<p><strong>ಸೆಮಿಫೈನಲ್ಗೆ ಎಂಬಿಸಿ<br /> <br /> ಬೆಂಗಳೂರು: </strong>ಮಂಗಳೂರು ಬ್ಯಾಸ್ಕೆಟ್ಬಾಲ್ ಕ್ಲಬ್ ತಂಡ (ಎಂಬಿಸಿ)ವು ರಾಜ್ಯ ಸಬ್ಜೂನಿಯರ್ ಬ್ಯಾಸ್ಕೆಟ್ಬಾಲ್ ಚಾಂಪಿಯನ್ಷಿಪ್ನ ಬಾಲಕರ ವಿಭಾಗದ ಸೆಮಿಫೈನಲ್ ತಲುಪಿದೆ.<br /> <br /> ಸೋಮವಾರದ ಎಂಟರ ಘಟ್ಟದ ಪಂದ್ಯಗಳಲ್ಲಿ ಎಂಬಿಸಿ 37-14ರಿಂದ ಮಂಡ್ಯದ ವಿವೇಕಾನಂದ ತಂಡವನ್ನು, ಚಂದರಗಿಯ ಎಸ್ಪಿ ಶಾಲೆಯು 29-19ರಿಂದ ವಿವೇಕ್ಸ್ ತಂಡವನ್ನು, ಜೆಎಸ್ಸಿ 30-22ರಿಂದ ಐಬಿಬಿಸಿಯನ್ನು, ಯಂಗ್ ಓರಿಯನ್ಸ್ 24-12ರಿಂದ ಶಿವಮೊಗ್ಗ ಯೂತ್ಸ್ ವಿರುದ್ಧ ಗೆಲುವು ಸಾಧಿಸಿದವು.<br /> <br /> ಬಾಲಕಿಯರ ವಿಭಾಗದ ಪಂದ್ಯಗಳಲ್ಲಿ ಗೆದ್ದ ಮಂಡ್ಯದ ಎಸ್ಪಿ ಸ್ಕೂಲ್, ವಿಮಾನಪುರ ಸ್ಪೋರ್ಟ್ಸ್ ಕ್ಲಬ್, ಶಿವಮೊಗ್ಗ ಯೂತ್ಸ್, ಮೌಂಟ್ಸ್ ಕ್ಲಬ್ ತಂಡಗಳು ಸೆಮಿಫೈನಲ್ ಲೀಗ್ ತಲುಪಿದವು.<br /> <br /> <strong>ವಿವಿಧೆಡೆ ಕೆಎಸ್ಸಿಎ ಶಿಬಿರ ಆರಂಭ<br /> ಪ್ರಜಾವಾಣಿ ವಾರ್ತೆ<br /> ಬೆಂಗಳೂರು: </strong>ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್ಸಿಎ) ಕ್ರಿಕೆಟ್ ಅಕಾಡೆಮಿ ಮತ್ತು ರಾಯಲ್ ಚಾಲೆಂಜರ್ಸ್ ಸಹಭಾಗಿತ್ವದಲ್ಲಿ ಬೇಸಿಗೆಯ ಉಚಿತ ತರಬೇತಿ ಶಿಬಿರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೋಮವಾರ ಆರಂಭವಾಯಿತು. <br /> <br /> ಮೈಸೂರಿನ ಗಂಗೋತ್ರಿ ಗ್ಲೇಡ್ಸ್ ಮೈದಾನದಲ್ಲಿ 16 ಮತ್ತು 19 ವರ್ಷದೊಳಗಿನ ಒಟ್ಟು 60 ಬಾಲಕರು ತರಬೇತಿಗೆ ಆಯ್ಕೆಯಾಗಿದ್ದಾರೆ. ವಲಯದ ಮಂಡ್ಯ, ಚಾಮರಾಜನಗರ, ಸುತ್ತೂರಿನಲ್ಲಿಯೂ ಶಿಬಿರಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಕೆಎಸ್ಸಿಎ ಪ್ರಧಾನ ಕಾರ್ಯದರ್ಶಿ ಜಾವಗಲ್ ಶ್ರೀನಾಥ್, ವಲಯ ನಿಮಂತ್ರಕ ವಿಜಯಪ್ರಕಾಶ್, ವಲಯ ಚೇರಮನ್ ಅಶ್ವಿನಿ ರಂಜನ್ ಹಾಜರಿದ್ದರು. <br /> <br /> ಹುಬ್ಬಳ್ಳಿಯ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಮಾಜಿ ಕ್ರಿಕೆಟಿಗ ಜಿ.ಆರ್.ವಿಶ್ವನಾಥ್ ಚಾಲನೆ ನೀಡಿದರು. ಧಾರವಾಡ ವಲಯ ನಿಯಂತ್ರಕ ಬಾಬಾ ಭೂಸದ್ ಹಾಜರಿದ್ದರು. ಶಿವಮೊಗ್ಗದ ಹೊರವಲಯದಲ್ಲಿರುವ ಜೆಎನ್ಎನ್ಸಿಇ ಕ್ರೀಡಾಂಗಣದಲ್ಲಿ ಮಾಜಿ ಕ್ರಿಕೆಟಿಗ ಸೈಯದ್ ಕೀರ್ಮಾನಿ ಶಿಬಿರಕ್ಕೆ ಚಾಲನೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೆಮಿಫೈನಲ್ಗೆ ಎಂಬಿಸಿ<br /> <br /> ಬೆಂಗಳೂರು: </strong>ಮಂಗಳೂರು ಬ್ಯಾಸ್ಕೆಟ್ಬಾಲ್ ಕ್ಲಬ್ ತಂಡ (ಎಂಬಿಸಿ)ವು ರಾಜ್ಯ ಸಬ್ಜೂನಿಯರ್ ಬ್ಯಾಸ್ಕೆಟ್ಬಾಲ್ ಚಾಂಪಿಯನ್ಷಿಪ್ನ ಬಾಲಕರ ವಿಭಾಗದ ಸೆಮಿಫೈನಲ್ ತಲುಪಿದೆ.<br /> <br /> ಸೋಮವಾರದ ಎಂಟರ ಘಟ್ಟದ ಪಂದ್ಯಗಳಲ್ಲಿ ಎಂಬಿಸಿ 37-14ರಿಂದ ಮಂಡ್ಯದ ವಿವೇಕಾನಂದ ತಂಡವನ್ನು, ಚಂದರಗಿಯ ಎಸ್ಪಿ ಶಾಲೆಯು 29-19ರಿಂದ ವಿವೇಕ್ಸ್ ತಂಡವನ್ನು, ಜೆಎಸ್ಸಿ 30-22ರಿಂದ ಐಬಿಬಿಸಿಯನ್ನು, ಯಂಗ್ ಓರಿಯನ್ಸ್ 24-12ರಿಂದ ಶಿವಮೊಗ್ಗ ಯೂತ್ಸ್ ವಿರುದ್ಧ ಗೆಲುವು ಸಾಧಿಸಿದವು.<br /> <br /> ಬಾಲಕಿಯರ ವಿಭಾಗದ ಪಂದ್ಯಗಳಲ್ಲಿ ಗೆದ್ದ ಮಂಡ್ಯದ ಎಸ್ಪಿ ಸ್ಕೂಲ್, ವಿಮಾನಪುರ ಸ್ಪೋರ್ಟ್ಸ್ ಕ್ಲಬ್, ಶಿವಮೊಗ್ಗ ಯೂತ್ಸ್, ಮೌಂಟ್ಸ್ ಕ್ಲಬ್ ತಂಡಗಳು ಸೆಮಿಫೈನಲ್ ಲೀಗ್ ತಲುಪಿದವು.<br /> <br /> <strong>ವಿವಿಧೆಡೆ ಕೆಎಸ್ಸಿಎ ಶಿಬಿರ ಆರಂಭ<br /> ಪ್ರಜಾವಾಣಿ ವಾರ್ತೆ<br /> ಬೆಂಗಳೂರು: </strong>ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್ಸಿಎ) ಕ್ರಿಕೆಟ್ ಅಕಾಡೆಮಿ ಮತ್ತು ರಾಯಲ್ ಚಾಲೆಂಜರ್ಸ್ ಸಹಭಾಗಿತ್ವದಲ್ಲಿ ಬೇಸಿಗೆಯ ಉಚಿತ ತರಬೇತಿ ಶಿಬಿರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೋಮವಾರ ಆರಂಭವಾಯಿತು. <br /> <br /> ಮೈಸೂರಿನ ಗಂಗೋತ್ರಿ ಗ್ಲೇಡ್ಸ್ ಮೈದಾನದಲ್ಲಿ 16 ಮತ್ತು 19 ವರ್ಷದೊಳಗಿನ ಒಟ್ಟು 60 ಬಾಲಕರು ತರಬೇತಿಗೆ ಆಯ್ಕೆಯಾಗಿದ್ದಾರೆ. ವಲಯದ ಮಂಡ್ಯ, ಚಾಮರಾಜನಗರ, ಸುತ್ತೂರಿನಲ್ಲಿಯೂ ಶಿಬಿರಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಕೆಎಸ್ಸಿಎ ಪ್ರಧಾನ ಕಾರ್ಯದರ್ಶಿ ಜಾವಗಲ್ ಶ್ರೀನಾಥ್, ವಲಯ ನಿಮಂತ್ರಕ ವಿಜಯಪ್ರಕಾಶ್, ವಲಯ ಚೇರಮನ್ ಅಶ್ವಿನಿ ರಂಜನ್ ಹಾಜರಿದ್ದರು. <br /> <br /> ಹುಬ್ಬಳ್ಳಿಯ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಮಾಜಿ ಕ್ರಿಕೆಟಿಗ ಜಿ.ಆರ್.ವಿಶ್ವನಾಥ್ ಚಾಲನೆ ನೀಡಿದರು. ಧಾರವಾಡ ವಲಯ ನಿಯಂತ್ರಕ ಬಾಬಾ ಭೂಸದ್ ಹಾಜರಿದ್ದರು. ಶಿವಮೊಗ್ಗದ ಹೊರವಲಯದಲ್ಲಿರುವ ಜೆಎನ್ಎನ್ಸಿಇ ಕ್ರೀಡಾಂಗಣದಲ್ಲಿ ಮಾಜಿ ಕ್ರಿಕೆಟಿಗ ಸೈಯದ್ ಕೀರ್ಮಾನಿ ಶಿಬಿರಕ್ಕೆ ಚಾಲನೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>