<p>ಬೆಂಗಳೂರು: ‘ಅವನು ತೀರಿಕೊಂಡ ಸಂದರ್ಭದಲ್ಲಿ ನನ್ನ ಪತ್ನಿ, ಮಕ್ಕಳು ನನಗಿಂತ ಮೊದಲು ಅವನ ದರ್ಶನ ಪಡೆದಿದ್ದರು’ ಎನ್ನುತ್ತಾ ಭಾವುಕರಾದ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಕಣ್ಣೀರಿಟ್ಟರು..<br /> <br /> ಪ್ರೆಸ್ಕ್ಲಬ್ ಸಭಾಂಗಣದಲ್ಲಿ ಮಂಗಳವಾರ ನಡೆದ ಚಲನಚಿತ್ರ ಛಾಯಾಗ್ರಾಹಕ ‘ಸುಂದರನಾಥ ಸುವರ್ಣ ನೆನಪು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> ‘ಕನ್ನಡ ಚಿತ್ರರಂಗ ಕ್ಷೇತ್ರ ಬೆಳವಣಿಗೆಗೆ ತಮ್ಮದೇ ಆದ ರೀತಿಯಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ಸುಂದರನಾಥ ಸುವರ್ಣ ಅವರ ಹೆಸರಿನಲ್ಲಿ ಸ್ನೇಹಿತರೆಲ್ಲರೂ ಸೇರಿ ನಿಧಿ ಸ್ಥಾಪನೆ ಮಾಡಿ, ಅವರ ನೆನಪನ್ನು ಸದಾ ಹಸಿರಾಗಿಡುವ ಪ್ರಯತ್ನ ಮಾಡೋಣ’ ಎಂದು ಸಲಹೆ ನೀಡಿದರು.<br /> <br /> ‘ಸುವರ್ಣ ಕುಟುಂಬಕ್ಕೆ ನೆರವು ಅಗತ್ಯ ಬಿದ್ದರೆ ನಾವೆಲ್ಲಾ ಸೇರಿಕೊಂಡು ಸಹಾಯ ಮಾಡೋಣ ಇದಕ್ಕಾಗಿ ಯಾರ ಬಳಿ ಕೈ ಚಾಚುವುದು ಬೇಡ’ ಎಂದರು.<br /> <br /> ‘ಸಂಕಲ್ಪದಿಂದ ಸಾಧನೆಗೈದ ಉದ್ಯೋಗ ಅರಿಸಿ ಬೆಂಗಳೂರು ನಗರಕ್ಕೆ ಬಂದ ಸುವರ್ಣ ಸ್ವಂತ ಊರಿಗೆ ವಾಪಸ್ ಹೋಗಲಿಲ್ಲ. ಇರುವ ಜಾಗದಲ್ಲಿಯೇ ಗೂಡುಕಟ್ಟಿಕೊಂಡು ಜೀವನ ರೂಪಿಸಿಕೊಂಡವರು. ಆತ್ಮವಿಶ್ವಾಸವೇ ಆ ಮಟ್ಟಕ್ಕೆ ಅವರನ್ನು ಬೆಳಸಿತ್ತು’ ಎಂದು ಹೇಳಿದರು.<br /> <br /> ಸಂಗೀತ ನಿರ್ದೇಶಕ ಹಂಸಲೇಖ ಮಾತನಾಡಿ, ‘ಎಲ್ಲರಿಗೂ ಅವರು ಸ್ನೇಹಿತ. ಒಬ್ಬ ಛಾಯಾಗ್ರಾಹಕನಿಗೆ 160ಕ್ಕೂ ಅಧಿಕ ಚಿತ್ರಗಳಿಗೆ ಛಾಯಾಗ್ರಹಣ ಮಾಡುವ ಅವಕಾಶವು ದೊರೆತಿದ್ದು ದಾಖಲೆಯೇ ಸರಿ. ಕ್ರಿಯಾಶೀಲ, ಸೃಜನಶೀಲ ವ್ಯಕ್ತಿಯಾಗಿದ್ದರು’ ಎಂದರು.<br /> <br /> ‘ಅನ್ಯಭಾಷಿಕರ ನಿರ್ದೇಶಕರಿಗೆ ಸುವರ್ಣ ಮಾರ್ಗದರ್ಶಕರಾಗಿದ್ದರು. ಒಬ್ಬ ತಂತ್ರಜ್ಞನಿಗೆ ಇರಬೇಕಾದ ಕ್ರಿಯಾಶೀಲತೆಯಿತ್ತು. ಬೇಕಾದಷ್ಟು ದೃಶ್ಯಗಳನ್ನು ಕಟ್ಟುತ್ತಿದ್ದರು’ ಎಂದು ನೆನಪಿಸಿಕೊಂಡರು.<br /> <br /> ನಟ ಕಾಶೀನಾಥ್ ಮಾತನಾಡಿ, ‘ಅಪರೂಪದ ಅತಿಥಿಗಳು’ ಚಿತ್ರದ ಮೂಲಕ ಪ್ರಾರಂಭವಾದ ನಮ್ಮ ಒಡನಾಟ ‘ಅನಾಮಿಕ’ ಚಿತ್ರದವರೆಗೂ ಮುಂದುವರಿದಿತ್ತು. ನಮ್ಮದು ಗಂಡಹೆಂಡತಿ ತರದ ಜೋಡಿಯಾಗಿತ್ತು. ಚಿಕ್ಕ ಚಿಕ್ಕ ಜಗಳಗಳು ನಡೆದು ಮತ್ತೆ ನಾವು ಒಂದಾಗುತ್ತಿದ್ದೆವು’ ಎಂದರು.<br /> <br /> ‘ಅತಿ ಹುಮ್ಮಸ್ಸಿನಿಂದ ಕೆಲಸ ಮಾಡುತ್ತಿದ್ದರು. ಅವರಲ್ಲಿನ ಹುಮ್ಮಸ್ಸನ್ನು ಯಾವ ಛಾಯಾಗ್ರಾಹಕನಲ್ಲಿಯೂ ನಾವು ಇದುವರೆಗೂ ನೋಡಿಲ್ಲ. ಅವರು ಮಾಡಿದ ಸಾಧನೆ ಎಂದಿಗೂ ಹಚ್ಚ ಹಸಿರು’ ಎಂದು ಹೇಳಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ‘ಅವನು ತೀರಿಕೊಂಡ ಸಂದರ್ಭದಲ್ಲಿ ನನ್ನ ಪತ್ನಿ, ಮಕ್ಕಳು ನನಗಿಂತ ಮೊದಲು ಅವನ ದರ್ಶನ ಪಡೆದಿದ್ದರು’ ಎನ್ನುತ್ತಾ ಭಾವುಕರಾದ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಕಣ್ಣೀರಿಟ್ಟರು..<br /> <br /> ಪ್ರೆಸ್ಕ್ಲಬ್ ಸಭಾಂಗಣದಲ್ಲಿ ಮಂಗಳವಾರ ನಡೆದ ಚಲನಚಿತ್ರ ಛಾಯಾಗ್ರಾಹಕ ‘ಸುಂದರನಾಥ ಸುವರ್ಣ ನೆನಪು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> ‘ಕನ್ನಡ ಚಿತ್ರರಂಗ ಕ್ಷೇತ್ರ ಬೆಳವಣಿಗೆಗೆ ತಮ್ಮದೇ ಆದ ರೀತಿಯಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ಸುಂದರನಾಥ ಸುವರ್ಣ ಅವರ ಹೆಸರಿನಲ್ಲಿ ಸ್ನೇಹಿತರೆಲ್ಲರೂ ಸೇರಿ ನಿಧಿ ಸ್ಥಾಪನೆ ಮಾಡಿ, ಅವರ ನೆನಪನ್ನು ಸದಾ ಹಸಿರಾಗಿಡುವ ಪ್ರಯತ್ನ ಮಾಡೋಣ’ ಎಂದು ಸಲಹೆ ನೀಡಿದರು.<br /> <br /> ‘ಸುವರ್ಣ ಕುಟುಂಬಕ್ಕೆ ನೆರವು ಅಗತ್ಯ ಬಿದ್ದರೆ ನಾವೆಲ್ಲಾ ಸೇರಿಕೊಂಡು ಸಹಾಯ ಮಾಡೋಣ ಇದಕ್ಕಾಗಿ ಯಾರ ಬಳಿ ಕೈ ಚಾಚುವುದು ಬೇಡ’ ಎಂದರು.<br /> <br /> ‘ಸಂಕಲ್ಪದಿಂದ ಸಾಧನೆಗೈದ ಉದ್ಯೋಗ ಅರಿಸಿ ಬೆಂಗಳೂರು ನಗರಕ್ಕೆ ಬಂದ ಸುವರ್ಣ ಸ್ವಂತ ಊರಿಗೆ ವಾಪಸ್ ಹೋಗಲಿಲ್ಲ. ಇರುವ ಜಾಗದಲ್ಲಿಯೇ ಗೂಡುಕಟ್ಟಿಕೊಂಡು ಜೀವನ ರೂಪಿಸಿಕೊಂಡವರು. ಆತ್ಮವಿಶ್ವಾಸವೇ ಆ ಮಟ್ಟಕ್ಕೆ ಅವರನ್ನು ಬೆಳಸಿತ್ತು’ ಎಂದು ಹೇಳಿದರು.<br /> <br /> ಸಂಗೀತ ನಿರ್ದೇಶಕ ಹಂಸಲೇಖ ಮಾತನಾಡಿ, ‘ಎಲ್ಲರಿಗೂ ಅವರು ಸ್ನೇಹಿತ. ಒಬ್ಬ ಛಾಯಾಗ್ರಾಹಕನಿಗೆ 160ಕ್ಕೂ ಅಧಿಕ ಚಿತ್ರಗಳಿಗೆ ಛಾಯಾಗ್ರಹಣ ಮಾಡುವ ಅವಕಾಶವು ದೊರೆತಿದ್ದು ದಾಖಲೆಯೇ ಸರಿ. ಕ್ರಿಯಾಶೀಲ, ಸೃಜನಶೀಲ ವ್ಯಕ್ತಿಯಾಗಿದ್ದರು’ ಎಂದರು.<br /> <br /> ‘ಅನ್ಯಭಾಷಿಕರ ನಿರ್ದೇಶಕರಿಗೆ ಸುವರ್ಣ ಮಾರ್ಗದರ್ಶಕರಾಗಿದ್ದರು. ಒಬ್ಬ ತಂತ್ರಜ್ಞನಿಗೆ ಇರಬೇಕಾದ ಕ್ರಿಯಾಶೀಲತೆಯಿತ್ತು. ಬೇಕಾದಷ್ಟು ದೃಶ್ಯಗಳನ್ನು ಕಟ್ಟುತ್ತಿದ್ದರು’ ಎಂದು ನೆನಪಿಸಿಕೊಂಡರು.<br /> <br /> ನಟ ಕಾಶೀನಾಥ್ ಮಾತನಾಡಿ, ‘ಅಪರೂಪದ ಅತಿಥಿಗಳು’ ಚಿತ್ರದ ಮೂಲಕ ಪ್ರಾರಂಭವಾದ ನಮ್ಮ ಒಡನಾಟ ‘ಅನಾಮಿಕ’ ಚಿತ್ರದವರೆಗೂ ಮುಂದುವರಿದಿತ್ತು. ನಮ್ಮದು ಗಂಡಹೆಂಡತಿ ತರದ ಜೋಡಿಯಾಗಿತ್ತು. ಚಿಕ್ಕ ಚಿಕ್ಕ ಜಗಳಗಳು ನಡೆದು ಮತ್ತೆ ನಾವು ಒಂದಾಗುತ್ತಿದ್ದೆವು’ ಎಂದರು.<br /> <br /> ‘ಅತಿ ಹುಮ್ಮಸ್ಸಿನಿಂದ ಕೆಲಸ ಮಾಡುತ್ತಿದ್ದರು. ಅವರಲ್ಲಿನ ಹುಮ್ಮಸ್ಸನ್ನು ಯಾವ ಛಾಯಾಗ್ರಾಹಕನಲ್ಲಿಯೂ ನಾವು ಇದುವರೆಗೂ ನೋಡಿಲ್ಲ. ಅವರು ಮಾಡಿದ ಸಾಧನೆ ಎಂದಿಗೂ ಹಚ್ಚ ಹಸಿರು’ ಎಂದು ಹೇಳಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>