<p>ಬೆಂಗಳೂರು (ಪಿಟಿಐ): ಹಾಲಿನ ಪುಡಿಯ ಭಾರಿ ದಾಸ್ತಾನು ಮಾರಾಟವಾಗದೆ ಉಳಿದಿರುವ ಕಾರಣ ಹಣಕಾಸು ಮುಗ್ಗಟ್ಟಿಗೆ ಸಿಲುಕಿರುವ ಕರ್ನಾಟಕ ಹಾಲು ಒಕ್ಕೂಟಕ್ಕೆ (ಕೆಎಂಎಫ್) ನೆರವಾಗಲು ರಾಜ್ಯ ಸರ್ಕಾರ ಮುಂದಾಗಿದ್ದು, ಸಾಲದ ಬಡ್ಡಿಗೆ ಶೇ 4ರಷ್ಟು ಸಬ್ಸಿಡಿ ನೆರವು ನೀಡಲಾಗುವುದು ಎಂದು ಪ್ರಕಟಿಸಿದೆ.</p>.<p>ಸದ್ಯ `ಕೆಎಂಎಫ್' ಗೋದಾಮಿನಲ್ಲಿ ಕೆನೆರಹಿತ ಹಾಲಿನ ಪುಡಿ (ಎಸ್ಎಂಪಿ) ಮತ್ತು ಬೆಣ್ಣೆ ದಾಸ್ತಾನು ಭಾರಿ ಪ್ರಮಾಣದಲ್ಲಿದೆ. ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಈ ನಷ್ಟ ತುಂಬಿಕೊಳ್ಳಲು ಮತ್ತು ಹಾಲು ಉತ್ಪಾದಕರಿಗೆ ತಿಂಗಳ ಹಣ ಪಾವತಿಸಲೂ ಕೆಎಂಎಫ್ಗೆ ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ `ಬಡ್ಡಿ ಸಬ್ಸಿಡಿ ನೆರವು' ಘೋಷಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.</p>.<p>ಅಕ್ಟೋಬರ್ 1ರಿಂದ 2013ರ ಮಾರ್ಚ್ 31ರವರೆಗೆ ಉತ್ಪಾದನೆ ವೆಚ್ಚಕ್ಕಿಂತಲೂ ಕಡಿಮೆ ದರದಲ್ಲಿ ಮಾರಾಟ ಮಾಡುವುದರಿಮದ ಆಗುವ ನಷ್ಟದಲ್ಲಿ ಶೇ 50ರಷ್ಟನ್ನು ಸರ್ಕಾರ ಭರಿಸಲಿದೆ ಎಂದೂ ಪ್ರಕಟಣೆ ತಿಳಿಸಿದೆ.</p>.<p>ಉತ್ಪಾದನೆ ಹೆಚ್ಚಳ-ಸಮಸ್ಯೆ: ಸದ್ಯ ಪ್ರತಿದಿನ `ಕೆಎಂಎಫ್'ಗೆ 54 ಲಕ್ಷ ಕೆ.ಜಿ. ಹಾಲು ಬರುತ್ತಿದ್ದು, 40 ಲಕ್ಷ ಕೆ.ಜಿ.ಯನ್ನು ಹಾಲಿನ ರೂಪದಲ್ಲಿಯೇ ಮಾರಲಾಗುತ್ತಿದೆ. ಉಳಿದ 14 ಲಕ್ಷ ಕೆ.ಜಿ. ಹಾಲನ್ನು ಕೆನೆರಹಿತ ಹಾಲಿನಪುಡಿ ಮತ್ತು ಬೆಣ್ಣೆಯಾಗಿ ಪರಿವರ್ತಿಸಲಾಗುತ್ತಿದೆ. ಇದು ಕಷ್ಟಕ್ಕೆ ದೂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು (ಪಿಟಿಐ): ಹಾಲಿನ ಪುಡಿಯ ಭಾರಿ ದಾಸ್ತಾನು ಮಾರಾಟವಾಗದೆ ಉಳಿದಿರುವ ಕಾರಣ ಹಣಕಾಸು ಮುಗ್ಗಟ್ಟಿಗೆ ಸಿಲುಕಿರುವ ಕರ್ನಾಟಕ ಹಾಲು ಒಕ್ಕೂಟಕ್ಕೆ (ಕೆಎಂಎಫ್) ನೆರವಾಗಲು ರಾಜ್ಯ ಸರ್ಕಾರ ಮುಂದಾಗಿದ್ದು, ಸಾಲದ ಬಡ್ಡಿಗೆ ಶೇ 4ರಷ್ಟು ಸಬ್ಸಿಡಿ ನೆರವು ನೀಡಲಾಗುವುದು ಎಂದು ಪ್ರಕಟಿಸಿದೆ.</p>.<p>ಸದ್ಯ `ಕೆಎಂಎಫ್' ಗೋದಾಮಿನಲ್ಲಿ ಕೆನೆರಹಿತ ಹಾಲಿನ ಪುಡಿ (ಎಸ್ಎಂಪಿ) ಮತ್ತು ಬೆಣ್ಣೆ ದಾಸ್ತಾನು ಭಾರಿ ಪ್ರಮಾಣದಲ್ಲಿದೆ. ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಈ ನಷ್ಟ ತುಂಬಿಕೊಳ್ಳಲು ಮತ್ತು ಹಾಲು ಉತ್ಪಾದಕರಿಗೆ ತಿಂಗಳ ಹಣ ಪಾವತಿಸಲೂ ಕೆಎಂಎಫ್ಗೆ ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ `ಬಡ್ಡಿ ಸಬ್ಸಿಡಿ ನೆರವು' ಘೋಷಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.</p>.<p>ಅಕ್ಟೋಬರ್ 1ರಿಂದ 2013ರ ಮಾರ್ಚ್ 31ರವರೆಗೆ ಉತ್ಪಾದನೆ ವೆಚ್ಚಕ್ಕಿಂತಲೂ ಕಡಿಮೆ ದರದಲ್ಲಿ ಮಾರಾಟ ಮಾಡುವುದರಿಮದ ಆಗುವ ನಷ್ಟದಲ್ಲಿ ಶೇ 50ರಷ್ಟನ್ನು ಸರ್ಕಾರ ಭರಿಸಲಿದೆ ಎಂದೂ ಪ್ರಕಟಣೆ ತಿಳಿಸಿದೆ.</p>.<p>ಉತ್ಪಾದನೆ ಹೆಚ್ಚಳ-ಸಮಸ್ಯೆ: ಸದ್ಯ ಪ್ರತಿದಿನ `ಕೆಎಂಎಫ್'ಗೆ 54 ಲಕ್ಷ ಕೆ.ಜಿ. ಹಾಲು ಬರುತ್ತಿದ್ದು, 40 ಲಕ್ಷ ಕೆ.ಜಿ.ಯನ್ನು ಹಾಲಿನ ರೂಪದಲ್ಲಿಯೇ ಮಾರಲಾಗುತ್ತಿದೆ. ಉಳಿದ 14 ಲಕ್ಷ ಕೆ.ಜಿ. ಹಾಲನ್ನು ಕೆನೆರಹಿತ ಹಾಲಿನಪುಡಿ ಮತ್ತು ಬೆಣ್ಣೆಯಾಗಿ ಪರಿವರ್ತಿಸಲಾಗುತ್ತಿದೆ. ಇದು ಕಷ್ಟಕ್ಕೆ ದೂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>