<p>ಮಡಿಕೇರಿ: ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲೇಮಾಡುವಿನಲ್ಲಿ ಇರುವ ಕೂಲಿ ಕಾರ್ಮಿಕರ ಮಕ್ಕಳ ಖಾಸಗಿ ಪಾಲನಾ ಕೇಂದ್ರಕ್ಕೆ ಪೌಷ್ಟಿಕ ಆಹಾರ ಪೂರೈಸುವ ವಿಷಯವು ಮಂಗಳವಾರ ಇಲ್ಲಿ ನಡೆದ ಮಡಿಕೇರಿ ತಾ.ಪಂ. ಮಾಸಿಕ ಸಭೆಯಲ್ಲಿ ತೀವ್ರ ಚರ್ಚೆಯಾಯಿತು. <br /> <br /> ಮೊದಲು ವಿಷಯ ಪ್ರಸ್ತಾಪಿಸಿದ ಸದಸ್ಯ ಮಂಞರ ಸಾಬು ತಿಮ್ಮಯ್ಯ, ಈ ಕೇಂದ್ರದಲ್ಲಿ 35 ಮಕ್ಕಳಿದ್ದು, ಶಿಶು ಪಾಲನಾ ಕಾರ್ಯಕ್ರಮದಡಿ ನೀಡಲಾಗುವ ಪೌಷ್ಟಿಕ ಆಹಾರವನ್ನು ಈ ಮಕ್ಕಳಿಗೆ ನೀಡಲು ನಿರಾಕರಿಸಲಾಗುತ್ತಿದೆ. ಈ ಮಕ್ಕಳು ದೇಶದ ಪ್ರಜೆಗಳಲ್ಲವೇ? ಇವರಿಗೆ ಪೌಷ್ಟಿಕ ಆಹಾರ ಏಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು. <br /> <br /> ಇದಕ್ಕೆ ಉತ್ತರಿಸಿದ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಎಂ.ಸತ್ಯನಾರಾಯಣ ಅವರು, `ಈ ಸ್ಥಳದಲ್ಲಿ (ಪೈಸಾರಿ) ಈ ಕುಟುಂಬಗಳು ಅಕ್ರಮವಾಗಿ ವಾಸವಿದ್ದಾರೆ. ಇವರ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬಾರದು~ ಎಂದು ಸ್ಥಳೀಯ ಹೊದ್ದೂರು ಗ್ರಾಮ ಪಂಚಾಯಿತಿಯು ಕೈಗೊಂಡ ಠರಾವುನ್ನು ಓದಿ ಹೇಳಿದರು.<br /> <br /> ಈ ಉತ್ತರದಿಂದ ಕೆಂಡಾಮಂಡಲರಾದ ಸದಸ್ಯ ನೆರವಂಡ ಉಮೇಶ್ ಮಾತನಾಡಿ, `ಹಾಗಿದ್ದರೆ ತಕ್ಷಣವೇ ಅವರಿಂದ ಕಂದಾಯ ಕಟ್ಟಿಸಿಕೊಂಡು ಜಾಗವನ್ನು ಸಕ್ರಮವಾಗಿ ಮಾಡಿಕೊಡಿ. ಕಂದಾಯ ಕಟ್ಟುವಂತೆ ಹಾಗೂ ಕಂದಾಯ ಕಟ್ಟಲು ಬರುವವರನ್ನು ವಾಪಸ್ ಕಳುಹಿಸದೇ ಕಟ್ಟಿಸಿಕೊಳ್ಳುವಂತೆ ಗ್ರಾ.ಪಂ.ಗೆ ಸೂಚನೆ ನೀಡಿ. ಈ ವಿಷಯದಲ್ಲಿ ಪಕ್ಷಭೇದ ಮರೆತು ತಾ.ಪಂ. ಎಲ್ಲ ಸದಸ್ಯರೂ ಸರ್ವಾನುಮತದಿಂದ ಈ ನಿರ್ಣಯವನ್ನು ಕೈಗೊಳ್ಳಬೇಕು~ ಎಂದು ಒತ್ತಾಯಿಸಿದರು.<br /> <br /> ಅವರ ಈ ಪ್ರಸ್ತಾವನೆಗೆ ಕೆಲವು ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಸ್ಥಳೀಯ ಗ್ರಾಮ ಪಂಚಾಯಿತಿಯ ನಿರ್ಣಯದ ವಿರುದ್ಧ ಹೋಗುವುದು ಬೇಡ ಎಂದರು.<br /> <br /> ಇದಕ್ಕೆ ಪ್ರತಿಕ್ರಿಯಿಸಿದ ಉಮೇಶ್, `ಗ್ರಾ.ಪಂ. ಕೈಗೊಂಡಿರುವ ಈ ನಿರ್ಧಾರವನ್ನು ತಾ.ಪಂ. ಪ್ರಶ್ನಿಸಬಹುದು. ಇದಲ್ಲದೇ, ಮಕ್ಕಳಿಗೆ ಆಹಾರ ಪೂರೈಸುವ ಸಂಬಂಧ ನಿರ್ದೇಶನವನ್ನೂ ಕೊಡಬಹುದು~ ಎಂದರು.<br /> <br /> `ಸ್ಥಳೀಯ ಮಟ್ಟದಲ್ಲಿ ರಾಜಕೀಯ ಒತ್ತಡ ಸಾಕಷ್ಟಿದೆ. ನಾನೊಂದು ಪಕ್ಷದ ಗುಲಾಮ, ಮತ್ತೊಬ್ಬ ಇನ್ನೊಂದು ಪಕ್ಷದ ಗುಲಾಮ ಹೀಗಾಗಿ ಅಲ್ಲಿ ನಿರ್ಣಯಗೊಳ್ಳಲು ಸಾಧ್ಯವಾಗದು~ ಎಂದು ಹತಾಶದಿಂದ ನುಡಿದರು.<br /> <br /> ಬಡವರಿಗೆ ನಿವೇಶನ ನೀಡಲು ಸರ್ಕಾರವು ಆಶ್ರಯ ಸೇರಿದಂತೆ ಹಲವು ಯೋಜನೆಗಳನ್ನು ಹಮ್ಮಿಕೊಳ್ಳುತ್ತದೆ. ಇಂತಹದೊಂದು ಯೋಜನೆಯಡಿ ಏಕೆ ಈ ಬಡವರಿಗೆ ಅವರ ಜಾಗವನ್ನು ಅವರ ಹೆಸರಿಗೆ ಮಾಡಿಕೊಡಬಾರದು ಎಂದು ಸಾಬು ತಿಮ್ಮಯ್ಯ ಪ್ರಶ್ನಿಸಿದರು.<br /> <br /> ಅಲ್ಲಿ ವಾಸವಿರುವ ಬಹಳಷ್ಟು ಜನರಲ್ಲಿ ಪರಿಶಿಷ್ಟ ಜಾತಿ/ಪಂಗಡಕ್ಕೆ ಸೇರಿದವರಾಗಿದ್ದಾರೆ. ಸುಮಾರು 310 ಕುಟುಂಬಗಳು ವಾಸ ಇವೆ. ಇವರಿಗೆ ಮೂಲಸೌಕರ್ಯ ಕಲ್ಪಿಸಿಕೊಡುವ ವ್ಯವಸ್ಥೆಯಾಗಬೇಕು ಎಂದು ಒತ್ತಾಯಿಸಿದರು.<br /> <br /> ಮಧ್ಯೆಪ್ರವೇಶಿಸಿದ ನೆರವಂಡ ಉಮೇಶ್, ಮಕ್ಕಳಿಗೆ ಒಂದುಹೊತ್ತಿನ ಊಟ ನೀಡಲು ನಾವು ಇಷ್ಟೊಂದು ಚರ್ಚೆ ನಡೆಸುವ ಅಗತ್ಯವಿದೆಯೇ? ಎಂದು ಪ್ರಶ್ನಿಸಿದರು.<br /> <br /> ಮಕ್ಕಳಿಗೆ ಆಹಾರ ಒದಗಿಸುವುದರ ಜೊತೆಗೆ ಪಾಲೆಮಾಡು ಪೈಸಾರಿಗೆ ಅಂಗನವಾಡಿ ಕೇಂದ್ರವನ್ನು ಮಂಜೂರು ಮಾಡಬೇಕು ಎಂದು ಅವರು ಒತ್ತಾಯಿಸಿದರು.<br /> <br /> ಇದರ ಬಗ್ಗೆ ಶೀಘ್ರದಲ್ಲಿ ತೀರ್ಮಾನ ಕೈಗೊಳ್ಳದಿದ್ದರೆ ಆ ಕುಟುಂಬಗಳು ಹಾಗೂ ಅವರ ಮಕ್ಕಳು ಜಿ.ಪಂ. ಹಾಗೂ ಜಿಲ್ಲಾಧಿಕಾರಿ ಎದುರು ಉಪವಾಸ ಪ್ರತಿಭಟನೆ ನಡೆಸಲಿದ್ದಾರೆ. ಲೋಕಾಯುಕ್ತಕ್ಕೂ ದೂರು ನೀಡಲಿದ್ದೇವೆ. ಇದಕ್ಕೆ ಅವಕಾಶ ಕೊಡಬೇಡಿ, ನಮ್ಮ ತಾಳ್ಮೆ ಪರೀಕ್ಷಿಸಬೇಡಿ ಎಂದು ಸವಾಲೆಸೆದರು. <br /> <br /> ಸಾಬು ತಿಮ್ಮಯ್ಯ ಮಾತನಾಡಿ, ಕಳೆದ ಸಭೆಯಲ್ಲಿ ಜಿ.ಪಂ.ಅಧ್ಯಕ್ಷರು ಈ ಪೈಸಾರಿಯಲ್ಲಿರುವವರೆಲ್ಲ ಕೇರಳದಿಂದ ವಲಸೆ ಬಂದಿರುವವರೆಂಬ ಬೇಜವಾಬ್ದಾರಿಯ ಹೇಳಿಕೆ ನೀಡಿದ್ದರು ಎಂದು ಆರೋಪಿಸಿದ್ದರು. ಆದರೆ ಇವರೆಲ್ಲ ಸ್ಥಳೀಯರೆ ಎಂಬುದಕ್ಕೆ ಪೂರಕವಾದ ಅಲ್ಲಿನ ನಿವಾಸಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು. <br /> <br /> `ಇಲ್ಲಿರುವವರೆಲ್ಲ ಜಿಲ್ಲೆಯ ಬೇರೆ ಬೇರೆ ಭಾಗಗಳಲ್ಲಿ ವಾಸವಿದ್ದು, ಇದೀಗ ಇಲ್ಲಿ ವಾಸ್ತವ್ಯ ಹೂಡಿದ್ದಾರೆ. ಇವರೆಲ್ಲರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಕೂಡ ಸೇರ್ಪಡೆಗೊಂಡಿದೆ~ ಎಂದರು. <br /> <br /> ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಾದಪ್ಪ ಮಾತನಾಡಿ, ತಾ.ಪಂ. ವತಿಯಿಂದ ಸೂಕ್ತ ನಿರ್ದೇಶನ ದೊರೆತರೆ ಪಾಲೇಮಾಡು ಮಕ್ಕಳಿಗೆ ಪೌಷ್ಠಿಕ ಆಹಾರ ಪೂರೈಸಲು ಕ್ರಮಕೈಗೊಳ್ಳಲಾಗುವುದು ಎಂದು ಉತ್ತರಿಸಿದರು. <br /> <br /> ಕಾರ್ಯನಿರ್ವಾಹಕ ಅಧಿಕಾರಿ ಎಂ. ಸತ್ಯನಾರಾಯಣ ಮಾತನಾಡಿ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮುಂದಿನ ಕ್ರಮಕೈಗೊಳ್ಳೋಣ ಎಂದು ಚರ್ಚೆಗೆ ತೆರೆ ಎಳೆದರು.<br /> <br /> ಸದಸ್ಯರಾದ ಬೊಳ್ಳಚೆಟ್ಟಿರ ಸುರೇಶ್, ಕೆ.ಡಿ.ಅನಿತಾ (ಬೇಬಿ), ವಿ.ವಿ.ಹರೀಶ್ಕುಮಾರ್ ಚರ್ಚೆಯಲ್ಲಿ ಭಾಗವಹಿಸಿದ್ದರು. ಉಪಾಧ್ಯಕ್ಷೆ ರೇಣುಕಾ ಚೆನ್ನಿಗಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರತೀಜಾ ಅಚ್ಚಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಡಿಕೇರಿ: ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲೇಮಾಡುವಿನಲ್ಲಿ ಇರುವ ಕೂಲಿ ಕಾರ್ಮಿಕರ ಮಕ್ಕಳ ಖಾಸಗಿ ಪಾಲನಾ ಕೇಂದ್ರಕ್ಕೆ ಪೌಷ್ಟಿಕ ಆಹಾರ ಪೂರೈಸುವ ವಿಷಯವು ಮಂಗಳವಾರ ಇಲ್ಲಿ ನಡೆದ ಮಡಿಕೇರಿ ತಾ.ಪಂ. ಮಾಸಿಕ ಸಭೆಯಲ್ಲಿ ತೀವ್ರ ಚರ್ಚೆಯಾಯಿತು. <br /> <br /> ಮೊದಲು ವಿಷಯ ಪ್ರಸ್ತಾಪಿಸಿದ ಸದಸ್ಯ ಮಂಞರ ಸಾಬು ತಿಮ್ಮಯ್ಯ, ಈ ಕೇಂದ್ರದಲ್ಲಿ 35 ಮಕ್ಕಳಿದ್ದು, ಶಿಶು ಪಾಲನಾ ಕಾರ್ಯಕ್ರಮದಡಿ ನೀಡಲಾಗುವ ಪೌಷ್ಟಿಕ ಆಹಾರವನ್ನು ಈ ಮಕ್ಕಳಿಗೆ ನೀಡಲು ನಿರಾಕರಿಸಲಾಗುತ್ತಿದೆ. ಈ ಮಕ್ಕಳು ದೇಶದ ಪ್ರಜೆಗಳಲ್ಲವೇ? ಇವರಿಗೆ ಪೌಷ್ಟಿಕ ಆಹಾರ ಏಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು. <br /> <br /> ಇದಕ್ಕೆ ಉತ್ತರಿಸಿದ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಎಂ.ಸತ್ಯನಾರಾಯಣ ಅವರು, `ಈ ಸ್ಥಳದಲ್ಲಿ (ಪೈಸಾರಿ) ಈ ಕುಟುಂಬಗಳು ಅಕ್ರಮವಾಗಿ ವಾಸವಿದ್ದಾರೆ. ಇವರ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬಾರದು~ ಎಂದು ಸ್ಥಳೀಯ ಹೊದ್ದೂರು ಗ್ರಾಮ ಪಂಚಾಯಿತಿಯು ಕೈಗೊಂಡ ಠರಾವುನ್ನು ಓದಿ ಹೇಳಿದರು.<br /> <br /> ಈ ಉತ್ತರದಿಂದ ಕೆಂಡಾಮಂಡಲರಾದ ಸದಸ್ಯ ನೆರವಂಡ ಉಮೇಶ್ ಮಾತನಾಡಿ, `ಹಾಗಿದ್ದರೆ ತಕ್ಷಣವೇ ಅವರಿಂದ ಕಂದಾಯ ಕಟ್ಟಿಸಿಕೊಂಡು ಜಾಗವನ್ನು ಸಕ್ರಮವಾಗಿ ಮಾಡಿಕೊಡಿ. ಕಂದಾಯ ಕಟ್ಟುವಂತೆ ಹಾಗೂ ಕಂದಾಯ ಕಟ್ಟಲು ಬರುವವರನ್ನು ವಾಪಸ್ ಕಳುಹಿಸದೇ ಕಟ್ಟಿಸಿಕೊಳ್ಳುವಂತೆ ಗ್ರಾ.ಪಂ.ಗೆ ಸೂಚನೆ ನೀಡಿ. ಈ ವಿಷಯದಲ್ಲಿ ಪಕ್ಷಭೇದ ಮರೆತು ತಾ.ಪಂ. ಎಲ್ಲ ಸದಸ್ಯರೂ ಸರ್ವಾನುಮತದಿಂದ ಈ ನಿರ್ಣಯವನ್ನು ಕೈಗೊಳ್ಳಬೇಕು~ ಎಂದು ಒತ್ತಾಯಿಸಿದರು.<br /> <br /> ಅವರ ಈ ಪ್ರಸ್ತಾವನೆಗೆ ಕೆಲವು ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಸ್ಥಳೀಯ ಗ್ರಾಮ ಪಂಚಾಯಿತಿಯ ನಿರ್ಣಯದ ವಿರುದ್ಧ ಹೋಗುವುದು ಬೇಡ ಎಂದರು.<br /> <br /> ಇದಕ್ಕೆ ಪ್ರತಿಕ್ರಿಯಿಸಿದ ಉಮೇಶ್, `ಗ್ರಾ.ಪಂ. ಕೈಗೊಂಡಿರುವ ಈ ನಿರ್ಧಾರವನ್ನು ತಾ.ಪಂ. ಪ್ರಶ್ನಿಸಬಹುದು. ಇದಲ್ಲದೇ, ಮಕ್ಕಳಿಗೆ ಆಹಾರ ಪೂರೈಸುವ ಸಂಬಂಧ ನಿರ್ದೇಶನವನ್ನೂ ಕೊಡಬಹುದು~ ಎಂದರು.<br /> <br /> `ಸ್ಥಳೀಯ ಮಟ್ಟದಲ್ಲಿ ರಾಜಕೀಯ ಒತ್ತಡ ಸಾಕಷ್ಟಿದೆ. ನಾನೊಂದು ಪಕ್ಷದ ಗುಲಾಮ, ಮತ್ತೊಬ್ಬ ಇನ್ನೊಂದು ಪಕ್ಷದ ಗುಲಾಮ ಹೀಗಾಗಿ ಅಲ್ಲಿ ನಿರ್ಣಯಗೊಳ್ಳಲು ಸಾಧ್ಯವಾಗದು~ ಎಂದು ಹತಾಶದಿಂದ ನುಡಿದರು.<br /> <br /> ಬಡವರಿಗೆ ನಿವೇಶನ ನೀಡಲು ಸರ್ಕಾರವು ಆಶ್ರಯ ಸೇರಿದಂತೆ ಹಲವು ಯೋಜನೆಗಳನ್ನು ಹಮ್ಮಿಕೊಳ್ಳುತ್ತದೆ. ಇಂತಹದೊಂದು ಯೋಜನೆಯಡಿ ಏಕೆ ಈ ಬಡವರಿಗೆ ಅವರ ಜಾಗವನ್ನು ಅವರ ಹೆಸರಿಗೆ ಮಾಡಿಕೊಡಬಾರದು ಎಂದು ಸಾಬು ತಿಮ್ಮಯ್ಯ ಪ್ರಶ್ನಿಸಿದರು.<br /> <br /> ಅಲ್ಲಿ ವಾಸವಿರುವ ಬಹಳಷ್ಟು ಜನರಲ್ಲಿ ಪರಿಶಿಷ್ಟ ಜಾತಿ/ಪಂಗಡಕ್ಕೆ ಸೇರಿದವರಾಗಿದ್ದಾರೆ. ಸುಮಾರು 310 ಕುಟುಂಬಗಳು ವಾಸ ಇವೆ. ಇವರಿಗೆ ಮೂಲಸೌಕರ್ಯ ಕಲ್ಪಿಸಿಕೊಡುವ ವ್ಯವಸ್ಥೆಯಾಗಬೇಕು ಎಂದು ಒತ್ತಾಯಿಸಿದರು.<br /> <br /> ಮಧ್ಯೆಪ್ರವೇಶಿಸಿದ ನೆರವಂಡ ಉಮೇಶ್, ಮಕ್ಕಳಿಗೆ ಒಂದುಹೊತ್ತಿನ ಊಟ ನೀಡಲು ನಾವು ಇಷ್ಟೊಂದು ಚರ್ಚೆ ನಡೆಸುವ ಅಗತ್ಯವಿದೆಯೇ? ಎಂದು ಪ್ರಶ್ನಿಸಿದರು.<br /> <br /> ಮಕ್ಕಳಿಗೆ ಆಹಾರ ಒದಗಿಸುವುದರ ಜೊತೆಗೆ ಪಾಲೆಮಾಡು ಪೈಸಾರಿಗೆ ಅಂಗನವಾಡಿ ಕೇಂದ್ರವನ್ನು ಮಂಜೂರು ಮಾಡಬೇಕು ಎಂದು ಅವರು ಒತ್ತಾಯಿಸಿದರು.<br /> <br /> ಇದರ ಬಗ್ಗೆ ಶೀಘ್ರದಲ್ಲಿ ತೀರ್ಮಾನ ಕೈಗೊಳ್ಳದಿದ್ದರೆ ಆ ಕುಟುಂಬಗಳು ಹಾಗೂ ಅವರ ಮಕ್ಕಳು ಜಿ.ಪಂ. ಹಾಗೂ ಜಿಲ್ಲಾಧಿಕಾರಿ ಎದುರು ಉಪವಾಸ ಪ್ರತಿಭಟನೆ ನಡೆಸಲಿದ್ದಾರೆ. ಲೋಕಾಯುಕ್ತಕ್ಕೂ ದೂರು ನೀಡಲಿದ್ದೇವೆ. ಇದಕ್ಕೆ ಅವಕಾಶ ಕೊಡಬೇಡಿ, ನಮ್ಮ ತಾಳ್ಮೆ ಪರೀಕ್ಷಿಸಬೇಡಿ ಎಂದು ಸವಾಲೆಸೆದರು. <br /> <br /> ಸಾಬು ತಿಮ್ಮಯ್ಯ ಮಾತನಾಡಿ, ಕಳೆದ ಸಭೆಯಲ್ಲಿ ಜಿ.ಪಂ.ಅಧ್ಯಕ್ಷರು ಈ ಪೈಸಾರಿಯಲ್ಲಿರುವವರೆಲ್ಲ ಕೇರಳದಿಂದ ವಲಸೆ ಬಂದಿರುವವರೆಂಬ ಬೇಜವಾಬ್ದಾರಿಯ ಹೇಳಿಕೆ ನೀಡಿದ್ದರು ಎಂದು ಆರೋಪಿಸಿದ್ದರು. ಆದರೆ ಇವರೆಲ್ಲ ಸ್ಥಳೀಯರೆ ಎಂಬುದಕ್ಕೆ ಪೂರಕವಾದ ಅಲ್ಲಿನ ನಿವಾಸಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು. <br /> <br /> `ಇಲ್ಲಿರುವವರೆಲ್ಲ ಜಿಲ್ಲೆಯ ಬೇರೆ ಬೇರೆ ಭಾಗಗಳಲ್ಲಿ ವಾಸವಿದ್ದು, ಇದೀಗ ಇಲ್ಲಿ ವಾಸ್ತವ್ಯ ಹೂಡಿದ್ದಾರೆ. ಇವರೆಲ್ಲರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಕೂಡ ಸೇರ್ಪಡೆಗೊಂಡಿದೆ~ ಎಂದರು. <br /> <br /> ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಾದಪ್ಪ ಮಾತನಾಡಿ, ತಾ.ಪಂ. ವತಿಯಿಂದ ಸೂಕ್ತ ನಿರ್ದೇಶನ ದೊರೆತರೆ ಪಾಲೇಮಾಡು ಮಕ್ಕಳಿಗೆ ಪೌಷ್ಠಿಕ ಆಹಾರ ಪೂರೈಸಲು ಕ್ರಮಕೈಗೊಳ್ಳಲಾಗುವುದು ಎಂದು ಉತ್ತರಿಸಿದರು. <br /> <br /> ಕಾರ್ಯನಿರ್ವಾಹಕ ಅಧಿಕಾರಿ ಎಂ. ಸತ್ಯನಾರಾಯಣ ಮಾತನಾಡಿ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮುಂದಿನ ಕ್ರಮಕೈಗೊಳ್ಳೋಣ ಎಂದು ಚರ್ಚೆಗೆ ತೆರೆ ಎಳೆದರು.<br /> <br /> ಸದಸ್ಯರಾದ ಬೊಳ್ಳಚೆಟ್ಟಿರ ಸುರೇಶ್, ಕೆ.ಡಿ.ಅನಿತಾ (ಬೇಬಿ), ವಿ.ವಿ.ಹರೀಶ್ಕುಮಾರ್ ಚರ್ಚೆಯಲ್ಲಿ ಭಾಗವಹಿಸಿದ್ದರು. ಉಪಾಧ್ಯಕ್ಷೆ ರೇಣುಕಾ ಚೆನ್ನಿಗಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರತೀಜಾ ಅಚ್ಚಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>