<p>ಮಾಗಡಿ: ಅಂಗನವಾಡಿ ಮಕ್ಕಳಿಗೆ ಪೌಷ್ಟಿ ಕಾಂಶದ ಹೆಸರಿನಲ್ಲಿ ನೀಡುತ್ತಿರುವ ಆಹಾರ ತೀರಾ ಕಳಪೆ ಗುಣಮಟ್ಟ ದಾಗಿದೆ. ತಕ್ಷಣ ಅಧಿಕಾರಿಗಳು ಕಳಪೆ ಆಹಾರವನ್ನು ಬದಲಿಸಿ ಗುಣಮಟ್ಟದ ಆಹಾರವನ್ನು ನೀಡಬೇಕು ಎಂದು ತಾ.ಪಂ ಅಧ್ಯಕ್ಷ ಜಿ.ಕೃಷ್ಣ ತಾಕೀತು ಮಾಡಿದರು.<br /> <br /> ಕಲ್ಯಾ ಬಾಗಿಲು ಬಳಿಯಿರುವ ಮಾಗಡಿ ರಾಮನಗರ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಿಗೆ ಪೌಷ್ಟಿಕ ಆಹಾರ ಸರಬರಾಜು ಮಾಡುತ್ತಿರುವ ಮಹಿಳಾ ಪೂರಕ ಪೌಷ್ಟಿಕ ಆಹಾರ ತರಬೇತಿ ಹಾಗೂ ತಯಾರಿಕಾ ಕೇಂದ್ರದ ಗೋಡನ್ಗೆ ಭೇಟಿ ನೀಡಿ ಆಹಾ ರದ ಸಿದ್ಧತೆಯನ್ನು ಪರಿಶೀಲಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.<br /> <br /> ಪೌಷ್ಟಿಕ ಆಹಾರದ ಹೆಸರಿನಲ್ಲಿ ಮಕ್ಕಳಿಗೆ ಕಲುಷಿತ ಆಹಾರದ ಪದಾರ್ಥಗಳನ್ನು ನೀಡಲಾಗುತ್ತಿದೆ. ಒಣಗಿ ಸದೆ ಹಸಿಯಾಗಿರುವ ಕಳಪೆ ದರ್ಜೆಯಿಂದ ಕೂಡಿರುವ ಕಡಲೆ ಬೀಜ, ಹೆಸರು ಬೇಳೆ, ಕಡಲೆ ಬೇಳೆ, ಗೋಧಿ, ಅಕ್ಕಿಯನ್ನು ಈ ವೇಳೆ ಪರಿಶೀಲಿಸಿದರು.<br /> <br /> ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ಕಳಪೆ ದರ್ಜೆಯ ಆಹಾರ ಪದಾರ್ಥಗಳನ್ನು ನೀಡುತ್ತಿರುವ ಗುತ್ತಿಗೆದಾ ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿರುವುದು ಖಂಡನೀಯ ಎಂದರು.<br /> <br /> ಮುಗ್ಗಲು ಗೋಧಿಯಲ್ಲಿ ಕಲ್ಲು, ಧೂಳು ತುಂಬಿದೆ. ಕಡಲೆ ಬೀಜ ಮತ್ತು ಕಡಲೆ ಬೇಳೆಯ ಚೀಲಗಳಲ್ಲಿ ಕೊಳೆತ ವಾಸನೆ ಬರುತ್ತಿದೆ. ಹೆಸರು ಬೇಳೆಯ ಜೊತೆಗೆ ಹಳೆಯ ಮತ್ತು ತಿನ್ನಲು ಯೋಗ್ಯವಲ್ಲದ ಹಳೆಯ ಮುಗ್ಗಲು ಹೆಸರು ಬೇಳೆಯನ್ನು ಬೆರೆಸಲಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.<br /> <br /> ಹಳೆ ಕತ್ತಲೆ ಕೊಠಡಿಯಲ್ಲಿ ಮಹಿಳಾ ಪೂರಕ ಪೌಷ್ಟಿಕ ಆಹಾರ ತರಬೇತಿ ಹಾಗೂ ತಯಾರಿಕಾ ಕೇಂದ್ರವನ್ನು ನಡೆಸಲಾಗುತ್ತಿದೆ. ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುವ ಪೌಷ್ಟಿಕ ಆಹಾರ ವನ್ನು ಕತ್ತಲೆ ಕೋಣೆಯಲ್ಲಿ ಪ್ಯಾಕ್ ಮಾಡುವುದು ಸರಿಯಲ್ಲ.<br /> <br /> ಜೊತೆಗೆ ಪೌಷ್ಟಿಕ ಆಹಾರ ತಯಾರಿ ಕೆಯಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರಿಗೆ ಸೂಕ್ತ ವೇತನ ಇತರೆ ಸವಲತ್ತುಗಳನ್ನು ನೀಡದೆ ವಂಚಿಸ ಲಾಗುತ್ತಿದೆ ಎಂದು ತಾ.ಪಂ.ಅಧ್ಯಕ್ಷರು ಆರೋಪಿಸಿ ದರು. ಜಿಲ್ಲಾಡಳಿತ ತಕ್ಷಣ ಕ್ರಮಕೈಗೊಂಡು ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಾಗಡಿ: ಅಂಗನವಾಡಿ ಮಕ್ಕಳಿಗೆ ಪೌಷ್ಟಿ ಕಾಂಶದ ಹೆಸರಿನಲ್ಲಿ ನೀಡುತ್ತಿರುವ ಆಹಾರ ತೀರಾ ಕಳಪೆ ಗುಣಮಟ್ಟ ದಾಗಿದೆ. ತಕ್ಷಣ ಅಧಿಕಾರಿಗಳು ಕಳಪೆ ಆಹಾರವನ್ನು ಬದಲಿಸಿ ಗುಣಮಟ್ಟದ ಆಹಾರವನ್ನು ನೀಡಬೇಕು ಎಂದು ತಾ.ಪಂ ಅಧ್ಯಕ್ಷ ಜಿ.ಕೃಷ್ಣ ತಾಕೀತು ಮಾಡಿದರು.<br /> <br /> ಕಲ್ಯಾ ಬಾಗಿಲು ಬಳಿಯಿರುವ ಮಾಗಡಿ ರಾಮನಗರ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಿಗೆ ಪೌಷ್ಟಿಕ ಆಹಾರ ಸರಬರಾಜು ಮಾಡುತ್ತಿರುವ ಮಹಿಳಾ ಪೂರಕ ಪೌಷ್ಟಿಕ ಆಹಾರ ತರಬೇತಿ ಹಾಗೂ ತಯಾರಿಕಾ ಕೇಂದ್ರದ ಗೋಡನ್ಗೆ ಭೇಟಿ ನೀಡಿ ಆಹಾ ರದ ಸಿದ್ಧತೆಯನ್ನು ಪರಿಶೀಲಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.<br /> <br /> ಪೌಷ್ಟಿಕ ಆಹಾರದ ಹೆಸರಿನಲ್ಲಿ ಮಕ್ಕಳಿಗೆ ಕಲುಷಿತ ಆಹಾರದ ಪದಾರ್ಥಗಳನ್ನು ನೀಡಲಾಗುತ್ತಿದೆ. ಒಣಗಿ ಸದೆ ಹಸಿಯಾಗಿರುವ ಕಳಪೆ ದರ್ಜೆಯಿಂದ ಕೂಡಿರುವ ಕಡಲೆ ಬೀಜ, ಹೆಸರು ಬೇಳೆ, ಕಡಲೆ ಬೇಳೆ, ಗೋಧಿ, ಅಕ್ಕಿಯನ್ನು ಈ ವೇಳೆ ಪರಿಶೀಲಿಸಿದರು.<br /> <br /> ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ಕಳಪೆ ದರ್ಜೆಯ ಆಹಾರ ಪದಾರ್ಥಗಳನ್ನು ನೀಡುತ್ತಿರುವ ಗುತ್ತಿಗೆದಾ ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿರುವುದು ಖಂಡನೀಯ ಎಂದರು.<br /> <br /> ಮುಗ್ಗಲು ಗೋಧಿಯಲ್ಲಿ ಕಲ್ಲು, ಧೂಳು ತುಂಬಿದೆ. ಕಡಲೆ ಬೀಜ ಮತ್ತು ಕಡಲೆ ಬೇಳೆಯ ಚೀಲಗಳಲ್ಲಿ ಕೊಳೆತ ವಾಸನೆ ಬರುತ್ತಿದೆ. ಹೆಸರು ಬೇಳೆಯ ಜೊತೆಗೆ ಹಳೆಯ ಮತ್ತು ತಿನ್ನಲು ಯೋಗ್ಯವಲ್ಲದ ಹಳೆಯ ಮುಗ್ಗಲು ಹೆಸರು ಬೇಳೆಯನ್ನು ಬೆರೆಸಲಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.<br /> <br /> ಹಳೆ ಕತ್ತಲೆ ಕೊಠಡಿಯಲ್ಲಿ ಮಹಿಳಾ ಪೂರಕ ಪೌಷ್ಟಿಕ ಆಹಾರ ತರಬೇತಿ ಹಾಗೂ ತಯಾರಿಕಾ ಕೇಂದ್ರವನ್ನು ನಡೆಸಲಾಗುತ್ತಿದೆ. ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುವ ಪೌಷ್ಟಿಕ ಆಹಾರ ವನ್ನು ಕತ್ತಲೆ ಕೋಣೆಯಲ್ಲಿ ಪ್ಯಾಕ್ ಮಾಡುವುದು ಸರಿಯಲ್ಲ.<br /> <br /> ಜೊತೆಗೆ ಪೌಷ್ಟಿಕ ಆಹಾರ ತಯಾರಿ ಕೆಯಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರಿಗೆ ಸೂಕ್ತ ವೇತನ ಇತರೆ ಸವಲತ್ತುಗಳನ್ನು ನೀಡದೆ ವಂಚಿಸ ಲಾಗುತ್ತಿದೆ ಎಂದು ತಾ.ಪಂ.ಅಧ್ಯಕ್ಷರು ಆರೋಪಿಸಿ ದರು. ಜಿಲ್ಲಾಡಳಿತ ತಕ್ಷಣ ಕ್ರಮಕೈಗೊಂಡು ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>