಾ ಸಂಸ್ಥಾನದ ಮಠದ ಪೀಠಾಧ್ಯಕ್ಷ ವೀರಭದ್ರಚನ್ನಮಲ್ಲ ಸ್ವಾಮೀಜಿ ಹೇಳಿದರು. <br /> ನಗರದ ಪುರಭವನದಲ್ಲಿ ಸ್ವಾತಂತ್ರ್ಯ ಸೇನಾನಿ ಕಾ.ಎಚ್.ಮುಗುವಾಳಪ್ಪ ಅಭಿಮಾನಿ ಬಳಗದ ವತಿಯಿಂದ ನಡೆದ ವಿಚಾರ ಸಂಕಿರಣದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು.<br /> <br /> ಪ್ರಜಾಪ್ರಭುತ್ವ ವ್ಯವಸ್ಥೆ ಕೇವಲ ಬಂಡವಾಳ ಶಾಹಿಗಳ ಪರವಾಗಿದೆ. ಉಗ್ರವಾದ, ಕೋಮುವಾದ ಪ್ರಬಲವಾಗಿ ಬೆಳೆಯುತ್ತಿರುವ ಇಂದಿನ ದಿನಗಳಲ್ಲಿ ಪ್ರಜಾಪ್ರಭುತ್ವ ಆಡಳಿತ ಮೂಲೆಗುಂಪಾಗುತ್ತಿದೆ. ಪ್ರಧಾನ ಮಂತ್ರಿಗಳು ತಾವು ಮಾತ್ರ ಪ್ರಾಮಾಣಿಕರು ಎಂದು ಹೇಳಿಕೊಂಡು ತಿರುಗಾಡಿದರೆ ಪ್ರಯೋಜನ ಇಲ್ಲ. <br /> <br /> ಸಂಪೂರ್ಣ ಭ್ರಷ್ಟಾಚಾರವನ್ನು ತಡೆಯಲು ಸಾಧ್ಯವಾಗವ ರೀತಿ ಕ್ರಮಕೈಗೊಳ್ಳಬೇಕು ಎಂದರು.<br /> ನಮ್ಮಲ್ಲಿ ಕಿಸೆಗಳ್ಳರಿಗಿಂತ ದರೋಡೆಕೋರರೇ ಹೆಚ್ಚಾಗಿದ್ದಾರೆ. ಸ್ವಜನ ಪಕ್ಷಪಾತ, ಜಾತಿವಾದದಿಂದಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ವಿಕೃತವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇವತ್ತಿಗೂ ವಂಶಪರಂಪರೆ ಆಡಳಿತವೆ ನಡೆಯುತ್ತಿದೆ. ಜಾತಿವಾದ ಇಂದಿಗೂ ಮೇರೆ ಮೀರಿ ಬೆಳೆಯುತ್ತಿದೆ. <br /> <br /> ಸ್ವಾತಂತ್ರ್ಯ ಬಂದು 60 ದಶಕಗಳು ಕಳೆದಿದ್ದರು ಬಹುಸಂಖ್ಯಾತ ಜನರ ಆಸೆಗಳು ಈಡೇರುವ ಕಾಲ ಬಂದಿಲ್ಲ. ನಮ್ಮ ಆಡಳಿತಗಾರರಿಗೆ ಜನರ ಪ್ರಾಥಮಿಕ ಅಗತ್ಯಗಳನ್ನು ಪೂರೈಸಲು ಆಸಕ್ತಿ ಇಲ್ಲದಾಗಿದೆ ಎಂದರು.<br /> ಯುವ ಜನತೆಯಲ್ಲಿ ದೇಶವನ್ನು ಬದಲಾವಣೆಯ ದಿಕ್ಕಿನಡೆಗೆ ಕೊಂಡೊಯ್ಯುವ ಶಕ್ತಿ ಇದೆ.<br /> <br /> ಎಂದು ಅವರು ಆಶಾಭಾವ ವ್ಯಕ್ತಪಡಿಸಿದರು. ಅಭಿಮಾನಿ ಬಳಗವನ್ನು ಕಟ್ಟುವುದು ಹಣಕ್ಕಾಗಿ ಎನ್ನುವ ಇವತ್ತಿನ ದಿನಗಳಲ್ಲೂ ಸ್ವಾತಂತ್ರ್ಯ ಸೇನಾನಿಯೊಬ್ಬರ ಅಭಿಮಾನಿ ಬಳಗ ಇರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. <br /> <br /> ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಮಾಜಿ ಶಾಸಕ ಸು.ರಂ.ರಾಮಯ್ಯ ಮಾತನಾಡಿ, ಇವತ್ತಿನ ಆಡಳಿತ ನೋಡಿದರೆ. ಭ್ರಷ್ಟಾಚಾರದಿಂದಾಗಿ ವಿಶ್ವ ಮಟ್ಟದಲ್ಲಿ ದೇಶದ ಹಿರಿಮೆ ಕುಸಿಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. <br /> <br /> ವಿಚಾರ ಸಂಕಿರಣದಲ್ಲಿ ಸಿಪಿಐ(ಎಂ) ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಜಿ.ಎನ್.ನಾಗರಾಜ್ , ಪ್ರಜಾಪ್ರಭುತ್ವ ಬಿಕ್ಕಟ್ಟು ಮತ್ತು ಮೌಲ್ಯಗಳು ಕುರಿತು ಮಾತನಾಡಿದರು. ಮುಖ್ಯಅತಿಥಿಗಳಾಗಿ ಕೊಂಗಾಡಿಯಪ್ಪ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಪ್ರೊ.ಚಂದ್ರಪ್ಪ, ಹಿರಿಯ ನ್ಯಾಯವಾದಿ ಪಿ.ಶಂಕರಪ್ಪ, ಸ್ವಾತಂತ್ರ್ಯ ಸೇನಾನಿ ಕಾ.ಎಚ್.ಮುಗುವಾಳಪ್ಪ ಅಭಿಮಾನಿ ಬಳಗದ ಸಂಚಾಲಕ ಎಸ್.ರುದ್ರಾರಾಧ್ಯ ಮುಂತಾದವರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>