<p>ಸರ್ಕಾರದ ದೂರದೃಷ್ಟಿ ಕೊರತೆಯಿಂದ ಇತ್ತೀಚೆಗೆ ಕೆಲ ಯೋಜನೆಗಳು ಯಶಸ್ವಿಯಾಗದಿರುವುದು ಸಾಮಾನ್ಯವಾಗಿದೆ. ಇಂತಹ ಘಟನೆಯೊಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಕೊಂಡಜ್ಜಿಯ ಕುಡಿಯುವ ನೀರಿನ ಯೋಜನೆಯಾದ `ರಾಜೀವ್ ಗಾಂಧಿ ಸಬ್ ಡಿವಿಜನ್ ಯೋಜನೆ'ಯಿಂದಾಗಿದೆ.</p>.<p>ಭದ್ರಾ ಜಲಾಶಯದ ಅಚ್ಚುಕಟ್ಟಿಗೆ ಒಳಪಡುವ ಕೊನೆ ಭಾಗದ ಕೆರೆಯಾಗಿದೆ. ಇಲ್ಲಿಗೆ ನೀರು ಬಂದು ತಲುಪುವುದೇ ಕೊನೆಗೆ. ಇಂತಹ ಕೆರೆಯಿಂದ ನೀರನ್ನು ಮೇಲೆತ್ತಿ ಕುಡಿಯುವ ನೀರಿಗಾಗಿ ಬಳಸಲು `ರಾಜೀವ್ ಗಾಂಧಿ ಸಬ್ಡಿವಿಜನ್ ಯೋಜನೆ ` ಅಡಿ ಸುಮಾರು ರೂ 677.71 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕುಡಿಯುವ ನೀರಿನ ಯೋಜನೆಯಿಂದ ಕೊಂಡಜ್ಜಿ ಸೇರಿದಂತೆ, ಬುಳ್ಳಾಪುರ, ಕೆಂಚನಹಳ್ಳಿ, ಕುರುಬನಹಳ್ಳಿ, ಹೊಟ್ಟಿಗನಹಳ್ಳಿ, ಸಾರಥಿ, ಗುತ್ತೂರು, ಗಂಗನರಸಿ, ದಿಟೂರು, ಪಾಮೆನಹಳ್ಳಿ. ಅಮರಾವತಿ ಸೇರಿ 11 ಗ್ರಾಮಗಳಿಗೆ ಕುಡಿಯುವ ನೀರೊದಗಿಸುವ ಯೋಜನೆಯೇನೂ ಸರಿ ಇದೆ.</p>.<p>ಆದರೆ ಸರ್ಕಾರದ ಮುಂದಾಲೋಚನೆ ಕೊರತೆಯಿಂದ ಇಲ್ಲಿನ ರೈತರಿಗೆ ತೊಂದರೆಯಾಗಿದೆ. ಈ ಯೋಜನೆಯೂ ಇಲ್ಲಿಯ ರೈತರಿಗೆ ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಸಿದುಕೊಂಡಂತಾಗಿದೆ. ಏಕೆಂದರೆ ಕುಡಿಯುವ ನೀರು ಸಿಕ್ಕಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಈ ಕೆರೆಯನ್ನೇ ನಂಬಿಕೊಂಡು ಸಾವಿರಾರು ಎಕರೆ ಮೆಕ್ಕೆಜೋಳ ಮತ್ತಿತರ ಬೆಳೆಗಳನ್ನು ಬೆಳೆಯುತ್ತಿದ್ದ ರೈತರಿಗೆ ಕಷ್ಟ ಬಂದಂತಾಗಿದೆ. </p>.<p>ಈ ಯೋಜನೆ ಜಾರಿಯಾಗುವಾಗ ರೈತರು ವಿರೋಧಿಸಿದ್ದರು. ಆದರೆ ಒಪ್ಪಿಕೊಳ್ಳಲು ಕೆಲವು ಕಾರಣಗಳಿದ್ದವು. ಅವುಗಳೆಂದರೆ: 1. ಈ ಕೆರೆ ಭದ್ರಾ ಜಲಾಶಯದ ಕೊನೆ ಭಾಗದ ಕೆರೆಯಾಗಿದ್ದರಿಂದ ಈ ಯೋಜನೆಯಿಂದಾದರೂ ನಮ್ಮೂರ ಕೆರೆಗೆ ವರ್ಷ ಪೂರ್ಣ ತುಂಬಿ ಹರಿಯಬಹುದೆಂಬ ಆಸೆ ರೈತರಲ್ಲಿ ಇತ್ತು. 2. ಯೋಜನೆ ಕಾರ್ಯ ಆರಂಭಗೊಂಡಾಗ, ರೈತರ ಬೆಳೆಯ ನೀರೇನು ಕುಡಿಯುವ ನೀರಿಗೆ ಉಪಯೋಗಿಸುವುದಿಲ್ಲ. ಬದಲಾಗಿ ರೈತರಿಂದ ಹೆಚ್ಚುವರಿಯಾದ ನೀರನ್ನು ಮಾತ್ರ ಯೋಜನೆಗೆ ಬಳಸಲಾಗುವುದು ಎಂದು ಹೇಳಲಾಗುತಿತ್ತು. 3. ಈ ಕೆರೆಗೆ ಹರಿಹರದ ತುಂಗಾ ಭದ್ರಾ ನದಿಯಿಂದ ಕೊಂಡಜ್ಜಿ ಕೆರೆಗೆ ನೀರನ್ನು ಲಿಫ್ಟ್ ಮಾಡಿ ನಂತರ ಕುಡಿಯುವ ನೀರನ್ನು 11 ಹಳ್ಳಿಗೆ ಬಿಡಲಾಗುವುದು ಎಂದು ಹೇಳಿದ್ದರು.</p>.<p>ಆದರೆ ಈಗ ಈ ಯೋಜನೆ ಪೂರ್ಣಗೊಂಡು ಎಲ್ಲಾ ಹಳ್ಳಿಗಳಿಗೆ ಪೂರೈಕೆಯಾಗುತ್ತಿದ್ದರೂ, ಯಾವ ನದಿಯಿಂದಾಗಲಿ ಅಥವಾ ಯಾವುದೇ ಜಲಾಶಯದಿಂದಲೂ ನೇರವಾಗಿ ಕೆರೆಗೆ ನೀರು ತುಂಬಿಸುತ್ತಿಲ್ಲ. ಈ ಯೋಜನೆ ಬರುವುದಕ್ಕಿಂತ ಮುಂಚೆ ಇದ್ದ ಪ್ರಮಾಣದಲ್ಲಿಯೇ ಕೆರೆಗೆ ನೀರು ಬರುತ್ತಿದೆ. ರೈತರ ಬೆಳೆಗೆ ಬರಬೇಕಾಗಿದ್ದ ನೀರು ಕುಡಿಯುವ ನೀರಿಗೆ ಹೋಗುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ.</p>.<p>ಈ ಕೆರೆಗೆ ಕುಡಿಯುವ ನೀರಿನ ಯೋಜನೆ ಅಳವಡಿಸಿದ್ದರಿಂದ ವರ್ಷದ ಎರಡು ಬೆಳೆ ಬತ್ತ ಬೆಳೆಯತ್ತಿದ್ದ ರೈತರು ಈ ವರ್ಷ ಮಳೆಗಾಲದಲ್ಲಿಯೇ ಬತ್ತ ಬೆಳೆಯಲು ಪರದಾಡುವಂತಾಗಿದೆ. ಈ ಸಮಸ್ಯೆಗೆ ಅಧಿಕಾರಿಗಳಾಗಲಿ, ರಾಜಕಾರಣಿಗಳಾಗಲಿ ಸ್ಪಷ್ಟವಾದ ಉತ್ತರ ನೀಡುತ್ತಿಲ್ಲ. ಹಾರಿಕೆಯ ಉತ್ತರ ನೀಡುತ್ತಿದ್ದರೆ. ಚುನಾವಣೆಯಲ್ಲಿ ಮಾತ್ರ ಜನರ ಸಮಸ್ಯೆಗಳನ್ನು ಆಲಿಸುವ ರಾಜಕಾರಣಿಗಳು ಈ ಕಡೆ ಗಮನ ಹರಿಸಿ ಸಂಕಷ್ಟದಲ್ಲಿರುವ ರೈತರಿಗೆ ಶಾಶ್ವತ ಪರಿಹಾರ ಒದಗಿಸುವ ಪ್ರಯತ್ನ ಮಾಡಬೇಕಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸರ್ಕಾರದ ದೂರದೃಷ್ಟಿ ಕೊರತೆಯಿಂದ ಇತ್ತೀಚೆಗೆ ಕೆಲ ಯೋಜನೆಗಳು ಯಶಸ್ವಿಯಾಗದಿರುವುದು ಸಾಮಾನ್ಯವಾಗಿದೆ. ಇಂತಹ ಘಟನೆಯೊಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಕೊಂಡಜ್ಜಿಯ ಕುಡಿಯುವ ನೀರಿನ ಯೋಜನೆಯಾದ `ರಾಜೀವ್ ಗಾಂಧಿ ಸಬ್ ಡಿವಿಜನ್ ಯೋಜನೆ'ಯಿಂದಾಗಿದೆ.</p>.<p>ಭದ್ರಾ ಜಲಾಶಯದ ಅಚ್ಚುಕಟ್ಟಿಗೆ ಒಳಪಡುವ ಕೊನೆ ಭಾಗದ ಕೆರೆಯಾಗಿದೆ. ಇಲ್ಲಿಗೆ ನೀರು ಬಂದು ತಲುಪುವುದೇ ಕೊನೆಗೆ. ಇಂತಹ ಕೆರೆಯಿಂದ ನೀರನ್ನು ಮೇಲೆತ್ತಿ ಕುಡಿಯುವ ನೀರಿಗಾಗಿ ಬಳಸಲು `ರಾಜೀವ್ ಗಾಂಧಿ ಸಬ್ಡಿವಿಜನ್ ಯೋಜನೆ ` ಅಡಿ ಸುಮಾರು ರೂ 677.71 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕುಡಿಯುವ ನೀರಿನ ಯೋಜನೆಯಿಂದ ಕೊಂಡಜ್ಜಿ ಸೇರಿದಂತೆ, ಬುಳ್ಳಾಪುರ, ಕೆಂಚನಹಳ್ಳಿ, ಕುರುಬನಹಳ್ಳಿ, ಹೊಟ್ಟಿಗನಹಳ್ಳಿ, ಸಾರಥಿ, ಗುತ್ತೂರು, ಗಂಗನರಸಿ, ದಿಟೂರು, ಪಾಮೆನಹಳ್ಳಿ. ಅಮರಾವತಿ ಸೇರಿ 11 ಗ್ರಾಮಗಳಿಗೆ ಕುಡಿಯುವ ನೀರೊದಗಿಸುವ ಯೋಜನೆಯೇನೂ ಸರಿ ಇದೆ.</p>.<p>ಆದರೆ ಸರ್ಕಾರದ ಮುಂದಾಲೋಚನೆ ಕೊರತೆಯಿಂದ ಇಲ್ಲಿನ ರೈತರಿಗೆ ತೊಂದರೆಯಾಗಿದೆ. ಈ ಯೋಜನೆಯೂ ಇಲ್ಲಿಯ ರೈತರಿಗೆ ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಸಿದುಕೊಂಡಂತಾಗಿದೆ. ಏಕೆಂದರೆ ಕುಡಿಯುವ ನೀರು ಸಿಕ್ಕಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಈ ಕೆರೆಯನ್ನೇ ನಂಬಿಕೊಂಡು ಸಾವಿರಾರು ಎಕರೆ ಮೆಕ್ಕೆಜೋಳ ಮತ್ತಿತರ ಬೆಳೆಗಳನ್ನು ಬೆಳೆಯುತ್ತಿದ್ದ ರೈತರಿಗೆ ಕಷ್ಟ ಬಂದಂತಾಗಿದೆ. </p>.<p>ಈ ಯೋಜನೆ ಜಾರಿಯಾಗುವಾಗ ರೈತರು ವಿರೋಧಿಸಿದ್ದರು. ಆದರೆ ಒಪ್ಪಿಕೊಳ್ಳಲು ಕೆಲವು ಕಾರಣಗಳಿದ್ದವು. ಅವುಗಳೆಂದರೆ: 1. ಈ ಕೆರೆ ಭದ್ರಾ ಜಲಾಶಯದ ಕೊನೆ ಭಾಗದ ಕೆರೆಯಾಗಿದ್ದರಿಂದ ಈ ಯೋಜನೆಯಿಂದಾದರೂ ನಮ್ಮೂರ ಕೆರೆಗೆ ವರ್ಷ ಪೂರ್ಣ ತುಂಬಿ ಹರಿಯಬಹುದೆಂಬ ಆಸೆ ರೈತರಲ್ಲಿ ಇತ್ತು. 2. ಯೋಜನೆ ಕಾರ್ಯ ಆರಂಭಗೊಂಡಾಗ, ರೈತರ ಬೆಳೆಯ ನೀರೇನು ಕುಡಿಯುವ ನೀರಿಗೆ ಉಪಯೋಗಿಸುವುದಿಲ್ಲ. ಬದಲಾಗಿ ರೈತರಿಂದ ಹೆಚ್ಚುವರಿಯಾದ ನೀರನ್ನು ಮಾತ್ರ ಯೋಜನೆಗೆ ಬಳಸಲಾಗುವುದು ಎಂದು ಹೇಳಲಾಗುತಿತ್ತು. 3. ಈ ಕೆರೆಗೆ ಹರಿಹರದ ತುಂಗಾ ಭದ್ರಾ ನದಿಯಿಂದ ಕೊಂಡಜ್ಜಿ ಕೆರೆಗೆ ನೀರನ್ನು ಲಿಫ್ಟ್ ಮಾಡಿ ನಂತರ ಕುಡಿಯುವ ನೀರನ್ನು 11 ಹಳ್ಳಿಗೆ ಬಿಡಲಾಗುವುದು ಎಂದು ಹೇಳಿದ್ದರು.</p>.<p>ಆದರೆ ಈಗ ಈ ಯೋಜನೆ ಪೂರ್ಣಗೊಂಡು ಎಲ್ಲಾ ಹಳ್ಳಿಗಳಿಗೆ ಪೂರೈಕೆಯಾಗುತ್ತಿದ್ದರೂ, ಯಾವ ನದಿಯಿಂದಾಗಲಿ ಅಥವಾ ಯಾವುದೇ ಜಲಾಶಯದಿಂದಲೂ ನೇರವಾಗಿ ಕೆರೆಗೆ ನೀರು ತುಂಬಿಸುತ್ತಿಲ್ಲ. ಈ ಯೋಜನೆ ಬರುವುದಕ್ಕಿಂತ ಮುಂಚೆ ಇದ್ದ ಪ್ರಮಾಣದಲ್ಲಿಯೇ ಕೆರೆಗೆ ನೀರು ಬರುತ್ತಿದೆ. ರೈತರ ಬೆಳೆಗೆ ಬರಬೇಕಾಗಿದ್ದ ನೀರು ಕುಡಿಯುವ ನೀರಿಗೆ ಹೋಗುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ.</p>.<p>ಈ ಕೆರೆಗೆ ಕುಡಿಯುವ ನೀರಿನ ಯೋಜನೆ ಅಳವಡಿಸಿದ್ದರಿಂದ ವರ್ಷದ ಎರಡು ಬೆಳೆ ಬತ್ತ ಬೆಳೆಯತ್ತಿದ್ದ ರೈತರು ಈ ವರ್ಷ ಮಳೆಗಾಲದಲ್ಲಿಯೇ ಬತ್ತ ಬೆಳೆಯಲು ಪರದಾಡುವಂತಾಗಿದೆ. ಈ ಸಮಸ್ಯೆಗೆ ಅಧಿಕಾರಿಗಳಾಗಲಿ, ರಾಜಕಾರಣಿಗಳಾಗಲಿ ಸ್ಪಷ್ಟವಾದ ಉತ್ತರ ನೀಡುತ್ತಿಲ್ಲ. ಹಾರಿಕೆಯ ಉತ್ತರ ನೀಡುತ್ತಿದ್ದರೆ. ಚುನಾವಣೆಯಲ್ಲಿ ಮಾತ್ರ ಜನರ ಸಮಸ್ಯೆಗಳನ್ನು ಆಲಿಸುವ ರಾಜಕಾರಣಿಗಳು ಈ ಕಡೆ ಗಮನ ಹರಿಸಿ ಸಂಕಷ್ಟದಲ್ಲಿರುವ ರೈತರಿಗೆ ಶಾಶ್ವತ ಪರಿಹಾರ ಒದಗಿಸುವ ಪ್ರಯತ್ನ ಮಾಡಬೇಕಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>