<p><strong>ಕೊಪ್ಪಳ: </strong>ಜಿಲ್ಲೆಯ ಕೊಪ್ಪಳ, ಗಂಗಾವತಿಯಲ್ಲಿನ ಎಲ್ಲಾ ವಸತಿಗೃಹಗಳು ಭರ್ತಿ. ನೆರೆಯ ಹೊಸಪೇಟೆ ಹಾಗೂ ಗದಗ ನಗರಗಳಲ್ಲಿನ ಬಹುತೇಕ ವಸತಿಗೃಹಗಳಲ್ಲಿ ಸಹ ಕೋಣೆಗಳು ಸಿಗುವುದಿಲ್ಲ!<br /> - ಇದು ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯ ಎಫೆಕ್ಟ್.<br /> <br /> ಸೆ. 2ರಂದು ಉಪಚುನಾವಣೆಗೆ ಅಧಿಸೂಚನೆ ಹೊರ ಬಿದ್ದಾಗ ನಗರ ಹಾಗೂ ಗಂಗಾವತಿಯಲ್ಲಿನ ವಸತಿಗೃಹಗಳಲ್ಲಿ ಇನ್ನೂ ಕೋಣೆಗಳು ಲಭ್ಯವಿದ್ದವು. ಆದರೆ, ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಸೆ. 9 ಕೊನೆಯ ದಿನವಾಗಿದ್ದ ಹಿನ್ನೆಲೆಯಲ್ಲಿ ಸೆ. 8ರಿಂದಲೇ ಈ ಉಭಯ ನಗರಗಳಲ್ಲಿನ ವಸತಿಗೃಹಗಳ ಜೊತೆಗೆ ನೆರೆಯ ಹೊಸಪೇಟೆ ಹಾಗೂ ಗದಗ ನಗರಗಳಲ್ಲಿನ ವಸತಿಗೃಹಗಳ ಸಿಬ್ಬಂದಿ `ನೋ ರೂಮ್ ಸರ್~ ಎಂಬ ಉತ್ತರ ನೀಡುವ ಪರಿಸ್ಥಿತಿ ನಿರ್ಮಾಣವಾಯಿತು.<br /> <br /> ನಮ್ಮ ಲಾಡ್ಜ್ನಲ್ಲಿ ಒಟ್ಟು 37 ರೂಮ್ಗಳಿವೆ. ಈ ಎಲ್ಲಾ ರೂಮ್ಗಳು ಸೆ. 8ರಿಂದಲೇ ಭರ್ತಿಯಾಗಿದ್ದು, ವಿವಿಧ ಪಕ್ಷಗಳ ಮುಖಂಡರು ತಂಗಲಿದ್ದಾರೆ ಎಂದು ನಗರದ ಶ್ರೀ ಮಾತಾ ಲಾಡ್ಜ್ನ ವ್ಯವಸ್ಥಾಪಕ ವಲ್ಲಭ ದೀಕ್ಷಿತ ಹೇಳುತ್ತಾರೆ.<br /> <br /> ಈ ಕುರಿತು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಅವರು, ಸೆ. 24ರ ವರೆಗೂ ಈ ರೂಮ್ಗಳು ಖಾಲಿಯಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.<br /> <br /> ಜಿಲ್ಲಾಡಳಿತ ಭವನದ ಎದುರಿರುವ ಹೊಟೇಲ್ ಹರ್ಷ ಇಂಟರ್ನ್ಯಾಶನಲ್ನ ಮಾಲಿಕ ಅಣ್ಣಪ್ಪ ಅಂಗಡಿ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.</p>.<p>ಸೆ. 9ರಿಂದಲೇ ನಮ್ಮ ವಸತಿಗೃಹದಲ್ಲಿನ ರೂಮುಗಳನ್ನು ಕಾಯ್ದಿರಿಸಲಾಗಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಮುಖಂಡರಿಗಾಗಿ ಈ ರೂಮುಗಳನ್ನು ಕಾಯ್ದಿರಿಸಲಾಗಿದ್ದು, ಸೆ. 26ರಂದು ಮತದಾನ ನಡೆಯಲಿರುವುದರಿಂದ ಅದಕ್ಕಿಂತ ಮೂರು ದಿನಗಳ ಮುಂಚೆ ಖಾಲಿಯಾಗಬಹುದು ಎಂದು ಹೇಳುತ್ತಾರೆ.<br /> <br /> ಇನ್ನು, ಈ ವಸತಿಗೃಹಗಳಲ್ಲಿ ವಸತಿ ಸೌಲಭ್ಯ ಸಿಗದವರು ನಗರದಲ್ಲಿನ ಉಳಿದ ವಸತಿಗೃಹಗಳತ್ತ ಮುಖ ಮಾಡಿದರೆ, ಇನ್ನೂ ಹೆಚ್ಚಿನ ಐಷಾರಾಮಿ ವಸತಿ ಬಯಸುವ ಮುಖಂಡರು ಗಂಗಾವತಿ, ಹೊಸಪೇಟೆ ಇಲ್ಲವೇ ಗದಗ ನಗರಕ್ಕೆ ವಾಸ್ತವ್ಯ ಹೂಡಲು ವ್ಯವಸ್ಥೆ ಮಾಡಿಕೊಂಡಿದ್ದಾರೆ ಎಂದು ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಅಭಿಪ್ರಾಯಪಡುತ್ತಾರೆ.<br /> <br /> ಅದರಲ್ಲೂ, ಹೊಸಪೇಟೆ ಮತ್ತು ಗದಗನಲ್ಲಿ ವಾಸ್ತವ್ಯ ಹೂಡಲು ಬಯಸುವುದಕ್ಕೆ ಪ್ರಮುಖ ಕಾರಣವೂ ಇದೆ. ಸೆ. 26ರಂದು ಮತದಾನ ನಡೆಯಲಿರುವುದರಿಂದ ಅದಕ್ಕಿಂತ ಮೂರು ದಿನಗಳ ಮುಂಚೆಯೇ ಎಲ್ಲಾ ಪಕ್ಷಗಳ ಮುಖಂಡರು ಕ್ಷೇತ್ರದಿಂದ ಹೊರ ಹೋಗಬೇಕು. <br /> <br /> ಅಂತಹ ಸಂದರ್ಭದಲ್ಲಿ ಹೊಸಪೇಟೆ ಹಾಗೂ ಗದಗ ನಗರಗಳ ವಸತಿಗೃಹಗಳಿಗೆ ವಾಸ್ತವ್ಯವನ್ನು ಸ್ಥಳಾಂತರಗೊಳಿಸಿ, ಅಲ್ಲಿಂದಲೇ ಚುನಾವಣಾ ಪ್ರಚಾರ ಮತ್ತಿತರರ ಚಟುವಟಿಕೆಗಳ ಮೇಲೆ ನಿಗಾ ಇಡಬಹುದು ಎಂಬ ಲೆಕ್ಕಾಚಾರ ಎಲ್ಲಾ ರಾಜಕೀಯ ಪಕ್ಷಗಳದ್ದು ಎನ್ನಲಾಗುತ್ತಿದೆ. <br /> <br /> ಹೀಗೆ ಮಾಡುವುದರಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಅರೋಪ ಸಹ ಎದುರಾಗುವುದಿಲ್ಲ ಎಂಬುದು ಮತ್ತೊಂದು ಕಾರಣ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ: </strong>ಜಿಲ್ಲೆಯ ಕೊಪ್ಪಳ, ಗಂಗಾವತಿಯಲ್ಲಿನ ಎಲ್ಲಾ ವಸತಿಗೃಹಗಳು ಭರ್ತಿ. ನೆರೆಯ ಹೊಸಪೇಟೆ ಹಾಗೂ ಗದಗ ನಗರಗಳಲ್ಲಿನ ಬಹುತೇಕ ವಸತಿಗೃಹಗಳಲ್ಲಿ ಸಹ ಕೋಣೆಗಳು ಸಿಗುವುದಿಲ್ಲ!<br /> - ಇದು ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯ ಎಫೆಕ್ಟ್.<br /> <br /> ಸೆ. 2ರಂದು ಉಪಚುನಾವಣೆಗೆ ಅಧಿಸೂಚನೆ ಹೊರ ಬಿದ್ದಾಗ ನಗರ ಹಾಗೂ ಗಂಗಾವತಿಯಲ್ಲಿನ ವಸತಿಗೃಹಗಳಲ್ಲಿ ಇನ್ನೂ ಕೋಣೆಗಳು ಲಭ್ಯವಿದ್ದವು. ಆದರೆ, ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಸೆ. 9 ಕೊನೆಯ ದಿನವಾಗಿದ್ದ ಹಿನ್ನೆಲೆಯಲ್ಲಿ ಸೆ. 8ರಿಂದಲೇ ಈ ಉಭಯ ನಗರಗಳಲ್ಲಿನ ವಸತಿಗೃಹಗಳ ಜೊತೆಗೆ ನೆರೆಯ ಹೊಸಪೇಟೆ ಹಾಗೂ ಗದಗ ನಗರಗಳಲ್ಲಿನ ವಸತಿಗೃಹಗಳ ಸಿಬ್ಬಂದಿ `ನೋ ರೂಮ್ ಸರ್~ ಎಂಬ ಉತ್ತರ ನೀಡುವ ಪರಿಸ್ಥಿತಿ ನಿರ್ಮಾಣವಾಯಿತು.<br /> <br /> ನಮ್ಮ ಲಾಡ್ಜ್ನಲ್ಲಿ ಒಟ್ಟು 37 ರೂಮ್ಗಳಿವೆ. ಈ ಎಲ್ಲಾ ರೂಮ್ಗಳು ಸೆ. 8ರಿಂದಲೇ ಭರ್ತಿಯಾಗಿದ್ದು, ವಿವಿಧ ಪಕ್ಷಗಳ ಮುಖಂಡರು ತಂಗಲಿದ್ದಾರೆ ಎಂದು ನಗರದ ಶ್ರೀ ಮಾತಾ ಲಾಡ್ಜ್ನ ವ್ಯವಸ್ಥಾಪಕ ವಲ್ಲಭ ದೀಕ್ಷಿತ ಹೇಳುತ್ತಾರೆ.<br /> <br /> ಈ ಕುರಿತು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಅವರು, ಸೆ. 24ರ ವರೆಗೂ ಈ ರೂಮ್ಗಳು ಖಾಲಿಯಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.<br /> <br /> ಜಿಲ್ಲಾಡಳಿತ ಭವನದ ಎದುರಿರುವ ಹೊಟೇಲ್ ಹರ್ಷ ಇಂಟರ್ನ್ಯಾಶನಲ್ನ ಮಾಲಿಕ ಅಣ್ಣಪ್ಪ ಅಂಗಡಿ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.</p>.<p>ಸೆ. 9ರಿಂದಲೇ ನಮ್ಮ ವಸತಿಗೃಹದಲ್ಲಿನ ರೂಮುಗಳನ್ನು ಕಾಯ್ದಿರಿಸಲಾಗಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಮುಖಂಡರಿಗಾಗಿ ಈ ರೂಮುಗಳನ್ನು ಕಾಯ್ದಿರಿಸಲಾಗಿದ್ದು, ಸೆ. 26ರಂದು ಮತದಾನ ನಡೆಯಲಿರುವುದರಿಂದ ಅದಕ್ಕಿಂತ ಮೂರು ದಿನಗಳ ಮುಂಚೆ ಖಾಲಿಯಾಗಬಹುದು ಎಂದು ಹೇಳುತ್ತಾರೆ.<br /> <br /> ಇನ್ನು, ಈ ವಸತಿಗೃಹಗಳಲ್ಲಿ ವಸತಿ ಸೌಲಭ್ಯ ಸಿಗದವರು ನಗರದಲ್ಲಿನ ಉಳಿದ ವಸತಿಗೃಹಗಳತ್ತ ಮುಖ ಮಾಡಿದರೆ, ಇನ್ನೂ ಹೆಚ್ಚಿನ ಐಷಾರಾಮಿ ವಸತಿ ಬಯಸುವ ಮುಖಂಡರು ಗಂಗಾವತಿ, ಹೊಸಪೇಟೆ ಇಲ್ಲವೇ ಗದಗ ನಗರಕ್ಕೆ ವಾಸ್ತವ್ಯ ಹೂಡಲು ವ್ಯವಸ್ಥೆ ಮಾಡಿಕೊಂಡಿದ್ದಾರೆ ಎಂದು ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಅಭಿಪ್ರಾಯಪಡುತ್ತಾರೆ.<br /> <br /> ಅದರಲ್ಲೂ, ಹೊಸಪೇಟೆ ಮತ್ತು ಗದಗನಲ್ಲಿ ವಾಸ್ತವ್ಯ ಹೂಡಲು ಬಯಸುವುದಕ್ಕೆ ಪ್ರಮುಖ ಕಾರಣವೂ ಇದೆ. ಸೆ. 26ರಂದು ಮತದಾನ ನಡೆಯಲಿರುವುದರಿಂದ ಅದಕ್ಕಿಂತ ಮೂರು ದಿನಗಳ ಮುಂಚೆಯೇ ಎಲ್ಲಾ ಪಕ್ಷಗಳ ಮುಖಂಡರು ಕ್ಷೇತ್ರದಿಂದ ಹೊರ ಹೋಗಬೇಕು. <br /> <br /> ಅಂತಹ ಸಂದರ್ಭದಲ್ಲಿ ಹೊಸಪೇಟೆ ಹಾಗೂ ಗದಗ ನಗರಗಳ ವಸತಿಗೃಹಗಳಿಗೆ ವಾಸ್ತವ್ಯವನ್ನು ಸ್ಥಳಾಂತರಗೊಳಿಸಿ, ಅಲ್ಲಿಂದಲೇ ಚುನಾವಣಾ ಪ್ರಚಾರ ಮತ್ತಿತರರ ಚಟುವಟಿಕೆಗಳ ಮೇಲೆ ನಿಗಾ ಇಡಬಹುದು ಎಂಬ ಲೆಕ್ಕಾಚಾರ ಎಲ್ಲಾ ರಾಜಕೀಯ ಪಕ್ಷಗಳದ್ದು ಎನ್ನಲಾಗುತ್ತಿದೆ. <br /> <br /> ಹೀಗೆ ಮಾಡುವುದರಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಅರೋಪ ಸಹ ಎದುರಾಗುವುದಿಲ್ಲ ಎಂಬುದು ಮತ್ತೊಂದು ಕಾರಣ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>