<p><strong>ಲಖನೌ:</strong> ಉತ್ತರ ಪ್ರದೇಶದಲ್ಲಿ ಹಲವು ಕ್ಷೇತ್ರಗಳ ಟಿಕೆಟ್ ಹಂಚಿಕೆ ಕಾಂಗ್ರೆಸ್ ಕಾರ್ಯಕರ್ತರ ಭಾರಿ ಅಸಮಾಧಾನಕ್ಕೆ ಕಾರಣವಾಗಿದೆ. ಕಾರ್ಯಕರ್ತರು ಟಿಕೆಟ್ ಹಂಚಿಕೆ ಪ್ರತಿಭಟಿಸಿ ಪ್ರತಿಭಟನಾ ಪ್ರದರ್ಶನಗಳನ್ನೂ ನಡೆಸಿದ್ದಾರೆ.<br /> <br /> ಕ್ರಿಕೆಟ್ ಆಟಗಾರ ಮೊಹಮ್ಮದ್ ಕೈಫ್ ಮತ್ತು ಭೋಜ್ಪುರಿ ಸಿನಿಮಾ ತಾರೆ ರವಿ ಕಿಶನ್ ಅವರಿಗೆ ಟಿಕೆಟ್ ನೀಡಿರುವುದು ಕಾರ್ಯಕರ್ತರಲ್ಲಿ ಅತಿ ಹೆಚ್ಚಿನ ಅತೃಪ್ತಿ ಉಂಟು ಮಾಡಿದೆ ಎಂದು ಮೂಲಗಳು ಹೇಳಿವೆ.<br /> <br /> ಮೋಹನ್ಲಾಲ್ ಗಂಜ್ ಮತ್ತು ಸೀತಾಪುರ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಬಗ್ಗೆ ಪಕ್ಷದ ಹಿರಿಯ ನಾಯಕರು ಅತೃಪ್ತಿ ವ್ಯಕ್ತಪಡಿಸಿದ್ದಾರೆ.<br /> <br /> ಅಲಹಾಬಾದ್ನಲ್ಲಿರುವ ಕೈಫ್ ಮನೆಯ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ.<br /> ‘ನಾವು ಕೈಫ್ ಅವರ ವಿರೋಧಿಗಳಲ್ಲ, ಆದರೆ ಕ್ಷೇತ್ರವನ್ನು ನೋಡಿಕೊಳ್ಳುವ ಸಾಮರ್ಥ್ಯವಿರುವ ಅಭ್ಯರ್ಥಿಗಳು ನಮಗೆ ಬೇಕು. ಕೈಫ್ ಒಬ್ಬ ತಾರೆ ಆಗಿರಬಹುದು. ಆದರೆ ಕ್ಷೇತ್ರಕ್ಕೆ ಅವರು ಏನಾದರೂ ಮಾಡಬಹುದು ಎಂಬ ನಂಬಿಕೆ ಇಲ್ಲ’ ಎಂದು ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.<br /> <br /> ಹಾಗೆಯೇ ಜೌನ್ಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರವಿ ಕಿಶನ್ ವಿರುದ್ಧವೂ ಪ್ರತಿಭಟನೆ ನಡೆದಿದೆ. ‘ಪ್ಯಾರಾಚೂಟ್ನಿಂದ ಇಳಿಸುವ ಅಭ್ಯರ್ಥಿಗಳಿಗೆ ನಮ್ಮ ವಿರೋಧ ಇದೆ. ರವಿ ಕಿಶನ್ ಅವರಿಗೆ ನೀಡಲಾದ ಟಿಕೆಟನ್ನು ಹಿಂದಕ್ಕೆ ಪಡೆಯಬೇಕು’ ಎಂದು ಜಿಲ್ಲಾ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.<br /> <br /> ಸೀತಾಪುರದಿಂದ ಟಿಕೆಟ್ ನೀಡಲಾಗಿರುವ ವೈಶಾಲಿ ಅಲಿ ಅವರ ವಿರುದ್ಧ ಕಾಂಗ್ರೆಸ್ನ ಹಿರಿಯ ನಾಯಕ ಅಮರ್ ರಿಜ್ವಿ ಬಹಿರಂಗವಾಗಿಯೇ ಅತೃಪ್ತಿ ಹೊರ ಹಾಕಿದ್ದಾರೆ. ‘ನಾನು ಟಿಕೆಟ್ ಆಕಾಂಕ್ಷಿ ಅಲ್ಲ. ಆದರೆ ಸೀತಾಪುರದಿಂದ ಸ್ಥಳೀಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕಿತ್ತು’ ಎಂದು ಹೇಳಿದ್ದಾರೆ.<br /> <br /> ಪಕ್ಷದ ನಿಷ್ಠಾವಂತರನ್ನು ಕಾಂಗ್ರೆಸ್ ಹೈಕಮಾಂಡ್ ಕಡೆಗಣಿಸಿದೆ ಎಂದು ಆರೋಪಿಸಿ ಪಕ್ಷದ ಕಚೇರಿಯ ಮುಂದೆ ಧರಣಿ ನಡೆಸಿದ್ದ ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ಯಾಮಲಾಲ್ ಪೂಜಾರಿ ಅವರನ್ನು ಉಚ್ಚಾಟಿಸಲಾಗಿದೆ. ಕೇಂದ್ರ ಸಚಿವ ವೇಣಿ ಪ್ರಸಾದ್ ವರ್ಮಾ ಕೂಡ ಅಭ್ಯರ್ಥಿ ಆಯ್ಕೆ ವಿಧಾನವನ್ನು ಟೀಕಿಸಿದ್ದಾರೆ.<br /> <br /> ಭಿನ್ನಮತ ಸಹಜ, ಆದರೂ ಒಗ್ಗಟ್ಟಿದೆ: ಆದರೆ, ಕಾರ್ಯಕರ್ತರ ಮನವೊಲಿಸಿ, ಅಧಿಕೃತ ಅಭ್ಯರ್ಥಿಗಳ ಪರ ಕೆಲಸ ಮಾಡಿಸುವ ವಿಶ್ವಾಸವನ್ನು ಪಕ್ಷದ ನಾಯಕರು ಹೊಂದಿದ್ದಾರೆ. ‘ಸ್ವಲ್ಪ ಮಟ್ಟಿನ ಭಿನ್ನಮತ ಇರುವುದು ಸಹಜ. ಆದರೆ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ’ ಎಂದು ನಾಯಕರು ಹೇಳಿದ್ದಾರೆ.<br /> <br /> <strong>ಪ್ರಚಾರಕ್ಕೆ ಸಚಿನ್, ಗಂಗೂಲಿ, ದ್ರಾವಿಡ್?<br /> ಅಲಹಾಬಾದ್ (ಪಿಟಿಐ):</strong> ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ವಿರೇಂದ್ರ ಸೆಹ್ವಾಗ್ ಅವರ </p>.<p>‘ಆಶೀರ್ವಾದ ದೊರಕಿದೆ’ ಎಂದು ಕಾಂಗ್ರೆಸ್ ಪಕ್ಷದಿಂದ ಚುನಾವಣೆ ಅಖಾಡಕ್ಕಿಳಿದಿರುವ ಕ್ರಿಕೆಟಿಗ ಮೊಹಮ್ಮದ್ ಕೈಫ್ ಹೇಳಿದ್ದಾರೆ.<br /> <br /> ಈ ಕ್ರಿಕೆಟ್ ತಾರೆಯರು ಚುನಾವಣಾ ಪ್ರಚಾರದಲ್ಲಿ ತಮಗೆ ನೆರವು ನೀಡಲಿದ್ದಾರೆ ಎಂಬ ನಿರೀಕ್ಷೆ ಉತ್ತರ ಪ್ರದೇಶದ ಫುಲ್ಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೈಫ್ ಅವರದ್ದು.<br /> <br /> ತಮ್ಮ ಬ್ಯಾಟಿಂಗ್ ಶೈಲಿಯಲ್ಲೇ (ಅಬ್ಬರದ ಆಟವನ್ನು ಹೊರತಾದ, ಒಂಟಿ, ಎರಡು ರನ್ಗಳ ಮೂಲಕ ಇನಿಂಗ್ಸ್ ಕಟ್ಟುವ) ರಾಜಕೀಯ ಮಾಡುವ ಭರವಸೆಯನ್ನು ಅವರು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ.<br /> <br /> ‘ಸಚಿನ್, ದ್ರಾವಿಡ್, ಸೌರವ್ ಗಂಗೂಲಿ, ಸೆಹ್ವಾಗ್, ಹರಭಜನ್ ಸಿಂಗ್ ಸೇರಿದಂತೆ ನನ್ನ ಹಲವು ಹಿರಿಯ ಸ್ನೇಹಿತರೊಂದಿಗೆ ಮಾತನಾಡಿದ್ದೇನೆ. ಅವರ ಹಾರೈಕೆಯೂ ನನಗೆ ಲಭಿಸಿದೆ. ಬಿಡುವಿದ್ದಾಗ ಬಂದು ನನ್ನ ಪರವಾಗಿ ಪ್ರಚಾರ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ’ ಎಂದೂ ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ:</strong> ಉತ್ತರ ಪ್ರದೇಶದಲ್ಲಿ ಹಲವು ಕ್ಷೇತ್ರಗಳ ಟಿಕೆಟ್ ಹಂಚಿಕೆ ಕಾಂಗ್ರೆಸ್ ಕಾರ್ಯಕರ್ತರ ಭಾರಿ ಅಸಮಾಧಾನಕ್ಕೆ ಕಾರಣವಾಗಿದೆ. ಕಾರ್ಯಕರ್ತರು ಟಿಕೆಟ್ ಹಂಚಿಕೆ ಪ್ರತಿಭಟಿಸಿ ಪ್ರತಿಭಟನಾ ಪ್ರದರ್ಶನಗಳನ್ನೂ ನಡೆಸಿದ್ದಾರೆ.<br /> <br /> ಕ್ರಿಕೆಟ್ ಆಟಗಾರ ಮೊಹಮ್ಮದ್ ಕೈಫ್ ಮತ್ತು ಭೋಜ್ಪುರಿ ಸಿನಿಮಾ ತಾರೆ ರವಿ ಕಿಶನ್ ಅವರಿಗೆ ಟಿಕೆಟ್ ನೀಡಿರುವುದು ಕಾರ್ಯಕರ್ತರಲ್ಲಿ ಅತಿ ಹೆಚ್ಚಿನ ಅತೃಪ್ತಿ ಉಂಟು ಮಾಡಿದೆ ಎಂದು ಮೂಲಗಳು ಹೇಳಿವೆ.<br /> <br /> ಮೋಹನ್ಲಾಲ್ ಗಂಜ್ ಮತ್ತು ಸೀತಾಪುರ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಬಗ್ಗೆ ಪಕ್ಷದ ಹಿರಿಯ ನಾಯಕರು ಅತೃಪ್ತಿ ವ್ಯಕ್ತಪಡಿಸಿದ್ದಾರೆ.<br /> <br /> ಅಲಹಾಬಾದ್ನಲ್ಲಿರುವ ಕೈಫ್ ಮನೆಯ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ.<br /> ‘ನಾವು ಕೈಫ್ ಅವರ ವಿರೋಧಿಗಳಲ್ಲ, ಆದರೆ ಕ್ಷೇತ್ರವನ್ನು ನೋಡಿಕೊಳ್ಳುವ ಸಾಮರ್ಥ್ಯವಿರುವ ಅಭ್ಯರ್ಥಿಗಳು ನಮಗೆ ಬೇಕು. ಕೈಫ್ ಒಬ್ಬ ತಾರೆ ಆಗಿರಬಹುದು. ಆದರೆ ಕ್ಷೇತ್ರಕ್ಕೆ ಅವರು ಏನಾದರೂ ಮಾಡಬಹುದು ಎಂಬ ನಂಬಿಕೆ ಇಲ್ಲ’ ಎಂದು ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.<br /> <br /> ಹಾಗೆಯೇ ಜೌನ್ಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರವಿ ಕಿಶನ್ ವಿರುದ್ಧವೂ ಪ್ರತಿಭಟನೆ ನಡೆದಿದೆ. ‘ಪ್ಯಾರಾಚೂಟ್ನಿಂದ ಇಳಿಸುವ ಅಭ್ಯರ್ಥಿಗಳಿಗೆ ನಮ್ಮ ವಿರೋಧ ಇದೆ. ರವಿ ಕಿಶನ್ ಅವರಿಗೆ ನೀಡಲಾದ ಟಿಕೆಟನ್ನು ಹಿಂದಕ್ಕೆ ಪಡೆಯಬೇಕು’ ಎಂದು ಜಿಲ್ಲಾ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.<br /> <br /> ಸೀತಾಪುರದಿಂದ ಟಿಕೆಟ್ ನೀಡಲಾಗಿರುವ ವೈಶಾಲಿ ಅಲಿ ಅವರ ವಿರುದ್ಧ ಕಾಂಗ್ರೆಸ್ನ ಹಿರಿಯ ನಾಯಕ ಅಮರ್ ರಿಜ್ವಿ ಬಹಿರಂಗವಾಗಿಯೇ ಅತೃಪ್ತಿ ಹೊರ ಹಾಕಿದ್ದಾರೆ. ‘ನಾನು ಟಿಕೆಟ್ ಆಕಾಂಕ್ಷಿ ಅಲ್ಲ. ಆದರೆ ಸೀತಾಪುರದಿಂದ ಸ್ಥಳೀಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕಿತ್ತು’ ಎಂದು ಹೇಳಿದ್ದಾರೆ.<br /> <br /> ಪಕ್ಷದ ನಿಷ್ಠಾವಂತರನ್ನು ಕಾಂಗ್ರೆಸ್ ಹೈಕಮಾಂಡ್ ಕಡೆಗಣಿಸಿದೆ ಎಂದು ಆರೋಪಿಸಿ ಪಕ್ಷದ ಕಚೇರಿಯ ಮುಂದೆ ಧರಣಿ ನಡೆಸಿದ್ದ ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ಯಾಮಲಾಲ್ ಪೂಜಾರಿ ಅವರನ್ನು ಉಚ್ಚಾಟಿಸಲಾಗಿದೆ. ಕೇಂದ್ರ ಸಚಿವ ವೇಣಿ ಪ್ರಸಾದ್ ವರ್ಮಾ ಕೂಡ ಅಭ್ಯರ್ಥಿ ಆಯ್ಕೆ ವಿಧಾನವನ್ನು ಟೀಕಿಸಿದ್ದಾರೆ.<br /> <br /> ಭಿನ್ನಮತ ಸಹಜ, ಆದರೂ ಒಗ್ಗಟ್ಟಿದೆ: ಆದರೆ, ಕಾರ್ಯಕರ್ತರ ಮನವೊಲಿಸಿ, ಅಧಿಕೃತ ಅಭ್ಯರ್ಥಿಗಳ ಪರ ಕೆಲಸ ಮಾಡಿಸುವ ವಿಶ್ವಾಸವನ್ನು ಪಕ್ಷದ ನಾಯಕರು ಹೊಂದಿದ್ದಾರೆ. ‘ಸ್ವಲ್ಪ ಮಟ್ಟಿನ ಭಿನ್ನಮತ ಇರುವುದು ಸಹಜ. ಆದರೆ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ’ ಎಂದು ನಾಯಕರು ಹೇಳಿದ್ದಾರೆ.<br /> <br /> <strong>ಪ್ರಚಾರಕ್ಕೆ ಸಚಿನ್, ಗಂಗೂಲಿ, ದ್ರಾವಿಡ್?<br /> ಅಲಹಾಬಾದ್ (ಪಿಟಿಐ):</strong> ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ವಿರೇಂದ್ರ ಸೆಹ್ವಾಗ್ ಅವರ </p>.<p>‘ಆಶೀರ್ವಾದ ದೊರಕಿದೆ’ ಎಂದು ಕಾಂಗ್ರೆಸ್ ಪಕ್ಷದಿಂದ ಚುನಾವಣೆ ಅಖಾಡಕ್ಕಿಳಿದಿರುವ ಕ್ರಿಕೆಟಿಗ ಮೊಹಮ್ಮದ್ ಕೈಫ್ ಹೇಳಿದ್ದಾರೆ.<br /> <br /> ಈ ಕ್ರಿಕೆಟ್ ತಾರೆಯರು ಚುನಾವಣಾ ಪ್ರಚಾರದಲ್ಲಿ ತಮಗೆ ನೆರವು ನೀಡಲಿದ್ದಾರೆ ಎಂಬ ನಿರೀಕ್ಷೆ ಉತ್ತರ ಪ್ರದೇಶದ ಫುಲ್ಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೈಫ್ ಅವರದ್ದು.<br /> <br /> ತಮ್ಮ ಬ್ಯಾಟಿಂಗ್ ಶೈಲಿಯಲ್ಲೇ (ಅಬ್ಬರದ ಆಟವನ್ನು ಹೊರತಾದ, ಒಂಟಿ, ಎರಡು ರನ್ಗಳ ಮೂಲಕ ಇನಿಂಗ್ಸ್ ಕಟ್ಟುವ) ರಾಜಕೀಯ ಮಾಡುವ ಭರವಸೆಯನ್ನು ಅವರು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ.<br /> <br /> ‘ಸಚಿನ್, ದ್ರಾವಿಡ್, ಸೌರವ್ ಗಂಗೂಲಿ, ಸೆಹ್ವಾಗ್, ಹರಭಜನ್ ಸಿಂಗ್ ಸೇರಿದಂತೆ ನನ್ನ ಹಲವು ಹಿರಿಯ ಸ್ನೇಹಿತರೊಂದಿಗೆ ಮಾತನಾಡಿದ್ದೇನೆ. ಅವರ ಹಾರೈಕೆಯೂ ನನಗೆ ಲಭಿಸಿದೆ. ಬಿಡುವಿದ್ದಾಗ ಬಂದು ನನ್ನ ಪರವಾಗಿ ಪ್ರಚಾರ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ’ ಎಂದೂ ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>