<p>ಗಂಗಾವತಿ: ನಗರದ 16ನೆ ವಾರ್ಡ್ ಮುರಾರಿಕ್ಯಾಂಪಿನ ಜನ ವಸತಿ ಪ್ರದೇಶದ ಮಧ್ಯೆ ಕಳೆದ ಹಲವು ತಿಂಗಳಿಂದ ಗೋವಧೆ ಮಾಡಿ ಮಾಂಸ ಮಾರುತ್ತಿರುವ ದಂಧೆ ನಿರಾತಂಕವಾಗಿ ನಡೆದಿದೆ. ನಾಗರಿಕರು ವಿರೋಧ ವ್ಯಕ್ತಪಡಿಸಿದ್ದರಿಂದ ಪ್ರಕರಣ ಈಗ ಬಯಲಿಗೆ ಬಂದಿದೆ.<br /> <br /> ಜನ ವಸತಿ ಪ್ರದೇಶದ ಮಧ್ಯೆಯೇ ಕೆಲ ವ್ಯಕ್ತಿಗಳು ಆಕಳು, ಎಮ್ಮೆ, ಎತ್ತು ಮತ್ತು ಕರುಗಳನ್ನು ಕತ್ತರಿಸಿ ಮನೆಯಲ್ಲಿ ಮಾಂಸ ಮಾರಾಟ ಮಾಡುತ್ತಿದ್ದಾರೆ. ಮತ್ತಷ್ಟು ಜನ ಮಾಂಸವನ್ನು ಬಳ್ಳಾರಿ, ಕಂಪ್ಲಿ, ಸಿಂಧನೂರು ಮತ್ತಿತರ ಪಟ್ಟಣಕ್ಕೆ ರವಾನಿಸುತ್ತಾರೆ ಎಂದು ಗೊತ್ತಾಗಿದೆ. <br /> <br /> ನಾಗರಿಕರಿಗೆ ತೊಂದರೆ: `ಪಶು ಮಾಂಸವನ್ನು ಜನವಸತಿ ಪ್ರದೇಶದ ಮಧ್ಯೆ ಕತ್ತರಿಸುತ್ತಿರುವುದರಿಂದ ಸುತ್ತಲಿನ ಪರಿಸರದಲ್ಲಿ ಮಲೀನ ಉಂಟಾಗುತ್ತಿದೆ. ಇದರಿಂದಾಗಿ ಮಹಿಳೆ ಮತ್ತು ಮಕ್ಕಳಲ್ಲಿ ವಿವಿಧ ಕಾಯಿಲೆಗೆ ಕಾರಣವಾಗುತ್ತಿವೆ~ ಎಂದು ಸ್ಥಳೀಯ ನಿವಾಸಿ ಮೊಹಮ್ಮದ್ ದೂರಿದ್ದಾರೆ. <br /> <br /> `ಕೆಲ ಮನೆಗಳಲ್ಲಿ ನಡೆಯುತ್ತಿರುವ ಗೋಮಾಂಸ ವ್ಯಾಪಾರ ನಗರದ ಹೊರಭಾಗಕ್ಕೆ ಸ್ಥಳಾಂತರಿಸುವಂತೆ ಒತ್ತಾಯಿಸಿ ವಾರ್ಡಿನ ನಾಗರಿಕರು ನಗರಸಭೆಗೆ ಸಲ್ಲಿಸಿದ ಅರ್ಜಿಗೆ ಮೂರ್ನಾಲ್ಕು ತಿಂಗಳಾದರೂ ಮರ್ಯಾದೆ ಸಿಕ್ಕಿಲ್ಲ~ ಎಂದು ನಾಗರಾಜ ಮತ್ತೆದಾರ ದೂರಿದ್ದಾರೆ. <br /> <br /> ಸಂಘಟನೆ ವಿರೋಧ: ಗೋವುಗಳನ್ನು ಕತ್ತರಿಸಿ ಮಾಂಸ ಮಾರಾಟ ಮಾಡುವ ಮೂಲಕ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗುತ್ತಿದೆ ಎಂದು ಆಕ್ಷೇಪಿಸಿ ಕಳೆದ ನಾಲ್ಕು ತಿಂಗಳ ಹಿಂದೆ ನಗರದ ಹಿಂದು ಪರ ಸಂಘಟನೆಯ ಕೆಲ ಯುವಕರು ಪೊಲೀಸರಿಗೆ ದೂರು ನೀಡಿದ್ದರು. <br /> <br /> `ಕಾಟಾಚಾರಕ್ಕೆ ಎಂಬಂತೆ ಸ್ಥಳಕ್ಕೆ ತೆರಳಿದ ಪೊಲೀಸರು ಯಾವ ಕ್ರಮ ಕೈಗೊಳ್ಳದೇ ಸುಮ್ಮನಾದರು. ಇದರ ಹಿಂದೆ ಚುನಾಯಿತ ಪ್ರತಿನಿಧಿಗಳ ಕೈವಾಡ ಇದೆ~ ಎಂದು ಹಿಂದು ಪರ ಸಂಘಟನೆಯ ಯುವಕರಾದ ವಿಜಯ್, ಶರಣಪ್ಪ ದೂರಿದ್ದಾರೆ. <br /> <br /> ಕಟ್ಟಡ ನೆಲಸಮ: ಈ ಹಿಂದೆ ಬೈಪಾಸ್ ರಸ್ತೆಯಲ್ಲಿನ ಕಸಾಯಿಖಾನೆಯಲ್ಲಿ ಕೆಲ ವ್ಯಾಪಾರಿಗಳು ಮಾಂಸ ಮಾರಾಟ ಮಾಡಿ ತಮ್ಮ ಜೀವನ ನಡೆಸುತ್ತಿದ್ದರು. ಆದರೆ ಕಟ್ಟಡ ತಮ್ಮ ಖಾಸಗಿ ಸ್ಥಳದಲ್ಲಿ ನಿರ್ಮಾಣವಾಗಿದೆ ಎಂದು ಆಕ್ಷೇಪಿಸಿ ವ್ಯಕ್ತಿಯೊಬ್ಬರು ನ್ಯಾಯಾಲಯದ ಕಟ್ಟೆ ಹತ್ತಿದರು. <br /> <br /> ಖಾಸಗಿ ಸ್ಥಳ ವಿಚಾರ ಗೊತ್ತಿದ್ದೂ ನಗರಸಭೆ ಸುಮಾರು 20ಲಕ್ಷ ಮೊತ್ತದ ನವೀಕರಣ ಕೈಗೊಂಡಿತ್ತು. ಕಾಮಗಾರಿ ನಿರ್ವಹಿಸಿದ ಎರಡೇ ತಿಂಗಳಲ್ಲಿ ಕಸಾಯಿಖಾನೆ ನೆಲಸಮವಾಗಿದೆ. ಪರ್ಯಾಯ ಸ್ಥಳ ತೋರಿಸುವಲ್ಲಿ ನಗರಸಭೆ ವಿಫಲವಾದ್ದರಿಂದ ವ್ಯಾಪಾರಿಗಳು ನಗರದಲ್ಲಿ ಮಾಂಸ ಮಾರುವಂತಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗಂಗಾವತಿ: ನಗರದ 16ನೆ ವಾರ್ಡ್ ಮುರಾರಿಕ್ಯಾಂಪಿನ ಜನ ವಸತಿ ಪ್ರದೇಶದ ಮಧ್ಯೆ ಕಳೆದ ಹಲವು ತಿಂಗಳಿಂದ ಗೋವಧೆ ಮಾಡಿ ಮಾಂಸ ಮಾರುತ್ತಿರುವ ದಂಧೆ ನಿರಾತಂಕವಾಗಿ ನಡೆದಿದೆ. ನಾಗರಿಕರು ವಿರೋಧ ವ್ಯಕ್ತಪಡಿಸಿದ್ದರಿಂದ ಪ್ರಕರಣ ಈಗ ಬಯಲಿಗೆ ಬಂದಿದೆ.<br /> <br /> ಜನ ವಸತಿ ಪ್ರದೇಶದ ಮಧ್ಯೆಯೇ ಕೆಲ ವ್ಯಕ್ತಿಗಳು ಆಕಳು, ಎಮ್ಮೆ, ಎತ್ತು ಮತ್ತು ಕರುಗಳನ್ನು ಕತ್ತರಿಸಿ ಮನೆಯಲ್ಲಿ ಮಾಂಸ ಮಾರಾಟ ಮಾಡುತ್ತಿದ್ದಾರೆ. ಮತ್ತಷ್ಟು ಜನ ಮಾಂಸವನ್ನು ಬಳ್ಳಾರಿ, ಕಂಪ್ಲಿ, ಸಿಂಧನೂರು ಮತ್ತಿತರ ಪಟ್ಟಣಕ್ಕೆ ರವಾನಿಸುತ್ತಾರೆ ಎಂದು ಗೊತ್ತಾಗಿದೆ. <br /> <br /> ನಾಗರಿಕರಿಗೆ ತೊಂದರೆ: `ಪಶು ಮಾಂಸವನ್ನು ಜನವಸತಿ ಪ್ರದೇಶದ ಮಧ್ಯೆ ಕತ್ತರಿಸುತ್ತಿರುವುದರಿಂದ ಸುತ್ತಲಿನ ಪರಿಸರದಲ್ಲಿ ಮಲೀನ ಉಂಟಾಗುತ್ತಿದೆ. ಇದರಿಂದಾಗಿ ಮಹಿಳೆ ಮತ್ತು ಮಕ್ಕಳಲ್ಲಿ ವಿವಿಧ ಕಾಯಿಲೆಗೆ ಕಾರಣವಾಗುತ್ತಿವೆ~ ಎಂದು ಸ್ಥಳೀಯ ನಿವಾಸಿ ಮೊಹಮ್ಮದ್ ದೂರಿದ್ದಾರೆ. <br /> <br /> `ಕೆಲ ಮನೆಗಳಲ್ಲಿ ನಡೆಯುತ್ತಿರುವ ಗೋಮಾಂಸ ವ್ಯಾಪಾರ ನಗರದ ಹೊರಭಾಗಕ್ಕೆ ಸ್ಥಳಾಂತರಿಸುವಂತೆ ಒತ್ತಾಯಿಸಿ ವಾರ್ಡಿನ ನಾಗರಿಕರು ನಗರಸಭೆಗೆ ಸಲ್ಲಿಸಿದ ಅರ್ಜಿಗೆ ಮೂರ್ನಾಲ್ಕು ತಿಂಗಳಾದರೂ ಮರ್ಯಾದೆ ಸಿಕ್ಕಿಲ್ಲ~ ಎಂದು ನಾಗರಾಜ ಮತ್ತೆದಾರ ದೂರಿದ್ದಾರೆ. <br /> <br /> ಸಂಘಟನೆ ವಿರೋಧ: ಗೋವುಗಳನ್ನು ಕತ್ತರಿಸಿ ಮಾಂಸ ಮಾರಾಟ ಮಾಡುವ ಮೂಲಕ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗುತ್ತಿದೆ ಎಂದು ಆಕ್ಷೇಪಿಸಿ ಕಳೆದ ನಾಲ್ಕು ತಿಂಗಳ ಹಿಂದೆ ನಗರದ ಹಿಂದು ಪರ ಸಂಘಟನೆಯ ಕೆಲ ಯುವಕರು ಪೊಲೀಸರಿಗೆ ದೂರು ನೀಡಿದ್ದರು. <br /> <br /> `ಕಾಟಾಚಾರಕ್ಕೆ ಎಂಬಂತೆ ಸ್ಥಳಕ್ಕೆ ತೆರಳಿದ ಪೊಲೀಸರು ಯಾವ ಕ್ರಮ ಕೈಗೊಳ್ಳದೇ ಸುಮ್ಮನಾದರು. ಇದರ ಹಿಂದೆ ಚುನಾಯಿತ ಪ್ರತಿನಿಧಿಗಳ ಕೈವಾಡ ಇದೆ~ ಎಂದು ಹಿಂದು ಪರ ಸಂಘಟನೆಯ ಯುವಕರಾದ ವಿಜಯ್, ಶರಣಪ್ಪ ದೂರಿದ್ದಾರೆ. <br /> <br /> ಕಟ್ಟಡ ನೆಲಸಮ: ಈ ಹಿಂದೆ ಬೈಪಾಸ್ ರಸ್ತೆಯಲ್ಲಿನ ಕಸಾಯಿಖಾನೆಯಲ್ಲಿ ಕೆಲ ವ್ಯಾಪಾರಿಗಳು ಮಾಂಸ ಮಾರಾಟ ಮಾಡಿ ತಮ್ಮ ಜೀವನ ನಡೆಸುತ್ತಿದ್ದರು. ಆದರೆ ಕಟ್ಟಡ ತಮ್ಮ ಖಾಸಗಿ ಸ್ಥಳದಲ್ಲಿ ನಿರ್ಮಾಣವಾಗಿದೆ ಎಂದು ಆಕ್ಷೇಪಿಸಿ ವ್ಯಕ್ತಿಯೊಬ್ಬರು ನ್ಯಾಯಾಲಯದ ಕಟ್ಟೆ ಹತ್ತಿದರು. <br /> <br /> ಖಾಸಗಿ ಸ್ಥಳ ವಿಚಾರ ಗೊತ್ತಿದ್ದೂ ನಗರಸಭೆ ಸುಮಾರು 20ಲಕ್ಷ ಮೊತ್ತದ ನವೀಕರಣ ಕೈಗೊಂಡಿತ್ತು. ಕಾಮಗಾರಿ ನಿರ್ವಹಿಸಿದ ಎರಡೇ ತಿಂಗಳಲ್ಲಿ ಕಸಾಯಿಖಾನೆ ನೆಲಸಮವಾಗಿದೆ. ಪರ್ಯಾಯ ಸ್ಥಳ ತೋರಿಸುವಲ್ಲಿ ನಗರಸಭೆ ವಿಫಲವಾದ್ದರಿಂದ ವ್ಯಾಪಾರಿಗಳು ನಗರದಲ್ಲಿ ಮಾಂಸ ಮಾರುವಂತಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>