<p><strong>ಹೊಸಪೇಟೆ:</strong> ಇತಿಹಾಸ ಪ್ರಸಿದ್ಧ ಹಂಪಿಯ ಅಕ್ಕ-ತಂಗಿಯರ ಗುಡ್ಡದ ಒಂದು ಭಾಗ ಕುಸಿದು ಬಿದ್ದಿರುವ ಪರಿಣಾಮ ನೈಸರ್ಗಿಕ ಸೌಂದರ್ಯಕ್ಕೆ ಧಕ್ಕೆಯಾಗಿದೆ. ಕಮಲಾಪುರದಿಂದ ಹಂಪಿಗೆ ಸಾಗುವ ಮಾರ್ಗ ಕಡ್ಡಿರಾಮಪುರ ತಿರುವಿನ ಬಳಿ ಇರುವ ಪ್ರಸಿದ್ಧ ಅಕ್ಕ-ತಂಗಿಯರ ಗುಡ್ಡದ ಒಂದು ಭಾಗ ಮಧ್ಯಾಹ್ನ 1-30ರ ಸುಮಾರಿಗೆ ಕುಸಿದು ಬಿದ್ದಿದೆ. ಕೆಲ ವರ್ಷಗಳಿಂದ ಅಕ್ಕನ ಗುಡಿನಲ್ಲಿ ಬಿರುಕು ಕಾಣಿಸಿಕೊಂಡಿದ್ದು ಕೇಂದ್ರ ಮತ್ತು ರಾಜ್ಯ ಪುರಾತತ್ವ ಇಲಾಖೆಯ ನಿರ್ಲಕ್ಷ್ಯದ ಪರಿಣಾಮ ಬುಧವಾರ ಮಧ್ಯಾಹ್ನ ನೆಲಕುರುಳಿದೆ. ಯಾವುದೇ ಹಾನಿ ಸಂಭವಿಸಿಲ್ಲ.<br /> <br /> ಹಿನ್ನೆಲೆ: ವಿಜಯನಗರ ಪತನದ ನಂತರ ಅಕ್ಕ ತಂಗಿಯರಿಬ್ಬರು ವಿಜಯನಗರ ಸಾಮ್ರಾಜ್ಯ ವೀಕ್ಷಣೆಗೆ ಬಂದು ಆ ಸ್ಥಳದಲ್ಲಿ ವಿಶ್ರಾಂತಿ ಪಡೆಯುವಾಗ ಅಸುನೀಗಿದ್ದು ಕಲ್ಲಾಗಿ ಕಂಗೊಳಿಸಿದರು ಎಂದು ಜನಪದ ಕತೆಗಳಲ್ಲಿ ಉಲ್ಲೇಖವಿದೆ. ಮಾರ್ಗ ಬದಲಾವಣೆ: ಕಮಲಾಪುರದಿಂದ ಹಂಪಿಗೆ ಮಾರ್ಗದ ದಂಡೆಯಲ್ಲಿರುವ ಅಕ್ಕ-ತಂಗಿಯರ ಗುಡ್ಡದ ಒಂದು ಭಾಗ ಕುಸಿದು ಬಿದ್ದಿರುವ ಪರಿಣಾಮ ರಸ್ತೆ ಸಂಚಾರವೂ ಅಡ್ಡಿಯಾಗಿದ್ದು ಪುನಃ ಕಡ್ಡಿರಾಮಪುರ ಮಾರ್ಗವಾಗಿ ಹಂಪಿಗೆ ಬರುವ ಪ್ರವಾಸಿಗರ ಸಂಚಾರಕ್ಕೆ ಮಾರ್ಗ ಬದಲಾವಣೆ ಮಾಡಲಾಗಿದ್ದು ಗುಡ್ಡದಲ್ಲಿ ಉಳಿದಿರುವ ಮತ್ತೊಂದು ಭಾಗವೂ ಬೀಳುವ ಹಂತದಲ್ಲಿದ್ದು ಮುಂಜಾಗ್ರತಾ ಕ್ರಮವಾಗಿ ಈ ಮಾರ್ಗ ಬದಲಾವಣೆ ಮಾಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ:</strong> ಇತಿಹಾಸ ಪ್ರಸಿದ್ಧ ಹಂಪಿಯ ಅಕ್ಕ-ತಂಗಿಯರ ಗುಡ್ಡದ ಒಂದು ಭಾಗ ಕುಸಿದು ಬಿದ್ದಿರುವ ಪರಿಣಾಮ ನೈಸರ್ಗಿಕ ಸೌಂದರ್ಯಕ್ಕೆ ಧಕ್ಕೆಯಾಗಿದೆ. ಕಮಲಾಪುರದಿಂದ ಹಂಪಿಗೆ ಸಾಗುವ ಮಾರ್ಗ ಕಡ್ಡಿರಾಮಪುರ ತಿರುವಿನ ಬಳಿ ಇರುವ ಪ್ರಸಿದ್ಧ ಅಕ್ಕ-ತಂಗಿಯರ ಗುಡ್ಡದ ಒಂದು ಭಾಗ ಮಧ್ಯಾಹ್ನ 1-30ರ ಸುಮಾರಿಗೆ ಕುಸಿದು ಬಿದ್ದಿದೆ. ಕೆಲ ವರ್ಷಗಳಿಂದ ಅಕ್ಕನ ಗುಡಿನಲ್ಲಿ ಬಿರುಕು ಕಾಣಿಸಿಕೊಂಡಿದ್ದು ಕೇಂದ್ರ ಮತ್ತು ರಾಜ್ಯ ಪುರಾತತ್ವ ಇಲಾಖೆಯ ನಿರ್ಲಕ್ಷ್ಯದ ಪರಿಣಾಮ ಬುಧವಾರ ಮಧ್ಯಾಹ್ನ ನೆಲಕುರುಳಿದೆ. ಯಾವುದೇ ಹಾನಿ ಸಂಭವಿಸಿಲ್ಲ.<br /> <br /> ಹಿನ್ನೆಲೆ: ವಿಜಯನಗರ ಪತನದ ನಂತರ ಅಕ್ಕ ತಂಗಿಯರಿಬ್ಬರು ವಿಜಯನಗರ ಸಾಮ್ರಾಜ್ಯ ವೀಕ್ಷಣೆಗೆ ಬಂದು ಆ ಸ್ಥಳದಲ್ಲಿ ವಿಶ್ರಾಂತಿ ಪಡೆಯುವಾಗ ಅಸುನೀಗಿದ್ದು ಕಲ್ಲಾಗಿ ಕಂಗೊಳಿಸಿದರು ಎಂದು ಜನಪದ ಕತೆಗಳಲ್ಲಿ ಉಲ್ಲೇಖವಿದೆ. ಮಾರ್ಗ ಬದಲಾವಣೆ: ಕಮಲಾಪುರದಿಂದ ಹಂಪಿಗೆ ಮಾರ್ಗದ ದಂಡೆಯಲ್ಲಿರುವ ಅಕ್ಕ-ತಂಗಿಯರ ಗುಡ್ಡದ ಒಂದು ಭಾಗ ಕುಸಿದು ಬಿದ್ದಿರುವ ಪರಿಣಾಮ ರಸ್ತೆ ಸಂಚಾರವೂ ಅಡ್ಡಿಯಾಗಿದ್ದು ಪುನಃ ಕಡ್ಡಿರಾಮಪುರ ಮಾರ್ಗವಾಗಿ ಹಂಪಿಗೆ ಬರುವ ಪ್ರವಾಸಿಗರ ಸಂಚಾರಕ್ಕೆ ಮಾರ್ಗ ಬದಲಾವಣೆ ಮಾಡಲಾಗಿದ್ದು ಗುಡ್ಡದಲ್ಲಿ ಉಳಿದಿರುವ ಮತ್ತೊಂದು ಭಾಗವೂ ಬೀಳುವ ಹಂತದಲ್ಲಿದ್ದು ಮುಂಜಾಗ್ರತಾ ಕ್ರಮವಾಗಿ ಈ ಮಾರ್ಗ ಬದಲಾವಣೆ ಮಾಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>