<p><strong>ಮುಂಬೈ (ಪಿಟಿಐ/ಐಎಎನ್ಎಸ್): </strong>ಗುಜರಾತ್ ಹಾಗೂ ಮಹಾರಾಷ್ಟ್ರಗಳಲ್ಲಿ ಶನಿವಾರ ಬೆಳಿಗ್ಗೆ ಲಘುವಾಗಿ ಎರಡು ಬಾರಿ ಭೂಮಿ ಕಂಪಿಸಿದೆ. ರಿಕ್ಟರ್ಮಾಪಕದಲ್ಲಿ 4.5 ಹಾಗೂ 4.9 ರಷ್ಟು ತೀವ್ರತೆ ದಾಖಲಾಗಿದೆ. <br /> <br /> ಬೆಳಿಗ್ಗೆ 8.53 ಕ್ಕೆ ಗುಜರಾತ್ನಲ್ಲಿ ಮೊದಲ ಕಂಪನದ ಅನುಭವವಾಯಿತು. ಇದರ ಕೇಂದ್ರ ಬಿಂದು ಭುಜ್ನಲ್ಲಿತ್ತೆಂದು ಹವಾಮಾನ ಇಲಾಖೆ ತಿಳಿಸಿದೆ. ನಂತರ 11.05 ರ ವೇಳೆಗೆ ಮತ್ತೊಂದು ಬಾರಿ ಧಾರಿಣಿ ಕಂಪಿಸಿದಳು. ಇದರ ಕೇಂದ್ರ ಬಿಂದು ಮಹಾರಾಷ್ಟ್ರದ ಸತಾರದಲ್ಲಿತ್ತು. <br /> <br /> ಎರಡನೇ ಕಂಪನವಂತೂ ತುಸು ಪ್ರಬಲವಾಗಿತ್ತು. ಇದರ ಅನುಭವ ಮುಂಬೈ, ಥಾಣೆ, ರಾಯಗಡ, ರತ್ನಗಿರಿ, ಸತಾರ ಹಾಗೂ ಪುಣೆಗಳಲ್ಲಿ ಕಂಡು ಬಂದಿದೆ. ಇದುವರೆಗೂ ಯಾವುದೇ ಹಾನಿಯಾದ ಬಗೆಗೆ ವರದಿಗಳು ಬಂದಿಲ್ಲ. ಸತಾರದಲ್ಲಿರುವ ಕೊಯ್ನಾ ಅಣೆಕಟ್ಟು ಸುರಕ್ಷಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. <br /> <br /> ಮುಂಬೈಯಲ್ಲಿದ್ದ ಅಮಿತಾಭ್ ಬಚ್ಚನ್ ಅವರಿಗೂ ಕೂಡ ಕಂಪನದ ಅನುಭವವಾಗಿದ್ದು, ಟ್ವಿಟರ್ನಲ್ಲಿ ಅಮಿತಾಭ್ ಅವರು ಮನೆಯು ಎರಡು ಬಾರಿ ಕೆಲವು ಸೆಕೆಂಡುಗಳ ಕಾಲ ಅದುರಿತು ಎಂದು ಬರೆದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ (ಪಿಟಿಐ/ಐಎಎನ್ಎಸ್): </strong>ಗುಜರಾತ್ ಹಾಗೂ ಮಹಾರಾಷ್ಟ್ರಗಳಲ್ಲಿ ಶನಿವಾರ ಬೆಳಿಗ್ಗೆ ಲಘುವಾಗಿ ಎರಡು ಬಾರಿ ಭೂಮಿ ಕಂಪಿಸಿದೆ. ರಿಕ್ಟರ್ಮಾಪಕದಲ್ಲಿ 4.5 ಹಾಗೂ 4.9 ರಷ್ಟು ತೀವ್ರತೆ ದಾಖಲಾಗಿದೆ. <br /> <br /> ಬೆಳಿಗ್ಗೆ 8.53 ಕ್ಕೆ ಗುಜರಾತ್ನಲ್ಲಿ ಮೊದಲ ಕಂಪನದ ಅನುಭವವಾಯಿತು. ಇದರ ಕೇಂದ್ರ ಬಿಂದು ಭುಜ್ನಲ್ಲಿತ್ತೆಂದು ಹವಾಮಾನ ಇಲಾಖೆ ತಿಳಿಸಿದೆ. ನಂತರ 11.05 ರ ವೇಳೆಗೆ ಮತ್ತೊಂದು ಬಾರಿ ಧಾರಿಣಿ ಕಂಪಿಸಿದಳು. ಇದರ ಕೇಂದ್ರ ಬಿಂದು ಮಹಾರಾಷ್ಟ್ರದ ಸತಾರದಲ್ಲಿತ್ತು. <br /> <br /> ಎರಡನೇ ಕಂಪನವಂತೂ ತುಸು ಪ್ರಬಲವಾಗಿತ್ತು. ಇದರ ಅನುಭವ ಮುಂಬೈ, ಥಾಣೆ, ರಾಯಗಡ, ರತ್ನಗಿರಿ, ಸತಾರ ಹಾಗೂ ಪುಣೆಗಳಲ್ಲಿ ಕಂಡು ಬಂದಿದೆ. ಇದುವರೆಗೂ ಯಾವುದೇ ಹಾನಿಯಾದ ಬಗೆಗೆ ವರದಿಗಳು ಬಂದಿಲ್ಲ. ಸತಾರದಲ್ಲಿರುವ ಕೊಯ್ನಾ ಅಣೆಕಟ್ಟು ಸುರಕ್ಷಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. <br /> <br /> ಮುಂಬೈಯಲ್ಲಿದ್ದ ಅಮಿತಾಭ್ ಬಚ್ಚನ್ ಅವರಿಗೂ ಕೂಡ ಕಂಪನದ ಅನುಭವವಾಗಿದ್ದು, ಟ್ವಿಟರ್ನಲ್ಲಿ ಅಮಿತಾಭ್ ಅವರು ಮನೆಯು ಎರಡು ಬಾರಿ ಕೆಲವು ಸೆಕೆಂಡುಗಳ ಕಾಲ ಅದುರಿತು ಎಂದು ಬರೆದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>