<p><strong>ಕಾಶ್ಮೀರದ ಕದನಸ್ತಂಭನ ರೇಖೆ ದಾಟಲು ಭಾರತ ಸಿದ್ಧ<br /> ನವದೆಹಲಿ, ಮಾ. 18– </strong>ಭಾರತದ ರಕ್ಷಣೆಯ ಹಿತದೃಷ್ಟಿಯಿಂದ ಅಗತ್ಯಬಿದ್ದರೆ ಕಾಶ್ಮೀರದಲ್ಲಿ ನಮ್ಮ ಸೇನೆ ಕದನಸ್ತಂಭನ ರೇಖೆ ದಾಟುವುವು ಎಂದು ಪ್ರಧಾನ ಮಂತ್ರಿ ನೆಹ್ರೂ ಇಂದು ಲೋಕ ಸಭೆಯಲ್ಲಿ ಹರ್ಷೋದ್ಗಾರಗಳ ನಡುವೆ ಘೋಷಿಸಿದರು.</p>.<p><strong>ಜಮ್ಮು ಬಳಿ ಮತ್ತೆ ಪಾಕಿಸ್ತಾನಿಗಳ ದಾಳಿ<br /> ನವದೆಹಲಿ, ಮಾ. 18 – </strong>ಮಾರ್ಚಿ 17ರ ರಾತ್ರಿ ಪಾಕಿಸ್ತಾನಿ ದಾಳಿಕಾರರು ಜಮ್ಮುಗೆ ಈಶಾನ್ಯ ದಿಕ್ಕಿನಲ್ಲಿನ ಅಕ್ನೂರ್ ಪ್ರದೇಶದಲ್ಲಿ ಮೂರು ಬೇರೆ ಬೇರೆ ಸ್ಥಳಗಳಲ್ಲಿ ನಾಲ್ಕು ಸಲ ದಾಳಿ ನಡೆಸಿದರೆಂದು ಇಂದು ಸಂಜೆ ದೆಹಲಿಗೆ ಬಂದ ವರದಿಗಳು ತಿಳಿಸುತ್ತವೆ.<br /> <br /> <strong>ಕಮ್ಯಾಂಡರ್ ನಾನಾಮತಿ ಬಿಡುಗಡೆ<br /> ಮುಂಬೈ, ಮಾ. 18 – </strong>1960 ರಲ್ಲಿ ಇಲ್ಲಿನ ವಾಣಿಜ್ಯೋದ್ಯಮಿ ಅಹುಜಾ ಅವರ ಕೊಲೆ ಮಾಡಿದ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆಗೊಳಗಾಗಿದ್ದ ಭಾರತ ನೌಕಾದಳದ ಕಮ್ಯಾಂಡರ್ ಕೆ. ಎಂ. ನಾನಾವತಿ ಅವರನ್ನು ಮಹಾರಾಷ್ಟ್ರದ ರಾಜ್ಯಪಾಲರಾದ ಶ್ರೀಮತಿ ವಿಜಯಲಕ್ಷ್ಮಿ ಪಂಡಿತರ ಆಜ್ಞೆ ಪ್ರಕಾರ ಇಂದು ಬಿಡುಗಡೆ ಮಾಡಲಾಯಿತು.<br /> <br /> ರಾಜ್ಯಪಾಲಿನಿ ಶ್ರೀಮತಿ ಪಂಡಿತ್ ಅವರು ತಮ್ಮ ಆಜ್ಞೆಯಲ್ಲಿ, ‘ನಾನಾವತಿ ಅವರ ಸನ್ನಡತೆ ಹಾಗೂ ಅವರು ನೌಕಾದಳಕ್ಕೆ ಸಲ್ಲಿಸಿರುವ ಸೇವೆಯನ್ನು ಗಮನಿಸಿ ಸಂವಿಧಾನದ 161ನೇ ವಿಧಿ ಪ್ರಕಾರ ಶಿಕ್ಷೆಯನ್ನು ಕಡಿಮೆಗೊಳಿಸಿ ಬಿಡುಗಡೆ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಶ್ಮೀರದ ಕದನಸ್ತಂಭನ ರೇಖೆ ದಾಟಲು ಭಾರತ ಸಿದ್ಧ<br /> ನವದೆಹಲಿ, ಮಾ. 18– </strong>ಭಾರತದ ರಕ್ಷಣೆಯ ಹಿತದೃಷ್ಟಿಯಿಂದ ಅಗತ್ಯಬಿದ್ದರೆ ಕಾಶ್ಮೀರದಲ್ಲಿ ನಮ್ಮ ಸೇನೆ ಕದನಸ್ತಂಭನ ರೇಖೆ ದಾಟುವುವು ಎಂದು ಪ್ರಧಾನ ಮಂತ್ರಿ ನೆಹ್ರೂ ಇಂದು ಲೋಕ ಸಭೆಯಲ್ಲಿ ಹರ್ಷೋದ್ಗಾರಗಳ ನಡುವೆ ಘೋಷಿಸಿದರು.</p>.<p><strong>ಜಮ್ಮು ಬಳಿ ಮತ್ತೆ ಪಾಕಿಸ್ತಾನಿಗಳ ದಾಳಿ<br /> ನವದೆಹಲಿ, ಮಾ. 18 – </strong>ಮಾರ್ಚಿ 17ರ ರಾತ್ರಿ ಪಾಕಿಸ್ತಾನಿ ದಾಳಿಕಾರರು ಜಮ್ಮುಗೆ ಈಶಾನ್ಯ ದಿಕ್ಕಿನಲ್ಲಿನ ಅಕ್ನೂರ್ ಪ್ರದೇಶದಲ್ಲಿ ಮೂರು ಬೇರೆ ಬೇರೆ ಸ್ಥಳಗಳಲ್ಲಿ ನಾಲ್ಕು ಸಲ ದಾಳಿ ನಡೆಸಿದರೆಂದು ಇಂದು ಸಂಜೆ ದೆಹಲಿಗೆ ಬಂದ ವರದಿಗಳು ತಿಳಿಸುತ್ತವೆ.<br /> <br /> <strong>ಕಮ್ಯಾಂಡರ್ ನಾನಾಮತಿ ಬಿಡುಗಡೆ<br /> ಮುಂಬೈ, ಮಾ. 18 – </strong>1960 ರಲ್ಲಿ ಇಲ್ಲಿನ ವಾಣಿಜ್ಯೋದ್ಯಮಿ ಅಹುಜಾ ಅವರ ಕೊಲೆ ಮಾಡಿದ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆಗೊಳಗಾಗಿದ್ದ ಭಾರತ ನೌಕಾದಳದ ಕಮ್ಯಾಂಡರ್ ಕೆ. ಎಂ. ನಾನಾವತಿ ಅವರನ್ನು ಮಹಾರಾಷ್ಟ್ರದ ರಾಜ್ಯಪಾಲರಾದ ಶ್ರೀಮತಿ ವಿಜಯಲಕ್ಷ್ಮಿ ಪಂಡಿತರ ಆಜ್ಞೆ ಪ್ರಕಾರ ಇಂದು ಬಿಡುಗಡೆ ಮಾಡಲಾಯಿತು.<br /> <br /> ರಾಜ್ಯಪಾಲಿನಿ ಶ್ರೀಮತಿ ಪಂಡಿತ್ ಅವರು ತಮ್ಮ ಆಜ್ಞೆಯಲ್ಲಿ, ‘ನಾನಾವತಿ ಅವರ ಸನ್ನಡತೆ ಹಾಗೂ ಅವರು ನೌಕಾದಳಕ್ಕೆ ಸಲ್ಲಿಸಿರುವ ಸೇವೆಯನ್ನು ಗಮನಿಸಿ ಸಂವಿಧಾನದ 161ನೇ ವಿಧಿ ಪ್ರಕಾರ ಶಿಕ್ಷೆಯನ್ನು ಕಡಿಮೆಗೊಳಿಸಿ ಬಿಡುಗಡೆ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>