<p><strong>ರೋಣ: </strong>ಒಂದು ಕಾಲದಲ್ಲಿ ಬಿಳಿ ಕುಸುಬೆಯ ಎಣ್ಣಿಯಿಲ್ಲದೆ ಜೀವನವಿಲ್ಲ ಎಂಬ ಮಾತಿತ್ತು. ಆದರೆ, ಆಧುನಿಕ ಭರಾಟೆಗೆ ಸಿಲುಕಿ ಕುಸುಬೆ ಅವಸಾನದ ಹಂತ ತಲುಪಿದೆ. ಅದರೊಂದಿಗೆ ಅನೇಕ ರೋಗಗಳಿಗೆ ತುತ್ತಾಗಿ, ಕುಸುಬೆ ಬೆಳೆ ನಾಶವಾಗುತ್ತಿರುವುದರಿಂದ ಅನ್ನದಾತ ಕಂಗಾಲಾಗಿದ್ದಾನೆ.<br /> <br /> <strong>ಕುಸುಬೆಗೆ ಹೇನು ಕಾಟ: </strong>ಪ್ರಥಮ ಹಂತದಿಂದಲೇ ಕುಸುಬೆಗೆ ಹೇನು ಪೆಡಂಭೂತವಾಗಿ ಕಾಡುತ್ತಿದೆ. ಬೆಳೆಗೆ ಆವರಿಸುವ ಹೇನುಗಳು ಕಾಂಡವನ್ನು ಮೆತ್ತಿಕೊಂಡು ಕುಸುಬೆ ಬೆಳೆಗೆ ಬೇಕಾದ ಅವಶ್ಯವಾದ ರಸವನ್ನು ಸಂಪೂರ್ಣ ಹೀರುತ್ತಿವೆ. ಇದರಿಂದ ಎಲೆಗಳು ಬಾಡಿದಂತಾಗಿ ಮುದುರಿಕೊಳ್ಳುತ್ತಿವೆ. ಪ್ರಾಥಮಿಕ ಹಂತದಲ್ಲಿಯೇ ಕುಸುಬೆ ಸಸಿಗಳು ಸತ್ತು ಹೋಗುತ್ತಿವೆ.<br /> <br /> <strong>ಎಲೆ ತಿನ್ನುವ ಹುಳುವಿನ ಕಾಟ:</strong> ಹೇನಿನ ಕಾಟಕ್ಕೆ ಸಿಲುಕಿ ನರಳುತ್ತಿರುವಾಗಲೇ, ಕುಸುಬೆಗೆ ಎಲೆ ತಿನ್ನುವ ಹುಳುವಿನ ಕಾಟ ಪ್ರಾರಂಭವಾಗಿದೆ. ಈ ಕೀಟವು ಸಸಿ, ಎಲೆಗಳನ್ನು ಮತ್ತು ದೇಟನ್ನು ತಿಂದು ಕುಸುಬೆ ಬೆಳೆಯನ್ನು ನಾಶಪಡಿಸುತ್ತಿವೆ.<br /> <br /> <strong>ತೊಂಡಿಲುಗಳಿಗೆ ಕೊರಕ ಕೀಟ:</strong> ಪ್ರಥಮ ಹಂತದಲ್ಲಿ ಒಂದೊಂದಾಗಿ ಬಿಡುತ್ತಿರುವ ತೊಂಡಿಲುಗಳಿಗೆ ಕೊರಕ ಕೀಟ ಶತ್ರುವಾಗಿ ಪರಿಣಮಿಸಿದೆ. ಈ ಕೀಟಗಳು ಕುಸುಬೆಯ ತೊಂಡಲನ್ನು ಕೊರೆಯುತ್ತಿರುವುದರಿಂದ ರೈತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. <br /> <br /> <strong>ರೈತರಿಗೆ ಹಾನಿ ಕಟ್ಟಿಟ್ಟ ಬುತ್ತಿ: </strong>ಹೀಗೆ ಹಲವು ರೋಗಗಳು ಕುಸುಬೆ ಬೆಳೆಗೆ ಆವರಿಸುತ್ತಿರುವುದರಿಂದ ಶೇ 30 ರಿಂದ 40ರಷ್ಟು ಬೆಳೆ ಹಾನಿಯನ್ನು ರೈತ ಅನುಭವಿಸಬೇಕಾಗಿದೆ. ಹಣ, ಶ್ರಮ, ವ್ಯರ್ಥವಾಗುತ್ತಿದೆ.<br /> <br /> ಒಂದು ಕಾಲದಲ್ಲಿ ಎಣ್ಣೆ ತಯಾರಿಕೆಯಲ್ಲಿ ರಾಜನಾಗಿ ಮೆರೆದಿದ್ದ ಕುಸುಬೆ ಸ್ಥಾನದಲ್ಲಿ ಈಗ ಬೇರೆ ಎಣ್ಣೆಕಾಳುಗಳು ಮೆರೆಯುತ್ತಿವೆ. ಸಂಕಷ್ಟದಲ್ಲಿರುವ ಕುಸುಬೆ ಬೆಳೆಗಾರರ ನೆರವಿಗೆ ಕೃಷಿ ಇಲಾಖೆ ಸಹಕಾರ, ಮಾರ್ಗದರ್ಶನ ನೀಡುವ ಅವಶ್ಯಕತೆ ಇದೆ.<br /> <br /> <strong>ರೈತರು ಏನಂತಾರೆ? </strong>ಮೊದಲು ಒಂದು ವರ್ಷಕ್ಕಾಗುಷ್ಟು, ಮನಿಗೆ ಬೇಕಾಗುಷ್ಟು ಕುಸುಬೆ ಎಣ್ಣೆ ಮಾಡಿಕೊಳ್ತಿದ್ವಿ. ಇವತ್ತಿನ ಪರಿಸ್ಥಿತಿಯಾಗ ಕುಸುಬೆಗೆ ವಿಪರೀತ ರೋಗ ಕಾಡಕತ್ಯಾವ. ಎಣ್ಣಿ ಅಲ್ಲ, ಇನ್ನೊಂದೆರಡು ವರ್ಷ ಕಳದ್ರ ಬಿತ್ತಾಕ ಬೀಜ ಸಿಗತಾವ ಇಲ್ಲ ಅನ್ನೂ ಚಿಂತಿ ಕಾಡಕತ್ತೈತಿ ಎಂದು ಅಳಲು ತೋಡಿಕೊಳ್ಳುತ್ತಾರೆ ತಾಲ್ಲೂಕಿನ ಸವಡಿ ಗ್ರಾಮದ ಪ್ರಗತಿ ಪರ ರೈತ ಭಾವಿ.<br /> <br /> <strong>ರೋಗ ಹತೋಟಿಗೆ ಕ್ರಮ: </strong>ಡೈಮಿಥೊಯೇಟ್ 30 ಇ.ಸಿ 1.7 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಬೆಳೆಗೆ ಸಿಂಪಡಿಸಬೇಕು. ಎಲೆ ತಿನ್ನುವ ಹುಳುವಿನ ಕಾಟ ತಪ್ಪಿಸಲು 0.3ಮಿ.ಲೀ ಇಂಡಾಕ್ಸಾಕಾರ್ಬ್ 15 ಇ.ಸಿ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು ಮತ್ತು ತೊಂಡಿಲು ಕೊರಕ ಹುಳು ಹತೋಟಿಗೆ ಒಂದು ಮಿ.ಲೀ. ಮೋನೋಕ್ರೊಟೋಪಾಸ್ 36 ಎಸ್.ಎಲ್ ಅಥವಾ 2 ಮಿ.ಲೀ ಕ್ವೀನಾಲ್ಫಾಸ್25 ಇಸಿ ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಬೆಳೆ ಸಿಂಪಡಣೆ ಮಾಡುವುದರಿಂದ ರೋಗವನ್ನು ಹತೋಟಿಗೆ ತರಲು ಸಾಧ್ಯ ಎಂದು ಕೃಷಿ ಸಹಾಯಕ ನಿರ್ದೇಶಕ ಎಸ್.ಎ.ಸೂಡಿಶೆಟ್ಟರ ತಿಳಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರೋಣ: </strong>ಒಂದು ಕಾಲದಲ್ಲಿ ಬಿಳಿ ಕುಸುಬೆಯ ಎಣ್ಣಿಯಿಲ್ಲದೆ ಜೀವನವಿಲ್ಲ ಎಂಬ ಮಾತಿತ್ತು. ಆದರೆ, ಆಧುನಿಕ ಭರಾಟೆಗೆ ಸಿಲುಕಿ ಕುಸುಬೆ ಅವಸಾನದ ಹಂತ ತಲುಪಿದೆ. ಅದರೊಂದಿಗೆ ಅನೇಕ ರೋಗಗಳಿಗೆ ತುತ್ತಾಗಿ, ಕುಸುಬೆ ಬೆಳೆ ನಾಶವಾಗುತ್ತಿರುವುದರಿಂದ ಅನ್ನದಾತ ಕಂಗಾಲಾಗಿದ್ದಾನೆ.<br /> <br /> <strong>ಕುಸುಬೆಗೆ ಹೇನು ಕಾಟ: </strong>ಪ್ರಥಮ ಹಂತದಿಂದಲೇ ಕುಸುಬೆಗೆ ಹೇನು ಪೆಡಂಭೂತವಾಗಿ ಕಾಡುತ್ತಿದೆ. ಬೆಳೆಗೆ ಆವರಿಸುವ ಹೇನುಗಳು ಕಾಂಡವನ್ನು ಮೆತ್ತಿಕೊಂಡು ಕುಸುಬೆ ಬೆಳೆಗೆ ಬೇಕಾದ ಅವಶ್ಯವಾದ ರಸವನ್ನು ಸಂಪೂರ್ಣ ಹೀರುತ್ತಿವೆ. ಇದರಿಂದ ಎಲೆಗಳು ಬಾಡಿದಂತಾಗಿ ಮುದುರಿಕೊಳ್ಳುತ್ತಿವೆ. ಪ್ರಾಥಮಿಕ ಹಂತದಲ್ಲಿಯೇ ಕುಸುಬೆ ಸಸಿಗಳು ಸತ್ತು ಹೋಗುತ್ತಿವೆ.<br /> <br /> <strong>ಎಲೆ ತಿನ್ನುವ ಹುಳುವಿನ ಕಾಟ:</strong> ಹೇನಿನ ಕಾಟಕ್ಕೆ ಸಿಲುಕಿ ನರಳುತ್ತಿರುವಾಗಲೇ, ಕುಸುಬೆಗೆ ಎಲೆ ತಿನ್ನುವ ಹುಳುವಿನ ಕಾಟ ಪ್ರಾರಂಭವಾಗಿದೆ. ಈ ಕೀಟವು ಸಸಿ, ಎಲೆಗಳನ್ನು ಮತ್ತು ದೇಟನ್ನು ತಿಂದು ಕುಸುಬೆ ಬೆಳೆಯನ್ನು ನಾಶಪಡಿಸುತ್ತಿವೆ.<br /> <br /> <strong>ತೊಂಡಿಲುಗಳಿಗೆ ಕೊರಕ ಕೀಟ:</strong> ಪ್ರಥಮ ಹಂತದಲ್ಲಿ ಒಂದೊಂದಾಗಿ ಬಿಡುತ್ತಿರುವ ತೊಂಡಿಲುಗಳಿಗೆ ಕೊರಕ ಕೀಟ ಶತ್ರುವಾಗಿ ಪರಿಣಮಿಸಿದೆ. ಈ ಕೀಟಗಳು ಕುಸುಬೆಯ ತೊಂಡಲನ್ನು ಕೊರೆಯುತ್ತಿರುವುದರಿಂದ ರೈತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. <br /> <br /> <strong>ರೈತರಿಗೆ ಹಾನಿ ಕಟ್ಟಿಟ್ಟ ಬುತ್ತಿ: </strong>ಹೀಗೆ ಹಲವು ರೋಗಗಳು ಕುಸುಬೆ ಬೆಳೆಗೆ ಆವರಿಸುತ್ತಿರುವುದರಿಂದ ಶೇ 30 ರಿಂದ 40ರಷ್ಟು ಬೆಳೆ ಹಾನಿಯನ್ನು ರೈತ ಅನುಭವಿಸಬೇಕಾಗಿದೆ. ಹಣ, ಶ್ರಮ, ವ್ಯರ್ಥವಾಗುತ್ತಿದೆ.<br /> <br /> ಒಂದು ಕಾಲದಲ್ಲಿ ಎಣ್ಣೆ ತಯಾರಿಕೆಯಲ್ಲಿ ರಾಜನಾಗಿ ಮೆರೆದಿದ್ದ ಕುಸುಬೆ ಸ್ಥಾನದಲ್ಲಿ ಈಗ ಬೇರೆ ಎಣ್ಣೆಕಾಳುಗಳು ಮೆರೆಯುತ್ತಿವೆ. ಸಂಕಷ್ಟದಲ್ಲಿರುವ ಕುಸುಬೆ ಬೆಳೆಗಾರರ ನೆರವಿಗೆ ಕೃಷಿ ಇಲಾಖೆ ಸಹಕಾರ, ಮಾರ್ಗದರ್ಶನ ನೀಡುವ ಅವಶ್ಯಕತೆ ಇದೆ.<br /> <br /> <strong>ರೈತರು ಏನಂತಾರೆ? </strong>ಮೊದಲು ಒಂದು ವರ್ಷಕ್ಕಾಗುಷ್ಟು, ಮನಿಗೆ ಬೇಕಾಗುಷ್ಟು ಕುಸುಬೆ ಎಣ್ಣೆ ಮಾಡಿಕೊಳ್ತಿದ್ವಿ. ಇವತ್ತಿನ ಪರಿಸ್ಥಿತಿಯಾಗ ಕುಸುಬೆಗೆ ವಿಪರೀತ ರೋಗ ಕಾಡಕತ್ಯಾವ. ಎಣ್ಣಿ ಅಲ್ಲ, ಇನ್ನೊಂದೆರಡು ವರ್ಷ ಕಳದ್ರ ಬಿತ್ತಾಕ ಬೀಜ ಸಿಗತಾವ ಇಲ್ಲ ಅನ್ನೂ ಚಿಂತಿ ಕಾಡಕತ್ತೈತಿ ಎಂದು ಅಳಲು ತೋಡಿಕೊಳ್ಳುತ್ತಾರೆ ತಾಲ್ಲೂಕಿನ ಸವಡಿ ಗ್ರಾಮದ ಪ್ರಗತಿ ಪರ ರೈತ ಭಾವಿ.<br /> <br /> <strong>ರೋಗ ಹತೋಟಿಗೆ ಕ್ರಮ: </strong>ಡೈಮಿಥೊಯೇಟ್ 30 ಇ.ಸಿ 1.7 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಬೆಳೆಗೆ ಸಿಂಪಡಿಸಬೇಕು. ಎಲೆ ತಿನ್ನುವ ಹುಳುವಿನ ಕಾಟ ತಪ್ಪಿಸಲು 0.3ಮಿ.ಲೀ ಇಂಡಾಕ್ಸಾಕಾರ್ಬ್ 15 ಇ.ಸಿ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು ಮತ್ತು ತೊಂಡಿಲು ಕೊರಕ ಹುಳು ಹತೋಟಿಗೆ ಒಂದು ಮಿ.ಲೀ. ಮೋನೋಕ್ರೊಟೋಪಾಸ್ 36 ಎಸ್.ಎಲ್ ಅಥವಾ 2 ಮಿ.ಲೀ ಕ್ವೀನಾಲ್ಫಾಸ್25 ಇಸಿ ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಬೆಳೆ ಸಿಂಪಡಣೆ ಮಾಡುವುದರಿಂದ ರೋಗವನ್ನು ಹತೋಟಿಗೆ ತರಲು ಸಾಧ್ಯ ಎಂದು ಕೃಷಿ ಸಹಾಯಕ ನಿರ್ದೇಶಕ ಎಸ್.ಎ.ಸೂಡಿಶೆಟ್ಟರ ತಿಳಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>