<p>ಚಲನಚಿತ್ರ ವಾಣಿಜ್ಯ ಮಂಡಳಿಯ ನಿಯಮಗಳ ಪ್ರಕಾರ ಚಿತ್ರವೊಂದಕ್ಕೆ ನೀಡಿದ ಶೀರ್ಷಿಕೆಯನ್ನು ಪೂರ್ಣವಾಗಿ ಬಳಸಿಕೊಳ್ಳಬೇಕು. ಮೊದಲ ಅಕ್ಷರ ಚಿಕ್ಕದು ಮಾಡಿ ಎರಡನೇ ಅಕ್ಷರ ದೊಡ್ಡದು ಮಾಡುವಂತಿಲ್ಲ.<br /> <br /> ಆದರೆ ಆ ತಪ್ಪನ್ನು `ಕರ್ನಾಟಕ ಅಯೋಧ್ಯೆಪುರಂ~ ಚಿತ್ರದ ನಿರ್ದೇಶಕ ವಿ.ಲವ ಅದಾಗಲೇ ಮಾಡಿದ್ದರು. ಕರ್ನಾಟಕ ಎಂಬ ಹೆಸರು ಚಿಕ್ಕದಾಗಿತ್ತು. ಆ ಬಗ್ಗೆಯೇ ಪತ್ರಕರ್ತರ ತಕರಾರು ಇದ್ದದ್ದು. ಚಿತ್ರ ಬಿಡುಗಡೆಯ ವೇಳೆಗೆ ಮಂಡಳಿಯ ನಿಯಮದ ಪ್ರಕಾರವೇ ಶೀರ್ಷಿಕೆ ಬರೆಸುವುದಾಗಿ ಹೇಳುವುದರೊಂದಿಗೆ ನಿರ್ದೇಶಕರು ಪ್ರಶ್ನೆಗಳಿಂದ ನುಣುಚಿಕೊಂಡರು. <br /> <br /> `ಅಯೋಧ್ಯೆಪುರಂ~ ನಿರ್ದೇಶಕರ ಕಾಲ್ಪನಿಕ ಊರಂತೆ. ಕತೆ, ಚಿತ್ರಕತೆ ಅವರದೇ. ತಮ್ಮ ಕಾಲ್ಪನಿಕ ಊರಿನಲ್ಲಿ ಅವರು ಹೇಳಲು ಹೊರಟಿರುವುದು ಸತ್ಯಕತೆಯೊಂದನ್ನು. ಎರಡು ಸಮುದಾಯಗಳ ಸುತ್ತ ಚಿತ್ರ ಇರಲಿದೆಯಂತೆ.<br /> <br /> ಅಯೋಧ್ಯೆಪುರಂಗೂ ಅಯೋಧ್ಯೆಗೂ ಯಾವುದೇ ಸಂಬಂಧ ಇಲ್ಲವಂತೆ. ಮೊದಲ ಹಂತದ ಚಿತ್ರೀಕರಣ ಬೆಂಗಳೂರು, ತುಮಕೂರು, ಕನಕಪುರದಲ್ಲಿ ನಡೆದಿದೆ. ಉಳಿದ ಭಾಗವನ್ನು ಕುಣಿಗಲ್, ಹಾಸನ ಹಾಗೂ ಅಯೋಧ್ಯೆಯಲ್ಲಿ ನಡೆಯಲಿದೆಯಂತೆ. ಬೇರೆ ಬೇರೆ ಸಮುದಾಯಕ್ಕೆ ಸೇರಿದ ಇಬ್ಬರು ವಿದ್ಯಾರ್ಥಿಗಳಲ್ಲಿ ಅರಳುವ ಪ್ರೇಮ ಚಿತ್ರದ ಕಥಾವಸ್ತುವಂತೆ.<br /> <br /> ಈ ಮಧ್ಯೆ ಮಾತು ಅಡಿಶೀರ್ಷಿಕೆಯ ಕಡೆ ಹೊರಳಿತು. `ಫೈಟಿಂಗ್ ಫಾರ್...~ ಎಂಬುದು ಚಿತ್ರದ ಅಡಿ ಶೀರ್ಷಿಕೆ. ಯಾವುದಕ್ಕಾಗಿ ಹೊಡೆದಾಟ? ನಿರ್ಮಾಪಕರಿಗಾಗಿ ಹೊಡೆದಾಟವೇ? ಎಂದೂ ಕೇಳಲಾಯಿತು. `ಚಿತ್ರ ನೋಡಿದ ಮೇಲೆ ಎಲ್ಲ ತಿಳಿಯುತ್ತದೆ~ ಎಂದರು ಲವ. <br /> <br /> ಚಿತ್ರದ ಹೆಸರು `...ಅಯೋಧ್ಯೆಪುರಂ~, ನಿರ್ದೇಶಕರ ಹೆಸರು ಲವ. ಇವೆರಡು ಹೆಸರುಗಳಿಗೂ ಸಂಬಂಧವಿದೆಯೇ ಎಂದಾಗ ಲವ ತಮ್ಮ ಕುಟುಂಬದ ಪರಿಚಯ ಮಾಡಿಕೊಟ್ಟರು. ಅವರ ತಂದೆಯ ಹೆಸರು ರಾಮನ ಹೆಸರನ್ನು ಹೋಲುತ್ತದಂತೆ.<br /> <br /> ಅಲ್ಲಿಗೆ ಚಿತ್ರದ ಶೀರ್ಷಿಕೆಯ ಬಗ್ಗೆ ಅವರ ಒಲವು ನಿಲುವು ಸ್ಪಷ್ಟವಾಯಿತು.ಅಷ್ಟರಲ್ಲಿ ನಾಯಕ ರಾಕೇಶ್ ಅಡಿಗ ಮಾತಿಗಿಳಿದರು. `ಚಿತ್ರದಲ್ಲಿ ನಾಯಕನ ಶೇಡ್ ಬದಲಾಗುತ್ತಾ ಹೋಗುತ್ತದೆ. ಮಧ್ಯಮವರ್ಗದ ಹುಡುಗನೊಬ್ಬನ ಚಿತ್ರಣ ಬದಲಾಗುತ್ತಲೇ ಇರುವುದು ಆಸಕ್ತಿದಾಯಕವಾಗಿದೆ ಎಂದರು. `ಚಿತ್ರ ಸಮಾಜದ ಮೇಲೆ ಮಾರಕ ಪರಿಣಾಮ ಬೀರದು~ ಎಂಬ ಭರವಸೆಯನ್ನೂ ಅವರು ನೀಡಿದರು. <br /> <br /> `ನನ್ನದು ಮುಸ್ಲಿಂ ಹುಡುಗಿಯ ಪಾತ್ರ~ ಎಂದರು ನಟಿ ನಯನ. ಪಾತ್ರಕ್ಕೆ ತಕ್ಕ ಭಾಷಾ ಬದಲಾವಣೆ, ಆಂಗಿಕ ಬದಲಾವಣೆಯನ್ನು ಅವರು ಮಾಡಿಕೊಂಡಿದ್ದಾರಂತೆ. `ಹಾಡುಗಳು ಚೆನ್ನಾಗಿ ಮೂಡಿ ಬಂದಿವೆ. ವಾಣಿ ಹರಿಕೃಷ್ಣ ಅವರ ಹಾಡು ತುಂಬಾ ಚೆನ್ನಾಗಿದೆ~ ಎಂದು ಮೆಚ್ಚಿಕೊಂಡರು ಅವರು. ನಟನೆಯ ವೇಳೆ ಮಾರ್ಗದರ್ಶನ ಮಾಡಿದ ರಾಕೇಶ್ ಅವರನ್ನೂ ಸ್ಮರಿಸಿದರು. <br /> <br /> ಹಾಡುಗಳಲ್ಲಿ ಭಾಷಾ ಪ್ರಯೋಗವೇನೂ ನಡೆದಿಲ್ಲ ಎಂಬ ಉತ್ತರ ಚಿತ್ರದ ಸಂಗೀತ ನಿರ್ದೇಶಕ ಸಾಗರ ನಾಗಭೂಷಣ್ ಅವರಿಂದ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿವೆಯಂತೆ. ಅದರಲ್ಲಿ ಎರಡು ಮೆಲೋಡಿಯಸ್ ಆಗಿವೆಯಂತೆ. ಟಪೋರಿ, ಟಪ್ಪಾಂಗುಚ್ಚಿ ಹಾಡುಗಳೂ ಸೇರಿಕೊಂಡಿವೆಯಂತೆ.<br /> <br /> ತಾರಾಗಣದಲ್ಲಿ ಅಚ್ಯುತರಾವ್, ಸಾಧುಕೋಕಿಲ, ರಾಜು ತಾಳಿಕೋಟೆ, ಹರೀಶ್ ರೈ ಮುಂತಾದವರು ಇದ್ದಾರೆ. ಫೆಬ್ರುವರಿ ವೇಳೆಗೆ ಚಿತ್ರೀಕರಣ ಪೂರ್ಣಗೊಳ್ಳಲಿದ್ದು ಏಪ್ರಿಲ್ಗೆ ಬಿಡುಗಡೆಗೆ ಸಿದ್ಧವಾಗಲಿದೆಯಂತೆ. ನಿರ್ಮಾಪಕ ಕೆ.ವಿ.ಮಧುಸೂದನ್, ಹಾಸ್ಯನಟನಾಗಿ ಕಾಣಿಸಿಕೊಂಡಿರುವ ಅಕ್ಷಯ್ ಚುಟುಕಾಗಿ ಮಾತು ಮುಗಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಲನಚಿತ್ರ ವಾಣಿಜ್ಯ ಮಂಡಳಿಯ ನಿಯಮಗಳ ಪ್ರಕಾರ ಚಿತ್ರವೊಂದಕ್ಕೆ ನೀಡಿದ ಶೀರ್ಷಿಕೆಯನ್ನು ಪೂರ್ಣವಾಗಿ ಬಳಸಿಕೊಳ್ಳಬೇಕು. ಮೊದಲ ಅಕ್ಷರ ಚಿಕ್ಕದು ಮಾಡಿ ಎರಡನೇ ಅಕ್ಷರ ದೊಡ್ಡದು ಮಾಡುವಂತಿಲ್ಲ.<br /> <br /> ಆದರೆ ಆ ತಪ್ಪನ್ನು `ಕರ್ನಾಟಕ ಅಯೋಧ್ಯೆಪುರಂ~ ಚಿತ್ರದ ನಿರ್ದೇಶಕ ವಿ.ಲವ ಅದಾಗಲೇ ಮಾಡಿದ್ದರು. ಕರ್ನಾಟಕ ಎಂಬ ಹೆಸರು ಚಿಕ್ಕದಾಗಿತ್ತು. ಆ ಬಗ್ಗೆಯೇ ಪತ್ರಕರ್ತರ ತಕರಾರು ಇದ್ದದ್ದು. ಚಿತ್ರ ಬಿಡುಗಡೆಯ ವೇಳೆಗೆ ಮಂಡಳಿಯ ನಿಯಮದ ಪ್ರಕಾರವೇ ಶೀರ್ಷಿಕೆ ಬರೆಸುವುದಾಗಿ ಹೇಳುವುದರೊಂದಿಗೆ ನಿರ್ದೇಶಕರು ಪ್ರಶ್ನೆಗಳಿಂದ ನುಣುಚಿಕೊಂಡರು. <br /> <br /> `ಅಯೋಧ್ಯೆಪುರಂ~ ನಿರ್ದೇಶಕರ ಕಾಲ್ಪನಿಕ ಊರಂತೆ. ಕತೆ, ಚಿತ್ರಕತೆ ಅವರದೇ. ತಮ್ಮ ಕಾಲ್ಪನಿಕ ಊರಿನಲ್ಲಿ ಅವರು ಹೇಳಲು ಹೊರಟಿರುವುದು ಸತ್ಯಕತೆಯೊಂದನ್ನು. ಎರಡು ಸಮುದಾಯಗಳ ಸುತ್ತ ಚಿತ್ರ ಇರಲಿದೆಯಂತೆ.<br /> <br /> ಅಯೋಧ್ಯೆಪುರಂಗೂ ಅಯೋಧ್ಯೆಗೂ ಯಾವುದೇ ಸಂಬಂಧ ಇಲ್ಲವಂತೆ. ಮೊದಲ ಹಂತದ ಚಿತ್ರೀಕರಣ ಬೆಂಗಳೂರು, ತುಮಕೂರು, ಕನಕಪುರದಲ್ಲಿ ನಡೆದಿದೆ. ಉಳಿದ ಭಾಗವನ್ನು ಕುಣಿಗಲ್, ಹಾಸನ ಹಾಗೂ ಅಯೋಧ್ಯೆಯಲ್ಲಿ ನಡೆಯಲಿದೆಯಂತೆ. ಬೇರೆ ಬೇರೆ ಸಮುದಾಯಕ್ಕೆ ಸೇರಿದ ಇಬ್ಬರು ವಿದ್ಯಾರ್ಥಿಗಳಲ್ಲಿ ಅರಳುವ ಪ್ರೇಮ ಚಿತ್ರದ ಕಥಾವಸ್ತುವಂತೆ.<br /> <br /> ಈ ಮಧ್ಯೆ ಮಾತು ಅಡಿಶೀರ್ಷಿಕೆಯ ಕಡೆ ಹೊರಳಿತು. `ಫೈಟಿಂಗ್ ಫಾರ್...~ ಎಂಬುದು ಚಿತ್ರದ ಅಡಿ ಶೀರ್ಷಿಕೆ. ಯಾವುದಕ್ಕಾಗಿ ಹೊಡೆದಾಟ? ನಿರ್ಮಾಪಕರಿಗಾಗಿ ಹೊಡೆದಾಟವೇ? ಎಂದೂ ಕೇಳಲಾಯಿತು. `ಚಿತ್ರ ನೋಡಿದ ಮೇಲೆ ಎಲ್ಲ ತಿಳಿಯುತ್ತದೆ~ ಎಂದರು ಲವ. <br /> <br /> ಚಿತ್ರದ ಹೆಸರು `...ಅಯೋಧ್ಯೆಪುರಂ~, ನಿರ್ದೇಶಕರ ಹೆಸರು ಲವ. ಇವೆರಡು ಹೆಸರುಗಳಿಗೂ ಸಂಬಂಧವಿದೆಯೇ ಎಂದಾಗ ಲವ ತಮ್ಮ ಕುಟುಂಬದ ಪರಿಚಯ ಮಾಡಿಕೊಟ್ಟರು. ಅವರ ತಂದೆಯ ಹೆಸರು ರಾಮನ ಹೆಸರನ್ನು ಹೋಲುತ್ತದಂತೆ.<br /> <br /> ಅಲ್ಲಿಗೆ ಚಿತ್ರದ ಶೀರ್ಷಿಕೆಯ ಬಗ್ಗೆ ಅವರ ಒಲವು ನಿಲುವು ಸ್ಪಷ್ಟವಾಯಿತು.ಅಷ್ಟರಲ್ಲಿ ನಾಯಕ ರಾಕೇಶ್ ಅಡಿಗ ಮಾತಿಗಿಳಿದರು. `ಚಿತ್ರದಲ್ಲಿ ನಾಯಕನ ಶೇಡ್ ಬದಲಾಗುತ್ತಾ ಹೋಗುತ್ತದೆ. ಮಧ್ಯಮವರ್ಗದ ಹುಡುಗನೊಬ್ಬನ ಚಿತ್ರಣ ಬದಲಾಗುತ್ತಲೇ ಇರುವುದು ಆಸಕ್ತಿದಾಯಕವಾಗಿದೆ ಎಂದರು. `ಚಿತ್ರ ಸಮಾಜದ ಮೇಲೆ ಮಾರಕ ಪರಿಣಾಮ ಬೀರದು~ ಎಂಬ ಭರವಸೆಯನ್ನೂ ಅವರು ನೀಡಿದರು. <br /> <br /> `ನನ್ನದು ಮುಸ್ಲಿಂ ಹುಡುಗಿಯ ಪಾತ್ರ~ ಎಂದರು ನಟಿ ನಯನ. ಪಾತ್ರಕ್ಕೆ ತಕ್ಕ ಭಾಷಾ ಬದಲಾವಣೆ, ಆಂಗಿಕ ಬದಲಾವಣೆಯನ್ನು ಅವರು ಮಾಡಿಕೊಂಡಿದ್ದಾರಂತೆ. `ಹಾಡುಗಳು ಚೆನ್ನಾಗಿ ಮೂಡಿ ಬಂದಿವೆ. ವಾಣಿ ಹರಿಕೃಷ್ಣ ಅವರ ಹಾಡು ತುಂಬಾ ಚೆನ್ನಾಗಿದೆ~ ಎಂದು ಮೆಚ್ಚಿಕೊಂಡರು ಅವರು. ನಟನೆಯ ವೇಳೆ ಮಾರ್ಗದರ್ಶನ ಮಾಡಿದ ರಾಕೇಶ್ ಅವರನ್ನೂ ಸ್ಮರಿಸಿದರು. <br /> <br /> ಹಾಡುಗಳಲ್ಲಿ ಭಾಷಾ ಪ್ರಯೋಗವೇನೂ ನಡೆದಿಲ್ಲ ಎಂಬ ಉತ್ತರ ಚಿತ್ರದ ಸಂಗೀತ ನಿರ್ದೇಶಕ ಸಾಗರ ನಾಗಭೂಷಣ್ ಅವರಿಂದ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿವೆಯಂತೆ. ಅದರಲ್ಲಿ ಎರಡು ಮೆಲೋಡಿಯಸ್ ಆಗಿವೆಯಂತೆ. ಟಪೋರಿ, ಟಪ್ಪಾಂಗುಚ್ಚಿ ಹಾಡುಗಳೂ ಸೇರಿಕೊಂಡಿವೆಯಂತೆ.<br /> <br /> ತಾರಾಗಣದಲ್ಲಿ ಅಚ್ಯುತರಾವ್, ಸಾಧುಕೋಕಿಲ, ರಾಜು ತಾಳಿಕೋಟೆ, ಹರೀಶ್ ರೈ ಮುಂತಾದವರು ಇದ್ದಾರೆ. ಫೆಬ್ರುವರಿ ವೇಳೆಗೆ ಚಿತ್ರೀಕರಣ ಪೂರ್ಣಗೊಳ್ಳಲಿದ್ದು ಏಪ್ರಿಲ್ಗೆ ಬಿಡುಗಡೆಗೆ ಸಿದ್ಧವಾಗಲಿದೆಯಂತೆ. ನಿರ್ಮಾಪಕ ಕೆ.ವಿ.ಮಧುಸೂದನ್, ಹಾಸ್ಯನಟನಾಗಿ ಕಾಣಿಸಿಕೊಂಡಿರುವ ಅಕ್ಷಯ್ ಚುಟುಕಾಗಿ ಮಾತು ಮುಗಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>