<p><strong>ಲಂಡನ್ (ಪಿಟಿಐ):</strong> ಮಾನವ ದೇಹದ ಮೇಲೆ ಪದೇ ಪದೇ ದಾಳಿ ಮಾಡಿ ಸೋಂಕಿಗೆ ಕಾರಣವಾಗುವ ವೈರಾಣುಗಳನ್ನೇ ಮಾರಕ ಕ್ಯಾನ್ಸರ್ ವಿರುದ್ಧದ ಹೋರಾಟಕ್ಕೆ ಅಸ್ತ್ರಗಳನ್ನಾಗಿ ಬಳಸುವ ಹೊಸ ದಾರಿಯೊಂದನ್ನು ವೈದ್ಯ ವಿಜ್ಞಾನಿಗಳು ಕಂಡುಕೊಂಡಿದ್ದಾರೆ. <br /> <br /> `ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು~ ಎಂಬಂತೆ ಅಮೆರಿಕದ ಸಂಶೋಧಕರ ತಂಡ ಮಾರಕ ಕ್ಯಾನ್ಸರ್ ಜೀವಕೋಶಗಳನ್ನು ನಾಶಗೊಳಿಸಬಲ್ಲ ವಿಶೇಷ ಸಾಮರ್ಥ್ಯವುಳ್ಳ ವೈರಾಣುಗಳನ್ನು ಅಭಿವೃದ್ಧಿಪಡಿಸಿರುವುದಾಗಿ ಹೇಳಿಕೊಂಡಿದೆ. <br /> <br /> ಕ್ಯಾನ್ಸರ್ ವಿರುದ್ಧ ಹೋರಾಡಲು ಮಾನವ ದೇಹದೊಳಗೆ ಬಿಡುವ ವೈರಾಣುಗಳಿಂದ ಆರೋಗ್ಯವಂತ ಜೀವಕೋಶಗಳಿಗೆ ಹಾನಿಯಾಗುವ ಅಪಾಯ ಹೆಚ್ಚು. ಹೀಗಾಗದಂತೆ ಎಚ್ಚರವಹಿಸಲು ದುರ್ಬಲವಾಗಿರುವ ವೈರಾಣುಗಳನ್ನು ರೋಗಿಯ ದೇಹದೊಳಗೆ ಬಿಡಲಾಗುತ್ತದೆ ಎಂದು ಸಂಶೋಧಕರ ತಂಡ ಹೇಳಿದೆ.<br /> <br /> ಒಟ್ಟಾರೆ ಈ ಬೆಳವಣಿಗೆ ವೈದ್ಯಕೀಯ ಕ್ಷೇತ್ರ ಮತ್ತು ಕ್ಯಾನ್ಸರ್ ರೋಗಿಗಳ ಬಾಳಲ್ಲಿ ಹೊಸ ಆಶಾ ಕಿರಣವಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ವಿಜ್ಞಾನಿಗಳು.</p>.<p><strong>ಹೃದಯರೋಗ ಪತ್ತೆಗೆ ರಕ್ತ ಪರೀಕ್ಷೆ</strong></p>.<p><strong>ಲಂಡನ್ (ಪಿಟಿಐ): </strong>ಹೃದಯಾಘಾತವಾಗುವ ಎರಡು ಅಥವಾ ಮೂರು ವಾರಗಳ ಮೊದಲು ಅದರ ಲಕ್ಷಣಗಳನ್ನು ಪತ್ತೆ ಮಾಡುವ ಸರಳ ಹಾಗೂ ಕಡಿಮೆ ವೆಚ್ಚದ ರಕ್ತ ಪರೀಕ್ಷಾ ವಿಧಾನವನ್ನು ಅಭಿವೃದ್ಧಿಪಡಿಸುತ್ತಿರುವುದಾಗಿ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ. <br /> <br /> 5,000 ರೂಪಾಯಿ ವೆಚ್ಚದ ಈ ಪರೀಕ್ಷೆಯು ಮುಂದಿನ ವರ್ಷದ ಹೊತ್ತಿಗೆ ಲಭ್ಯವಾಗುವುದೆಂದು ನಿರೀಕ್ಷಿಸಲಾಗಿದೆ. ಕ್ಯಾಲಿಫೊರ್ನಿಯಾ ಸ್ಕ್ರಿಪ್ಸ್ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳ ತಂಡವು ಈ ನಿಟ್ಟಿನಲ್ಲಿ ಕಾರ್ಯನಿರತವಾಗಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಂಡನ್ (ಪಿಟಿಐ):</strong> ಮಾನವ ದೇಹದ ಮೇಲೆ ಪದೇ ಪದೇ ದಾಳಿ ಮಾಡಿ ಸೋಂಕಿಗೆ ಕಾರಣವಾಗುವ ವೈರಾಣುಗಳನ್ನೇ ಮಾರಕ ಕ್ಯಾನ್ಸರ್ ವಿರುದ್ಧದ ಹೋರಾಟಕ್ಕೆ ಅಸ್ತ್ರಗಳನ್ನಾಗಿ ಬಳಸುವ ಹೊಸ ದಾರಿಯೊಂದನ್ನು ವೈದ್ಯ ವಿಜ್ಞಾನಿಗಳು ಕಂಡುಕೊಂಡಿದ್ದಾರೆ. <br /> <br /> `ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು~ ಎಂಬಂತೆ ಅಮೆರಿಕದ ಸಂಶೋಧಕರ ತಂಡ ಮಾರಕ ಕ್ಯಾನ್ಸರ್ ಜೀವಕೋಶಗಳನ್ನು ನಾಶಗೊಳಿಸಬಲ್ಲ ವಿಶೇಷ ಸಾಮರ್ಥ್ಯವುಳ್ಳ ವೈರಾಣುಗಳನ್ನು ಅಭಿವೃದ್ಧಿಪಡಿಸಿರುವುದಾಗಿ ಹೇಳಿಕೊಂಡಿದೆ. <br /> <br /> ಕ್ಯಾನ್ಸರ್ ವಿರುದ್ಧ ಹೋರಾಡಲು ಮಾನವ ದೇಹದೊಳಗೆ ಬಿಡುವ ವೈರಾಣುಗಳಿಂದ ಆರೋಗ್ಯವಂತ ಜೀವಕೋಶಗಳಿಗೆ ಹಾನಿಯಾಗುವ ಅಪಾಯ ಹೆಚ್ಚು. ಹೀಗಾಗದಂತೆ ಎಚ್ಚರವಹಿಸಲು ದುರ್ಬಲವಾಗಿರುವ ವೈರಾಣುಗಳನ್ನು ರೋಗಿಯ ದೇಹದೊಳಗೆ ಬಿಡಲಾಗುತ್ತದೆ ಎಂದು ಸಂಶೋಧಕರ ತಂಡ ಹೇಳಿದೆ.<br /> <br /> ಒಟ್ಟಾರೆ ಈ ಬೆಳವಣಿಗೆ ವೈದ್ಯಕೀಯ ಕ್ಷೇತ್ರ ಮತ್ತು ಕ್ಯಾನ್ಸರ್ ರೋಗಿಗಳ ಬಾಳಲ್ಲಿ ಹೊಸ ಆಶಾ ಕಿರಣವಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ವಿಜ್ಞಾನಿಗಳು.</p>.<p><strong>ಹೃದಯರೋಗ ಪತ್ತೆಗೆ ರಕ್ತ ಪರೀಕ್ಷೆ</strong></p>.<p><strong>ಲಂಡನ್ (ಪಿಟಿಐ): </strong>ಹೃದಯಾಘಾತವಾಗುವ ಎರಡು ಅಥವಾ ಮೂರು ವಾರಗಳ ಮೊದಲು ಅದರ ಲಕ್ಷಣಗಳನ್ನು ಪತ್ತೆ ಮಾಡುವ ಸರಳ ಹಾಗೂ ಕಡಿಮೆ ವೆಚ್ಚದ ರಕ್ತ ಪರೀಕ್ಷಾ ವಿಧಾನವನ್ನು ಅಭಿವೃದ್ಧಿಪಡಿಸುತ್ತಿರುವುದಾಗಿ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ. <br /> <br /> 5,000 ರೂಪಾಯಿ ವೆಚ್ಚದ ಈ ಪರೀಕ್ಷೆಯು ಮುಂದಿನ ವರ್ಷದ ಹೊತ್ತಿಗೆ ಲಭ್ಯವಾಗುವುದೆಂದು ನಿರೀಕ್ಷಿಸಲಾಗಿದೆ. ಕ್ಯಾಲಿಫೊರ್ನಿಯಾ ಸ್ಕ್ರಿಪ್ಸ್ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳ ತಂಡವು ಈ ನಿಟ್ಟಿನಲ್ಲಿ ಕಾರ್ಯನಿರತವಾಗಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>