<p><strong>ಮುದಗಲ್ಲ:</strong> ಸಮೀಪದ ಕನ್ನಾಪೂರಹಟ್ಟಿ ಗ್ರಾಮದ ಬಳಿ ಇರುವ ಕೆರೆ ತೀರದ ಪ್ರದೇಶವನ್ನು ಅಕ್ಕಪಕ್ಕ ಜಮೀನು ಮಾಲೀಕರು ಒತ್ತುವರಿ ಮಾಡಿಕೊಂಡಿದ್ದು, ಸೂಚನೆ ಹಾಗೂ ಮೌಖಿಕ ತಾಕೀತು ಮಾಡುವ ಮೂಲಕ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.<br /> <br /> ಕನ್ನಾಪುರಹಟ್ಟಿ ಕೆರೆ ತೀರದ ಪ್ರದೇಶದ ಪಕ್ಕದಲ್ಲಿರುವ ಕೂಡ್ಲೆಪ್ಪ ಹೊಳೆಯಪ್ಪ ಎಂಬುವವರು ತಮ್ಮ 4 ಎಕರೆ 32ಗುಂಟೆ ಜಮೀನನ್ನು ಆನಂದ ಎಂಬುವವರಿಗೆ ಮಾರಾಟ ಮಾಡಿದ್ದಾರೆ. ಖರೀದಿ ಮಾಡಿದ ಆನಂದ ಎನ್ನುವವರು ಕೆರೆ ತೀರವನ್ನು ಅತಿಕ್ರಮಣ ಮಾಡಿದ್ದಾರೆ ಎಂದು ಪ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ರಾಮಣ್ಣ ಹಿರೇಮನಿ ಆರೋಪಿಸಿದ್ದಾರೆ.<br /> <br /> ಕಳೆದ ವರ್ಷವಷ್ಟೆ ಲಕ್ಷಾಂತರ ಹಣ ಖರ್ಚು ಮಾಡಿ ಕೆರೆಯ ಹೂಳು ಎತ್ತಲಾಗಿದೆ. ಆದರೆ, ಅಕ್ಕ ಪಕ್ಕದ ಜಮೀನು ಮಾಲೀಕರು ಒತ್ತುವರಿ ಮಾಡಿಕೊಂಡು ಭಾರಿ ಪ್ರಮಾಣದ ತಡೆಗೋಡೆ ನಿರ್ಮಿಸಿದ್ದು ಇದರಿಂದ ಕೆರೆಯ ಮುಖ್ಯ ಒಡ್ಡು ಒಡೆದು ಹೋಗುವ ಭೀತಿ ಎದುರಾಗಿದೆ. ಈ ನಿಟ್ಟಿನಲ್ಲಿ ಅತಿಕ್ರಮಿಸಿಕೊಂಡ ಪಕ್ಕದ ಜಮೀನುಗಳ ಮಾಲೀಕರ ವಿರುದ್ಧ ಕ್ರಮ ಕೈಕೊಳ್ಳುವ ಅಗತ್ಯವಿದೆ.<br /> <br /> ಈ ಕುರಿತು ತಹಸೀಲ್ದಾರ ಎಂ.ರಾಚಪ್ಪ ಅವರನ್ನು `ಪ್ರಜಾವಾಣಿ~ ಸಂಪರ್ಕಿಸಿದಾಗ, `ಒತ್ತುವರಿ ತೆರವಿಗೆ 15 ದಿನಗಳ ಕಾಲಾವಕಾಶ ನೀಡಲಾಗಿದೆ. ತೆರವುಗೊಳಿಸದಿದ್ದಲ್ಲಿ ಸೂಕ್ತ ಕ್ರಮ ಕೈಕೊಳ್ಳುವುದಾಗಿ ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುದಗಲ್ಲ:</strong> ಸಮೀಪದ ಕನ್ನಾಪೂರಹಟ್ಟಿ ಗ್ರಾಮದ ಬಳಿ ಇರುವ ಕೆರೆ ತೀರದ ಪ್ರದೇಶವನ್ನು ಅಕ್ಕಪಕ್ಕ ಜಮೀನು ಮಾಲೀಕರು ಒತ್ತುವರಿ ಮಾಡಿಕೊಂಡಿದ್ದು, ಸೂಚನೆ ಹಾಗೂ ಮೌಖಿಕ ತಾಕೀತು ಮಾಡುವ ಮೂಲಕ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.<br /> <br /> ಕನ್ನಾಪುರಹಟ್ಟಿ ಕೆರೆ ತೀರದ ಪ್ರದೇಶದ ಪಕ್ಕದಲ್ಲಿರುವ ಕೂಡ್ಲೆಪ್ಪ ಹೊಳೆಯಪ್ಪ ಎಂಬುವವರು ತಮ್ಮ 4 ಎಕರೆ 32ಗುಂಟೆ ಜಮೀನನ್ನು ಆನಂದ ಎಂಬುವವರಿಗೆ ಮಾರಾಟ ಮಾಡಿದ್ದಾರೆ. ಖರೀದಿ ಮಾಡಿದ ಆನಂದ ಎನ್ನುವವರು ಕೆರೆ ತೀರವನ್ನು ಅತಿಕ್ರಮಣ ಮಾಡಿದ್ದಾರೆ ಎಂದು ಪ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ರಾಮಣ್ಣ ಹಿರೇಮನಿ ಆರೋಪಿಸಿದ್ದಾರೆ.<br /> <br /> ಕಳೆದ ವರ್ಷವಷ್ಟೆ ಲಕ್ಷಾಂತರ ಹಣ ಖರ್ಚು ಮಾಡಿ ಕೆರೆಯ ಹೂಳು ಎತ್ತಲಾಗಿದೆ. ಆದರೆ, ಅಕ್ಕ ಪಕ್ಕದ ಜಮೀನು ಮಾಲೀಕರು ಒತ್ತುವರಿ ಮಾಡಿಕೊಂಡು ಭಾರಿ ಪ್ರಮಾಣದ ತಡೆಗೋಡೆ ನಿರ್ಮಿಸಿದ್ದು ಇದರಿಂದ ಕೆರೆಯ ಮುಖ್ಯ ಒಡ್ಡು ಒಡೆದು ಹೋಗುವ ಭೀತಿ ಎದುರಾಗಿದೆ. ಈ ನಿಟ್ಟಿನಲ್ಲಿ ಅತಿಕ್ರಮಿಸಿಕೊಂಡ ಪಕ್ಕದ ಜಮೀನುಗಳ ಮಾಲೀಕರ ವಿರುದ್ಧ ಕ್ರಮ ಕೈಕೊಳ್ಳುವ ಅಗತ್ಯವಿದೆ.<br /> <br /> ಈ ಕುರಿತು ತಹಸೀಲ್ದಾರ ಎಂ.ರಾಚಪ್ಪ ಅವರನ್ನು `ಪ್ರಜಾವಾಣಿ~ ಸಂಪರ್ಕಿಸಿದಾಗ, `ಒತ್ತುವರಿ ತೆರವಿಗೆ 15 ದಿನಗಳ ಕಾಲಾವಕಾಶ ನೀಡಲಾಗಿದೆ. ತೆರವುಗೊಳಿಸದಿದ್ದಲ್ಲಿ ಸೂಕ್ತ ಕ್ರಮ ಕೈಕೊಳ್ಳುವುದಾಗಿ ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>