<p><strong>ಶಿಡ್ಲಘಟ್ಟ: </strong>ಪಟ್ಟಣ ಪ್ರವೇಶಿಸುತ್ತಿದ್ದಂತೆಯೆ ಸ್ವಾಗತಿಸುವುದು ಒಂದೆಡೆ ಕೊಳಚೆ ನೀರು ನಿಂತಿರುವ ದೊಡ್ಡ ಮೋರಿಯಾದರೆ, ಮತ್ತೊಂದೆಡೆ ಕೊಳಚೆ ನೀರಿನಲ್ಲಿಯೇ ಬೆಳೆದು ನಿಂತಿರುವ ಕಳ್ಳಿ ಹಾಗೂ ಕಳೆಗಿಡಗಳ ಸಮುಚ್ಚಯ.<br /> <br /> ಒಂದು ಕಾಲದಲ್ಲಿ ಗೌಡನ ಕೆರೆ ತುಂಬಿದಾಗ ನೀರು ಹರಿಯಲು ಮಾಡಿದ್ದ ಮೋರಿ ಈಗ ಕೇವಲ ಕಲುಷಿತ ಪ್ರದೇಶವಾಗಿ ಮಾರ್ಪಟ್ಟಿದೆ. ಗೌಡನ ಕೆರೆಯೂ ಕಳೆಗಿಡಗಳಿಂದ ಆವೃತವಾಗಿ ಒಳಗಿನ ನೀರು ಕೇವಲ ಸೊಳ್ಳೆಗಳ ತಾಣವಾಗಿ ಮಾತ್ರವಿದ್ದು, ಅಲ್ಲಿಂದ ಹೊರಟ ಮೋರಿಯೂ ಅದೇ ಪರಿಸ್ಥಿತಿಯಲ್ಲಿದೆ. <br /> <br /> ನೀರು ಹರಿಯುವಲ್ಲಿ ತ್ಯಾಜ್ಯ ತುಂಬಿಕೊಂಡಿರುವುದರಿಂದಾಗಿ ನೀರು ಹರಿಯದೇ ಅಲ್ಲಲ್ಲೇ ನಿಂತಿರುತ್ತದೆ. ಬಸ್ ನಿಲ್ದಾಣದ ಸಮೀಪವೇ ಇರುವ ಇಲ್ಲಿನ ಪ್ರದೇಶದಲ್ಲಿ ಅತಿ ಹೆಚ್ಚು ಜನಸಂಚಾರ, ಹಣ್ಣುಗಳ ಅಂಗಡಿ ಹಾಗೂ ಹೋಟೆಲುಗಳಿವೆ. ಈ ಪ್ರದೇಶದಲ್ಲಿ ಉತ್ಪತ್ತಿಯಾಗುವ ಸಮಸ್ತ ತ್ಯಾಜ್ಯ ಸುರಿಯುವ ತಾಣವಾಗಿ ಈ ಮೋರಿ ಬಳಕೆಯಾಗುತ್ತಿದೆ.<br /> <br /> `ಗೌಡನ ಕೆರೆಯನ್ನು ನೀರಾವರಿ ಇಲಾಖೆ ಅಧಿಕಾರಿಗಳು ಸ್ವಚ್ಛಗೊಳಿಸದೆ ಈ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣರಾಗಿದ್ದಾರೆ. ಈ ಮೋರಿಯ ಬದಲು ನೀರು ಹೊರಕ್ಕೆ ಹರಿಯಲು ದಪ್ಪ ಪೈಪ್ಲೈನ್ ನಿರ್ಮಿಸಿ, ಉಳಿದ ಪ್ರದೇಶವನ್ನು ಒಂದು ಉದ್ಯಾನ ರೂಪಿಸಿದರೆ ಊರಿಗೇ ಒಂದು ಕಳೆ ಬರುತ್ತದೆ. <br /> <br /> ವಾಯುಸಂಚಾರ ಮಾಡುವರಿಗೆ, ವೃದ್ಧರಿಗೆ, ಮಕ್ಕಳಿಗೆ ಅನುಕೂಲವೂ ಆಗುತ್ತದೆ. ಆದರೆ ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿಯಿಲ್ಲ. ನಮ್ಮ ಊರಿಗೆ ಆಗಮಿಸುವ ಹೊಸಬರು ಇದು ಯಾವ ಊರು ಎಂದು ಕೇಳುತ್ತಾರೆ.</p>.<p>ಪಟ್ಟಣಕ್ಕೆ ಸ್ವಾಗತಿಸುವ ಕಮಾನೊಂದನ್ನು ಕೂಡ ನಿರ್ಮಿಸಿಲ್ಲ. ಊರಿಗೆ ಆಗಮಿಸಿದಾಗ ಸ್ವಚ್ಛವಾದ ವಾತಾವರಣ ನಮ್ಮನ್ನು ಸ್ವಾಗತಿಸಬೇಕು. ಸದಾ ಕಲುಷಿತ ವಾತಾವರಣದಿಂದ ಸಾಂಕ್ರಾಮಿಕ ರೋಗ ಹೆಚ್ಚುತ್ತವೆ~ ಎನ್ನುತ್ತಾರೆ ಬಸ್ನಿಲ್ದಾಣದ ಬಳಿ ಅಂಗಡಿ ಹೊಂದಿರುವ ವಿ.ಮಂಜುನಾಥ್.<br /> <br /> `ಗೌಡನ ಕೆರೆಯಿಂದ ಕೋಡಿ ನೀರು ಹರಿಯಲು ಮಾಡಿರುವ ಈ ಮೋರಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುತ್ತದೆ. <br /> <br /> ಪುರಸಭೆಯಿಂದ ಇದನ್ನು ಏನೂ ಮಾಡಲು ಅಧಿಕಾರವಿಲ್ಲ. ಆದರೂ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಹಲವು ತಿಂಗಳ ಹಿಂದೆ ಮೋರಿಯ ಸ್ವಲ್ಪ ಭಾಗವನ್ನು ಪುರಸಭೆಯಿಂದ ಸ್ವಚ್ಛಗೊಳಿಸಿದ್ದೆವು.<br /> <br /> ಊರಿನೊಳಗೆ ನಾವೇನು ಸ್ವಚ್ಛತೆ ಕಾರ್ಯ ಕೈಗೊಂಡರೂ ಪುರ ಪ್ರವೇಶದಲ್ಲಿರುವ ಈ ಅನೈರ್ಮಲ್ಯತೆ ಎಲ್ಲರಿಗೂ ಕೆಟ್ಟ ಸಂದೇಶ ನೀಡುತ್ತದೆ. ಶಾಸಕರು ಮನಸು ಮಾಡಿದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಈ ಪ್ರದೇಶವನ್ನು ಉತ್ತಮಗೊಳಿಸಬಹುದು~ ಎಂದು ಪುರಸಭೆಯ ಮುಖ್ಯಾಧಿಕಾರಿ ಚನ್ನೇಗೌಡ ತಿಳಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಡ್ಲಘಟ್ಟ: </strong>ಪಟ್ಟಣ ಪ್ರವೇಶಿಸುತ್ತಿದ್ದಂತೆಯೆ ಸ್ವಾಗತಿಸುವುದು ಒಂದೆಡೆ ಕೊಳಚೆ ನೀರು ನಿಂತಿರುವ ದೊಡ್ಡ ಮೋರಿಯಾದರೆ, ಮತ್ತೊಂದೆಡೆ ಕೊಳಚೆ ನೀರಿನಲ್ಲಿಯೇ ಬೆಳೆದು ನಿಂತಿರುವ ಕಳ್ಳಿ ಹಾಗೂ ಕಳೆಗಿಡಗಳ ಸಮುಚ್ಚಯ.<br /> <br /> ಒಂದು ಕಾಲದಲ್ಲಿ ಗೌಡನ ಕೆರೆ ತುಂಬಿದಾಗ ನೀರು ಹರಿಯಲು ಮಾಡಿದ್ದ ಮೋರಿ ಈಗ ಕೇವಲ ಕಲುಷಿತ ಪ್ರದೇಶವಾಗಿ ಮಾರ್ಪಟ್ಟಿದೆ. ಗೌಡನ ಕೆರೆಯೂ ಕಳೆಗಿಡಗಳಿಂದ ಆವೃತವಾಗಿ ಒಳಗಿನ ನೀರು ಕೇವಲ ಸೊಳ್ಳೆಗಳ ತಾಣವಾಗಿ ಮಾತ್ರವಿದ್ದು, ಅಲ್ಲಿಂದ ಹೊರಟ ಮೋರಿಯೂ ಅದೇ ಪರಿಸ್ಥಿತಿಯಲ್ಲಿದೆ. <br /> <br /> ನೀರು ಹರಿಯುವಲ್ಲಿ ತ್ಯಾಜ್ಯ ತುಂಬಿಕೊಂಡಿರುವುದರಿಂದಾಗಿ ನೀರು ಹರಿಯದೇ ಅಲ್ಲಲ್ಲೇ ನಿಂತಿರುತ್ತದೆ. ಬಸ್ ನಿಲ್ದಾಣದ ಸಮೀಪವೇ ಇರುವ ಇಲ್ಲಿನ ಪ್ರದೇಶದಲ್ಲಿ ಅತಿ ಹೆಚ್ಚು ಜನಸಂಚಾರ, ಹಣ್ಣುಗಳ ಅಂಗಡಿ ಹಾಗೂ ಹೋಟೆಲುಗಳಿವೆ. ಈ ಪ್ರದೇಶದಲ್ಲಿ ಉತ್ಪತ್ತಿಯಾಗುವ ಸಮಸ್ತ ತ್ಯಾಜ್ಯ ಸುರಿಯುವ ತಾಣವಾಗಿ ಈ ಮೋರಿ ಬಳಕೆಯಾಗುತ್ತಿದೆ.<br /> <br /> `ಗೌಡನ ಕೆರೆಯನ್ನು ನೀರಾವರಿ ಇಲಾಖೆ ಅಧಿಕಾರಿಗಳು ಸ್ವಚ್ಛಗೊಳಿಸದೆ ಈ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣರಾಗಿದ್ದಾರೆ. ಈ ಮೋರಿಯ ಬದಲು ನೀರು ಹೊರಕ್ಕೆ ಹರಿಯಲು ದಪ್ಪ ಪೈಪ್ಲೈನ್ ನಿರ್ಮಿಸಿ, ಉಳಿದ ಪ್ರದೇಶವನ್ನು ಒಂದು ಉದ್ಯಾನ ರೂಪಿಸಿದರೆ ಊರಿಗೇ ಒಂದು ಕಳೆ ಬರುತ್ತದೆ. <br /> <br /> ವಾಯುಸಂಚಾರ ಮಾಡುವರಿಗೆ, ವೃದ್ಧರಿಗೆ, ಮಕ್ಕಳಿಗೆ ಅನುಕೂಲವೂ ಆಗುತ್ತದೆ. ಆದರೆ ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿಯಿಲ್ಲ. ನಮ್ಮ ಊರಿಗೆ ಆಗಮಿಸುವ ಹೊಸಬರು ಇದು ಯಾವ ಊರು ಎಂದು ಕೇಳುತ್ತಾರೆ.</p>.<p>ಪಟ್ಟಣಕ್ಕೆ ಸ್ವಾಗತಿಸುವ ಕಮಾನೊಂದನ್ನು ಕೂಡ ನಿರ್ಮಿಸಿಲ್ಲ. ಊರಿಗೆ ಆಗಮಿಸಿದಾಗ ಸ್ವಚ್ಛವಾದ ವಾತಾವರಣ ನಮ್ಮನ್ನು ಸ್ವಾಗತಿಸಬೇಕು. ಸದಾ ಕಲುಷಿತ ವಾತಾವರಣದಿಂದ ಸಾಂಕ್ರಾಮಿಕ ರೋಗ ಹೆಚ್ಚುತ್ತವೆ~ ಎನ್ನುತ್ತಾರೆ ಬಸ್ನಿಲ್ದಾಣದ ಬಳಿ ಅಂಗಡಿ ಹೊಂದಿರುವ ವಿ.ಮಂಜುನಾಥ್.<br /> <br /> `ಗೌಡನ ಕೆರೆಯಿಂದ ಕೋಡಿ ನೀರು ಹರಿಯಲು ಮಾಡಿರುವ ಈ ಮೋರಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುತ್ತದೆ. <br /> <br /> ಪುರಸಭೆಯಿಂದ ಇದನ್ನು ಏನೂ ಮಾಡಲು ಅಧಿಕಾರವಿಲ್ಲ. ಆದರೂ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಹಲವು ತಿಂಗಳ ಹಿಂದೆ ಮೋರಿಯ ಸ್ವಲ್ಪ ಭಾಗವನ್ನು ಪುರಸಭೆಯಿಂದ ಸ್ವಚ್ಛಗೊಳಿಸಿದ್ದೆವು.<br /> <br /> ಊರಿನೊಳಗೆ ನಾವೇನು ಸ್ವಚ್ಛತೆ ಕಾರ್ಯ ಕೈಗೊಂಡರೂ ಪುರ ಪ್ರವೇಶದಲ್ಲಿರುವ ಈ ಅನೈರ್ಮಲ್ಯತೆ ಎಲ್ಲರಿಗೂ ಕೆಟ್ಟ ಸಂದೇಶ ನೀಡುತ್ತದೆ. ಶಾಸಕರು ಮನಸು ಮಾಡಿದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಈ ಪ್ರದೇಶವನ್ನು ಉತ್ತಮಗೊಳಿಸಬಹುದು~ ಎಂದು ಪುರಸಭೆಯ ಮುಖ್ಯಾಧಿಕಾರಿ ಚನ್ನೇಗೌಡ ತಿಳಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>