<p><strong>ರಾಯಚೂರು: </strong>ನಾರಾಯಣಪುರ ಜಲಾಶಯದಿಂದ ಕಳೆದ ಒಂದು ವಾರದಿಂದ ನಿರಂತರ ಹೆಚ್ಚಿನ ಪ್ರಮಾಣದ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದ್ದು, ಮಂಗಳವಾರ ಸಂಜೆ 3 ಲಕ್ಷ ಕ್ಯೂಸೆಕ್ ನೀರನ್ನು ಜಲಾಶಯದಿಂದ ಹರಿ ಬಿಡಲಾಗಿದೆ. <br /> <br /> ಇದರಿಂದ ದೇವದುರ್ಗ ತಾಲ್ಲೂಕಿನ ಹೂವಿನ ಹೆಡಗಿ ಸೇತುವೆ ಮುಳುಗಿದೆ. ಕೊಪ್ಪರ ನರಸಿಂಹ ದೇವಸ್ಥಾನದ ಕಟ್ಟೆಗೆ ಹೆಚ್ಚಿನ ನೀರು ತಟ್ಟುತ್ತಿದೆ. ದೇವಸ್ಥಾನ ಮುಳುಗಡೆ ಭೀತಿ ಎದುರಿಸುತ್ತಿದೆ. <br /> <br /> ಇದೇ ಪ್ರಮಾಣದಲ್ಲಿ ರಾಯಚೂರು ತಾಲ್ಲೂಕಿನಲ್ಲೂ ಕೃಷ್ಣಾ ನದಿಯಲ್ಲಿ ನೀರು ಹರಿಯುತ್ತಿದೆ. ಕೃಷ್ಣಾ ನದಿಯಲ್ಲಿ ಪ್ರತಿ ವರ್ಷ ಮುಳುಗಡೆ ಭೀತಿ ಎದುರಿಸುವ ಗ್ರಾಮಗಳಾದ ಬುರ್ದಿಪಾಡ, ಆತ್ಕೂರು, ಡೊಂಗಾರಾಂಪುರ, ಗಂಜಳ್ಳಿ ಸೇರಿದಂತೆ ಹಲವಾರು ಗ್ರಾಮಗಳ ಜನತೆ ಪ್ರವಾಹದ ಭೀತಿ ಎದುರಿಸುತ್ತಿದ್ದಾರೆ.<br /> <br /> ಆಂಧ್ರಪ್ರದೇಶದ ಗದ್ವಾಲ್ ತಾಲ್ಲೂಕಿನಲ್ಲಿ ನಿರ್ಮಿಸಲಾದ ಜುರಾಲಾ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರನ್ನು ಹೊರಗಡೆ ಹರಿ ಬಿಡಲಾಗುತ್ತಿರುವುದರಿಂದ ಜಲಾಶಯದ ಮೇಲ್ಭಾಗದ ಈ ಗ್ರಾಮಗಳು ಸದ್ಯಕ್ಕೆ ನಿಟ್ಟುಸಿರು ಬಿಡುತ್ತಿದ್ದಾರೆ. ಜಲಾಶಯದಿಂದ ನೀರು ಹೊರಗಡೆ ಹರಿಸದೇ ಇದ್ದಿದ್ದರೆ ಇಷ್ಟು ಹೊತ್ತಿಗೆ ಗ್ರಾಮಗಳು ಮುಳುಗಡೆ ಆಗುತ್ತಿದ್ದವು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.<br /> <br /> ಜುರಾಲಾ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರ ಬಿಡುತ್ತಿದ್ದರೂ ಸಹ ಕೃಷ್ಣಾ ನದಿಯಲ್ಲಿ ಪ್ರವಾಹ ಕಡಿಮೆ ಆಗಿಲ್ಲ. ಮೇಲ್ಭಾಗದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹೀಗಾಗಿ ಕೃಷ್ಣಾ ನದಿಗೆ ಹೊಂದಿಕೊಂಡಿರುವ ಗ್ರಾಮದ ಜಮೀನುಗಳಿಗೆ ನದಿ ನೀರು ನುಗ್ಗಿದೆ. <br /> <br /> ನದಿ ದಂಡೆಯಲ್ಲಿ ಪಂಪ್ಸೆಟ್ ಇಟ್ಟು ಜಮೀನಿಗೆ ನೀರು ಪಡೆಯಲಾಗುತ್ತಿತ್ತು. ಪ್ರವಾಹ ಹೆಚ್ಚಾಗಿದ್ದರಿಂದ ಕೆಲ ಪಂಪ್ಸೆಟ್ಗಳು ಮುಳುಗಿವೆ. ಇದರಿಂದ ಎಚ್ಚೆತ್ತ ಇನ್ನುಳಿದ ರೈತರು ಪಂಪ್ಸೆಟ್ಗಳನ್ನು ಬಿಚ್ಚಿ ಸುರಕ್ಷಿತ ಸ್ಥಳಕ್ಕೆ ಸಾಗಿಸುತ್ತಿರುವುದು ಬುಧವಾರ ನದಿ ದಂಡೆಯಲ್ಲಿ ಕಂಡು ಬಂದಿತು.<br /> <br /> ತುಂಗಭದ್ರಾ ನದಿಯಲ್ಲೂ ನೀರು ಹೆಚ್ಚು ಹರಿಯುತ್ತಿದ್ದು, ರಾಜಲಬಂಡಾ ಸೇತುವೆ ಸುತ್ತಮುತ್ತ ಇರುವ ಕೆಲ ಗ್ರಾಮಗಳ ರೈತರ ಜಮೀನಿಗೆ ಎರಡು ದಿನದ ಹಿಂದೆ ನೀರು ನುಗ್ಗಿದೆ. <br /> <br /> <strong>ಜೋಳದಹೆಡ್ಗಿ-ದೊಂಡಂಬಳಿ ರಸ್ತೆ ಸಂಪರ್ಕ ಕಡಿತ</strong><br /> ದೇವದುರ್ಗ: ಕೃಷ್ಣಾ ನದಿ ಪ್ರವಾಹದಿಂದಾಗಿ ತಾಲ್ಲೂಕಿನ ಜೋಳದಹೆಡ್ಗಿ ಗ್ರಾಮದಿಂದ ದೊಂಡಂಬಳಿ ಗ್ರಾಮದ ಮುಖ್ಯ ಕೃಷ್ಣಾ ನದಿ ಪ್ರವಾಹದಿಂದ ರಸ್ತೆ ಸಂಪರ್ಕ ಕಡಿತಗೊಂಡ ಪರಿಣಾಮ ಜನರಿಗೆ ತೊಂದರೆ ಎದುರಾಗಿದೆ.<br /> ಸೋಮವಾರ ಉಕ್ಕಿ ಹರಿದ ಕೃಷ್ಣಾ ನದಿಯಿಂದ ಸಂಪರ್ಕ ಕಡಿತಗೊಂಡ ನಂತರ ಮತ್ತೆ ಬುಧವಾರ ನದಿಗೆ ಹೆಚ್ಚುವರಿ ನೀರು ಹರಿದು ಬರುತ್ತಿದೆ.<br /> <br /> ರಸ್ತೆ ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಜೋಳದಹೆಡ್ಗಿ ಗ್ರಾಮದ ಜನರು ದೇವದುರ್ಗ ಮುಖಾಂತರ ದೊಂಡಂಬಳಿ ಗ್ರಾಮಕ್ಕೆ ಸುತ್ತುವರೆದು ಹೋಗಬೇಕಾದ ಪರಿಸ್ಥಿತಿ ಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು: </strong>ನಾರಾಯಣಪುರ ಜಲಾಶಯದಿಂದ ಕಳೆದ ಒಂದು ವಾರದಿಂದ ನಿರಂತರ ಹೆಚ್ಚಿನ ಪ್ರಮಾಣದ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದ್ದು, ಮಂಗಳವಾರ ಸಂಜೆ 3 ಲಕ್ಷ ಕ್ಯೂಸೆಕ್ ನೀರನ್ನು ಜಲಾಶಯದಿಂದ ಹರಿ ಬಿಡಲಾಗಿದೆ. <br /> <br /> ಇದರಿಂದ ದೇವದುರ್ಗ ತಾಲ್ಲೂಕಿನ ಹೂವಿನ ಹೆಡಗಿ ಸೇತುವೆ ಮುಳುಗಿದೆ. ಕೊಪ್ಪರ ನರಸಿಂಹ ದೇವಸ್ಥಾನದ ಕಟ್ಟೆಗೆ ಹೆಚ್ಚಿನ ನೀರು ತಟ್ಟುತ್ತಿದೆ. ದೇವಸ್ಥಾನ ಮುಳುಗಡೆ ಭೀತಿ ಎದುರಿಸುತ್ತಿದೆ. <br /> <br /> ಇದೇ ಪ್ರಮಾಣದಲ್ಲಿ ರಾಯಚೂರು ತಾಲ್ಲೂಕಿನಲ್ಲೂ ಕೃಷ್ಣಾ ನದಿಯಲ್ಲಿ ನೀರು ಹರಿಯುತ್ತಿದೆ. ಕೃಷ್ಣಾ ನದಿಯಲ್ಲಿ ಪ್ರತಿ ವರ್ಷ ಮುಳುಗಡೆ ಭೀತಿ ಎದುರಿಸುವ ಗ್ರಾಮಗಳಾದ ಬುರ್ದಿಪಾಡ, ಆತ್ಕೂರು, ಡೊಂಗಾರಾಂಪುರ, ಗಂಜಳ್ಳಿ ಸೇರಿದಂತೆ ಹಲವಾರು ಗ್ರಾಮಗಳ ಜನತೆ ಪ್ರವಾಹದ ಭೀತಿ ಎದುರಿಸುತ್ತಿದ್ದಾರೆ.<br /> <br /> ಆಂಧ್ರಪ್ರದೇಶದ ಗದ್ವಾಲ್ ತಾಲ್ಲೂಕಿನಲ್ಲಿ ನಿರ್ಮಿಸಲಾದ ಜುರಾಲಾ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರನ್ನು ಹೊರಗಡೆ ಹರಿ ಬಿಡಲಾಗುತ್ತಿರುವುದರಿಂದ ಜಲಾಶಯದ ಮೇಲ್ಭಾಗದ ಈ ಗ್ರಾಮಗಳು ಸದ್ಯಕ್ಕೆ ನಿಟ್ಟುಸಿರು ಬಿಡುತ್ತಿದ್ದಾರೆ. ಜಲಾಶಯದಿಂದ ನೀರು ಹೊರಗಡೆ ಹರಿಸದೇ ಇದ್ದಿದ್ದರೆ ಇಷ್ಟು ಹೊತ್ತಿಗೆ ಗ್ರಾಮಗಳು ಮುಳುಗಡೆ ಆಗುತ್ತಿದ್ದವು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.<br /> <br /> ಜುರಾಲಾ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರ ಬಿಡುತ್ತಿದ್ದರೂ ಸಹ ಕೃಷ್ಣಾ ನದಿಯಲ್ಲಿ ಪ್ರವಾಹ ಕಡಿಮೆ ಆಗಿಲ್ಲ. ಮೇಲ್ಭಾಗದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹೀಗಾಗಿ ಕೃಷ್ಣಾ ನದಿಗೆ ಹೊಂದಿಕೊಂಡಿರುವ ಗ್ರಾಮದ ಜಮೀನುಗಳಿಗೆ ನದಿ ನೀರು ನುಗ್ಗಿದೆ. <br /> <br /> ನದಿ ದಂಡೆಯಲ್ಲಿ ಪಂಪ್ಸೆಟ್ ಇಟ್ಟು ಜಮೀನಿಗೆ ನೀರು ಪಡೆಯಲಾಗುತ್ತಿತ್ತು. ಪ್ರವಾಹ ಹೆಚ್ಚಾಗಿದ್ದರಿಂದ ಕೆಲ ಪಂಪ್ಸೆಟ್ಗಳು ಮುಳುಗಿವೆ. ಇದರಿಂದ ಎಚ್ಚೆತ್ತ ಇನ್ನುಳಿದ ರೈತರು ಪಂಪ್ಸೆಟ್ಗಳನ್ನು ಬಿಚ್ಚಿ ಸುರಕ್ಷಿತ ಸ್ಥಳಕ್ಕೆ ಸಾಗಿಸುತ್ತಿರುವುದು ಬುಧವಾರ ನದಿ ದಂಡೆಯಲ್ಲಿ ಕಂಡು ಬಂದಿತು.<br /> <br /> ತುಂಗಭದ್ರಾ ನದಿಯಲ್ಲೂ ನೀರು ಹೆಚ್ಚು ಹರಿಯುತ್ತಿದ್ದು, ರಾಜಲಬಂಡಾ ಸೇತುವೆ ಸುತ್ತಮುತ್ತ ಇರುವ ಕೆಲ ಗ್ರಾಮಗಳ ರೈತರ ಜಮೀನಿಗೆ ಎರಡು ದಿನದ ಹಿಂದೆ ನೀರು ನುಗ್ಗಿದೆ. <br /> <br /> <strong>ಜೋಳದಹೆಡ್ಗಿ-ದೊಂಡಂಬಳಿ ರಸ್ತೆ ಸಂಪರ್ಕ ಕಡಿತ</strong><br /> ದೇವದುರ್ಗ: ಕೃಷ್ಣಾ ನದಿ ಪ್ರವಾಹದಿಂದಾಗಿ ತಾಲ್ಲೂಕಿನ ಜೋಳದಹೆಡ್ಗಿ ಗ್ರಾಮದಿಂದ ದೊಂಡಂಬಳಿ ಗ್ರಾಮದ ಮುಖ್ಯ ಕೃಷ್ಣಾ ನದಿ ಪ್ರವಾಹದಿಂದ ರಸ್ತೆ ಸಂಪರ್ಕ ಕಡಿತಗೊಂಡ ಪರಿಣಾಮ ಜನರಿಗೆ ತೊಂದರೆ ಎದುರಾಗಿದೆ.<br /> ಸೋಮವಾರ ಉಕ್ಕಿ ಹರಿದ ಕೃಷ್ಣಾ ನದಿಯಿಂದ ಸಂಪರ್ಕ ಕಡಿತಗೊಂಡ ನಂತರ ಮತ್ತೆ ಬುಧವಾರ ನದಿಗೆ ಹೆಚ್ಚುವರಿ ನೀರು ಹರಿದು ಬರುತ್ತಿದೆ.<br /> <br /> ರಸ್ತೆ ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಜೋಳದಹೆಡ್ಗಿ ಗ್ರಾಮದ ಜನರು ದೇವದುರ್ಗ ಮುಖಾಂತರ ದೊಂಡಂಬಳಿ ಗ್ರಾಮಕ್ಕೆ ಸುತ್ತುವರೆದು ಹೋಗಬೇಕಾದ ಪರಿಸ್ಥಿತಿ ಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>