<p><strong>ಹುಬ್ಬಳ್ಳಿ:</strong> ಒಂದೂವರೆ ಗಂಟೆಗೂ ಮಿಕ್ಕಿ ಕೈಕೊಟ್ಟ ಕರೆಂಟ್ನಿಂದಾಗಿ ಇರುವೆ ಕಚ್ಚಿಸಿಕೊಂಡವರು ಕೆಲವರು. ಕತ್ತಲಲ್ಲಿ ಎಡವಿಬಿದ್ದು ಹಲ್ಲು -ಕೈ ಮುರಿದುಕೊಂಡವರು ಹಲವರು. ಅಧಿಕಾರಿಗಳನ್ನು ಬೈಯುತ್ತ ಕೆಲವರು ಮನೆಗಳತ್ತ ತೆರಳಿದರೆ, ಉಳಿದವರು ಬಾರದ ಕರೆಂಟ್ ಮತ್ತು ಇರದ ಪರ್ಯಾಯ ವ್ಯವಸ್ಥೆಯಿಂದ ರೋಸಿಹೋಗಿ ಪ್ರತಿಭಟನೆ ನಡೆಸಿದರು.<br /> <br /> ನಗರದ ಇಂದಿರಾ ಗಾಜಿನ ಮನೆ ಹಾಗೂ ಮಹಾತ್ಮಾ ಗಾಂಧಿ ಸ್ಮಾರಕ ಉದ್ಯಾನದಲ್ಲಿ ಭಾನುವಾರ ರಾತ್ರಿ 7.30ರ ಹೊತ್ತಿಗೆ ಕಂಡ ದೃಶ್ಯ ಇದು.<br /> <br /> ಅಲ್ಲಿದ್ದ ಪುಟ್ಟ ರೈಲನ್ನು ಕೆಲ ಹೊತ್ತು ತಡೆದು ಸಂಬಂಧಪಟ್ಟವರು ಸ್ಥಳಕ್ಕೆ ಬರಬೇಕು. ಪ್ರವೇಶ ಶುಲ್ಕವನ್ನು ವಾಪಸು ಕೊಡಬೇಕು. ಇಲ್ಲದಿದ್ದರೆ ಸೋಮವಾರ ದಿನ ಪ್ರವೇಶಕ್ಕೆ ಅವಕಾಶ ಕೊಡಬೇಕು ಎಂದು ಪಟ್ಟು ಹಿಡಿದರು. <br /> <br /> ಸಂಜೆ 6.45ರ ಹೊತ್ತಿಗೆ ಉದ್ಯಾನ ದೊಳಗೆ ಕರೆಂಟ್ ಕೈಕೊಟ್ಟಿತು. ವಾಪಸು ಬಂದಿದ್ದು ರಾತ್ರಿ ಎಂಟು ಗಂಟೆಗೆ. ಈ ಅವಧಿಯಲ್ಲಿ ಮಕ್ಕಳೊಂದಿಗೆ ಒಳಹೋದವರು ಎತ್ತ ಹೋಗಬೇಕು, ಎಲ್ಲಿ ಕೂಡಬೇಕು ಎನ್ನುವ ಅರಿವಿಲ್ಲದೆ ಕತ್ತಲಲ್ಲಿ ತಡಕಾಡಿದರು.<br /> <br /> `ಒಂದೂವರೆ ತಾಸಿಗೂ ಮಿಕ್ಕಿ ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಪಡೆದು ಒಳಗೆ ಹೋದರೆ ಕರೆಂಟ್ ಹೋಯಿತು. ಕಾರಂಜಿ ಕುಣಿಯಲಿಲ್ಲ. ಈ ಅವಧಿಯಲ್ಲಿ ಏನು ಮಾಡಬೇಕು ಎನ್ನುವುದು ಗೊತ್ತಾಗಲಿಲ್ಲ~ ಎಂದು ಬೇಸರ ವ್ಯಕ್ತಪಡಿಸಿದರು ರಿಯಾಜ್ ಲಕ್ಷೇಶ್ವರ. <br /> <br /> `ಉದ್ಯಾನದೊಳಗೆ ಕುಡಿಯಲು ನೀರಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿರುವುದಿಲ್ಲ. ಯಾರನ್ನು ಕೇಳಬೇಕು ಎನ್ನುವುದೇ ಸಮಸ್ಯೆ~ ಎಂದು ಪೇಚಾಡಿದರು ಹಳೇಹುಬ್ಬಳ್ಳಿಯ ಗುರುನಾಥನಗರದ ಆರ್.ಎಂ. ಕಾಗದಗಾರ. `ಟಿಕೆಟ್ ಪಡೆಯುವ ಪಾಳಿ ಕೂಡ ಬರೊಬ್ಬರಿ ಇಲ್ಲ. ಜೋರಿದ್ದವರು ಮುಂದೆ ಹೋಗಿ ಟಿಕೆಟ್ ಪಡೆದು ಒಳಗೆ ಹೋಗುತ್ತಾರೆ. ವಯಸ್ಸಾದವರು ಏನು ಮಾಡಬೇಕು? ಎಲ್ಲರೂ ಸರಿಯಾಗಿ ಪಾಳಿಯಲ್ಲಿ ನಿಂತು ಟಿಕೆಟ್ ಪಡೆಯಬೇಕು~ ಎಂದು ಸಲಹೆ ನೀಡಿದರು ರಾಜೇಶ ಲದ್ವಾ.<br /> <br /> `ಕಸದ ಡಬ್ಬಿಗಳಿಲ್ಲ. ಕೆಲವರು ತಿಂದಲ್ಲೇ ಕಸವನ್ನು ಬಿಟ್ಟುಹೋಗು ತ್ತಾರೆ. ಕ್ಯಾಂಟೀನಿನಲ್ಲಿ ಸರಿಯಾಗಿ ವಸ್ತುಗಳು ಸಿಗುವುದಿಲ್ಲ~ ಎಂದರು ನಿತಿಕಾ ಲುಡಾಯ. <br /> <br /> ಕೊನೆಗೆ ಕರೆಂಟ್ ಬಂದಿದ್ದು ರಾತ್ರಿ ಎಂಟು ಗಂಟೆಗೆ. ಜನರೆಲ್ಲ ಹೋ ಎಂದು ಕೂಗಿ ಸ್ವಾಗತಿಸಿ, ಸಂಗೀತ ಕಾರಂಜಿ ಹತ್ತಿರ ಓಡಿಹೋದರು. `ಉದ್ಯಾನಕ್ಕೆ ಇದುವರೆಗೆ ಜನರೇಟರ್ ವ್ಯವಸ್ಥೆ ಇರಲಿಲ್ಲ. ಶನಿವಾರ ಜನರೇಟರ್ ಬಂದಿದೆ. ಅದು ಸೋಮವಾರದಿಂದ ಕಾರ್ಯ ನಿರ್ವಹಿಲಿಸದೆ~ ಎಂದು ಉದ್ಯಾನ ನಿರ್ವಾಹಕ ಮಹಾಂತೇಶ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ಒಂದೂವರೆ ಗಂಟೆಗೂ ಮಿಕ್ಕಿ ಕೈಕೊಟ್ಟ ಕರೆಂಟ್ನಿಂದಾಗಿ ಇರುವೆ ಕಚ್ಚಿಸಿಕೊಂಡವರು ಕೆಲವರು. ಕತ್ತಲಲ್ಲಿ ಎಡವಿಬಿದ್ದು ಹಲ್ಲು -ಕೈ ಮುರಿದುಕೊಂಡವರು ಹಲವರು. ಅಧಿಕಾರಿಗಳನ್ನು ಬೈಯುತ್ತ ಕೆಲವರು ಮನೆಗಳತ್ತ ತೆರಳಿದರೆ, ಉಳಿದವರು ಬಾರದ ಕರೆಂಟ್ ಮತ್ತು ಇರದ ಪರ್ಯಾಯ ವ್ಯವಸ್ಥೆಯಿಂದ ರೋಸಿಹೋಗಿ ಪ್ರತಿಭಟನೆ ನಡೆಸಿದರು.<br /> <br /> ನಗರದ ಇಂದಿರಾ ಗಾಜಿನ ಮನೆ ಹಾಗೂ ಮಹಾತ್ಮಾ ಗಾಂಧಿ ಸ್ಮಾರಕ ಉದ್ಯಾನದಲ್ಲಿ ಭಾನುವಾರ ರಾತ್ರಿ 7.30ರ ಹೊತ್ತಿಗೆ ಕಂಡ ದೃಶ್ಯ ಇದು.<br /> <br /> ಅಲ್ಲಿದ್ದ ಪುಟ್ಟ ರೈಲನ್ನು ಕೆಲ ಹೊತ್ತು ತಡೆದು ಸಂಬಂಧಪಟ್ಟವರು ಸ್ಥಳಕ್ಕೆ ಬರಬೇಕು. ಪ್ರವೇಶ ಶುಲ್ಕವನ್ನು ವಾಪಸು ಕೊಡಬೇಕು. ಇಲ್ಲದಿದ್ದರೆ ಸೋಮವಾರ ದಿನ ಪ್ರವೇಶಕ್ಕೆ ಅವಕಾಶ ಕೊಡಬೇಕು ಎಂದು ಪಟ್ಟು ಹಿಡಿದರು. <br /> <br /> ಸಂಜೆ 6.45ರ ಹೊತ್ತಿಗೆ ಉದ್ಯಾನ ದೊಳಗೆ ಕರೆಂಟ್ ಕೈಕೊಟ್ಟಿತು. ವಾಪಸು ಬಂದಿದ್ದು ರಾತ್ರಿ ಎಂಟು ಗಂಟೆಗೆ. ಈ ಅವಧಿಯಲ್ಲಿ ಮಕ್ಕಳೊಂದಿಗೆ ಒಳಹೋದವರು ಎತ್ತ ಹೋಗಬೇಕು, ಎಲ್ಲಿ ಕೂಡಬೇಕು ಎನ್ನುವ ಅರಿವಿಲ್ಲದೆ ಕತ್ತಲಲ್ಲಿ ತಡಕಾಡಿದರು.<br /> <br /> `ಒಂದೂವರೆ ತಾಸಿಗೂ ಮಿಕ್ಕಿ ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಪಡೆದು ಒಳಗೆ ಹೋದರೆ ಕರೆಂಟ್ ಹೋಯಿತು. ಕಾರಂಜಿ ಕುಣಿಯಲಿಲ್ಲ. ಈ ಅವಧಿಯಲ್ಲಿ ಏನು ಮಾಡಬೇಕು ಎನ್ನುವುದು ಗೊತ್ತಾಗಲಿಲ್ಲ~ ಎಂದು ಬೇಸರ ವ್ಯಕ್ತಪಡಿಸಿದರು ರಿಯಾಜ್ ಲಕ್ಷೇಶ್ವರ. <br /> <br /> `ಉದ್ಯಾನದೊಳಗೆ ಕುಡಿಯಲು ನೀರಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿರುವುದಿಲ್ಲ. ಯಾರನ್ನು ಕೇಳಬೇಕು ಎನ್ನುವುದೇ ಸಮಸ್ಯೆ~ ಎಂದು ಪೇಚಾಡಿದರು ಹಳೇಹುಬ್ಬಳ್ಳಿಯ ಗುರುನಾಥನಗರದ ಆರ್.ಎಂ. ಕಾಗದಗಾರ. `ಟಿಕೆಟ್ ಪಡೆಯುವ ಪಾಳಿ ಕೂಡ ಬರೊಬ್ಬರಿ ಇಲ್ಲ. ಜೋರಿದ್ದವರು ಮುಂದೆ ಹೋಗಿ ಟಿಕೆಟ್ ಪಡೆದು ಒಳಗೆ ಹೋಗುತ್ತಾರೆ. ವಯಸ್ಸಾದವರು ಏನು ಮಾಡಬೇಕು? ಎಲ್ಲರೂ ಸರಿಯಾಗಿ ಪಾಳಿಯಲ್ಲಿ ನಿಂತು ಟಿಕೆಟ್ ಪಡೆಯಬೇಕು~ ಎಂದು ಸಲಹೆ ನೀಡಿದರು ರಾಜೇಶ ಲದ್ವಾ.<br /> <br /> `ಕಸದ ಡಬ್ಬಿಗಳಿಲ್ಲ. ಕೆಲವರು ತಿಂದಲ್ಲೇ ಕಸವನ್ನು ಬಿಟ್ಟುಹೋಗು ತ್ತಾರೆ. ಕ್ಯಾಂಟೀನಿನಲ್ಲಿ ಸರಿಯಾಗಿ ವಸ್ತುಗಳು ಸಿಗುವುದಿಲ್ಲ~ ಎಂದರು ನಿತಿಕಾ ಲುಡಾಯ. <br /> <br /> ಕೊನೆಗೆ ಕರೆಂಟ್ ಬಂದಿದ್ದು ರಾತ್ರಿ ಎಂಟು ಗಂಟೆಗೆ. ಜನರೆಲ್ಲ ಹೋ ಎಂದು ಕೂಗಿ ಸ್ವಾಗತಿಸಿ, ಸಂಗೀತ ಕಾರಂಜಿ ಹತ್ತಿರ ಓಡಿಹೋದರು. `ಉದ್ಯಾನಕ್ಕೆ ಇದುವರೆಗೆ ಜನರೇಟರ್ ವ್ಯವಸ್ಥೆ ಇರಲಿಲ್ಲ. ಶನಿವಾರ ಜನರೇಟರ್ ಬಂದಿದೆ. ಅದು ಸೋಮವಾರದಿಂದ ಕಾರ್ಯ ನಿರ್ವಹಿಲಿಸದೆ~ ಎಂದು ಉದ್ಯಾನ ನಿರ್ವಾಹಕ ಮಹಾಂತೇಶ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>