<p><strong>ಇಸ್ಲಾಮಾಬಾದ್ (ಪಿಟಿಐ):</strong> ಕಾಶ್ಮೀರದ ಗಲಭೆಯಲ್ಲಿ ಗಾಯಗೊಂಡಿರುವವರಿಗೆ ವೈದ್ಯಕೀಯ ನೆರವು ನೀಡುತ್ತೇವೆ ಎಂದು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ. ಜತೆಗೆ ಗಲಭೆ ಸಂತ್ರಸ್ತರಿಗೆ ಚಿಕಿತ್ಸೆ ನೀಡುವಂತೆ ಭಾರತದ ಮೇಲೆ ಒತ್ತಡ ಹೇರಿ ಎಂದು ಜಾಗತಿಕ ಸಮುದಾಯವನ್ನು ಅವರು ಕೇಳಿಕೊಂಡಿದ್ದಾರೆ. ಈ ಮೂಲಕ ಕಾಶ್ಮೀರ ಸಮಸ್ಯೆಯ ಬಗ್ಗೆ ಮತ್ತೆ ಜಾಗತಿಕ ಸಮುದಾಯದ ಗಮನ ಸೆಳೆಯಲು ಷರೀಫ್ ಮುಂದಾಗಿದ್ದಾರೆ.<br /> <br /> ಈ ಬಗ್ಗೆ ಷರೀಫ್ ಹೇಳಿಕೆ ಇರುವ ಪತ್ರವನ್ನು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಶನಿವಾರ ಬಿಡುಗಡೆ ಮಾಡಿದೆ. ‘ಕಾಶ್ಮೀರದಲ್ಲಿ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಭಾರತೀಯ ಸೇನೆ ಪೆಲೆಟ್ ಗನ್ಗಳನ್ನು ಬಳಸುತ್ತಿದೆ. ಇದರಿಂದ ಪ್ರತಿಭಟನಾಕಾರರ ಕಣ್ಣುಗಳಿಗೆ ತೀವ್ರವಾದ ಗಾಯಗಳಾಗುತ್ತಿವೆ.<br /> <br /> ಅವರಿಗೆ ಚಿಕಿತ್ಸೆ ನೀಡಲು ಅಲ್ಲಿನ ಭದ್ರತಾ ಪಡೆಗಳು ಅವಕಾಶ ನೀಡುತ್ತಿಲ್ಲ. ಭಾರತೀಯ ಸೇನೆ ಅಲ್ಲಿನ ಆಸ್ಪತ್ರೆಗಳು, ಕ್ಲಿನಿಕ್ಗಳು ಮತ್ತು ಗಾಯಾಳುಗಳನ್ನು ಸಾಗಿಸುತ್ತಿರುವ ಆಂಬುಲೆನ್ಸ್ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ’ ಎಂದು ಪತ್ರದಲ್ಲಿ ಷರೀಫ್ ಅವರು ಆರೋಪಿಸಿದ್ದಾರೆ.<br /> <br /> ‘ಗಾಯಾಳುಗಳಿಗೆ ತಕ್ಷಣವೇ ಚಿಕಿತ್ಸೆ ನೀಡಲು ಅಂತರರಾಷ್ಟ್ರೀಯ ಸಮುದಾಯ ಮುಂದಾಗಬೇಕು. ಕಾಶ್ಮೀರದಲ್ಲಿ ನಡೆಯುತ್ತಿರುವ ರಕ್ತಪಾತವನ್ನು ನಿಲ್ಲಿಸುವಂತೆ ಭಾರತದ ಮೇಲೆ ಒತ್ತಡ ಹೇರಬೇಕು. ಜತೆಗೆ ಗಾಯಾಳುಗಳಿಗೆ ಭಾರತವೂ ಚಿಕಿತ್ಸೆ ನೀಡುವಂತೆ ಒತ್ತಡ ಹೇರಿ’ ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.<br /> <br /> ‘ಈ ಹೋರಾಟವನ್ನು ಮುನ್ನಡೆಸುತ್ತಿರುವುದು ಸ್ವಾತಂತ್ರ್ಯದ ಹಂಬಲವಷ್ಟೆ. ಕಾಶ್ಮೀರದ ಜನತೆ ತಮ್ಮ ‘ಸ್ವ ನಿರ್ಣಯ’ದ ಹಕ್ಕಿಗಾಗಿ ಹೋರಾಡುತ್ತಿದ್ದಾರೆ ಎಂಬುದನ್ನು ಜಾಗತಿಕ ಸಮುದಾಯ ಅರ್ಥಮಾಡಿಕೊಳ್ಳಬೇಕು. ಕಾಶ್ಮೀರಿ ಜನತೆಯ ಹೋರಾಟಕ್ಕೆ ಪಾಕಿಸ್ತಾನ ನೈತಿಕ, ರಾಜಕೀಯ ಮತ್ತು ರಾಜತಾಂತ್ರಿಕ ಬೆಂಬಲ ನೀಡಲಿದೆ’ ಎಂದು ಅವರು ಹೇಳಿದ್ದಾರೆ.<br /> <br /> ಪಾಕಿಸ್ತಾನ ಪ್ರಧಾನಿ ಅವರ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಜ್ ಅಜೀಜ್, ‘ಕಾಶ್ಮೀರದ ಗಲಭೆಯಲ್ಲ ಗಾಯಗೊಂಡಿರುವವರಿಗೆ ಚಿಕಿತ್ಸೆ ನೀಡಿ’ ಎಂದು ಮೆಡಿಸನ್ಸ್ ಸ್ಯಾನ್ಸ್ ಫ್ರಾಂಟರೀಸ್ (ಡಾಕ್ಟರ್ಸ್ ವಿತೌಟ್ ಬಾರ್ಡರ್ಸ್) ಸಂಸ್ಥೆಗೆ ಶುಕ್ರವಾರ ಪತ್ರ ಬರೆದಿದ್ದರು.<br /> <br /> ***<br /> ಮುಗ್ಧ ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿರುವವರ ಮೇಲೂ ಭಾರತೀಯ ಸೇನೆ ದಾಳಿ ನಡೆಸುತ್ತಿದೆ. ಇದು ಮಾನವತೆ ಮೇಲಿನ ದಾಳಿ<br /> <strong>-ನವಾಜ್ ಷರೀಫ್,ಪಾಕಿಸ್ತಾನ ಪ್ರಧಾನಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಸ್ಲಾಮಾಬಾದ್ (ಪಿಟಿಐ):</strong> ಕಾಶ್ಮೀರದ ಗಲಭೆಯಲ್ಲಿ ಗಾಯಗೊಂಡಿರುವವರಿಗೆ ವೈದ್ಯಕೀಯ ನೆರವು ನೀಡುತ್ತೇವೆ ಎಂದು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ. ಜತೆಗೆ ಗಲಭೆ ಸಂತ್ರಸ್ತರಿಗೆ ಚಿಕಿತ್ಸೆ ನೀಡುವಂತೆ ಭಾರತದ ಮೇಲೆ ಒತ್ತಡ ಹೇರಿ ಎಂದು ಜಾಗತಿಕ ಸಮುದಾಯವನ್ನು ಅವರು ಕೇಳಿಕೊಂಡಿದ್ದಾರೆ. ಈ ಮೂಲಕ ಕಾಶ್ಮೀರ ಸಮಸ್ಯೆಯ ಬಗ್ಗೆ ಮತ್ತೆ ಜಾಗತಿಕ ಸಮುದಾಯದ ಗಮನ ಸೆಳೆಯಲು ಷರೀಫ್ ಮುಂದಾಗಿದ್ದಾರೆ.<br /> <br /> ಈ ಬಗ್ಗೆ ಷರೀಫ್ ಹೇಳಿಕೆ ಇರುವ ಪತ್ರವನ್ನು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಶನಿವಾರ ಬಿಡುಗಡೆ ಮಾಡಿದೆ. ‘ಕಾಶ್ಮೀರದಲ್ಲಿ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಭಾರತೀಯ ಸೇನೆ ಪೆಲೆಟ್ ಗನ್ಗಳನ್ನು ಬಳಸುತ್ತಿದೆ. ಇದರಿಂದ ಪ್ರತಿಭಟನಾಕಾರರ ಕಣ್ಣುಗಳಿಗೆ ತೀವ್ರವಾದ ಗಾಯಗಳಾಗುತ್ತಿವೆ.<br /> <br /> ಅವರಿಗೆ ಚಿಕಿತ್ಸೆ ನೀಡಲು ಅಲ್ಲಿನ ಭದ್ರತಾ ಪಡೆಗಳು ಅವಕಾಶ ನೀಡುತ್ತಿಲ್ಲ. ಭಾರತೀಯ ಸೇನೆ ಅಲ್ಲಿನ ಆಸ್ಪತ್ರೆಗಳು, ಕ್ಲಿನಿಕ್ಗಳು ಮತ್ತು ಗಾಯಾಳುಗಳನ್ನು ಸಾಗಿಸುತ್ತಿರುವ ಆಂಬುಲೆನ್ಸ್ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ’ ಎಂದು ಪತ್ರದಲ್ಲಿ ಷರೀಫ್ ಅವರು ಆರೋಪಿಸಿದ್ದಾರೆ.<br /> <br /> ‘ಗಾಯಾಳುಗಳಿಗೆ ತಕ್ಷಣವೇ ಚಿಕಿತ್ಸೆ ನೀಡಲು ಅಂತರರಾಷ್ಟ್ರೀಯ ಸಮುದಾಯ ಮುಂದಾಗಬೇಕು. ಕಾಶ್ಮೀರದಲ್ಲಿ ನಡೆಯುತ್ತಿರುವ ರಕ್ತಪಾತವನ್ನು ನಿಲ್ಲಿಸುವಂತೆ ಭಾರತದ ಮೇಲೆ ಒತ್ತಡ ಹೇರಬೇಕು. ಜತೆಗೆ ಗಾಯಾಳುಗಳಿಗೆ ಭಾರತವೂ ಚಿಕಿತ್ಸೆ ನೀಡುವಂತೆ ಒತ್ತಡ ಹೇರಿ’ ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.<br /> <br /> ‘ಈ ಹೋರಾಟವನ್ನು ಮುನ್ನಡೆಸುತ್ತಿರುವುದು ಸ್ವಾತಂತ್ರ್ಯದ ಹಂಬಲವಷ್ಟೆ. ಕಾಶ್ಮೀರದ ಜನತೆ ತಮ್ಮ ‘ಸ್ವ ನಿರ್ಣಯ’ದ ಹಕ್ಕಿಗಾಗಿ ಹೋರಾಡುತ್ತಿದ್ದಾರೆ ಎಂಬುದನ್ನು ಜಾಗತಿಕ ಸಮುದಾಯ ಅರ್ಥಮಾಡಿಕೊಳ್ಳಬೇಕು. ಕಾಶ್ಮೀರಿ ಜನತೆಯ ಹೋರಾಟಕ್ಕೆ ಪಾಕಿಸ್ತಾನ ನೈತಿಕ, ರಾಜಕೀಯ ಮತ್ತು ರಾಜತಾಂತ್ರಿಕ ಬೆಂಬಲ ನೀಡಲಿದೆ’ ಎಂದು ಅವರು ಹೇಳಿದ್ದಾರೆ.<br /> <br /> ಪಾಕಿಸ್ತಾನ ಪ್ರಧಾನಿ ಅವರ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಜ್ ಅಜೀಜ್, ‘ಕಾಶ್ಮೀರದ ಗಲಭೆಯಲ್ಲ ಗಾಯಗೊಂಡಿರುವವರಿಗೆ ಚಿಕಿತ್ಸೆ ನೀಡಿ’ ಎಂದು ಮೆಡಿಸನ್ಸ್ ಸ್ಯಾನ್ಸ್ ಫ್ರಾಂಟರೀಸ್ (ಡಾಕ್ಟರ್ಸ್ ವಿತೌಟ್ ಬಾರ್ಡರ್ಸ್) ಸಂಸ್ಥೆಗೆ ಶುಕ್ರವಾರ ಪತ್ರ ಬರೆದಿದ್ದರು.<br /> <br /> ***<br /> ಮುಗ್ಧ ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿರುವವರ ಮೇಲೂ ಭಾರತೀಯ ಸೇನೆ ದಾಳಿ ನಡೆಸುತ್ತಿದೆ. ಇದು ಮಾನವತೆ ಮೇಲಿನ ದಾಳಿ<br /> <strong>-ನವಾಜ್ ಷರೀಫ್,ಪಾಕಿಸ್ತಾನ ಪ್ರಧಾನಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>