<p><strong>ಬಳ್ಳಾರಿ:</strong> `ನಾನು ಅಕ್ರಮ ಗಣಿಗಾರಿಕೆ ನಡೆಸಿಲ್ಲ. ಬೇಕಾದರೆ ಮುಖ್ಯಮಂತ್ರಿಯವರು ನನ್ನ ವಿರುದ್ಧ ಪ್ರತ್ಯೇಕ ತನಿಖೆಗೆ ಆದೇಶ ನೀಡಬಹುದು' ಎಂದು ಶಾಸಕ ಅನಿಲ್ ಲಾಡ್ ಆಗ್ರಹಿಸಿದರು.<br /> <br /> ಸ್ಥಳೀಯ ಆಂದ್ರ ಕಲಾ ಸಂಘವು ನಗರದ ರಾಘವ ಕಲಾ ಮಂದಿರದಲ್ಲಿ ಶನಿವಾರ ರಾತ್ರಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.<br /> <br /> `ಅನಿಲ್ ಲಾಡ್ ಅಕ್ರಮ ಗಣಿಗಾರಿಕೆ ನಡೆಸಿದ್ದಾನೆ ಎಂದು ಅನೇಕರು ಆರೋಪಿಸುತ್ತಿದ್ದಾರೆ. ಅಕ್ರಮ ನಡೆಸಿದ್ದರೆ ನನ್ನ ವಿರುದ್ಧತನಿಖೆ ನಡೆಯುತ್ತಿತ್ತು. ಆದರೆ, ಇದುವರೆಗೆ ಯಾವುದೇ ತನಿಖಾ ಸಂಸ್ಥೆ ನನಗೆ ನೋಟಿಸ್ ನೀಡಿಲ್ಲ' ಎಂದು ಅವರು ಸ್ಪಷ್ಟಪಡಿಸಿದರು.<br /> <br /> ಗಣಿ ವ್ಯವಹಾರದಲ್ಲಿ ಚಿಕ್ಕಪುಟ್ಟ ಲೋಪಗಳು ಆಗಿರಬಹುದು. ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷವು ಟಿಕೆಟ್ ನೀಡುವ ವೇಳೆ ಈ ಕುರಿತು ಚಕಾರ ಎತ್ತಿಲ್ಲ. ಆದರೆ, ಶಾಸಕನಾಗಿ ಆಯ್ಕೆಯಾದ ನಂತರ ಅಕ್ರಮ ಗಣಿಗಾರಿಕೆ ಕುರಿತು ಪ್ರಸ್ತಾಪಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ' ಎಂದು ಅವರು ಪ್ರಶ್ನಿಸಿದರು.<br /> <br /> `ಸರ್ಕಾರಿ ಸ್ವಾಮ್ಯದ ಗಣಿ ಕಂಪನಿಯೂ `ಸಿ' ವರ್ಗದಲ್ಲಿ ಸೇರಿದ್ದು, ಅಲ್ಲೂ ಲೋಪಗಳಾಗಿವೆ. ಕಳೆದ ಐದಾರು ದಶಕಗಳಿಂದ ಗಣಿಗಾರಿಕೆಯಲ್ಲಿ ತೊಡಗಿರುವ ನಮ್ಮ ಕುಟುಂಬ ಒಂದು ವೇಳೆ ತಪ್ಪು ಮಾಡಿದ್ದರೆ ಅರಣ್ಯ ಇಲಾಖೆ, ಐಬಿಎಂನಿಂದ ಪರವಾನಗಿ ದೊರೆಯುತ್ತಿರಲಿಲ್ಲ ಎಂದು ಹೇಳಿದರು.<br /> <br /> ಗಣಿಗಾರಿಕೆ ಇರುವ ಜಿಲ್ಲೆಯಲ್ಲಿನ ಕೈಗಾರಿಕೆಗಳಿಗೆ ಅದಿರನ್ನು ನೀಡುವ ಮೂಲಕ ಮೌಲ್ಯವರ್ಧನೆಗೆ ಕ್ರಮ ಕೈಗೊಂಡು ಉದ್ಯೋಗ ಸೃಷ್ಟಿಸುವುದು ಇಂದಿನ ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.<br /> <br /> ಅನಿಲ್ ಲಾಡ್ ಅವರಿಗೆ ಕಾರಣಾಂತರಗಳಿಂದ ಸಚಿವ ಸ್ಥಾನ ಕೈ ತಪ್ಪಿದೆ. ಆದರೆ, ಮುಂದಿನ ದಿನಗಳಲ್ಲಿ ಅವರಿಗೆ ಸಚಿವ ಸ್ಥಾನ ಖಂಡಿತ ದೊರೆಯಲಿದೆ ಎಂದು ನಿವೃತ್ತ ನ್ಯಾಯಮೂರ್ತಿ ಎನ್.ವೈ. ಹನುಮಂತಪ್ಪ ಹೇಳಿದರು.<br /> ಸಂಡೂರು ಅಥವಾ ಹೊಸಪೇಟೆ ಸುತ್ತಮುತ್ತ ಸರ್ಕಾರಿ ಒಡೆತನದ ಉಕ್ಕಿನ ಕೈಗಾರಿಕೆ ಸ್ಥಾಪಿಸುವ ಮೂಲಕ ಮೌಲ್ಯವರ್ಧನೆಗೆ ಅವಕಾಶ ಕಲ್ಪಿಸಬೇಕಿದೆ ಂದ ಅವರು ಕೋರಿದರು.<br /> <br /> ಆಂಧ್ರ ಕಲಾ ಸಂಘದ ಅಧ್ಯಕ್ಷ ಮೂಲಂಗಿ ಚಂದ್ರಶೇಖರ್ ಚೌದರಿ, ರಮಣಪ್ಪ, ರಾಮಾಂಜನೇಯುಲು, ರಮೇಶಗೌಡ ಪಾಟೀಲ, ಕೆ.ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದು, ಅನಿಲ್ ಲಾಡ್ ಅವರನ್ನು ಸತ್ಕರಿಸಿ ಗೌರವಿಸಿದರು.<br /> ನಂತರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಜಿಲಾನ್ ಬಾಷಾ ಅವರ ಕಲಾತಂಡದಿಂದ ಭರತನಾಟ್ಯ ಪ್ರದರ್ಶನ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ:</strong> `ನಾನು ಅಕ್ರಮ ಗಣಿಗಾರಿಕೆ ನಡೆಸಿಲ್ಲ. ಬೇಕಾದರೆ ಮುಖ್ಯಮಂತ್ರಿಯವರು ನನ್ನ ವಿರುದ್ಧ ಪ್ರತ್ಯೇಕ ತನಿಖೆಗೆ ಆದೇಶ ನೀಡಬಹುದು' ಎಂದು ಶಾಸಕ ಅನಿಲ್ ಲಾಡ್ ಆಗ್ರಹಿಸಿದರು.<br /> <br /> ಸ್ಥಳೀಯ ಆಂದ್ರ ಕಲಾ ಸಂಘವು ನಗರದ ರಾಘವ ಕಲಾ ಮಂದಿರದಲ್ಲಿ ಶನಿವಾರ ರಾತ್ರಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.<br /> <br /> `ಅನಿಲ್ ಲಾಡ್ ಅಕ್ರಮ ಗಣಿಗಾರಿಕೆ ನಡೆಸಿದ್ದಾನೆ ಎಂದು ಅನೇಕರು ಆರೋಪಿಸುತ್ತಿದ್ದಾರೆ. ಅಕ್ರಮ ನಡೆಸಿದ್ದರೆ ನನ್ನ ವಿರುದ್ಧತನಿಖೆ ನಡೆಯುತ್ತಿತ್ತು. ಆದರೆ, ಇದುವರೆಗೆ ಯಾವುದೇ ತನಿಖಾ ಸಂಸ್ಥೆ ನನಗೆ ನೋಟಿಸ್ ನೀಡಿಲ್ಲ' ಎಂದು ಅವರು ಸ್ಪಷ್ಟಪಡಿಸಿದರು.<br /> <br /> ಗಣಿ ವ್ಯವಹಾರದಲ್ಲಿ ಚಿಕ್ಕಪುಟ್ಟ ಲೋಪಗಳು ಆಗಿರಬಹುದು. ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷವು ಟಿಕೆಟ್ ನೀಡುವ ವೇಳೆ ಈ ಕುರಿತು ಚಕಾರ ಎತ್ತಿಲ್ಲ. ಆದರೆ, ಶಾಸಕನಾಗಿ ಆಯ್ಕೆಯಾದ ನಂತರ ಅಕ್ರಮ ಗಣಿಗಾರಿಕೆ ಕುರಿತು ಪ್ರಸ್ತಾಪಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ' ಎಂದು ಅವರು ಪ್ರಶ್ನಿಸಿದರು.<br /> <br /> `ಸರ್ಕಾರಿ ಸ್ವಾಮ್ಯದ ಗಣಿ ಕಂಪನಿಯೂ `ಸಿ' ವರ್ಗದಲ್ಲಿ ಸೇರಿದ್ದು, ಅಲ್ಲೂ ಲೋಪಗಳಾಗಿವೆ. ಕಳೆದ ಐದಾರು ದಶಕಗಳಿಂದ ಗಣಿಗಾರಿಕೆಯಲ್ಲಿ ತೊಡಗಿರುವ ನಮ್ಮ ಕುಟುಂಬ ಒಂದು ವೇಳೆ ತಪ್ಪು ಮಾಡಿದ್ದರೆ ಅರಣ್ಯ ಇಲಾಖೆ, ಐಬಿಎಂನಿಂದ ಪರವಾನಗಿ ದೊರೆಯುತ್ತಿರಲಿಲ್ಲ ಎಂದು ಹೇಳಿದರು.<br /> <br /> ಗಣಿಗಾರಿಕೆ ಇರುವ ಜಿಲ್ಲೆಯಲ್ಲಿನ ಕೈಗಾರಿಕೆಗಳಿಗೆ ಅದಿರನ್ನು ನೀಡುವ ಮೂಲಕ ಮೌಲ್ಯವರ್ಧನೆಗೆ ಕ್ರಮ ಕೈಗೊಂಡು ಉದ್ಯೋಗ ಸೃಷ್ಟಿಸುವುದು ಇಂದಿನ ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.<br /> <br /> ಅನಿಲ್ ಲಾಡ್ ಅವರಿಗೆ ಕಾರಣಾಂತರಗಳಿಂದ ಸಚಿವ ಸ್ಥಾನ ಕೈ ತಪ್ಪಿದೆ. ಆದರೆ, ಮುಂದಿನ ದಿನಗಳಲ್ಲಿ ಅವರಿಗೆ ಸಚಿವ ಸ್ಥಾನ ಖಂಡಿತ ದೊರೆಯಲಿದೆ ಎಂದು ನಿವೃತ್ತ ನ್ಯಾಯಮೂರ್ತಿ ಎನ್.ವೈ. ಹನುಮಂತಪ್ಪ ಹೇಳಿದರು.<br /> ಸಂಡೂರು ಅಥವಾ ಹೊಸಪೇಟೆ ಸುತ್ತಮುತ್ತ ಸರ್ಕಾರಿ ಒಡೆತನದ ಉಕ್ಕಿನ ಕೈಗಾರಿಕೆ ಸ್ಥಾಪಿಸುವ ಮೂಲಕ ಮೌಲ್ಯವರ್ಧನೆಗೆ ಅವಕಾಶ ಕಲ್ಪಿಸಬೇಕಿದೆ ಂದ ಅವರು ಕೋರಿದರು.<br /> <br /> ಆಂಧ್ರ ಕಲಾ ಸಂಘದ ಅಧ್ಯಕ್ಷ ಮೂಲಂಗಿ ಚಂದ್ರಶೇಖರ್ ಚೌದರಿ, ರಮಣಪ್ಪ, ರಾಮಾಂಜನೇಯುಲು, ರಮೇಶಗೌಡ ಪಾಟೀಲ, ಕೆ.ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದು, ಅನಿಲ್ ಲಾಡ್ ಅವರನ್ನು ಸತ್ಕರಿಸಿ ಗೌರವಿಸಿದರು.<br /> ನಂತರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಜಿಲಾನ್ ಬಾಷಾ ಅವರ ಕಲಾತಂಡದಿಂದ ಭರತನಾಟ್ಯ ಪ್ರದರ್ಶನ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>