<p><strong>ತಿ.ನರಸೀಪುರ:</strong> ಪಟ್ಟಣದ ಪ್ರಮುಖ ವಾಣಿಜ್ಯ ರಸ್ತೆಗಳಾದ ಲಿಂಕ್ ರಸ್ತೆ ಹಾಗೂ ಮಾರುಕಟ್ಟೆ ರಸ್ತೆಗಳ ಹಳ್ಳ ಮುಚ್ಚಲು ಹಾಕಿದ ಮಣ್ಣು ಮಳೆಯಿಂದ ಕೆಸರಾಗಿದ್ದು, ಸಂಚಾರಕ್ಕೆ ತೊಂದರೆಯಾಗಿದೆ. <br /> <br /> ಒಳ ಚರಂಡಿ ಕಾಮಗಾರಿಯ ಹಿನ್ನೆಲೆಯಲ್ಲಿ ಈ ಎರಡು ರಸ್ತೆಗಳ ದುರಸ್ತಿ ವಿಳಂಬವಾಗಿದ್ದು, ಈಚೆಗೆ ತಾತ್ಕಾಲಿಕವಾಗಿ ಹಳ್ಳಕೊಳ್ಳ ಮುಚ್ಚಲು ಗ್ರಾವೆಲ್ ಮಣ್ಣು ಸುರಿಯಲಾಗಿತ್ತು. ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಆ ಮಣ್ಣು ಕೆಸರಿನಂತೆ ಹರಡಿ ಈಗ ನಾಟಿ ಜಮೀನಿನಂತಾಗಿದೆ. ದ್ವಿಚಕ್ರ ವಾಹನ ಸಂಚರಿಸುವಾಗ ಆಯ ತಪ್ಪುತ್ತಿವೆ. ಪಾದಾಚಾರಿಗಳ ಸಂಚಾರ ಹೇಳತೀರದಾಗಿದೆ.<br /> <br /> ಅನೇಕ ವರ್ಷಗಳಿಂದ ಈ ಎರಡು ಪ್ರಮುಖ ರಸ್ತೆ ಅಭಿವೃದ್ಧಿಗೆ ಸಂಬಂಧಪಟ್ಟ ಇಲಾಖೆಗಳು ಯಾವುದೇ ಕ್ರಮಕೈಗೊಂಡಿಲ್ಲ. ರಸ್ತೆಯುದ್ದಕ್ಕೂ ಗುಂಡಿ ಬಿದ್ದಿವೆ. <br /> <br /> ಮಳೆ ಬಂದರೆ ನೀರು ನಿಂತು ವಾಹನ ಸಂಚರಿಸುವಾಗ ಅಕ್ಕ ಪಕ್ಕದಲ್ಲಿ ಓಡಾಡುವ ಜನರ ಮೇಲೆ ಕೆಸರು ಚೆಲ್ಲುತ್ತಿದೆ. ಇದರ ಜತೆಯಲ್ಲಿ ರಸ್ತೆಯ ಎರಡು ಬದಿಗಳಲ್ಲಿ ವ್ಯಾಪಾರಿಗಳು ಒತ್ತುವರಿ ಮಾಡಿಕೊಂಡಿರುವುದರಿಂದ ಕೆಸರಿನ ರಸ್ತೆಯಲ್ಲೇ ನಾಗರಿಕರು ಓಡಾಡಬೇಕಿದೆ.<br /> <br /> `ಒಳಚರಂಡಿ ಕಾಮಗಾರಿ ಆರಂಭವಾಗಿದ್ದು, ಅದು ಪೂರ್ಣಗೊಂಡ ನಂತರ ಈ ಎರಡು ಪ್ರಮುಖ ರಸ್ತೆಗಳ ಅಭಿವೃದ್ಧಿ ಮಾಡಲಾಗುವುದು~ ಎನ್ನುತ್ತಾರೆ ಅಧಿಕಾರಿಗಳು. <br /> <br /> ಗ್ರಾಮೀಣ ದಸರಾ ವೇಳೆ ರಸ್ತೆ ಗುಂಡಿ ಮುಚ್ಚಲು ಗ್ರಾವೆಲ್ ಮಣ್ಣು ಹಾಕಿಸಲಾಯಿತು. ಅದಕ್ಕೆ ಜಲ್ಲಿ ಹಾಕಿಸಿ ಮುಚ್ಚಿಸಲಾಗಿದೆ. ನಂತರ ಮಣ್ಣು ಹಾಕಬೇಕಿತ್ತು. ಆದರೆ, ಬರೀಮಣ್ಣು ಹಾಕಿದ್ದರಿಂದ ಶುಕ್ರವಾರ ಬಿದ್ದ ಭಾರಿ ಮಳೆಯಿಂದಾಗಿ ಈ ಎರಡು ರಸ್ತೆಗಳು ಸಂಚರಿಸಲು ಆಗದ ಸ್ಥಿತಿ ಇದೆ~ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.<br /> <br /> ರಸ್ತೆಯನ್ನು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿ.ನರಸೀಪುರ:</strong> ಪಟ್ಟಣದ ಪ್ರಮುಖ ವಾಣಿಜ್ಯ ರಸ್ತೆಗಳಾದ ಲಿಂಕ್ ರಸ್ತೆ ಹಾಗೂ ಮಾರುಕಟ್ಟೆ ರಸ್ತೆಗಳ ಹಳ್ಳ ಮುಚ್ಚಲು ಹಾಕಿದ ಮಣ್ಣು ಮಳೆಯಿಂದ ಕೆಸರಾಗಿದ್ದು, ಸಂಚಾರಕ್ಕೆ ತೊಂದರೆಯಾಗಿದೆ. <br /> <br /> ಒಳ ಚರಂಡಿ ಕಾಮಗಾರಿಯ ಹಿನ್ನೆಲೆಯಲ್ಲಿ ಈ ಎರಡು ರಸ್ತೆಗಳ ದುರಸ್ತಿ ವಿಳಂಬವಾಗಿದ್ದು, ಈಚೆಗೆ ತಾತ್ಕಾಲಿಕವಾಗಿ ಹಳ್ಳಕೊಳ್ಳ ಮುಚ್ಚಲು ಗ್ರಾವೆಲ್ ಮಣ್ಣು ಸುರಿಯಲಾಗಿತ್ತು. ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಆ ಮಣ್ಣು ಕೆಸರಿನಂತೆ ಹರಡಿ ಈಗ ನಾಟಿ ಜಮೀನಿನಂತಾಗಿದೆ. ದ್ವಿಚಕ್ರ ವಾಹನ ಸಂಚರಿಸುವಾಗ ಆಯ ತಪ್ಪುತ್ತಿವೆ. ಪಾದಾಚಾರಿಗಳ ಸಂಚಾರ ಹೇಳತೀರದಾಗಿದೆ.<br /> <br /> ಅನೇಕ ವರ್ಷಗಳಿಂದ ಈ ಎರಡು ಪ್ರಮುಖ ರಸ್ತೆ ಅಭಿವೃದ್ಧಿಗೆ ಸಂಬಂಧಪಟ್ಟ ಇಲಾಖೆಗಳು ಯಾವುದೇ ಕ್ರಮಕೈಗೊಂಡಿಲ್ಲ. ರಸ್ತೆಯುದ್ದಕ್ಕೂ ಗುಂಡಿ ಬಿದ್ದಿವೆ. <br /> <br /> ಮಳೆ ಬಂದರೆ ನೀರು ನಿಂತು ವಾಹನ ಸಂಚರಿಸುವಾಗ ಅಕ್ಕ ಪಕ್ಕದಲ್ಲಿ ಓಡಾಡುವ ಜನರ ಮೇಲೆ ಕೆಸರು ಚೆಲ್ಲುತ್ತಿದೆ. ಇದರ ಜತೆಯಲ್ಲಿ ರಸ್ತೆಯ ಎರಡು ಬದಿಗಳಲ್ಲಿ ವ್ಯಾಪಾರಿಗಳು ಒತ್ತುವರಿ ಮಾಡಿಕೊಂಡಿರುವುದರಿಂದ ಕೆಸರಿನ ರಸ್ತೆಯಲ್ಲೇ ನಾಗರಿಕರು ಓಡಾಡಬೇಕಿದೆ.<br /> <br /> `ಒಳಚರಂಡಿ ಕಾಮಗಾರಿ ಆರಂಭವಾಗಿದ್ದು, ಅದು ಪೂರ್ಣಗೊಂಡ ನಂತರ ಈ ಎರಡು ಪ್ರಮುಖ ರಸ್ತೆಗಳ ಅಭಿವೃದ್ಧಿ ಮಾಡಲಾಗುವುದು~ ಎನ್ನುತ್ತಾರೆ ಅಧಿಕಾರಿಗಳು. <br /> <br /> ಗ್ರಾಮೀಣ ದಸರಾ ವೇಳೆ ರಸ್ತೆ ಗುಂಡಿ ಮುಚ್ಚಲು ಗ್ರಾವೆಲ್ ಮಣ್ಣು ಹಾಕಿಸಲಾಯಿತು. ಅದಕ್ಕೆ ಜಲ್ಲಿ ಹಾಕಿಸಿ ಮುಚ್ಚಿಸಲಾಗಿದೆ. ನಂತರ ಮಣ್ಣು ಹಾಕಬೇಕಿತ್ತು. ಆದರೆ, ಬರೀಮಣ್ಣು ಹಾಕಿದ್ದರಿಂದ ಶುಕ್ರವಾರ ಬಿದ್ದ ಭಾರಿ ಮಳೆಯಿಂದಾಗಿ ಈ ಎರಡು ರಸ್ತೆಗಳು ಸಂಚರಿಸಲು ಆಗದ ಸ್ಥಿತಿ ಇದೆ~ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.<br /> <br /> ರಸ್ತೆಯನ್ನು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>