ಕೃತಿಗಳ ಲೋಕಾರ್ಪಣೆ
ಚುಟುಕು... ಮೇಘ...
ಕವಿಗಳ ಅಂತರರಾಷ್ಟ್ರೀಯ ಸಂಘ: ಭಾನುವಾರ ಸಾ.ಶಿ. ಮರುಳಯ್ಯ ಅವರಿಂದ ‘ಲವ್ ಆಫ್ ಲೈಫ್ ಅಂಡ್ ಅದರ್ ಪೊಯಂ’ (ಲೇ. ಮಾವಳ್ಳಿ ಜಿ.ರಾಮು), ‘ಚುಟುಕು ಗುಚ್ಛ’ (ಸಿ.ಎಸ್.ಗೋವಿಂದ ರಾವ್), ‘ಮೇಘ ಮಲ್ಹಾರ’ (ಲೇ. ಭಾಸ್ಕರ್ ಕಶ್ಯಪ್) ಕೃತಿಗಳ ಲೋಕಾರ್ಪಣೆ. ಕೃತಿಗಳ ಕುರಿತು: ಪ್ರೊ. ಮುಡಂಬಡಿತ್ತಾಯ, ಪ್ರೊ.ಜಿ.ಅಶ್ವತ್ಥ ನಾರಾಯಣ. ನಂತರ ಕವಿಗೋಷ್ಠಿ.
ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ. ಬಸವನಗುಡಿ. ಮಧ್ಯಾಹ್ನ 3.
ಸಮಗ್ರ ನಾಟಕ
ಬೋಧಿ ಟ್ರಸ್ಟ್ ಕಲ್ಮಡ್ಕ: ಭಾನುವಾರ ಟ್ರಸ್ಟ್ನ ದಶಮಾನೋತ್ಸವ ಸಂಭ್ರಮ. ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯಂ ಅವರಿಂದ ‘ಸಮಗ್ರ ನಾಟಕಗಳು- ಸಂಪುಟ 2,3,4’ ಹಾಗೂ ‘ಐದು ಕವನಗಳು’ (ಲೇಖಕ: ರಾಮಚಂದ್ರ ದೇವ) ಕೃತಿಗಳ ಲೋಕಾರ್ಪಣೆ. ಬೇಂದ್ರೆ ಕಾವ್ಯೋತ್ಸವದಲ್ಲಿ: ಸಿ.ಆರ್. ಸಿಂಹ , ಶ್ರೀನಿವಾಸ ಪ್ರಭು, ಎನ್. ಮಂಗಳಾ, ರಘುನಂದನ, ಕಲ್ಪನಾ ನಾಗನಾಥ್.
ಅಧ್ಯಕ್ಷತೆ: ಡಾ. ಎಚ್. ಎಸ್.ವೆಂಕಟೇಶ ಮೂರ್ತಿ.
ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ. ಬಸವನಗುಡಿ. ಬೆಳಿಗ್ಗೆ 10.
ಪ್ರಸನ್ನ ಚರಿತ್ರೆ...
ಭಾನುವಾರ ಭಂಡಾರಕೇರಿ ಮಠಾಧೀಶ ವಿದ್ಯೇಶತೀರ್ಥ ಶ್ರೀಗಳಿಂದ ‘ಪ್ರಸನ್ನ ಶ್ರೀನಿವಾಸದಾಸರ ಚರಿತ್ರೆ’ ಕೃತಿ ಲೋಕಾರ್ಪಣೆ.
ಸ್ಥಳ; ಮಾಧ್ವ ಸಂಘ, 5ನೇ ಮುಖ್ಯ ರಸ್ತೆ, ಚಾಮರಾಜಪೇಟೆ. ಸಂಜೆ 5.
ಕೊಡ್ಲೆಕೆರೆ ನೆರಳು
ವಸಂತ ಪ್ರಕಾಶನ: ಭಾನುವಾರ ಮಹಾಬಲಮೂರ್ತಿ ಕೊಡ್ಲೆಕೆರೆಯವರ ‘ನೆರಳು ಮತ್ತು ಇತರ ಆಯ್ದ ಕಥೆಗಳು’ ಕೃತಿ ಲೋಕಾರ್ಪಣೆ.
ಸಾನ್ನಿಧ್ಯ: ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ. ಅತಿಥಿಗಳು: ಪ್ರೊ.ಜಿ. ವೆಂಕಟಸುಬ್ಬಯ್ಯ, ಡಾ.ಗಿರಡ್ಡಿ ಗೋವಿಂದ ರಾಜು, ಡಾ.ಎಲ್.ಜಿ. ಮೀರಾ, ಚಿರಂಜೀವಿ ಸಿಂಗ್, ಡಾ. ಸುರೇಂದ್ರನಾಥ್ ಮಿಣಜಗಿ, ಅರ್ಚನಾ ಸುರಾನ.
ಸ್ಥಳ: ಸುರಾನ ಕಾಲೇಜು, ಸೌತ್ ಎಂಡ್ ಸರ್ಕಲ್, ಜಯನಗರ. ಬೆಳಿಗ್ಗೆ 10. ಮಾಹಿತಿಗೆ: 94483 13270.
ಚುಟುಕು... ಬಾಸ್...
ಪುಸ್ತಕ ಪ್ರಕಾಶನ, ರಿಲಯನ್ಸ್ ಟೈಂಔಟ್:
ಭಾನುವಾರ ಬೆಳಿಗ್ಗೆ 11ಕ್ಕೆ ಡಾ. ಕೆ. ಚಿದಾನಂದಗೌಡ ಅವರ ಅಂಕಣ ಬರಹಗಳ ಸಂಗ್ರಹ ‘ಬದುಕು ಬೆಳಕು, ಚುಟುಕು ಎರಡನೇ ಆವೃತ್ತಿ’ ಲೋಕಾರ್ಪಣೆ.
ಅತಿಥಿಗಳು: ಡಾ. ಎಚ್. ಮಹೇಶಪ್ಪ, ಪ್ರೊ.ಎಂ. ಕೃಷ್ಣಯ್ಯ, ವೀರೇಶಾನಂದ ಸ್ವಾಮೀಜಿ, ಸುಧಾ ಮೂರ್ತಿ, ಗುರುರಾಜ ಕರ್ಜಗಿ.
ಸಂಜೆ 5.30ಕ್ಕೆ ವಿಜಯ್ ನಾಯರ್ ಬರೆದ ‘ದಿ ಬಾಸ್ ಈಸ್ ನಾಟ್ ಯುವರ್ ಫ್ರೆಂಡ್’ ಕೃತಿ ಲೋಕಾರ್ಪಣೆ. ನಂತರ ಲೇಖಕರೊಂದಿಗೆ ಸಂವಾದ.
ಸ್ಥಳ; ರಿಲಯನ್ಸ್ ಟೈಂ ಔಟ್, ಕನ್ನಿಂಗ್ಹ್ಯಾಂ ರಸ್ತೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.