<p><strong>ಗುರುವಾರ, 21-6-1962<br /> ಕಂಠಿ ಸಂಪುಟದ ರಾಜಿನಾಮೆ<br /> </strong>ಬೆಂಗಳೂರು, ಜೂನ್ 20 - ನಾಳೆ ಬೆಳಿಗ್ಗೆ 8-30ಕ್ಕೆ ರೆಸಿಡೆನ್ಸಿಯಲ್ಲಿ ಸಮಾವೇಶಗೊಳ್ಳುವ ವಿಧಾನ ಮಂಡಲದ ಕಾಂಗ್ರೆಸ್ ಪಕ್ಷ ಎಂ.ಪಿ.ಸಿ.ಸಿ. ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ ಅವರನ್ನು ತನ್ನ ನಾಯಕರನ್ನಾಗಿ ಸರ್ವಾನುಮತದಿಂದ ಚುನಾಯಿಸಲಿದೆ.<br /> <br /> ಶ್ರೀ ನಿಜಲಿಂಗಪ್ಪನವರು ಪಕ್ಷದ ನಾಯಕರಾಗಲೆಂಬ ಉದ್ದೇಶದಿಂದ ಪಕ್ಷದ ನಾಯಕತ್ವಕ್ಕೆ ರಾಜಿನಾಮೆ ಸಲ್ಲಿಸಿರುವ ಮುಖ್ಯಮಂತ್ರಿ ಶ್ರೀ ಎಸ್. ಆರ್. ಕಂಠಿ ಅವರು ಇಂದು ಸಂಜೆ ತಮ್ಮ ಮಂತ್ರಿಮಂಡಲದ ರಾಜಿನಾಮೆಯನ್ನು ರಾಜ್ಯಪಾಲರಿಗೆ ಒಪ್ಪಿಸಿದರು.<br /> <strong><br /> ಪ್ರಧಾನಿ ನೆಹರೂ ಜೊತೆಗಾಲ್ಬ್ರೇತ್ ಮಾತುಕತೆ</strong><br /> ನವದೆಹಲಿ, ಜೂನ್ 20 - ಭಾರತದಲ್ಲಿನ ಅಮೆರಿಕದ ರಾಯಭಾರಿ ಪ್ರೊ. ಜಿ. ಕೆ. ಗಾಲ್ಬ್ರೇತ್ರವರು ಇಂದು ಪ್ರಧಾನ ಮಂತ್ರಿ ನೆಹರೂರವರನ್ನು ಭೇಟಿ ಮಾಡಿ ಸುಮಾರು ಒಂದು ಗಂಟೆಯ ಕಾಲ ಅವರೊಡನೆ ಮಾತುಕತೆ ನಡೆಸಿದರು.<br /> ಜೂನ್ 18 ರಂದು ವಾಷಿಂಗ್ಟನ್ನಿನಿಂದ ದೆಹಲಿಗೆ ವಾಪಸಾದ ನಂತರ ಪ್ರೊ. ಗಾಲ್ಬ್ರೇತ್ರವರು ನೆಹರೂರನ್ನು ಭೇಟಿ ಮಾಡಿದ್ದು ಇದೇ ಮೊದಲನೆಯ ಸಲ.<br /> <br /> <strong>ರಾಜ್ಯದಲ್ಲಿ ಭದ್ರ, ಸಮರ್ಥ ಸರಕಾರ<br /> </strong>ಬೆಂಗಳೂರು, ಜೂನ್ 20 - 102ದಿನಗಳ ಕಾಲ ಮುಖ್ಯಮಂತ್ರಿ ಅಧಿಕಾರವನ್ನು `ಪರಿಣಾಮಕಾರಿಯಾಗಿ ನಿರ್ವಹಿಸಿದ ಸಮಾಧಾನದಿಂದ ಇಂದು~ ಅಧಿಕಾರ ಸ್ಥಾನದಿಂದ ಕೆಳಗಿಳಿದ ಎಸ್.ಆರ್.ಕಂಠಿ`ಮೈಸೂರಿನಲ್ಲಿ ಇನ್ನು ಭದ್ರ ಹಾಗೂ ಸಮರ್ಥ ಸರಕಾರ ಏರ್ಪಡುವುದು~ ಎಂದು ಆಶಿಸಿದರು.<br /> <br /> `ವಿಧಾನಸಭೆಗೆ ನಮ್ಮ ನಾಯಕ ಶ್ರೀ ಎಸ್. ನಿಜಲಿಂಗಪ್ಪನವರ ಆಗಮನವನ್ನು ನಿರೀಕ್ಷಿಸಿ~ ತಾವು ಮುಖ್ಯಮಂತ್ರಿಯ ಅಧಿಕಾರ ಸ್ವೀಕರಿಸಿರುವುದಾಗಿ ಸ್ಪಷ್ಟಪಡಿಸುತ್ತ ಬಂದಿರುವ ಶ್ರೀ ಕಂಠಿಯವರು ರಾಜ್ಯಪಾಲರಿಗೆ ಇಂದು ಸಂಜೆ ತಮ್ಮ ಮಂತ್ರಿಮಂಡಲದ ರಾಜಿನಾಮೆಯನ್ನು ಸಲ್ಲಿಸುವುದಾಗಿ ಪತ್ರಕರ್ತರಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುರುವಾರ, 21-6-1962<br /> ಕಂಠಿ ಸಂಪುಟದ ರಾಜಿನಾಮೆ<br /> </strong>ಬೆಂಗಳೂರು, ಜೂನ್ 20 - ನಾಳೆ ಬೆಳಿಗ್ಗೆ 8-30ಕ್ಕೆ ರೆಸಿಡೆನ್ಸಿಯಲ್ಲಿ ಸಮಾವೇಶಗೊಳ್ಳುವ ವಿಧಾನ ಮಂಡಲದ ಕಾಂಗ್ರೆಸ್ ಪಕ್ಷ ಎಂ.ಪಿ.ಸಿ.ಸಿ. ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ ಅವರನ್ನು ತನ್ನ ನಾಯಕರನ್ನಾಗಿ ಸರ್ವಾನುಮತದಿಂದ ಚುನಾಯಿಸಲಿದೆ.<br /> <br /> ಶ್ರೀ ನಿಜಲಿಂಗಪ್ಪನವರು ಪಕ್ಷದ ನಾಯಕರಾಗಲೆಂಬ ಉದ್ದೇಶದಿಂದ ಪಕ್ಷದ ನಾಯಕತ್ವಕ್ಕೆ ರಾಜಿನಾಮೆ ಸಲ್ಲಿಸಿರುವ ಮುಖ್ಯಮಂತ್ರಿ ಶ್ರೀ ಎಸ್. ಆರ್. ಕಂಠಿ ಅವರು ಇಂದು ಸಂಜೆ ತಮ್ಮ ಮಂತ್ರಿಮಂಡಲದ ರಾಜಿನಾಮೆಯನ್ನು ರಾಜ್ಯಪಾಲರಿಗೆ ಒಪ್ಪಿಸಿದರು.<br /> <strong><br /> ಪ್ರಧಾನಿ ನೆಹರೂ ಜೊತೆಗಾಲ್ಬ್ರೇತ್ ಮಾತುಕತೆ</strong><br /> ನವದೆಹಲಿ, ಜೂನ್ 20 - ಭಾರತದಲ್ಲಿನ ಅಮೆರಿಕದ ರಾಯಭಾರಿ ಪ್ರೊ. ಜಿ. ಕೆ. ಗಾಲ್ಬ್ರೇತ್ರವರು ಇಂದು ಪ್ರಧಾನ ಮಂತ್ರಿ ನೆಹರೂರವರನ್ನು ಭೇಟಿ ಮಾಡಿ ಸುಮಾರು ಒಂದು ಗಂಟೆಯ ಕಾಲ ಅವರೊಡನೆ ಮಾತುಕತೆ ನಡೆಸಿದರು.<br /> ಜೂನ್ 18 ರಂದು ವಾಷಿಂಗ್ಟನ್ನಿನಿಂದ ದೆಹಲಿಗೆ ವಾಪಸಾದ ನಂತರ ಪ್ರೊ. ಗಾಲ್ಬ್ರೇತ್ರವರು ನೆಹರೂರನ್ನು ಭೇಟಿ ಮಾಡಿದ್ದು ಇದೇ ಮೊದಲನೆಯ ಸಲ.<br /> <br /> <strong>ರಾಜ್ಯದಲ್ಲಿ ಭದ್ರ, ಸಮರ್ಥ ಸರಕಾರ<br /> </strong>ಬೆಂಗಳೂರು, ಜೂನ್ 20 - 102ದಿನಗಳ ಕಾಲ ಮುಖ್ಯಮಂತ್ರಿ ಅಧಿಕಾರವನ್ನು `ಪರಿಣಾಮಕಾರಿಯಾಗಿ ನಿರ್ವಹಿಸಿದ ಸಮಾಧಾನದಿಂದ ಇಂದು~ ಅಧಿಕಾರ ಸ್ಥಾನದಿಂದ ಕೆಳಗಿಳಿದ ಎಸ್.ಆರ್.ಕಂಠಿ`ಮೈಸೂರಿನಲ್ಲಿ ಇನ್ನು ಭದ್ರ ಹಾಗೂ ಸಮರ್ಥ ಸರಕಾರ ಏರ್ಪಡುವುದು~ ಎಂದು ಆಶಿಸಿದರು.<br /> <br /> `ವಿಧಾನಸಭೆಗೆ ನಮ್ಮ ನಾಯಕ ಶ್ರೀ ಎಸ್. ನಿಜಲಿಂಗಪ್ಪನವರ ಆಗಮನವನ್ನು ನಿರೀಕ್ಷಿಸಿ~ ತಾವು ಮುಖ್ಯಮಂತ್ರಿಯ ಅಧಿಕಾರ ಸ್ವೀಕರಿಸಿರುವುದಾಗಿ ಸ್ಪಷ್ಟಪಡಿಸುತ್ತ ಬಂದಿರುವ ಶ್ರೀ ಕಂಠಿಯವರು ರಾಜ್ಯಪಾಲರಿಗೆ ಇಂದು ಸಂಜೆ ತಮ್ಮ ಮಂತ್ರಿಮಂಡಲದ ರಾಜಿನಾಮೆಯನ್ನು ಸಲ್ಲಿಸುವುದಾಗಿ ಪತ್ರಕರ್ತರಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>