<p>ಶಿವಮೊಗ್ಗ: ಕೊಡಚಾದ್ರಿ ಮಹಿಳಾ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಬ್ಯಾಂಕ್ ತೀರ್ಥಹಳ್ಳಿಯಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಅದರ ಪದಾಧಿಕಾರಿಗಳ ಆಯ್ಕೆ ಈಚೆಗೆ ನಡೆಯಿತು.</p>.<p><br /> ಬ್ಯಾಂಕ್ನ ಅಧ್ಯಕ್ಷೆಯಾಗಿ ಸುಷ್ಮಾ ಸಂಜಯ್, ಉಪಾಧಕ್ಷೆಯಾಗಿ ಫರ್ಜಾನ ಖಾನಂ ಆಯ್ಕೆಯಾಗಿದ್ದಾರೆ ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.<br /> <br /> ಸೌಹಾರ್ದ ಪತ್ತಿನ ಸಹಕಾರಿ ಕಾಯ್ದೆ ಅಡಿ ನೋಂದಣಿಗೊಳ್ಳುವ ಈ ಬ್ಯಾಂಕ್ನ ಮುಖ್ಯ ಉದ್ದೇಶ ವಿವಿಧ ರೀತಿಯ ಕೃಷಿಯೇತರ ಅಲ್ಪಾವಧಿ, ಮಧ್ಯಮಾ ವಧಿ, ಸ್ವ–ಸಹಾಯ ಗುಂಪುಗಾರಿಕೆ ಹಾಗೂ ದೀರ್ಘಾವಧಿ ಸಾಲಗಳನ್ನು ಮಹಿಳಾ ಸದಸ್ಯರಿಗೆ ಒದಗಿಸುವುದಾಗಿದೆ ಎಂದರು.<br /> <br /> ಸದಸ್ಯರಿಂದ ಠೇವಣಿ ಸಂಗ್ರಹಿಸಿ ಗೃಹ ಕೈಗಾರಿಕೆ, ಗುಡಿ ಕೈಗಾರಿಕೆ ಮತ್ತು ಉಪಕಸಬುಗಳಿಗೆ ಹಾಗೂ ವಿವಿಧ ರೀತಿಯ ಉದ್ದೇಶಗಳಿಗಾಗಿ ಸಾಲ–ಸೌಲಭ್ಯವನ್ನು ನೀಡುವುದು ಮುಂತಾದ 34 ವಿವಿಧ ಉದ್ದೇಶ ಗಳನ್ನು ಒಳಗೊಂಡಿದೆ ಎಂದು ವಿವರಣೆ ನೀಡಿದರು.<br /> <br /> ಒಂದೇ ವಾರದಲ್ಲಿ 2,600 ಸದಸ್ಯರಿಂದ ₨50ಲಕ್ಷ ಷೇರನ್ನು ಸಂಗ್ರಹಿಸಲಾಗಿದೆ. ಈ ತಿಂಗಳ ಅಂತ್ಯದ ಒಳಗೆ 10ಸಾವಿರ ಸದಸ್ಯರನ್ನು ಮಾಡಿ ₨1ಕೋಟಿ ಷೇರು ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದರು.<br /> <br /> ಬ್ಯಾಂಕಿನ ಅಧ್ಯಕ್ಷೆ ಸುಷ್ಮಾ ಸಂಜಯ್ ಮಾತನಾಡಿ, ಸಾಲ ನೀಡುವುದಷ್ಟೇ ಬ್ಯಾಂಕ್ ಕೆಲಸ ಅಲ್ಲ; ಹೊಸ ಉದ್ದಿಮೆ ಸ್ಥಾಪಿಸುವ ಮಹಿಳೆಯರಿಗೆ ಸಲಹೆ–ಮಾರ್ಗದರ್ಶನ ಮತ್ತು ಸಮಾಜದ ಆರ್ಥಿಕ –ಸಾಮಾಜಿಕ ಚಟುವಟಿ ಕೆಗಳಲ್ಲಿ ಭಾಗಿಯಾಗಲಿದೆ<br /> ಎಂದು ವಿವರಣೆ ನೀಡಿದರು.<br /> <br /> ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ನಿರ್ದೇಶಕರಾದ ಸುಮಾ ಸುಬ್ರಹ್ಮಣ್ಯ, ರೇಣುಕಾ ಚಂದ್ರಪ್ಪ, ನಿರ್ಮಲಾ ರಾಜು, ವಿನೋದಾ ಕೃಷ್ಣಮೂರ್ತಿ, ಆರ್.ಡಾ ಕಮ್ಮ, ಅಚಲ ಎಸ್.ಹೆಗ್ಡೆ, ಚೇತನಾ ಶ್ರೀಕಾಂತ್, ಶಶಿಕಲಾ ಮಂಜುನಾಥಶೆಟ್ಟಿ, ಪುಷ್ಪಲತಾ ವೆಂಕಟೇಶ್<br /> ಮತ್ತಿತರರು ಉಪಸ್ಥಿತರಿದ್ದರು.<br /> <br /> <strong>ಏ.21ರಿಂದ ಪ್ರಕೃತಿ ಅಧ್ಯಯನ ಶಿಬಿರ</strong><br /> ಶಿವಮೊಗ್ಗ: ಯೂತ್ ಹಾಸ್ಟೆಲ್ ಅಸೋಷಿಯೇನ್ ಆಫ್ ಇಂಡಿಯಾ ತರುಣೋದಯ ಘಟಕ, ಏಪ್ರಿಲ್ 21ರಿಂದ ಮೇ 26-ರವರೆಗೆ ಹಿಮಾಲಯ ಪರ್ವತದ ಕುಲು ಮನಾಲಿಯ ಸುತ್ತಮುತ್ತ 10-ರಿಂದ 15 ವರ್ಷ ಒಳಗಿನ ಮಕ್ಕಳಿಗೆ ಪ್ರಕೃತಿ ಅಧ್ಯಯನ ಶಿಬಿರ ಹಾಗೂ ಚಾರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಡಾ.ಶೇಖರ್ ಗೌಳೇರ ಅವರ ಮೊಬೈಲ್: 98801 62132 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿವಮೊಗ್ಗ: ಕೊಡಚಾದ್ರಿ ಮಹಿಳಾ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಬ್ಯಾಂಕ್ ತೀರ್ಥಹಳ್ಳಿಯಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಅದರ ಪದಾಧಿಕಾರಿಗಳ ಆಯ್ಕೆ ಈಚೆಗೆ ನಡೆಯಿತು.</p>.<p><br /> ಬ್ಯಾಂಕ್ನ ಅಧ್ಯಕ್ಷೆಯಾಗಿ ಸುಷ್ಮಾ ಸಂಜಯ್, ಉಪಾಧಕ್ಷೆಯಾಗಿ ಫರ್ಜಾನ ಖಾನಂ ಆಯ್ಕೆಯಾಗಿದ್ದಾರೆ ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.<br /> <br /> ಸೌಹಾರ್ದ ಪತ್ತಿನ ಸಹಕಾರಿ ಕಾಯ್ದೆ ಅಡಿ ನೋಂದಣಿಗೊಳ್ಳುವ ಈ ಬ್ಯಾಂಕ್ನ ಮುಖ್ಯ ಉದ್ದೇಶ ವಿವಿಧ ರೀತಿಯ ಕೃಷಿಯೇತರ ಅಲ್ಪಾವಧಿ, ಮಧ್ಯಮಾ ವಧಿ, ಸ್ವ–ಸಹಾಯ ಗುಂಪುಗಾರಿಕೆ ಹಾಗೂ ದೀರ್ಘಾವಧಿ ಸಾಲಗಳನ್ನು ಮಹಿಳಾ ಸದಸ್ಯರಿಗೆ ಒದಗಿಸುವುದಾಗಿದೆ ಎಂದರು.<br /> <br /> ಸದಸ್ಯರಿಂದ ಠೇವಣಿ ಸಂಗ್ರಹಿಸಿ ಗೃಹ ಕೈಗಾರಿಕೆ, ಗುಡಿ ಕೈಗಾರಿಕೆ ಮತ್ತು ಉಪಕಸಬುಗಳಿಗೆ ಹಾಗೂ ವಿವಿಧ ರೀತಿಯ ಉದ್ದೇಶಗಳಿಗಾಗಿ ಸಾಲ–ಸೌಲಭ್ಯವನ್ನು ನೀಡುವುದು ಮುಂತಾದ 34 ವಿವಿಧ ಉದ್ದೇಶ ಗಳನ್ನು ಒಳಗೊಂಡಿದೆ ಎಂದು ವಿವರಣೆ ನೀಡಿದರು.<br /> <br /> ಒಂದೇ ವಾರದಲ್ಲಿ 2,600 ಸದಸ್ಯರಿಂದ ₨50ಲಕ್ಷ ಷೇರನ್ನು ಸಂಗ್ರಹಿಸಲಾಗಿದೆ. ಈ ತಿಂಗಳ ಅಂತ್ಯದ ಒಳಗೆ 10ಸಾವಿರ ಸದಸ್ಯರನ್ನು ಮಾಡಿ ₨1ಕೋಟಿ ಷೇರು ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದರು.<br /> <br /> ಬ್ಯಾಂಕಿನ ಅಧ್ಯಕ್ಷೆ ಸುಷ್ಮಾ ಸಂಜಯ್ ಮಾತನಾಡಿ, ಸಾಲ ನೀಡುವುದಷ್ಟೇ ಬ್ಯಾಂಕ್ ಕೆಲಸ ಅಲ್ಲ; ಹೊಸ ಉದ್ದಿಮೆ ಸ್ಥಾಪಿಸುವ ಮಹಿಳೆಯರಿಗೆ ಸಲಹೆ–ಮಾರ್ಗದರ್ಶನ ಮತ್ತು ಸಮಾಜದ ಆರ್ಥಿಕ –ಸಾಮಾಜಿಕ ಚಟುವಟಿ ಕೆಗಳಲ್ಲಿ ಭಾಗಿಯಾಗಲಿದೆ<br /> ಎಂದು ವಿವರಣೆ ನೀಡಿದರು.<br /> <br /> ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ನಿರ್ದೇಶಕರಾದ ಸುಮಾ ಸುಬ್ರಹ್ಮಣ್ಯ, ರೇಣುಕಾ ಚಂದ್ರಪ್ಪ, ನಿರ್ಮಲಾ ರಾಜು, ವಿನೋದಾ ಕೃಷ್ಣಮೂರ್ತಿ, ಆರ್.ಡಾ ಕಮ್ಮ, ಅಚಲ ಎಸ್.ಹೆಗ್ಡೆ, ಚೇತನಾ ಶ್ರೀಕಾಂತ್, ಶಶಿಕಲಾ ಮಂಜುನಾಥಶೆಟ್ಟಿ, ಪುಷ್ಪಲತಾ ವೆಂಕಟೇಶ್<br /> ಮತ್ತಿತರರು ಉಪಸ್ಥಿತರಿದ್ದರು.<br /> <br /> <strong>ಏ.21ರಿಂದ ಪ್ರಕೃತಿ ಅಧ್ಯಯನ ಶಿಬಿರ</strong><br /> ಶಿವಮೊಗ್ಗ: ಯೂತ್ ಹಾಸ್ಟೆಲ್ ಅಸೋಷಿಯೇನ್ ಆಫ್ ಇಂಡಿಯಾ ತರುಣೋದಯ ಘಟಕ, ಏಪ್ರಿಲ್ 21ರಿಂದ ಮೇ 26-ರವರೆಗೆ ಹಿಮಾಲಯ ಪರ್ವತದ ಕುಲು ಮನಾಲಿಯ ಸುತ್ತಮುತ್ತ 10-ರಿಂದ 15 ವರ್ಷ ಒಳಗಿನ ಮಕ್ಕಳಿಗೆ ಪ್ರಕೃತಿ ಅಧ್ಯಯನ ಶಿಬಿರ ಹಾಗೂ ಚಾರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಡಾ.ಶೇಖರ್ ಗೌಳೇರ ಅವರ ಮೊಬೈಲ್: 98801 62132 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>