<p>ಕಲಾಕದಂಬ ಆರ್ಟ್ ಸೆಂಟರ್ ಆಶ್ರಯದಲ್ಲಿ ನಡೆಯಲಿರುವ ಸಂಸ್ಕೃತಿ ಸಿಂಚನ ಸರಣಿಯ ಮೊದಲನೇ ಕಾರ್ಯಕ್ರಮ ಗುಬ್ಬಲಾಳ ಶ್ರೀ ಶನೈಶ್ವರ ಸೇವಾ ಸಮಿತಿ ಸಭಾಂಗಣದಲ್ಲಿ ಇಂದು ಸಂಜೆ 5-30ಕ್ಕೆ ನಡೆಯಲಿದೆ.<br /> <br /> ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಸಹಯೋಗದಲ್ಲಿ ಕಲಾಕದಂಬ ಸಂಸ್ಥೆ ನಡೆಸಿದ ಕಲಾವಿಕಸನ ಬೇಸಿಗೆಯ ಶಿಬಿರದಲ್ಲಿ ಯಕ್ಷಗಾನ ತರಬೇತಿ ಪಡೆದ ಮಕ್ಕಳು ಯಕ್ಷಗಾನ ಮರುಪ್ರದರ್ಶನ ನಡೆಸಲಿದ್ದಾರೆ.<br /> <br /> ರಾಧಾಕೃಷ್ಣ ಉರಾಳ ನಿರ್ದೇಶನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮಕ್ಕಳು ಯಕ್ಷಗಾನ ಪೂರ್ವರಂಗದ ಪೀಠಿಕಾ ಸ್ತ್ರೀವೇಷ, ಬಾಲಗೋಪಾಲ ನೃತ್ಯದ ಜೊತೆಗೆ ಕಂಸವಧೆ-ಕೃಷ್ಣ ಪಾರಿಜಾತ ಯಕ್ಷಗಾನ ಪ್ರದರ್ಶನ ನೀಡಲಿದ್ದಾರೆ.<br /> <br /> ಮಂಜುನಾಥ್ ಬಡಿಗೇರ್ ಹಾಗೂ ನಿತ್ಯಾನಂದ ನಾಯಕ್ ಪ್ರಸಂಗ ತಯಾರಿಯಲ್ಲಿ ಸಹಕರಿಸಿದ್ದಾರೆ. ನೇಪಥ್ಯದಲ್ಲಿ ಮುರಳೀಧರ ನಾವಡ ಸತ್ಯನಾರಾಯಣ್, ಅಂಬರೀಶ್ ಭಟ್, ವಿಶ್ವನಾಥ ಉರಾಳ, ದೇವರಾಜ ಕರಬ, ಮಮತಾ ಆರ್. ಕೆ, ಚಿದಾನಂದ ಕುಲಕರ್ಣಿ ಸಹಕರಿಸಲಿದ್ದಾರೆ. ಪ್ರದರ್ಶನ ಉಚಿತ. ಮಾಹಿತಿಗೆ:9448510582</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಲಾಕದಂಬ ಆರ್ಟ್ ಸೆಂಟರ್ ಆಶ್ರಯದಲ್ಲಿ ನಡೆಯಲಿರುವ ಸಂಸ್ಕೃತಿ ಸಿಂಚನ ಸರಣಿಯ ಮೊದಲನೇ ಕಾರ್ಯಕ್ರಮ ಗುಬ್ಬಲಾಳ ಶ್ರೀ ಶನೈಶ್ವರ ಸೇವಾ ಸಮಿತಿ ಸಭಾಂಗಣದಲ್ಲಿ ಇಂದು ಸಂಜೆ 5-30ಕ್ಕೆ ನಡೆಯಲಿದೆ.<br /> <br /> ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಸಹಯೋಗದಲ್ಲಿ ಕಲಾಕದಂಬ ಸಂಸ್ಥೆ ನಡೆಸಿದ ಕಲಾವಿಕಸನ ಬೇಸಿಗೆಯ ಶಿಬಿರದಲ್ಲಿ ಯಕ್ಷಗಾನ ತರಬೇತಿ ಪಡೆದ ಮಕ್ಕಳು ಯಕ್ಷಗಾನ ಮರುಪ್ರದರ್ಶನ ನಡೆಸಲಿದ್ದಾರೆ.<br /> <br /> ರಾಧಾಕೃಷ್ಣ ಉರಾಳ ನಿರ್ದೇಶನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮಕ್ಕಳು ಯಕ್ಷಗಾನ ಪೂರ್ವರಂಗದ ಪೀಠಿಕಾ ಸ್ತ್ರೀವೇಷ, ಬಾಲಗೋಪಾಲ ನೃತ್ಯದ ಜೊತೆಗೆ ಕಂಸವಧೆ-ಕೃಷ್ಣ ಪಾರಿಜಾತ ಯಕ್ಷಗಾನ ಪ್ರದರ್ಶನ ನೀಡಲಿದ್ದಾರೆ.<br /> <br /> ಮಂಜುನಾಥ್ ಬಡಿಗೇರ್ ಹಾಗೂ ನಿತ್ಯಾನಂದ ನಾಯಕ್ ಪ್ರಸಂಗ ತಯಾರಿಯಲ್ಲಿ ಸಹಕರಿಸಿದ್ದಾರೆ. ನೇಪಥ್ಯದಲ್ಲಿ ಮುರಳೀಧರ ನಾವಡ ಸತ್ಯನಾರಾಯಣ್, ಅಂಬರೀಶ್ ಭಟ್, ವಿಶ್ವನಾಥ ಉರಾಳ, ದೇವರಾಜ ಕರಬ, ಮಮತಾ ಆರ್. ಕೆ, ಚಿದಾನಂದ ಕುಲಕರ್ಣಿ ಸಹಕರಿಸಲಿದ್ದಾರೆ. ಪ್ರದರ್ಶನ ಉಚಿತ. ಮಾಹಿತಿಗೆ:9448510582</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>