<p><strong>ಬೆಂಗಳೂರು: </strong>`ಅಧ್ಯಾತ್ಮ ಗುರು ಗಣಪತರಾವ್ ಮಹಾರಾಜರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕಿನ ಗುರಿ ಸಾಧನೆಯ ಕಡೆಗೆ ಹೆಜ್ಜೆ ಹಾಕಬೇಕು~ ಎಂದು ಪೊನ್ನಂಪೇಟೆಯ ರಾಮಕೃಷ್ಣ ಶಾರದಾಶ್ರಮದ ಸ್ವಾಮಿ ಜಗದಾತ್ಮಾನಂದಜೀ ಹೇಳಿದರು.<br /> <br /> ವಿಜಾಪುರ ಜಿಲ್ಲೆಯ ಕನ್ನೂರಿನ ಸಮರ್ಥ ಸದ್ಗುರು ಗಣಪತರಾವ್ ಮಹಾರಾಜರ ಸತ್ಸಂಗ ಸಮಿತಿಯು ಬಸವನಗುಡಿಯ ಗೋಖಲೆ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ನಲ್ಲಿ ಭಾನುವಾರ ಆಯೋಜಿಸಿದ್ದ ಗಣಪತರಾವ್ ಮಹಾರಾಜರ `ಸುಲಭ ಆತ್ಮಜ್ಞಾನ~ ಪುಸ್ತಕದ ಇಂಗ್ಲಿಷ್ ಅನುವಾದ `ಫ್ಲೈಟ್ ಟು ಸೆಲ್ಫ್ ರಿಯಲೈಸೇಷನ್~ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.<br /> <br /> ಹಿರಿಯ ವಿದ್ವಾಂಸ ಸುಬ್ರಾಯ ಶರ್ಮ ಅವರು ಗಣಪತರಾವ್ ಮಹಾರಾಜರೊಡನೆ ತಮಗಿದ್ದ ಒಡನಾಟದ ಬಗ್ಗೆ ಮಾತನಾಡಿದರು. `ಗುರುಗಳ ಸಾಮಾಜಿಕ ಕಳಕಳಿ ಹಾಗೂ ಗುರುಮಹಿಮೆ ಅಪಾರವಾದುದು. ಗಣಪತರಾವ್ ಮಹಾರಾಜರ ಗ್ರಂಥಗಳು ಸಕ್ಕರೆಯಂತೆ ಸವಿಯಾಗಿವೆ~ ಎಂದರು.<br /> <br /> ಕಾರ್ಯಕ್ರಮದಲ್ಲಿ ಗಣಪತರಾವ್ ಮಹಾರಾಜರ ಶಿಷ್ಯ ಶ್ರೀಕೃಷ್ಣ ಸಂಪಗಾಂವ್ಕರ ಅವರು ಗುರುಮಹಿಮೆಯನ್ನು ವಿವರಿಸಿದರು. ನಂತರ ಗಣಪತರಾವ್ ಮಹಾರಾಜರ ಪ್ರಾರ್ಥನಾ ಗೀತೆಗಳನ್ನು ಹಾಡಲಾಯಿತು.<br /> ಪುಸ್ತಕದ ಅನುವಾದಕ ಡಾ.ವಿ.ಆರ್.ದಾನಿ, ವಿದ್ವಾಂಸರಾದ ಸುಬ್ಬರಾಯ, ಅಧ್ಯಾತ್ಮ ಭಂಡಾರ ಶಾಂತಿ ಕುಟೀರದ ಅಧ್ಯಕ್ಷ ಕನ್ನೂರು ಎಸ್.ಎಸ್.ವೈದ್ಯ, ಕೆ.ಅನಂತರಾಮು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>`ಅಧ್ಯಾತ್ಮ ಗುರು ಗಣಪತರಾವ್ ಮಹಾರಾಜರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕಿನ ಗುರಿ ಸಾಧನೆಯ ಕಡೆಗೆ ಹೆಜ್ಜೆ ಹಾಕಬೇಕು~ ಎಂದು ಪೊನ್ನಂಪೇಟೆಯ ರಾಮಕೃಷ್ಣ ಶಾರದಾಶ್ರಮದ ಸ್ವಾಮಿ ಜಗದಾತ್ಮಾನಂದಜೀ ಹೇಳಿದರು.<br /> <br /> ವಿಜಾಪುರ ಜಿಲ್ಲೆಯ ಕನ್ನೂರಿನ ಸಮರ್ಥ ಸದ್ಗುರು ಗಣಪತರಾವ್ ಮಹಾರಾಜರ ಸತ್ಸಂಗ ಸಮಿತಿಯು ಬಸವನಗುಡಿಯ ಗೋಖಲೆ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ನಲ್ಲಿ ಭಾನುವಾರ ಆಯೋಜಿಸಿದ್ದ ಗಣಪತರಾವ್ ಮಹಾರಾಜರ `ಸುಲಭ ಆತ್ಮಜ್ಞಾನ~ ಪುಸ್ತಕದ ಇಂಗ್ಲಿಷ್ ಅನುವಾದ `ಫ್ಲೈಟ್ ಟು ಸೆಲ್ಫ್ ರಿಯಲೈಸೇಷನ್~ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.<br /> <br /> ಹಿರಿಯ ವಿದ್ವಾಂಸ ಸುಬ್ರಾಯ ಶರ್ಮ ಅವರು ಗಣಪತರಾವ್ ಮಹಾರಾಜರೊಡನೆ ತಮಗಿದ್ದ ಒಡನಾಟದ ಬಗ್ಗೆ ಮಾತನಾಡಿದರು. `ಗುರುಗಳ ಸಾಮಾಜಿಕ ಕಳಕಳಿ ಹಾಗೂ ಗುರುಮಹಿಮೆ ಅಪಾರವಾದುದು. ಗಣಪತರಾವ್ ಮಹಾರಾಜರ ಗ್ರಂಥಗಳು ಸಕ್ಕರೆಯಂತೆ ಸವಿಯಾಗಿವೆ~ ಎಂದರು.<br /> <br /> ಕಾರ್ಯಕ್ರಮದಲ್ಲಿ ಗಣಪತರಾವ್ ಮಹಾರಾಜರ ಶಿಷ್ಯ ಶ್ರೀಕೃಷ್ಣ ಸಂಪಗಾಂವ್ಕರ ಅವರು ಗುರುಮಹಿಮೆಯನ್ನು ವಿವರಿಸಿದರು. ನಂತರ ಗಣಪತರಾವ್ ಮಹಾರಾಜರ ಪ್ರಾರ್ಥನಾ ಗೀತೆಗಳನ್ನು ಹಾಡಲಾಯಿತು.<br /> ಪುಸ್ತಕದ ಅನುವಾದಕ ಡಾ.ವಿ.ಆರ್.ದಾನಿ, ವಿದ್ವಾಂಸರಾದ ಸುಬ್ಬರಾಯ, ಅಧ್ಯಾತ್ಮ ಭಂಡಾರ ಶಾಂತಿ ಕುಟೀರದ ಅಧ್ಯಕ್ಷ ಕನ್ನೂರು ಎಸ್.ಎಸ್.ವೈದ್ಯ, ಕೆ.ಅನಂತರಾಮು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>