<p>ಕೆಜಿಎಫ್: ಕತ್ತಲಲ್ಲಿ ಕೂಡಾ ಕಣ್ಣಿಗೆ ಕಾಣದ ಚಿತ್ರಗಳನ್ನು ತೆಗೆಯಬಲ್ಲ ಸಾಮರ್ಥ್ಯವುಳ್ಳ ಸಿಸಿಟಿವಿ ಕ್ಯಾಮೆರಾಗಳನ್ನು ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಭಾನುವಾರ ಅಳವಡಿಸಲಾಯಿತು.<br /> <br /> ಇದರಿಂದ ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲೇ ಮೊದಲ ಸಿಸಿಟಿವಿ ಕ್ಯಾಮೆರಾ ಹೊಂದಿದ ಮೊದಲ ಪೊಲೀಸ್ ಠಾಣೆ ಕೀರ್ತಿಗೆ ಬೇತಮಂಗಲ ಪೊಲೀಸ್ ಠಾಣೆ ಭಾಜನವಾಗಿದೆ.<br /> <br /> `ಪೊಲೀಸ್ ಠಾಣೆಯಲ್ಲಿ ಪಾರದರ್ಶಕತೆಯನ್ನು ಕಾಪಾಡುವುದಕ್ಕೆ ಹಾಗೂ ಸಾರ್ವಜನಿಕರ ಮತ್ತು ಪೊಲೀಸರ ನಡುವಿನ ಬಾಂಧವ್ಯ ವೃದ್ಧಿಗೆ ಇದು ಸಹಕರಿಸಲಿದೆ. ಜನರ ಜತೆ ಕೆಟ್ಟದಾಗಿ ವರ್ತಿಸುವುದನ್ನು ತಡೆಯಲು ನೆರವಿಗೆ ಬರುತ್ತದೆ' ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರೋಹಿಣಿ ಕಟೋಚ್ ಸಪೆಟ್ ಹೇಳಿದ್ದಾರೆ.<br /> <br /> ಬೇತಮಂಗಲ ಠಾಣೆ ಗ್ರಾಮದ ಬಸ್ ನಿಲ್ದಾಣದಲ್ಲಿದೆ. ಠಾಣೆ ಅತ್ಯಂತ ಜನದಟ್ಟಣೆಯಿರುವ ಸ್ಥಳದಲ್ಲಿರುವುದರಿಂದ ಸಾರ್ವಜನಿಕರ ಚಲನವಲನಗಳ ಮೇಲೆ ನಿಗಾ ಇರಿಸಲು ಇನ್ನು ಮುಂದೆ ಅನುಕೂಲವಾಗಲಿದೆ.<br /> <br /> ಠಾಣೆಯಲ್ಲಿ ನಾಲ್ಕು ಕ್ಯಾಮೆರಾಗಳನ್ನು ಮೊದಲ ಹಂತದಲ್ಲಿ ಬಳಸಲಾಗಿದೆ. ಇಡೀ ಠಾಣೆ ಮತ್ತು ಬಸ್ ನಿಲ್ದಾಣದ ಚಲನವಲನಗಳನ್ನು ಕ್ಯಾಮೆರಾಗಳಿಂದ ಗಮನಿಸಲು ಸಾಧ್ಯ ಎಂದು ತಿಳಿಸಿದ್ದಾರೆ.<br /> <br /> ಸಾರ್ವಜನಿಕರು ಮತ್ತು ಪೊಲೀಸರ ನಡುವೆ ಉತ್ತಮ ಮೈತ್ರಿ ಕಾಪಾಡಿಕೊಳ್ಳುವ ದೃಷ್ಟಿಯಿಂದ ಇಂಥ ಕೆಲಸಕ್ಕೆ ದಾನಿಗಳು ಮುಂದೆ ಬಂದಿದ್ದಾರೆ. ಬೇತಮಂಗಲದಲ್ಲಿ ಸಿನಿಮಾ ಥಿಯೇಟರ್ ಮಾಲೀಕರೊಬ್ಬರು ಕ್ಯಾಮೆರಾಗಳನ್ನು ದಾನದ ರೂಪದಲ್ಲಿ ನೀಡಿದ್ದಾರೆ.<br /> <br /> ಅದೇ ರೀತಿ ಬಂಗಾರಪೇಟೆ ಮತ್ತು ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಗಳಲ್ಲಿ ಶೀಘ್ರದಲ್ಲಿಯೇ ಸಿಸಿಟಿವಿ ಅಳವಡಿಸಲಾಗುವುದು. ಮುಂದಿನ ದಿನಗಳಲ್ಲಿ ಎರಡೂ ಪೊಲೀಸ್ ಠಾಣೆ ವ್ಯಾಪ್ತಿಯ ಜನನಿಬಿಡ ಪ್ರದೇಶದಲ್ಲಿ ಸಹ ಕ್ಯಾಮೆರಾಗಳನ್ನು ಅಳವಡಿಸಿ ಅಪರಾಧ ಚಟುವಟಿಕೆಗಳನ್ನು ನಿಗ್ರಹಿಸಲು ಪ್ರಯತ್ನಿಸಲಾಗುವುದು ಎಂದು ಕಟೋಚ್ ತಿಳಿಸಿದ್ದಾರೆ.<br /> <br /> ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಸಿಸಿಟಿವಿ ಅಳವಡಿಸಿರುವುದು ಪೊಲೀಸರಿಗೂ ಸಹ ಹೊಸ ಅನುಭವ ನೀಡಿದೆ. ಒಟ್ಟು ನಾಲ್ಕು ಕೋನಗಳಲ್ಲಿ ಕ್ಯಾಮೆರಾ ಅಳವಡಿಸಲಾಗಿದೆ. ದಿನವಿಡೀ ಚಾಲನೆ ಇರುವುದರಿಂದ ಪೊಲೀಸ್ ಠಾಣೆಯಲ್ಲಿ ಇಷ್ಟು ದಿನಗಳ ಕಾಲ ನಡೆಯುತ್ತಿದ್ದ `ಕೆಲವು' ವ್ಯವಹಾರಗಳಿಗೆ ತೆರೆಬೀಳಲಿದೆ. ಇದಲ್ಲದೇ ಸಾರ್ವಜನಿಕರ ಜತೆ ಪೊಲೀಸರು ಸಂಯಮದಿಂದ ವರ್ತಿಸಬೇಕಾಗುತ್ತದೆ ಎಂದು ಪೊಲೀಸ್ ಸಿಬ್ಬಂದಿಯೊಬ್ಬರು ತಿಳಿಸಿದರು.<br /> <br /> ಬೇತಮಂಗಲ ಪೊಲೀಸ್ ಠಾಣೆ ಗ್ರಾಮದ ಮಧ್ಯಭಾಗದಲ್ಲಿರುವುದರಿಂದ ಹಲವು ಸಮಸ್ಯೆಗಳ ಆಗರವಾಗಿದೆ. ಪೊಲೀಸ್ ಠಾಣೆಗಳಲ್ಲಿ ದೌರ್ಜನ್ಯ ನಡೆಯುತ್ತದೆ ಎಂಬ ಕೆಲವು ದೂರು, ಸಾರ್ವಜನಿಕರ ಸಂಶಯವನ್ನು ಇನ್ನು ಮುಂದೆ ದಾಖಲೆ ಸಮೇತ ನಿವಾರಿಸಬಹುದು ಎಂಬ ವಿಶ್ವಾಸವನ್ನು ಠಾಣೆ ಸಬ್ ಇನ್ಸ್ಪೆಕ್ಟರ್ ಬಿ.ಆರ್.ಜಗದೀಶ್ ವ್ಯಕ್ತಪಡಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೆಜಿಎಫ್: ಕತ್ತಲಲ್ಲಿ ಕೂಡಾ ಕಣ್ಣಿಗೆ ಕಾಣದ ಚಿತ್ರಗಳನ್ನು ತೆಗೆಯಬಲ್ಲ ಸಾಮರ್ಥ್ಯವುಳ್ಳ ಸಿಸಿಟಿವಿ ಕ್ಯಾಮೆರಾಗಳನ್ನು ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಭಾನುವಾರ ಅಳವಡಿಸಲಾಯಿತು.<br /> <br /> ಇದರಿಂದ ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲೇ ಮೊದಲ ಸಿಸಿಟಿವಿ ಕ್ಯಾಮೆರಾ ಹೊಂದಿದ ಮೊದಲ ಪೊಲೀಸ್ ಠಾಣೆ ಕೀರ್ತಿಗೆ ಬೇತಮಂಗಲ ಪೊಲೀಸ್ ಠಾಣೆ ಭಾಜನವಾಗಿದೆ.<br /> <br /> `ಪೊಲೀಸ್ ಠಾಣೆಯಲ್ಲಿ ಪಾರದರ್ಶಕತೆಯನ್ನು ಕಾಪಾಡುವುದಕ್ಕೆ ಹಾಗೂ ಸಾರ್ವಜನಿಕರ ಮತ್ತು ಪೊಲೀಸರ ನಡುವಿನ ಬಾಂಧವ್ಯ ವೃದ್ಧಿಗೆ ಇದು ಸಹಕರಿಸಲಿದೆ. ಜನರ ಜತೆ ಕೆಟ್ಟದಾಗಿ ವರ್ತಿಸುವುದನ್ನು ತಡೆಯಲು ನೆರವಿಗೆ ಬರುತ್ತದೆ' ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರೋಹಿಣಿ ಕಟೋಚ್ ಸಪೆಟ್ ಹೇಳಿದ್ದಾರೆ.<br /> <br /> ಬೇತಮಂಗಲ ಠಾಣೆ ಗ್ರಾಮದ ಬಸ್ ನಿಲ್ದಾಣದಲ್ಲಿದೆ. ಠಾಣೆ ಅತ್ಯಂತ ಜನದಟ್ಟಣೆಯಿರುವ ಸ್ಥಳದಲ್ಲಿರುವುದರಿಂದ ಸಾರ್ವಜನಿಕರ ಚಲನವಲನಗಳ ಮೇಲೆ ನಿಗಾ ಇರಿಸಲು ಇನ್ನು ಮುಂದೆ ಅನುಕೂಲವಾಗಲಿದೆ.<br /> <br /> ಠಾಣೆಯಲ್ಲಿ ನಾಲ್ಕು ಕ್ಯಾಮೆರಾಗಳನ್ನು ಮೊದಲ ಹಂತದಲ್ಲಿ ಬಳಸಲಾಗಿದೆ. ಇಡೀ ಠಾಣೆ ಮತ್ತು ಬಸ್ ನಿಲ್ದಾಣದ ಚಲನವಲನಗಳನ್ನು ಕ್ಯಾಮೆರಾಗಳಿಂದ ಗಮನಿಸಲು ಸಾಧ್ಯ ಎಂದು ತಿಳಿಸಿದ್ದಾರೆ.<br /> <br /> ಸಾರ್ವಜನಿಕರು ಮತ್ತು ಪೊಲೀಸರ ನಡುವೆ ಉತ್ತಮ ಮೈತ್ರಿ ಕಾಪಾಡಿಕೊಳ್ಳುವ ದೃಷ್ಟಿಯಿಂದ ಇಂಥ ಕೆಲಸಕ್ಕೆ ದಾನಿಗಳು ಮುಂದೆ ಬಂದಿದ್ದಾರೆ. ಬೇತಮಂಗಲದಲ್ಲಿ ಸಿನಿಮಾ ಥಿಯೇಟರ್ ಮಾಲೀಕರೊಬ್ಬರು ಕ್ಯಾಮೆರಾಗಳನ್ನು ದಾನದ ರೂಪದಲ್ಲಿ ನೀಡಿದ್ದಾರೆ.<br /> <br /> ಅದೇ ರೀತಿ ಬಂಗಾರಪೇಟೆ ಮತ್ತು ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಗಳಲ್ಲಿ ಶೀಘ್ರದಲ್ಲಿಯೇ ಸಿಸಿಟಿವಿ ಅಳವಡಿಸಲಾಗುವುದು. ಮುಂದಿನ ದಿನಗಳಲ್ಲಿ ಎರಡೂ ಪೊಲೀಸ್ ಠಾಣೆ ವ್ಯಾಪ್ತಿಯ ಜನನಿಬಿಡ ಪ್ರದೇಶದಲ್ಲಿ ಸಹ ಕ್ಯಾಮೆರಾಗಳನ್ನು ಅಳವಡಿಸಿ ಅಪರಾಧ ಚಟುವಟಿಕೆಗಳನ್ನು ನಿಗ್ರಹಿಸಲು ಪ್ರಯತ್ನಿಸಲಾಗುವುದು ಎಂದು ಕಟೋಚ್ ತಿಳಿಸಿದ್ದಾರೆ.<br /> <br /> ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಸಿಸಿಟಿವಿ ಅಳವಡಿಸಿರುವುದು ಪೊಲೀಸರಿಗೂ ಸಹ ಹೊಸ ಅನುಭವ ನೀಡಿದೆ. ಒಟ್ಟು ನಾಲ್ಕು ಕೋನಗಳಲ್ಲಿ ಕ್ಯಾಮೆರಾ ಅಳವಡಿಸಲಾಗಿದೆ. ದಿನವಿಡೀ ಚಾಲನೆ ಇರುವುದರಿಂದ ಪೊಲೀಸ್ ಠಾಣೆಯಲ್ಲಿ ಇಷ್ಟು ದಿನಗಳ ಕಾಲ ನಡೆಯುತ್ತಿದ್ದ `ಕೆಲವು' ವ್ಯವಹಾರಗಳಿಗೆ ತೆರೆಬೀಳಲಿದೆ. ಇದಲ್ಲದೇ ಸಾರ್ವಜನಿಕರ ಜತೆ ಪೊಲೀಸರು ಸಂಯಮದಿಂದ ವರ್ತಿಸಬೇಕಾಗುತ್ತದೆ ಎಂದು ಪೊಲೀಸ್ ಸಿಬ್ಬಂದಿಯೊಬ್ಬರು ತಿಳಿಸಿದರು.<br /> <br /> ಬೇತಮಂಗಲ ಪೊಲೀಸ್ ಠಾಣೆ ಗ್ರಾಮದ ಮಧ್ಯಭಾಗದಲ್ಲಿರುವುದರಿಂದ ಹಲವು ಸಮಸ್ಯೆಗಳ ಆಗರವಾಗಿದೆ. ಪೊಲೀಸ್ ಠಾಣೆಗಳಲ್ಲಿ ದೌರ್ಜನ್ಯ ನಡೆಯುತ್ತದೆ ಎಂಬ ಕೆಲವು ದೂರು, ಸಾರ್ವಜನಿಕರ ಸಂಶಯವನ್ನು ಇನ್ನು ಮುಂದೆ ದಾಖಲೆ ಸಮೇತ ನಿವಾರಿಸಬಹುದು ಎಂಬ ವಿಶ್ವಾಸವನ್ನು ಠಾಣೆ ಸಬ್ ಇನ್ಸ್ಪೆಕ್ಟರ್ ಬಿ.ಆರ್.ಜಗದೀಶ್ ವ್ಯಕ್ತಪಡಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>