<p>ಲಖನೌ: ಭ್ರಷ್ಟಾಚಾರದ ವಿರುದ್ಧ ಜೋರಾಗಿ ಆಂದೋಲನಗಳು ನಡೆಯುತ್ತಿರುವ ಹೊತ್ತಿನಲ್ಲೇ ಉತ್ತರ ಪ್ರದೇಶದ ಲೋಕೋಪಯೋಗಿ ಸಚಿವ ಶಿವಪಾಲ್ ಸಿಂಗ್ ಯಾದವ್ ತಮ್ಮ ಇಲಾಖೆಯ ಅಧಿಕಾರಿಗಳಿಗೆ `ಹೆಚ್ಚು ಕೆಲಸ ಮಾಡಿ, ಸ್ವಲ್ಪ ಗಂಟನ್ನೂ ಮಾಡಿಕೊಳ್ಳಿ~ ಎಂಬ `ಕಿವಿಮಾತು~ ಹೇಳಿದ್ದಾರೆ ಎನ್ನಲಾಗಿದೆ.<br /> <br /> ಇಟಾ ಜಿಲ್ಲೆಯಲ್ಲಿ ಅಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಸೋದರರೂ ಆದ ಸಚಿವ ಶಿವಪಾಲ್ ಸಿಂಗ್ ಯಾದವ್ಈ `ಹಿತೋಪದೇಶ~ ಮಾಡಿದ್ದಾರೆ ಎಂದು ವರದಿಯಾಗಿದೆ<br /> <br /> ಶಿವಪಾಲ್ ಅವರ ಈ ಮಾತುಗಳು ಸ್ಥಳೀಯ ವಾಹಿನಿಗಳಲ್ಲಿ ವರದಿಯಾಗಿದ್ದು, ಈ ಬಗ್ಗೆ ಪ್ರತಿಪಕ್ಷಗಳು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿವೆ.<br /> <br /> ಸಚಿವರು ಅಧಿಕಾರಿಗಳೊಂದಿಗೆ ಮಾಧ್ಯಮಗಳ ಪ್ರವೇಶಕ್ಕೆ ಅವಕಾಶವಿರದ ಸಭೆ ನಡೆಸಿದರು. ಈ ಸಭೆಯನ್ನು ಚಿತ್ರೀಕರಿಸಲು ಅಧಿಕಾರಿಗಳು ಸ್ಥಳೀಯ ವಾಹಿನಿಯೊಂದರ ಸಿಬ್ಬಂದಿಯನ್ನು ಕರೆಸಿದ್ದರು. ಈ ಮೂಲಕ ಸಚಿವರು ಅಧಿಕಾರಿಗಳಿಗೆ ನೀಡಿದ ಬೋಧನೆ ಬಿತ್ತರಗೊಂಡಿದೆ ಎನ್ನಲಾಗಿದೆ.<br /> <br /> ಸ್ಥಳೀಯ ವಾಹಿನಿಗಳಲ್ಲಿ ಪ್ರಸಾರವಾದ ತಮ್ಮ ವಿವಾದಾತ್ಮಕ ಹೇಳಿಕೆ ಕುರಿತಂತೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿರುವ ಶಿವಪಾಲ್ ಸಿಂಗ್ ಯಾದವ್, ತಾವು ಆ ರೀತಿ ಹೇಳಿಯೇ ಇಲ್ಲ ಎಂದಿದ್ದಾರೆ.<br /> <br /> `ಲೋಕೋಪಯೋಗಿ ಸಚಿವರ ಈ ನುಡಿಗಳು ಸಮಾಜವಾದಿ ಪಕ್ಷದ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ~ ಎಂದು ಬಿಎಸ್ಪಿ ಹಿರಿಯ ಮುಖಂಡ ಸ್ವಾಮಿ ಪ್ರಸಾದ್ ಮೌರ್ಯ ಕಟುವಾಗಿ ಟೀಕಿಸಿದ್ದಾರೆ.<br /> <br /> `ಇಂತಹ ಮಾತಗಳನ್ನಾಡಲು ನಾಚಿಕೆ ಆಗಬೇಕು. ಇದರಿಂದ ಸರ್ಕಾರಿ ನೌಕರರಿಗೆ ಲಂಚ ತೆಗೆದುಕೊಳ್ಳಲು ಮುಕ್ತ ಅವಕಾಶ ನೀಡಿದಂತಾಗಿದೆ~ ಎಂದು ಬಿಜೆಪಿಯ ಲಾಲ್ಜಿ ಟಂಡನ್ ಹೇಳಿದ್ದಾರೆ.<br /> <br /> `ಸಚಿವರೊಬ್ಬರು ಇಂತಹ ಇಂತಹ ಮಾತನ್ನಾಡಿರುವುದು ದುರದೃಷ್ಟಕರ~ ಎಂದು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ರೀಟಾ ಬಹುಗುಣ ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಲಖನೌ: ಭ್ರಷ್ಟಾಚಾರದ ವಿರುದ್ಧ ಜೋರಾಗಿ ಆಂದೋಲನಗಳು ನಡೆಯುತ್ತಿರುವ ಹೊತ್ತಿನಲ್ಲೇ ಉತ್ತರ ಪ್ರದೇಶದ ಲೋಕೋಪಯೋಗಿ ಸಚಿವ ಶಿವಪಾಲ್ ಸಿಂಗ್ ಯಾದವ್ ತಮ್ಮ ಇಲಾಖೆಯ ಅಧಿಕಾರಿಗಳಿಗೆ `ಹೆಚ್ಚು ಕೆಲಸ ಮಾಡಿ, ಸ್ವಲ್ಪ ಗಂಟನ್ನೂ ಮಾಡಿಕೊಳ್ಳಿ~ ಎಂಬ `ಕಿವಿಮಾತು~ ಹೇಳಿದ್ದಾರೆ ಎನ್ನಲಾಗಿದೆ.<br /> <br /> ಇಟಾ ಜಿಲ್ಲೆಯಲ್ಲಿ ಅಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಸೋದರರೂ ಆದ ಸಚಿವ ಶಿವಪಾಲ್ ಸಿಂಗ್ ಯಾದವ್ಈ `ಹಿತೋಪದೇಶ~ ಮಾಡಿದ್ದಾರೆ ಎಂದು ವರದಿಯಾಗಿದೆ<br /> <br /> ಶಿವಪಾಲ್ ಅವರ ಈ ಮಾತುಗಳು ಸ್ಥಳೀಯ ವಾಹಿನಿಗಳಲ್ಲಿ ವರದಿಯಾಗಿದ್ದು, ಈ ಬಗ್ಗೆ ಪ್ರತಿಪಕ್ಷಗಳು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿವೆ.<br /> <br /> ಸಚಿವರು ಅಧಿಕಾರಿಗಳೊಂದಿಗೆ ಮಾಧ್ಯಮಗಳ ಪ್ರವೇಶಕ್ಕೆ ಅವಕಾಶವಿರದ ಸಭೆ ನಡೆಸಿದರು. ಈ ಸಭೆಯನ್ನು ಚಿತ್ರೀಕರಿಸಲು ಅಧಿಕಾರಿಗಳು ಸ್ಥಳೀಯ ವಾಹಿನಿಯೊಂದರ ಸಿಬ್ಬಂದಿಯನ್ನು ಕರೆಸಿದ್ದರು. ಈ ಮೂಲಕ ಸಚಿವರು ಅಧಿಕಾರಿಗಳಿಗೆ ನೀಡಿದ ಬೋಧನೆ ಬಿತ್ತರಗೊಂಡಿದೆ ಎನ್ನಲಾಗಿದೆ.<br /> <br /> ಸ್ಥಳೀಯ ವಾಹಿನಿಗಳಲ್ಲಿ ಪ್ರಸಾರವಾದ ತಮ್ಮ ವಿವಾದಾತ್ಮಕ ಹೇಳಿಕೆ ಕುರಿತಂತೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿರುವ ಶಿವಪಾಲ್ ಸಿಂಗ್ ಯಾದವ್, ತಾವು ಆ ರೀತಿ ಹೇಳಿಯೇ ಇಲ್ಲ ಎಂದಿದ್ದಾರೆ.<br /> <br /> `ಲೋಕೋಪಯೋಗಿ ಸಚಿವರ ಈ ನುಡಿಗಳು ಸಮಾಜವಾದಿ ಪಕ್ಷದ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ~ ಎಂದು ಬಿಎಸ್ಪಿ ಹಿರಿಯ ಮುಖಂಡ ಸ್ವಾಮಿ ಪ್ರಸಾದ್ ಮೌರ್ಯ ಕಟುವಾಗಿ ಟೀಕಿಸಿದ್ದಾರೆ.<br /> <br /> `ಇಂತಹ ಮಾತಗಳನ್ನಾಡಲು ನಾಚಿಕೆ ಆಗಬೇಕು. ಇದರಿಂದ ಸರ್ಕಾರಿ ನೌಕರರಿಗೆ ಲಂಚ ತೆಗೆದುಕೊಳ್ಳಲು ಮುಕ್ತ ಅವಕಾಶ ನೀಡಿದಂತಾಗಿದೆ~ ಎಂದು ಬಿಜೆಪಿಯ ಲಾಲ್ಜಿ ಟಂಡನ್ ಹೇಳಿದ್ದಾರೆ.<br /> <br /> `ಸಚಿವರೊಬ್ಬರು ಇಂತಹ ಇಂತಹ ಮಾತನ್ನಾಡಿರುವುದು ದುರದೃಷ್ಟಕರ~ ಎಂದು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ರೀಟಾ ಬಹುಗುಣ ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>