<p><strong>ಬೆಂಗಳೂರು: </strong>ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಿದ ಪತ್ರಕರ್ತರನ್ನು ಗುರುತಿಸಲು `ಕೌಂಟರ್ ಮೀಡಿಯಾ~ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪತ್ರಕರ್ತ ಪಿ.ಸಾಯಿನಾಥ್ ಅವರು `ಎವರಿ ಬಡಿ ಲವ್ಸ್ ಎ ಗುಡ್ ಡ್ರಾಟ್~ ಪುಸ್ತಕದ ಸಂಭಾವನೆಯ ಹಣದಿಂದ ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ. <br /> <br /> ಗ್ರಾಮೀಣ ಅಭಿವೃದ್ಧಿ, ಬಡತನ, ಹಸಿವಿನ ಬಗ್ಗೆ ಬರೆದು ಸಾಮಾಜಿಕ ಉನ್ನತಿಗೆ ಶ್ರಮಿಸಿದ ಇಬ್ಬರು ಪತ್ರಕರ್ತರಿಗೆ ಈ ಪ್ರಶಸ್ತಿ ನೀಡಲಾಗುವುದು.ಕರ್ನಾಟಕ ರಾಜ್ಯದ ಯಾವುದೇ ಭಾಗದಿಂದ, ಯಾವುದೇ ಭಾರತೀಯ ಭಾಷೆಯಲ್ಲಿ ಬರೆಯುವ 35 ವರ್ಷದೊಳಗಿನ ಪತ್ರಕರ್ತರು ತಮ್ಮ ಉತ್ತಮ ಅಭಿವೃದ್ಧಿ ಬರಹಗಳನ್ನು ಪ್ರಶಸ್ತಿಗಾಗಿ ಸಲ್ಲಿಸಬಹುದು. <br /> <br /> <strong>ಒಂದು ಬಹುಮಾನ ಪತ್ರಕರ್ತೆಯರಿಗೆ ಮೀಸಲಾಗಿರುತ್ತದೆ. <br /> </strong>ಪತ್ರಕರ್ತರು ತಮ್ಮ ಸ್ವ ವಿವರಗಳನ್ನು ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಳನ್ನು ವಿವರಿಸುವ ಕಿರು ಬರಹವನ್ನು ಲೇಖನಗಳೊಂದಿಗೆ ಕಳುಹಿಸಬೇಕು.ವಿದ್ಯುನ್ಮಾನ ಮಾಧ್ಯಮದವರು ತಮ್ಮ ವರದಿ ಪ್ರಸಾರವಾಗಿರುವ ಸಿಡಿ ಅಥವಾ ಡಿವಿಡಿಯನ್ನು ಅರ್ಜಿಯೊಂದಿಗೆ ಕಳುಹಿಸಬೇಕು. <br /> <br /> ಪ್ರಶಸ್ತಿಯು 25,000 ರೂಪಾಯಿ ಮತ್ತು ಒಂದು ಡಿಜಿಟಲ್ ಕ್ಯಾಮೆರಾವನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಜುಲೈ 1 ರಂದು ಬೆಂಗಳೂರಿನಲ್ಲಿ ನಡೆಯಲಿದೆ.ಲೇಖನ ಅಥವಾ <a href="mailto:ವರದಿಗಳನ್ನುcountermediaawards@gmail.com">ವರದಿಗಳನ್ನು countermediaawards@gmail.com</a> ಗೆ ಅಥವಾ ಕೌಂಟರ್ ಮೀಡಿಯಾ ಅವಾರ್ಡ್ಸ್, ನಂ.142, 69 ನೇ ಅಡ್ಡರಸ್ತೆ, ರಾಜಾಜಿನಗರ 5 ನೇ ಬ್ಲಾಕ್ ಇಲ್ಲಿಗೆ ಸಲ್ಲಿಸಬಹುದಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಿದ ಪತ್ರಕರ್ತರನ್ನು ಗುರುತಿಸಲು `ಕೌಂಟರ್ ಮೀಡಿಯಾ~ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪತ್ರಕರ್ತ ಪಿ.ಸಾಯಿನಾಥ್ ಅವರು `ಎವರಿ ಬಡಿ ಲವ್ಸ್ ಎ ಗುಡ್ ಡ್ರಾಟ್~ ಪುಸ್ತಕದ ಸಂಭಾವನೆಯ ಹಣದಿಂದ ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ. <br /> <br /> ಗ್ರಾಮೀಣ ಅಭಿವೃದ್ಧಿ, ಬಡತನ, ಹಸಿವಿನ ಬಗ್ಗೆ ಬರೆದು ಸಾಮಾಜಿಕ ಉನ್ನತಿಗೆ ಶ್ರಮಿಸಿದ ಇಬ್ಬರು ಪತ್ರಕರ್ತರಿಗೆ ಈ ಪ್ರಶಸ್ತಿ ನೀಡಲಾಗುವುದು.ಕರ್ನಾಟಕ ರಾಜ್ಯದ ಯಾವುದೇ ಭಾಗದಿಂದ, ಯಾವುದೇ ಭಾರತೀಯ ಭಾಷೆಯಲ್ಲಿ ಬರೆಯುವ 35 ವರ್ಷದೊಳಗಿನ ಪತ್ರಕರ್ತರು ತಮ್ಮ ಉತ್ತಮ ಅಭಿವೃದ್ಧಿ ಬರಹಗಳನ್ನು ಪ್ರಶಸ್ತಿಗಾಗಿ ಸಲ್ಲಿಸಬಹುದು. <br /> <br /> <strong>ಒಂದು ಬಹುಮಾನ ಪತ್ರಕರ್ತೆಯರಿಗೆ ಮೀಸಲಾಗಿರುತ್ತದೆ. <br /> </strong>ಪತ್ರಕರ್ತರು ತಮ್ಮ ಸ್ವ ವಿವರಗಳನ್ನು ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಳನ್ನು ವಿವರಿಸುವ ಕಿರು ಬರಹವನ್ನು ಲೇಖನಗಳೊಂದಿಗೆ ಕಳುಹಿಸಬೇಕು.ವಿದ್ಯುನ್ಮಾನ ಮಾಧ್ಯಮದವರು ತಮ್ಮ ವರದಿ ಪ್ರಸಾರವಾಗಿರುವ ಸಿಡಿ ಅಥವಾ ಡಿವಿಡಿಯನ್ನು ಅರ್ಜಿಯೊಂದಿಗೆ ಕಳುಹಿಸಬೇಕು. <br /> <br /> ಪ್ರಶಸ್ತಿಯು 25,000 ರೂಪಾಯಿ ಮತ್ತು ಒಂದು ಡಿಜಿಟಲ್ ಕ್ಯಾಮೆರಾವನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಜುಲೈ 1 ರಂದು ಬೆಂಗಳೂರಿನಲ್ಲಿ ನಡೆಯಲಿದೆ.ಲೇಖನ ಅಥವಾ <a href="mailto:ವರದಿಗಳನ್ನುcountermediaawards@gmail.com">ವರದಿಗಳನ್ನು countermediaawards@gmail.com</a> ಗೆ ಅಥವಾ ಕೌಂಟರ್ ಮೀಡಿಯಾ ಅವಾರ್ಡ್ಸ್, ನಂ.142, 69 ನೇ ಅಡ್ಡರಸ್ತೆ, ರಾಜಾಜಿನಗರ 5 ನೇ ಬ್ಲಾಕ್ ಇಲ್ಲಿಗೆ ಸಲ್ಲಿಸಬಹುದಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>