<p><strong>ಉಡುಪಿ:</strong> `ಪ್ರಸ್ತುತ ನಮ್ಮಲ್ಲಿ ಸೃಜನಶೀಲತೆ ಕಡಿಮೆಯಾಗುತ್ತಿದೆ, ಗೂಗಲ್ ಸಂಸ್ಕೃತಿ ಹೆಚ್ಚುತ್ತಿದೆ~ ಎಂದು ಪರಿಸರ ತಜ್ಞ ಡಾ.ಎನ್.ಎ.ಮಧ್ಯಸ್ಥ ಇಲ್ಲಿ ವಿಷಾದ ವ್ಯಕ್ತ ಪಡಿಸಿದರು.<br /> <br /> ಉಡುಪಿಯ ಅಕಲಂಕ ಪ್ರತಿಷ್ಠಾನದ ವತಿಯಿಂದ ಎಂಜಿಎಂನಲ್ಲಿ ಭಾನುವಾರ ಆಯೋಜಿಸಿದ್ದ `ಅಕಲಂಕ ಪುಸ್ತಕ ಪುರಸ್ಕಾರ~ ವಿಜೇತ `ಹೂವು ಮತ್ತು ಆರೋಗ್ಯ~ ಕೃತಿ ಪರಿಚಯ ಮಾಡಿದರು.<br /> <br /> `ಈ ಎಲ್ಲ ಬೆಳವಣಿಗೆಯ ಒಟ್ಟಾರೆ ಪರಿಣಾಮ ಪುಸ್ತಕ ಬರೆಯುವವರಿಗೆ ಹಿನ್ನಡೆಯಾಗಿದೆ. ಪುಸ್ತಕ ಓದುವವ ಮಾತ್ರವೇ ಕೊಂಡುಕೊಳ್ಳುವ ಸಂಸ್ಕೃತಿಯಿಂದಾಗಿ ಪುಸ್ತಕ ಬರೆಯವುದಕ್ಕೂ ಹಿಂಜರಿಕೆಯಾಗಿದೆ~ ಎಂದು ಅವರು ವಿಶ್ಲೇಷಿಸಿದರು.<br /> <br /> `ದೆಹಲಿ ಕನ್ನಡಿಗ~ ಪತ್ರಿಕೆಯ ಸಂಪಾದಕ ಬಾ.ಸಾಮಾಗ ಮಾತನಾಡಿ, `ಜನರ ಬದುಕಿಗೆ ಹತ್ತಿರವಾಗುವ ಕೃತಿಗಳಿಗೆ ಬೇಡಿಕೆ ಇದೆ. ಮಾರುಕಟ್ಟೆಯಲ್ಲಿ ಆರೋಗ್ಯ ಮತ್ತು ಅಡುಗೆ ಪುಸ್ತಕಗಳಿಗೆ ಬೇಡಿಕೆ ಹೆಚ್ಚು. ಸಾಹಿತ್ಯ ಕೃತಿಗಳು ಜನರಿಗೆ ಹತ್ತಿರವಾಗುವುದರ ಜತೆಗೆ ಕೃತಿಕಾರರಿಗೆ ಲಾಭ ತರಬೇಕು ಎಂದರು.<br /> <br /> `ಅನುವಾದಿತ ಕೃತಿಗಳಿಂದ ಭಾಷೆ ಮತ್ತು ಸಾಹಿತ್ಯ ವಿಶ್ವಮಟ್ಟಕ್ಕೆ ಬೆಳೆಯಲು ಸಾಧ್ಯವಾಗುತ್ತದೆ~ ಎಂದು ಅವರು ಅಭಿಪ್ರಾಯಪಟ್ಟರು.<br /> <br /> ಕ.ಸಾ.ಪ ಜಿಲ್ಲಾ ಘಟಕದ ಅಧ್ಯಕ್ಷ ಅಂಬಾತನಯ ಮುದ್ರಾಡಿ ಮಾತನಾಡಿ, `ಪ್ರಸ್ತುತ ಸಾಹಿತ್ಯ ನಮ್ಮ ಅರಿವಿನ ಎಲ್ಲ ಮಗ್ಗಲುಗಳಲ್ಲಿ ತೆರೆದುಕೊಂಡಿದೆ, ವಿಜ್ಞಾನ, ವೈದ್ಯಕೀಯ, ಭೂಗೋಲಗಳೆಲ್ಲ ಸಾಹಿತ್ಯವಾಗಿವೆ ಎಂದರು.<br /> ಪ್ರತಿಷ್ಠಾನದ ಅಧ್ಯಕ್ಷ ಡಾ.ಉಪ್ಪಂಗಳ ರಾಮಭಟ್ಟ ಅಧ್ಯಕ್ಷತೆ ವಹಿಸಿದ್ದರು. ಲೇಖಕಿ ಡಾ.ವಸುಂಧರಾ ಭೂಪತಿ, ವಕೀಲ ಭೂಪತಿ, ಉದ್ಯಮಿ ರಬೀಂದ್ರನಾಯಕ್, ಪ್ರಾಧ್ಯಾಪಕ ಡಾ.ಡಿ.ಆರ್.ಪಾಂಡುರಂಗ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ:</strong> `ಪ್ರಸ್ತುತ ನಮ್ಮಲ್ಲಿ ಸೃಜನಶೀಲತೆ ಕಡಿಮೆಯಾಗುತ್ತಿದೆ, ಗೂಗಲ್ ಸಂಸ್ಕೃತಿ ಹೆಚ್ಚುತ್ತಿದೆ~ ಎಂದು ಪರಿಸರ ತಜ್ಞ ಡಾ.ಎನ್.ಎ.ಮಧ್ಯಸ್ಥ ಇಲ್ಲಿ ವಿಷಾದ ವ್ಯಕ್ತ ಪಡಿಸಿದರು.<br /> <br /> ಉಡುಪಿಯ ಅಕಲಂಕ ಪ್ರತಿಷ್ಠಾನದ ವತಿಯಿಂದ ಎಂಜಿಎಂನಲ್ಲಿ ಭಾನುವಾರ ಆಯೋಜಿಸಿದ್ದ `ಅಕಲಂಕ ಪುಸ್ತಕ ಪುರಸ್ಕಾರ~ ವಿಜೇತ `ಹೂವು ಮತ್ತು ಆರೋಗ್ಯ~ ಕೃತಿ ಪರಿಚಯ ಮಾಡಿದರು.<br /> <br /> `ಈ ಎಲ್ಲ ಬೆಳವಣಿಗೆಯ ಒಟ್ಟಾರೆ ಪರಿಣಾಮ ಪುಸ್ತಕ ಬರೆಯುವವರಿಗೆ ಹಿನ್ನಡೆಯಾಗಿದೆ. ಪುಸ್ತಕ ಓದುವವ ಮಾತ್ರವೇ ಕೊಂಡುಕೊಳ್ಳುವ ಸಂಸ್ಕೃತಿಯಿಂದಾಗಿ ಪುಸ್ತಕ ಬರೆಯವುದಕ್ಕೂ ಹಿಂಜರಿಕೆಯಾಗಿದೆ~ ಎಂದು ಅವರು ವಿಶ್ಲೇಷಿಸಿದರು.<br /> <br /> `ದೆಹಲಿ ಕನ್ನಡಿಗ~ ಪತ್ರಿಕೆಯ ಸಂಪಾದಕ ಬಾ.ಸಾಮಾಗ ಮಾತನಾಡಿ, `ಜನರ ಬದುಕಿಗೆ ಹತ್ತಿರವಾಗುವ ಕೃತಿಗಳಿಗೆ ಬೇಡಿಕೆ ಇದೆ. ಮಾರುಕಟ್ಟೆಯಲ್ಲಿ ಆರೋಗ್ಯ ಮತ್ತು ಅಡುಗೆ ಪುಸ್ತಕಗಳಿಗೆ ಬೇಡಿಕೆ ಹೆಚ್ಚು. ಸಾಹಿತ್ಯ ಕೃತಿಗಳು ಜನರಿಗೆ ಹತ್ತಿರವಾಗುವುದರ ಜತೆಗೆ ಕೃತಿಕಾರರಿಗೆ ಲಾಭ ತರಬೇಕು ಎಂದರು.<br /> <br /> `ಅನುವಾದಿತ ಕೃತಿಗಳಿಂದ ಭಾಷೆ ಮತ್ತು ಸಾಹಿತ್ಯ ವಿಶ್ವಮಟ್ಟಕ್ಕೆ ಬೆಳೆಯಲು ಸಾಧ್ಯವಾಗುತ್ತದೆ~ ಎಂದು ಅವರು ಅಭಿಪ್ರಾಯಪಟ್ಟರು.<br /> <br /> ಕ.ಸಾ.ಪ ಜಿಲ್ಲಾ ಘಟಕದ ಅಧ್ಯಕ್ಷ ಅಂಬಾತನಯ ಮುದ್ರಾಡಿ ಮಾತನಾಡಿ, `ಪ್ರಸ್ತುತ ಸಾಹಿತ್ಯ ನಮ್ಮ ಅರಿವಿನ ಎಲ್ಲ ಮಗ್ಗಲುಗಳಲ್ಲಿ ತೆರೆದುಕೊಂಡಿದೆ, ವಿಜ್ಞಾನ, ವೈದ್ಯಕೀಯ, ಭೂಗೋಲಗಳೆಲ್ಲ ಸಾಹಿತ್ಯವಾಗಿವೆ ಎಂದರು.<br /> ಪ್ರತಿಷ್ಠಾನದ ಅಧ್ಯಕ್ಷ ಡಾ.ಉಪ್ಪಂಗಳ ರಾಮಭಟ್ಟ ಅಧ್ಯಕ್ಷತೆ ವಹಿಸಿದ್ದರು. ಲೇಖಕಿ ಡಾ.ವಸುಂಧರಾ ಭೂಪತಿ, ವಕೀಲ ಭೂಪತಿ, ಉದ್ಯಮಿ ರಬೀಂದ್ರನಾಯಕ್, ಪ್ರಾಧ್ಯಾಪಕ ಡಾ.ಡಿ.ಆರ್.ಪಾಂಡುರಂಗ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>