<p><strong>ಚೆನ್ನೈ, (ಪಿಟಿಐ):</strong> ಭಾರತ ಮತ್ತು ರಷ್ಯಾ ಜಂಟಿಯಾಗಿ ಕೈಗೊಂಡಿರುವ ಕೂಡುಂಕುಳಂ ಪರಮಾಣು ವಿದ್ಯುತ್ ಘಟಕದಲ್ಲಿ 150 ರಷ್ಯಾ ವಿಜ್ಞಾನಿಗಳು ಕೆಲಸ ಮಾಡುತ್ತಿದ್ದು, ಯೋಜನೆ ವಿರೋಧಿಸಿ ನಡೆದಿರುವ ಪ್ರತಿಭಟನೆಯಿಂದ ಅವರಲ್ಲಿ ಯಾರೂ ಕೆಲಸ ತೊರೆದಿಲ್ಲ ಎಂದು ಯೋಜನೆಯ ಉನ್ನತ ಅಧಿಕಾರಿಗಳು ಸ್ಪಷ್ಟನೆ ನಿಡಿದ್ದಾರೆ.</p>.<p>`ಯಾವೊಬ್ಬ ರಷ್ಯಾ ವಿಜ್ಞಾನಿಗಳು ಮರಳಿ ಹೋಗಿಲ್ಲ. ಅವರು ನಮ್ಮಂದಿಗೆ ಕೆಲಸ ಮಾಡುತ್ತಿದ್ದಾರೆ. ಘಟಕದಲ್ಲಿ 150 ರಷ್ಯಾ ವಿಜ್ಞಾನಿಗಳಿದ್ದು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಕೂಡುಂಕುಳಂ ಅಣುಶಕ್ತಿ ಘಟಕ (ಕೆಎನ್ಪಿಪಿ) ದ ಯೋಜನಾ ನಿರ್ದೇಶಕ ಎಂ. ಕಾಶಿನಾಥ ಬಾಲಾಜಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.</p>.<p>`ಇಲ್ಲಿ ಕೆಲಸ ಮಾಡುತ್ತಿರುವ ರಷ್ಯಾ ವಿಜ್ಞಾನಿಗಳಲ್ಲಿ ಕೆಲವರು ಒಬ್ಬರೇ ವಾಸಿಸುತ್ತಿದ್ದರೆ, ಕೆಲವರು ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ಇತರರು ದೀರ್ಘ ಮತ್ತು ಅಲ್ಪಾವಧಿ ಕಾರ್ಯಭಾರದ ಮೇಲೆ ಕೆಲಸ ಮಾಡುತ್ತಿದ್ದಾರೆ~ ಎಂದು ಅವರು ಹೇಳಿದರು.</p>.<p>ಯೋಜನೆ ವಿರೋಧಿಸಿ ನಡೆದಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಕೆಲ ರಷ್ಯಾ ವಿಜ್ಞಾನಿಗಳು ಯೋಜನೆ ಬಿಟ್ಟು ಮರಳಿದ್ದಾರೆ ಎಂಬ ಮಾಧ್ಯಮ ವರದಿ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು ಈ ಉತ್ತರ ನೀಡಿದರು.<br /> ಯೋಜನೆಯ ಮೊದಲ ಘಟಕದ ಶೇ 99 ಕೆಲಸ ಮುಗಿದಿದ್ದು ಈ ವರ್ಷದ ಡಿಸೆಂಬರ್ನಲ್ಲಿ ವಿದ್ಯುತ್ ಉತ್ಪಾದನೆ ಆರಂಭವಾಗಲಿದೆ. ಎರಡನೇ ಘಟಕದ ಶೇ 93 ಕಾರ್ಯ ಪೂರ್ಣಗೊಂಡಿದ್ದು ಮುಂದಿನ ಆಗಸ್ಟ್ನಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ, (ಪಿಟಿಐ):</strong> ಭಾರತ ಮತ್ತು ರಷ್ಯಾ ಜಂಟಿಯಾಗಿ ಕೈಗೊಂಡಿರುವ ಕೂಡುಂಕುಳಂ ಪರಮಾಣು ವಿದ್ಯುತ್ ಘಟಕದಲ್ಲಿ 150 ರಷ್ಯಾ ವಿಜ್ಞಾನಿಗಳು ಕೆಲಸ ಮಾಡುತ್ತಿದ್ದು, ಯೋಜನೆ ವಿರೋಧಿಸಿ ನಡೆದಿರುವ ಪ್ರತಿಭಟನೆಯಿಂದ ಅವರಲ್ಲಿ ಯಾರೂ ಕೆಲಸ ತೊರೆದಿಲ್ಲ ಎಂದು ಯೋಜನೆಯ ಉನ್ನತ ಅಧಿಕಾರಿಗಳು ಸ್ಪಷ್ಟನೆ ನಿಡಿದ್ದಾರೆ.</p>.<p>`ಯಾವೊಬ್ಬ ರಷ್ಯಾ ವಿಜ್ಞಾನಿಗಳು ಮರಳಿ ಹೋಗಿಲ್ಲ. ಅವರು ನಮ್ಮಂದಿಗೆ ಕೆಲಸ ಮಾಡುತ್ತಿದ್ದಾರೆ. ಘಟಕದಲ್ಲಿ 150 ರಷ್ಯಾ ವಿಜ್ಞಾನಿಗಳಿದ್ದು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಕೂಡುಂಕುಳಂ ಅಣುಶಕ್ತಿ ಘಟಕ (ಕೆಎನ್ಪಿಪಿ) ದ ಯೋಜನಾ ನಿರ್ದೇಶಕ ಎಂ. ಕಾಶಿನಾಥ ಬಾಲಾಜಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.</p>.<p>`ಇಲ್ಲಿ ಕೆಲಸ ಮಾಡುತ್ತಿರುವ ರಷ್ಯಾ ವಿಜ್ಞಾನಿಗಳಲ್ಲಿ ಕೆಲವರು ಒಬ್ಬರೇ ವಾಸಿಸುತ್ತಿದ್ದರೆ, ಕೆಲವರು ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ಇತರರು ದೀರ್ಘ ಮತ್ತು ಅಲ್ಪಾವಧಿ ಕಾರ್ಯಭಾರದ ಮೇಲೆ ಕೆಲಸ ಮಾಡುತ್ತಿದ್ದಾರೆ~ ಎಂದು ಅವರು ಹೇಳಿದರು.</p>.<p>ಯೋಜನೆ ವಿರೋಧಿಸಿ ನಡೆದಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಕೆಲ ರಷ್ಯಾ ವಿಜ್ಞಾನಿಗಳು ಯೋಜನೆ ಬಿಟ್ಟು ಮರಳಿದ್ದಾರೆ ಎಂಬ ಮಾಧ್ಯಮ ವರದಿ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು ಈ ಉತ್ತರ ನೀಡಿದರು.<br /> ಯೋಜನೆಯ ಮೊದಲ ಘಟಕದ ಶೇ 99 ಕೆಲಸ ಮುಗಿದಿದ್ದು ಈ ವರ್ಷದ ಡಿಸೆಂಬರ್ನಲ್ಲಿ ವಿದ್ಯುತ್ ಉತ್ಪಾದನೆ ಆರಂಭವಾಗಲಿದೆ. ಎರಡನೇ ಘಟಕದ ಶೇ 93 ಕಾರ್ಯ ಪೂರ್ಣಗೊಂಡಿದ್ದು ಮುಂದಿನ ಆಗಸ್ಟ್ನಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>