<p><strong>ಮೆಲ್ಬರ್ನ್ (ಪಿಟಿಐ/ಐಎಎನ್ಎಸ್): </strong>`ಆಸ್ಟ್ರೇಲಿಯಾ ಗೆಲ್ಲಬೇಕು~ ಎಂಬ ಭಾರತದ ಅಭಿಮಾನಿಗಳ ಪ್ರಾರ್ಥನೆ ಫಲಿಸಲಿಲ್ಲ. ಮಹಿ ಪಡೆ ವಿರುದ್ಧ 320 ರನ್ ಗಳಿಸಿಯೂ ಸೋಲು ಕಂಡಿದ್ದ ಶ್ರೀಲಂಕಾ ತಂಡ ಆಸ್ಟ್ರೇಲಿಯಾ ಎದುರು ಕೇವಲ 238 ಗಳಿಸಿ ಯಶಸ್ಸು ಕಂಡಿತು. ಲಂಕಾದ ಈ ಗೆಲುವಿನೊಂದಿಗೆ ಭಾರತ ತಂಡ ತ್ರಿಕೋನ ಏಕದಿನ ಕ್ರಿಕೆಟ್ ಟೂರ್ನಿಯಿಂದ ಹೊರಬಿದ್ದಿದೆ. ಕಾಂಗರೂ ಪಡೆಯ ಡೇನಿಯಲ್ ಕ್ರಿಸ್ಟಿಯನ್ ಹ್ಯಾಟ್ರಿಕ್ ವಿಕೆಟ್ ಪಡೆದು ಶ್ರೀಲಂಕಾದ ಫೈನಲ್ ಹಾದಿಗೆ ಅಡ್ಡಿಯಾಗಲು ಪ್ರಯತ್ನಿಸಿದರು. ಆದರೆ ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ಗಳು ಕೈಕೊಟ್ಟರು.<br /> <br /> ಶುಕ್ರವಾರ ಸಿಂಹಳೀಯ ಪಡೆಯ 238 ರನ್ಗಳಿಗೆ ಉತ್ತರವಾಗಿ ಆಸ್ಟ್ರೇಲಿಯಾ 49.1 ಓವರ್ಗಳಲ್ಲಿ 229 ರನ್ಗಳಿಗೆ ಆಲೌಟಾಯಿತು. ಆದರೆ ಈ ಸೋಲು ಆಸ್ಟ್ರೇಲಿಯಾ ತಂಡದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಏಕೆಂದರೆ ಈ ತಂಡ ಈ ಮೊದಲೇ ಫೈನಲ್ ತಲುಪಿತ್ತು. <br /> <br /> ಈ ಮೂಲಕ ಭಾನುವಾರ ಬ್ರಿಸ್ಬೇನ್ನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಮೊದಲ ಫೈನಲ್ನಲ್ಲಿ ಇವೇ ತಂಡಗಳು ಮುಖಾಮುಖಿಯಾಗಲಿವೆ. ಈ ಸರಣಿಯಲ್ಲಿ ಲಂಕಾ ಮೂರು ಬಾರಿ ಕಾಂಗರೂ ಪಡೆಯನ್ನು ಮಣಿಸಿದೆ. ಹಾಗಾಗಿ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯಿತು. <br /> <br /> ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ಗೆ ಮುಂದಾದ ಲಂಕಾ 17 ರನ್ಗಳಾಗುಷ್ಟರಲ್ಲಿ ಎರಡು ವಿಕೆಟ್ ಕಳೆದುಕೊಂಡಿತು. ಆದರೆ ಕುಮಾರ ಸಂಗಕ್ಕಾರ ಹಾಗೂ ದಿನೇಶ್ ಚಂಡಿಮಾಲ್ (75; 84 ಎ, 3 ಬೌಂ, 3 ಸಿ.) ಜೊತೆಯಾಟ ಪ್ರವಾಸಿ ತಂಡಕ್ಕೆ ಆಸರೆಯಾಯಿತು. ಬಳಿಕ ಲಹಿರು ತಿರಿಮಾನೆ ಕೂಡ ಅರ್ಧ ಶತಕದ ಮೂಲಕ ತಂಡದ ಮೊತ್ತ ಹೆಚ್ಚಿಸಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ವೇಗಿ ಜೇಮ್ಸ ಪ್ಯಾಟಿನ್ಸನ್ ಪೆಟ್ಟು ನೀಡಿದರು. <br /> <strong><br /> ಕ್ರಿಸ್ಟಿಯನ್ ಹ್ಯಾಟ್ರಿಕ್:</strong> ವೇಗದ ಬೌಲರ್ ಕ್ರಿಸ್ಟಿಯನ್ ಅದ್ಭುತ ಸಾಧನೆಯೊಂದಕ್ಕೆ ಕಾರಣರಾದರು. ಪಂದ್ಯದ 44ನೇ ಓವರ್ನಲ್ಲಿ ಈ ಸಾಧನೆ ಮೂಡಿಬಂತು. 43.3 ಎಸೆತದಲ್ಲಿ ಪೆರೇರಾ, 43.4 ಎಸೆತದಲ್ಲಿ ಸೇನನಾಯಕೆ, 43.5 ಎಸೆತದಲ್ಲಿ ಕುಲಶೇಖರ ವಿಕೆಟ್ ಕಬಳಿಸಿದರು. ಹ್ಯಾಟ್ರಿಕ್ ವಿಕೆಟ್ ಪಡೆದ ಆಸ್ಟ್ರೇಲಿಯಾದ ನಾಲ್ಕನೇ ಬೌಲರ್ ಎನಿಸಿದರು. <br /> <br /> ಆದರೆ ಸುಲಭ ಗುರಿಯ ಬೆನ್ನಟ್ಟಲು ಮುಂದಾದ ಆತಿಥೇಯ ತಂಡಕ್ಕೆ ಆರಂಭಿಕ ಬ್ಯಾಟ್ಸ್ಮನ್ಗಳಾದ ಮ್ಯಾಥ್ಯೂ ವೇಡ್, ಡೇನಿಯಲ್ ವಾರ್ನರ್ ಹಾಗೂ ಪೀಟರ್ ಫಾರೆಸ್ಟ್ ಕೈಕೊಟ್ಟರು. ಈ ಪರಿಣಾಮ ಕಾಂಗರೂ ಪಡೆ 26 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಅಪಾಯಕ್ಕೆ ಸಿಲುಕಿತು. <br /> <br /> ಈ ಹಂತದಲ್ಲಿ ನಾಯಕ ಶೇನ್ ವಾಟ್ಸನ್ ಹಾಗೂ ಮೈಕ್ ಹಸ್ಸಿ ಕೊಂಚ ಪ್ರತಿರೋಧ ತೋರಿದರು. ಬಳಿಕ ಬಂದ ಡೇವಿಡ್ ಹಸ್ಸಿ ಬಿರುಸಿನ ಆಟದ ಮೂಲಕ ಗೆಲುವಿನ ಆಸೆ ಚಿಗುರಿಸಿದ್ದರು. ಆಗ ಭಾರತ ತಂಡದ ಅಭಿಮಾನಿಗಳ ಮುಖ ಕೂಡ ಅರಳಿತ್ತು. <br /> <br /> ಆದರೆ ಗೆಲ್ಲಲು 10 ರನ್ ಬೇಕಿದ್ದಾಗ ಕುಲಶೇಖರ ಬೌಲಿಂಗ್ನಲ್ಲಿ ಚೆಂಡನ್ನು ಬಲವಾಗಿ ಬಾರಿಸಲು ಹೋದ ಡೇವಿಡ್ (74; 74 ಎಸೆತ, 4 ಬೌಂ, 1 ಸಿ.) ಎಡವಟ್ಟು ಮಾಡಿಕೊಂಡರು. ಆಗ ಲಂಕಾದ ಸಂಭ್ರಮಕ್ಕೆ ಅಂತ್ಯವೇ ಇರಲಿಲ್ಲ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೆಲ್ಬರ್ನ್ (ಪಿಟಿಐ/ಐಎಎನ್ಎಸ್): </strong>`ಆಸ್ಟ್ರೇಲಿಯಾ ಗೆಲ್ಲಬೇಕು~ ಎಂಬ ಭಾರತದ ಅಭಿಮಾನಿಗಳ ಪ್ರಾರ್ಥನೆ ಫಲಿಸಲಿಲ್ಲ. ಮಹಿ ಪಡೆ ವಿರುದ್ಧ 320 ರನ್ ಗಳಿಸಿಯೂ ಸೋಲು ಕಂಡಿದ್ದ ಶ್ರೀಲಂಕಾ ತಂಡ ಆಸ್ಟ್ರೇಲಿಯಾ ಎದುರು ಕೇವಲ 238 ಗಳಿಸಿ ಯಶಸ್ಸು ಕಂಡಿತು. ಲಂಕಾದ ಈ ಗೆಲುವಿನೊಂದಿಗೆ ಭಾರತ ತಂಡ ತ್ರಿಕೋನ ಏಕದಿನ ಕ್ರಿಕೆಟ್ ಟೂರ್ನಿಯಿಂದ ಹೊರಬಿದ್ದಿದೆ. ಕಾಂಗರೂ ಪಡೆಯ ಡೇನಿಯಲ್ ಕ್ರಿಸ್ಟಿಯನ್ ಹ್ಯಾಟ್ರಿಕ್ ವಿಕೆಟ್ ಪಡೆದು ಶ್ರೀಲಂಕಾದ ಫೈನಲ್ ಹಾದಿಗೆ ಅಡ್ಡಿಯಾಗಲು ಪ್ರಯತ್ನಿಸಿದರು. ಆದರೆ ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ಗಳು ಕೈಕೊಟ್ಟರು.<br /> <br /> ಶುಕ್ರವಾರ ಸಿಂಹಳೀಯ ಪಡೆಯ 238 ರನ್ಗಳಿಗೆ ಉತ್ತರವಾಗಿ ಆಸ್ಟ್ರೇಲಿಯಾ 49.1 ಓವರ್ಗಳಲ್ಲಿ 229 ರನ್ಗಳಿಗೆ ಆಲೌಟಾಯಿತು. ಆದರೆ ಈ ಸೋಲು ಆಸ್ಟ್ರೇಲಿಯಾ ತಂಡದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಏಕೆಂದರೆ ಈ ತಂಡ ಈ ಮೊದಲೇ ಫೈನಲ್ ತಲುಪಿತ್ತು. <br /> <br /> ಈ ಮೂಲಕ ಭಾನುವಾರ ಬ್ರಿಸ್ಬೇನ್ನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಮೊದಲ ಫೈನಲ್ನಲ್ಲಿ ಇವೇ ತಂಡಗಳು ಮುಖಾಮುಖಿಯಾಗಲಿವೆ. ಈ ಸರಣಿಯಲ್ಲಿ ಲಂಕಾ ಮೂರು ಬಾರಿ ಕಾಂಗರೂ ಪಡೆಯನ್ನು ಮಣಿಸಿದೆ. ಹಾಗಾಗಿ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯಿತು. <br /> <br /> ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ಗೆ ಮುಂದಾದ ಲಂಕಾ 17 ರನ್ಗಳಾಗುಷ್ಟರಲ್ಲಿ ಎರಡು ವಿಕೆಟ್ ಕಳೆದುಕೊಂಡಿತು. ಆದರೆ ಕುಮಾರ ಸಂಗಕ್ಕಾರ ಹಾಗೂ ದಿನೇಶ್ ಚಂಡಿಮಾಲ್ (75; 84 ಎ, 3 ಬೌಂ, 3 ಸಿ.) ಜೊತೆಯಾಟ ಪ್ರವಾಸಿ ತಂಡಕ್ಕೆ ಆಸರೆಯಾಯಿತು. ಬಳಿಕ ಲಹಿರು ತಿರಿಮಾನೆ ಕೂಡ ಅರ್ಧ ಶತಕದ ಮೂಲಕ ತಂಡದ ಮೊತ್ತ ಹೆಚ್ಚಿಸಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ವೇಗಿ ಜೇಮ್ಸ ಪ್ಯಾಟಿನ್ಸನ್ ಪೆಟ್ಟು ನೀಡಿದರು. <br /> <strong><br /> ಕ್ರಿಸ್ಟಿಯನ್ ಹ್ಯಾಟ್ರಿಕ್:</strong> ವೇಗದ ಬೌಲರ್ ಕ್ರಿಸ್ಟಿಯನ್ ಅದ್ಭುತ ಸಾಧನೆಯೊಂದಕ್ಕೆ ಕಾರಣರಾದರು. ಪಂದ್ಯದ 44ನೇ ಓವರ್ನಲ್ಲಿ ಈ ಸಾಧನೆ ಮೂಡಿಬಂತು. 43.3 ಎಸೆತದಲ್ಲಿ ಪೆರೇರಾ, 43.4 ಎಸೆತದಲ್ಲಿ ಸೇನನಾಯಕೆ, 43.5 ಎಸೆತದಲ್ಲಿ ಕುಲಶೇಖರ ವಿಕೆಟ್ ಕಬಳಿಸಿದರು. ಹ್ಯಾಟ್ರಿಕ್ ವಿಕೆಟ್ ಪಡೆದ ಆಸ್ಟ್ರೇಲಿಯಾದ ನಾಲ್ಕನೇ ಬೌಲರ್ ಎನಿಸಿದರು. <br /> <br /> ಆದರೆ ಸುಲಭ ಗುರಿಯ ಬೆನ್ನಟ್ಟಲು ಮುಂದಾದ ಆತಿಥೇಯ ತಂಡಕ್ಕೆ ಆರಂಭಿಕ ಬ್ಯಾಟ್ಸ್ಮನ್ಗಳಾದ ಮ್ಯಾಥ್ಯೂ ವೇಡ್, ಡೇನಿಯಲ್ ವಾರ್ನರ್ ಹಾಗೂ ಪೀಟರ್ ಫಾರೆಸ್ಟ್ ಕೈಕೊಟ್ಟರು. ಈ ಪರಿಣಾಮ ಕಾಂಗರೂ ಪಡೆ 26 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಅಪಾಯಕ್ಕೆ ಸಿಲುಕಿತು. <br /> <br /> ಈ ಹಂತದಲ್ಲಿ ನಾಯಕ ಶೇನ್ ವಾಟ್ಸನ್ ಹಾಗೂ ಮೈಕ್ ಹಸ್ಸಿ ಕೊಂಚ ಪ್ರತಿರೋಧ ತೋರಿದರು. ಬಳಿಕ ಬಂದ ಡೇವಿಡ್ ಹಸ್ಸಿ ಬಿರುಸಿನ ಆಟದ ಮೂಲಕ ಗೆಲುವಿನ ಆಸೆ ಚಿಗುರಿಸಿದ್ದರು. ಆಗ ಭಾರತ ತಂಡದ ಅಭಿಮಾನಿಗಳ ಮುಖ ಕೂಡ ಅರಳಿತ್ತು. <br /> <br /> ಆದರೆ ಗೆಲ್ಲಲು 10 ರನ್ ಬೇಕಿದ್ದಾಗ ಕುಲಶೇಖರ ಬೌಲಿಂಗ್ನಲ್ಲಿ ಚೆಂಡನ್ನು ಬಲವಾಗಿ ಬಾರಿಸಲು ಹೋದ ಡೇವಿಡ್ (74; 74 ಎಸೆತ, 4 ಬೌಂ, 1 ಸಿ.) ಎಡವಟ್ಟು ಮಾಡಿಕೊಂಡರು. ಆಗ ಲಂಕಾದ ಸಂಭ್ರಮಕ್ಕೆ ಅಂತ್ಯವೇ ಇರಲಿಲ್ಲ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>